

ಉತ್ತರಕನ್ನಡ, ಉತ್ತರಕರ್ನಾಟಕದ ಯುವಕರು ನಾಗರಿಕ ಸೇವೆಗಳ ಪರೀಕ್ಷೆ ಎದುರಿಸುತ್ತಿಲ್ಲ ,
ಬೇರೆ ಪ್ರದೇಶದ, ವಿಭಿನ್ನ ಅಧ್ಯಯನ ಕ್ಷೇತ್ರಗಳ ಯುವಕರು ನಾಗರಿಕ ಸೇವೆಗೆ ಬಂದರೆ ಅದರಿಂದ ಜನರಿಗೆ,ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ.-ಈಶ್ವರ ಉಳ್ಳಾಗಡ್ಡಿ
ವೈದ್ಯರು ಮಾನವೀಯ,ಸಾಮಾಜಿಕ ಕಾಳಜಿಯ ವ್ಯಕ್ತಿಗಳಾಗುವ ಅನಿವಾರ್ಯತೆ ಪ್ರತಿಪಾದಿಸಿದ ಉಳ್ಳಾಗಡ್ಡಿ
ಅಲೋಪತಿ ಔಷಧಿಗಳು ಮತ್ತು ಪ್ರತಿಜೀವಕಗಳಿಂದ ಮನುಷ್ಯನ ಅಂಗಾಂಗಳ ವೈಫಲ್ಯ ಹೆಚ್ಚುತ್ತಿದ್ದು ಈ ಅಪಾಯ ತಡೆಯುವ ಅಗತ್ಯವಿದೆ ಎಂದು ಸಲಹೆ ನೀಡಿರುವ ಶಿರಸಿ ಉಪವಿಭಾಗಾಧಿಕಾರಿ ಈಶ್ವರ ಉಳ್ಳಾಗಡ್ಡಿ ವೈದ್ಯಕೀಯ ಸೇವೆ ಇಂದು ವ್ಯವಹಾರವಾಗುತ್ತಿದೆ.ವೈದ್ಯರು ಮಾನವೀಯವೂ,ಸಾಮಾಜಿಕ ಕಾಳಜಿಯವರೂ ಆಗಬೇಕಾದ ಅನಿವಾರ್ಯತೆ ಈಗಿದೆ ಎಂದಿದ್ದಾರೆ.
ಇಲ್ಲಿಯ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಡೆದ ವಿಶ್ವ ಆಯುರ್ವೇದ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಲೋಪತಿ ದುಷ್ಫರಿಣಾಮಗಳ ಅರಿವು, ಆಯುರ್ವೇದದ ಅನುಕೂಲತೆ, ಉಪಯುಕ್ತತೆ ಬಗ್ಗೆ ಅರಿವು ಮೂಡಿಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ ಈ ಕೆಲಸಕ್ಕೆ ಶಿರಸಿ ವಿಭಾಗದಲ್ಲಿ ತಾವು ಸಹಕರಿಸುವ ಭರವಸೆ ನೀಡಿದರು.
ಪ್ರಾಚಾರ್ಯೆ ಡಾ.ರೂಪಾ ಭಟ್ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ಡಾ.ರಾಘವೇಂದ್ರ ಸರ್ವರನ್ನೂ ಸ್ವಾಗತಿಸಿದರು.
ಕಾಲೇಜಿನ ನಾನಾ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕ್ಯಾರ್, ಮಳೆ ಅನಾಹುತ:ತೊಂದರೆ
ಉತ್ತರಕನ್ನಡ ಜಿಲ್ಲೆಯಲ್ಲಿ ಕ್ಯಾರ್ ಚಂಡಮಾರುತ ಮತ್ತು ಮಳೆಯ ಪರಿಣಾಮ ಅನೇಕ ಕಡೆ ತೊಂದರೆಯಾಗಿದೆ. ಕರಾವಳಿಯಲ್ಲಿ ಜನಜೀವನ ಸಂಪೂರ್ಣ ಹದಗೆಟ್ಟಿದೆ. ಮಲೆನಾಡಿನಲ್ಲಿ ಮಳೆಗಾಳಿ ಜೋರಾಗಿದೆ ಅಲ್ಲಲ್ಲಿ ಮನೆ. ಕೊಟ್ಟಿಗೆ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದ್ದರೆ, ಸಿದ್ದಾಪುರ ನಗರದ ಹೊನ್ನೆಗುಂಡಿಯಲ್ಲಿ ಮುರಿದುಬಿದ್ದ ವಿದ್ಯುತ್ ತಂತಿಗೆ ಸಿಲುಕಿ ಜವಾರಿ ಆಕಳೊಂದು ಅಸುನೀಗಿದೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
