ವೈಚಾರಿಕ ಸ್ಪಷ್ಟತೆಯಲ್ಲಿ ಅರಳಿದ ಮನುಷ್ಯಪ್ರೀತಿ

ಡಾ. ರಹಮತ್ ತರೀಕೆರೆಯವರು ನಮ್ಮ ನಡುವಿನ ಪ್ರಮುಖ ಸಂಸ್ಕøತಿ ಚಿಂತಕ ಹಾಗೂ ಸಂಶೋಧಕ.
ಕರ್ನಾಟಕವನ್ನು ಬಹುವಿಧದಲ್ಲಿ ಅರ್ಥಮಾಡಿಕೊಳ್ಳುತ್ತ, ಪರ್ಯಾಯ ಸಂಸ್ಕøತಿಗಳ ಶೋಧನೆಯಲ್ಲಿ ತೊಡಗಿರುವ ರಹಮತ್‍ರ ಚಿಂತನೆಗಳ ಪ್ರಾತಿನಿಧಿಕ ಸಂಕಲನ ‘ತನ್ನತನದ ಹುಡುಕಾಟ’ ಕೃತಿ .
ಮನುಷ್ಯವಿರೋಧಿ ತತ್ವಸಿದ್ಧಾಂತ ಅಜೆಂಡಾಗಳನ್ನು ಎದುರು ಹಾಕಿಕೊಂಡು ಸಂಶೋಧನೆ ಅಥವಾ ಚಿಂತನೆಗೆ ತೊಡಗುವ ಅವರ ಅಧ್ಯಯನದಲ್ಲಿ ಮಾನವೀಯತೆಯ ಬಾಗಿಲುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಅವರ ಯಾವುದೇ ಬರವಣೆಗೆಗಳ ಮೂಲ ಆಶಯವೂ ಇದೇ ಆಗಿದೆ.
ಈ ಹಿನ್ನೆಲೆಯಲ್ಲಿ ರಹಮತ್‍ರವರ ಚಿಂತನೆಯನ್ನು ಹೊಸ ತಲೆಮಾರಿನ ಓದುಗರು ಮತ್ತು ವಿದ್ಯಾರ್ಥಿಗಳಿಗೆ ಪರಿಚಯಿಸುವ ದೃಷ್ಠಿಯಿಂದ ಶಿವಮೊಗ್ಗದ ಅಂತಃಕರಣ ಪ್ರಕಾಶನÀ ಈ ಸಂಕಲನವನ್ನು ಹೊರ ತಂದಿದೆ.
ಸಂಶೋಧನೆ, ಅಧ್ಯಯನಗಳನ್ನು ಸೀಮಿತ ಚೌಕಟ್ಟುಗಳೊಳಗೇ ಇಟ್ಟು ನೋಡುವವರ ಮಧ್ಯೆ ರಹಮತ್ ಅವರ ಧಾಟಿ ಅನನ್ಯವಾಗಿ ಕಾಣುತ್ತದೆ. ಕರ್ನಾಟಕದ ಅಲಕ್ಷಿತ ಸಮುದಾಯಗಳು, ಶೋಷಿತ ಜನವರ್ಗಗಳು, ಅವುಗಳ ಸಂಸ್ಕøತಿಯ ಕುರಿತೇ ಅಧ್ಯಯನ ನಡೆಸಿರುವ ಹಲವು ಲೇಖನಗಳು ಈ ಕೃತಿಯಲ್ಲಿ ಇವೆ.
ಈ ಸಮಾಜವನ್ನು ಒಡೆದು ಆಳುವವರ ಚಿಂತನೆಗಳಿಗೆ ಎದುರಾಗಿ ಅಧ್ಯಯನಗಳನ್ನು ರೂಪಿಸುತ್ತಾ , ಚರಿತ್ರೆ, ಪರಂಪರೆಯಲ್ಲಿ ಹಾಗೂ ಸಮಕಾಲೀನ ಸಂದರ್ಭದಲ್ಲಿ ಇರಬಹುದಾದ ಜೀವಪರ ಸಂಗತಿಗಳನ್ನು ಶೋಧಿಸುತ್ತಾ ರಹಮತ್ ಸಾಗುತ್ತಾರೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದ ಅನೇಕರ ಚರಿತ್ರೆÉಯನ್ನು ಇಲ್ಲಿ ಪÀÅನರ್ ಕಟ್ಟಿಕೊಡಲಾಗಿದೆ. ಜೋಳದರಾಶಿ ದೊಡ್ಡನಗೌಡರ ಕುರಿತ ಚಿತ್ರ ಹಾಗೂ ಎಸ್.ಎಸ್. ಹಿರೇಮಠರ ಕುರಿತ ‘ಅವರು ತಲ್ಲಣಗಳಲ್ಲೇ ತೀರಿಕೊಂಡರು’ ಲೇಖನಗಳು ಈ ಮಾದರಿಯವು.
ಬೌದ್ಧ, ಸೂಫಿ, ದತ್ತ, ನಾಥ, ಶರಣ ಮುಂತಾದ ಅವೈದಿಕ ಪರಂಪರೆಗಳನ್ನು ಲೇಖಕರು ಗಾಢವಾಗಿ ಅಧ್ಯಯನ ಮಾಡಿದ್ದಾರೆ.
‘ಬಾಬರಿ ಮಸೀದಿ ಧ್ವಂಸ ಹಾಗು ನಂತರದ ಭಾರತ’À ರಹಮತ್ ಚಿಂತನೆಯನ್ನು ಬಹುವಾಗಿ ರೂಪಿಸಿವೆ. ‘ಬಾಬಾಬುಡನ್‍ಗಿರಿ : ಸೂಫಿ ಮತ್ತು ದತ್ತ’ ‘ಸಮುದಾಯಗಳ ಸೃಜನಶೀಲತೆಯ ಹುಡುಕಾಟ’ ಲೇಖನಗಳಲ್ಲಿ ಈ ಕಾಳಜಿ ಪ್ರಧಾನವಾಗಿದೆ.
ಬೌದ್ಧ ಧರ್ಮದ ಬಗ್ಗೆ ಒಲವಿಟ್ಟುಕೊಂಡು ಪ್ರಸ್ತುತ ಬೌದ್ಧಧರ್ಮ ಕರ್ನಾಟಕದ ಸಮಾಜದಲ್ಲಿ ಯಾವ ಕ್ರಮದಲ್ಲಿ ಆಚರಣೆಯಲ್ಲಿ ಇದೆ ಎಂದು ಶೋಧಿಸುತ್ತಾ ಪÀÅರುಷ ಪ್ರಧಾನ ಸಮಾಜದಲ್ಲಿ ಮತಾಂತರ ಏನೆಲ್ಲ ಸಂದಿಗ್ಧಗಳನ್ನು ತರಬಲ್ಲದು, ಹೆಣ್ಣಿನ ಧ್ವನಿಯನ್ನು ಅಡಗಿಸಬಲ್ಲದು ಎಂಬುದನ್ನು ‘ಯಶೋಧರೆಯ ಕಷ್ಟಗಳು’ ಲೇಖನ ಮನವರಿಕೆ ಮಾಡಿಕೊಡುತ್ತದೆ.
ಮತೀಯವಾದಿ ರಾಜಕಾರಣ ಸಿಕ್ಕ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಸಮುದಾಯಗಳನ್ನು ಒಡೆದು ಆಳಬಲ್ಲದು ಎಂಬುದು ದಿನನಿತ್ಯ ಅರಿವಾಗುತ್ತಿದೆ. ಉಣ್ಣುವ ಊಟವೂ ರಾಜಕಾರಣದ ದಾಳವಾಗುವ ದುರ್ದೈವ ಈ ದೇಶದ್ದು. ‘ಮಾಂಸಹಾರ’ದ ರಾಜಕಾರಣ ಚರಿತ್ರೆಯಲ್ಲಿ ಹೇಗೆ ಸಾಗಿ ಬಂದಿದೆ ಎಂಬುದರ ಮೇಲೆ ಬೆಳಕು ಚೆಲ್ಲುವ ‘ಹೊಲಸು’ ಆಹಾರ ಪ್ರಮಾಣ ಎನ್ನುವ ಲೇಖನ ನಮ್ಮ ಚಿಂತನೆಯನ್ನೇ ಬದಲಿಸುವಷ್ಟು ಪ್ರಭಾವಶಾಲಿಯಾಗಿದೆ.
ಗಂಭೀರ ಚಿಂತಕರು ಕೊಂಚ ಮಡಿವಂತಿಕೆ ತೋರುವ ಜನಪ್ರಿಯ ಸಿನಿಮಾ ಮಾಧ್ಯಮ ಕುರಿತೂ ಸಹ ಇಲ್ಲಿ ಒಂದು ಲೇಖನವಿದೆ. ಡಾ. ರಾಜಕುಮಾರ್ ಸಾವಿನ ಸಂದರ್ಭ ಇಟ್ಟುಕೊಂಡು ಬರೆದಿರುವ ‘ಈ ಸಾವುಗಳು ನ್ಯಾಯವೇ?’ ಎನ್ನುವ ಲೇಖನ ಸತ್ವಪÀÇರ್ಣವಾಗಿದ್ದು. ಸಿನೆಮಾ ಮಾಧ್ಯಮದ ಒಳಿತು ಕೆಡಕಿನ ಪರಿಣಾಮವನ್ನು ಸವಿವರವಾಗಿ ತಲಸ್ಪರ್ಷಿಯಾಗಿ ಚರ್ಚಿಸುತ್ತದೆ.
20ನೇ ಶತಮಾನದ ಕನ್ನಡನಾಡು ಕಂಡ ದೈತ್ಯ ಪ್ರತಿಭೆ ಕುವೆಂಪÀÅ ಅವರು ರಹಮತ್ ಚಿಂತನೆಯ ಕೇಂದ್ರ ಪ್ರಜ್ಞೆ. ಈ ಹಿನ್ನೆಲೆಯ ‘ಕುವೆಂಪÀÅ ಚಿಂತನೆ ಆಕರ್ಷಣೆ ವಿಕರ್ಷಣೆ’ ಲೇಖನ ಮೌಲ್ಯಭರಿತವಾದುದ್ದು. ಇಂತಹುಗಳ ಸಂಗಡ ಕನ್ನಡತನದ ಹುಡುಕಾಟವೇ ‘ತನ್ನತನದ ಹುಡುಕಾಟ’ ಅನೇಕ ಅನ್ಯಗಳ ನಡುವೆ ಕಳೆದುಹೋಗಿರುವ ಅಥವಾ ಅವಜ್ಞೆಗೆ ಒಳಗಾಗಿರುವ ಸತ್ವಭರಿತ ‘ಕನ್ನಡತನ’ ಎಲ್ಲಾ ಶಿಸ್ತುಗಳಲ್ಲಿ ಸಾಕಾರಗೊಳ್ಳಬೇಕು, ಆ ಮೂಲಕ ಕನ್ನಡ ನಾಡಿನ ಬದುಕು ಹೆಚ್ಚು ಪ್ರಜಾಪ್ರಭುತ್ವೀಯಗೊಳ್ಳಬೇಕು ಎನ್ನುವ ಮಹತ್ತರ ಹಂಬಲ ಲೇಖಕರದು.
‘ವೈಚಾರಿಕ ಸ್ಪಷ್ಟತೆ, ವಿಸ್ತಾರವಾದ ಅಧ್ಯಯನ, ಮನುಷ್ಯಪ್ರೀತಿ ಮತ್ತು ಭಾಷೆಯನ್ನು ದುಡಿಸಿಕೊಳ್ಳುವ ಬರವಣಿಗೆಯ ಶೈಲಿ ರಹಮತ್ ಅವರ ಶಕ್ತಿ. ತಾವು ನಂಬಿದ ವಿಚಾರಗಳನ್ನು ಒಬ್ಬ ನುರಿತ ವಕೀಲರಂತೆ ವಾದÀ ಪÀÅರಾವೆಗಳ ಮೂಲಕ ಅವರು ಮಂಡಿಸುತ್ತಾರೆ… ಅವರ ಬರವಣಿಗೆಗಳನ್ನು ಒಪ್ಪದವರು ಇರಬಹುದು, ಆದರೆ ತಪ್ಪÅ ಎನ್ನುವವರು ಇರಲಾರರು’ ಎಂದು ಮುನ್ನುಡಿಯಲ್ಲಿ ಬರೆದಿರುವ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಮಾತುಗಳು ಅರ್ಥಪೂರ್ಣವಾಗಿವೆ. – ಮರ್ಗನಳ್ಳಿ ಪ್ರಕಾಶ
ಕೃತಿಯ ಪುಟಗಳಿಂದ
‘ಧರ್ಮವನ್ನು ಜನಾಂಗ ದ್ವೇಷವನ್ನಾಗಿ ಮಾಡಿ ಸಮಕಾಲೀನ ರಾಜಕಾರಣಕ್ಕೆ ಹೇಗೆ ಬಳಸಬೇಕು ಎಂಬ ತಂತ್ರಗಾರಿಕೆ ಧೇನಿಸುವ ಮತೀಯವಾದಿಗಳು ಮತ್ತು ಮೂಲಭೂತವಾದಿಗಳಿಗೆ ನಮ್ಮ ದೇಶದ ಜನಸಮುದಾಯಗಳು ನಿರ್ಮಾಣ ಮಾಡಿರುವ ಸಂಸ್ಕøತಿ ಪರಂಪರೆಗಳ ಅರಿವು ಕಡಿಮೆ. ಚರಾಚರವನ್ನು ‘ಹಿಂದು’ ‘ಮುಸ್ಲಿಂ’ ಎಂಬ ಎರಡು ಭಾಗಳಲ್ಲಿ ವಿಂಗಡಿಸಿ, ಎದುರಾಳಿಗಳಾಗಿ ನಿಲ್ಲಿಸಿ ನೋಡುವವರಿಗೆ ಭಾರತದ ಧರ್ಮ ಪಂಥ ಹಾಗೂ ಜನಸಮುದಾಯಗಳು ಮಾಡಿಕೊಂಡಿರುವ ಸ್ವೀಕಾರ ಹಾಗೂ ಅವು ಹುಟ್ಟಿಸಿರುವ ಮಿಲನ ಸಂಸ್ಕøತಿಯ ಸೂಕ್ಷ್ಮತೆ ಗೊತ್ತಿಲ್ಲ’.
ಕೃತಿ : ತನ್ನತನದ ಹುಡುಕಾಟ
ಕರ್ತೃ : ಡಾ. ರಹಮತ್ ತರೀಕೆರೆ
ಪ್ರಕಾಶನ : ಅಂತಃಕರಣ ಪ್ರಕಾಶನ, ಶಿವಮೊಗ್ಗ
ಪುಟ : 140, ಬೆಲೆ : 80 ರೂಪಾಯಿಗಳು

ಬಿಜೆಪಿಯಿಂದ ಪಾದಯಾತ್ರೆ

ಮಹಾತ್ಮಾ ಗಾಂಧಿಯವರ 151ನೇ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷವು ಅ.16ರಿಂದ ಸಂಸದರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ತಿಳಿಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *