

ಸರ್ಕಾರದ ಉಚಿತ ವೈದ್ಯಕೀಯ ಸೇವೆಯ ಆಯುಷ್ಮಾನ ಭಾರತ ಮತ್ತು ಆರೋಗ್ಯ ಕರ್ನಾಟಕ ಯೋಜನೆಗಳ ಅನುಕೂಲಕ್ಕೆ ಜಿಲ್ಲಾ ಆಸ್ಫತ್ರೆಯ ಪತ್ರ ಕಡ್ಡಾಯ ಮಾಡಿರುವ ನಿಯಮಕ್ಕೆ ತೀವೃ ವಿರೋಧ ವ್ಯಕ್ತವಾಗಿದೆ.
ಆಯುಷ್ಮಾನ ಭಾರತ ಅಥವಾ ಆರೋಗ್ಯ ಕಾರ್ಡ್ ಪಡೆದವರು ಮತ್ತೆ ಜಿಲ್ಲಾ ಆಸ್ಫತ್ರೆ ಅನುಮತಿ ಪತ್ರ ಪಡೆಯುವುದು ಅಪ್ರಾಯೋಗಿಕ ಮತ್ತು ಅವೈಜ್ಞಾನಿಕ ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಗ್ರಾಮೀಣ ಜನತೆ ಗಂಭೀರ ಕಾಯಿಲೆಗಳಾದಾಗ ಮುತುವರ್ಜಿಯಿಂದ ಚಿಕಿತ್ಸೆ ಪಡೆಯಬೇಕೋ ಅಥವಾ ಜಿಲ್ಲಾಸ್ಫತ್ರೆಯ ಅನುಪತಿ ಪತ್ರ ಪಡೆಯಬೇಕೋ ಎನ್ನುವ ರಗಳೆ,ಸಂದಿಗ್ಧತೆಯನ್ನುಂಟುಮಾಡಿದೆ.
ಈ ಬಗ್ಗೆ ಮುಖ್ಯಮಂತ್ರಿಗಳೂ ಮತ್ತು ರಾಜ್ಯ ವಿಧಾನಸಭೆಯ ಅಧ್ಯಕ್ಷರಿಗೆ ಮನವಿ ಮಾಡಿರುವ ಜಿಲ್ಲಾ (ಉ.ಕ.) ಜೆ.ಡಿ.ಎಸ್. ಅಲ್ಫಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಇಬ್ರಾಹಿಂ ಸಾಬ್ ಈ ಗೊಂದಲ ರಗಳೆ ಬಗೆಹರಿಸಲು ಮನವಿ ಮಾಡಿದ್ದಾರೆ.
ಗಂಭೀರ ಸ್ವರೂಪದ ಕಾಯಿಲೆಗಳ ಚಿಕಿತ್ಸೆಗಾಗಿ ಪರ ಊರುಗಳಿಗೆ ತೆರಳುವ ಜನಸಾಮಾನ್ಯರಿಗೆ ಜಿಲ್ಲಾಸ್ಫತ್ರೆಗೆ ಹೋಗುವುದು ಅಲ್ಲಿಂದ ಅನುಮತಿ ಪತ್ರ ಪಡೆದು ಚಿಕಿತ್ಸೆ ಕೊಡಿಸುವುದು ಕಷ್ಟ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಅನುಮತಿ ಪತ್ರಕ್ಕಾಗಿ ಕಾರವಾರಕ್ಕೆ ತೆರಳುವುದು ಕಷ್ಟ, ಅಲ್ಲಿ ರೋಗಿ ಅಥವಾ ಬಾಧಿತರನ್ನೇ ಕರೆತನ್ನಿ ಎನ್ನುತ್ತಾರೆ ಇಂಥ ತಲೆಹರಟೆ ಕೆಲಸ ರೋಗಿಗಳು ಮತ್ತು ಅವರ ಕುಟುಂಬದವರಿಗೆ ಹಿಂಸೆಯ ಕೂಪ ಈ ತೊಂದರೆ ಗಮನಿಸಿ ತಾಲೂಕಾ ಆಸ್ಫತ್ರೆಯ ಕಾರ್ಡ್ಅಥವಾ ದಾಖಲೆಗಳನ್ನೇ ಎಲ್ಲಾ ಖಾಸಗಿ ಆಸ್ಫತ್ರೆಗಳು ಪರಿಗಣಿಸುವಂತಾದರೆ ಜನಸಾಮಾನ್ಯರಿಗೆ ಅನುಕೂಲ ಎಂದಿದ್ದಾರೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
