![](https://i0.wp.com/samajamukhi.net/wp-content/uploads/2019/10/Kannesh_3_copy-2.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಬಂಗಾರಪ್ಪ 87 ಎಲ್ಲೆಡೆ ಆಚರಣೆ
ಸಿದ್ದಾಪುರ ತಾಲೂಕು ಸೇರಿದಂತೆ ರಾಜ್ಯದ ಕೆಲವೆಡೆ ಇಂದು ಬಂಗಾರಪ್ಪನವರ ಹುಟ್ಟುಹಬ್ಬದ ನಿಮಿತ್ತ ನಾನಾ ಕಾರ್ಯಕ್ರಮಗಳು ನಡೆದವು.
ಸೊರಬದ ಸಾರೆಕೊಪ್ಪ ಬಂಗಾರಪ್ಪ ಕುಬಟೂರಿನಲ್ಲಿ ಹುಟ್ಟಿ 90 ರ ದಶಕದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುವವರೆಗೆ ಬಂಗಾರಪ್ಪ ಸವೆಸಿದ ಹಾದಿ ಕಠಿಣ. ಸಂಘಟನೆ,ಹೋರಾಟ, ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದ ಬಂಗಾರಪ್ಪ ಬದುಕಿದ್ದರೆ ಅ.26 ಕ್ಕೆ 87ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತಿದ್ದರು.
ಬಂಗಾರಪ್ಪ ಭೌತಿಕವಾಗಿ ಇಲ್ಲದಿದ್ದರೂ ಅವರ ನೆನಪಿನಲ್ಲಿ ಸಾಗರ ಸೊರಬ, ಶಿರಸಿ-ಸಿದ್ದಾಪುರ ಸೇರಿದಂತೆ ಅನೇಕ ಕಡೆ ಬಂಗಾರಪ್ಪ ಜಯಂತಿ ನಡೆಯುತ್ತಿದೆ.ಅಬಲರು,ಅಸಹಾಯಕರಿಗೆ ನೆರವು ನೀಡುವ ಮೂಲಕ ಅವರ ಅಭಿಮಾನಿಗಳು ಬಂಗಾರಪ್ಪ ಜಯಂತಿ ಆಚರಿಸಿದ್ದು ವಿಶೇಶ.
![](https://i0.wp.com/samajamukhi.net/wp-content/uploads/2019/10/bam-b-day-suyogasrama.jpg?resize=260%2C220&ssl=1)
![](https://i2.wp.com/samajamukhi.net/wp-content/uploads/2019/10/IMG-20191026-WA0039.jpg?fit=760%2C570)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)