

ಹೃದಯ ಬಡಿತ
ಹರವಿಕೊಂಡಿದೆ ನನ್ನೊಳಗೆ
ನಿನ್ನ ಪದಗಳಾಗಿಯೇ|
ಕಾದಿದೆ ದಿಕ್ಕಿಲ್ಲದೆ
ನೀನಂದು ತುಂಬಿದ
ಹುಚ್ಚು ಭಾವುಕತೆಯೇ||

ಬೇಕೆಂದೇ ಕಾಡುವ
ಲೋಪ ಸಂಧಿ
ಆ ಮುಗ್ಧ ಮೌನ|
ದಾರಿ ತಪ್ಪಿಸಿತು
ಕಾಗುಣಿತ ತೊದಲಾಡಿ
ಸಾವಿರ ಮಾತುಗಳನ್ನ||
ಮುಂಗಾರಿನ ಮೊದಲ ಹನಿಯು
ಸಾರುವುದು ಕೂಗಿ
ಎಂದಿಗೂ ನಿನ್ನ ಒಲವು|
ಶ್ರಾವಣದ ಜಡಿ ಮಳೆಯು
ಬಿಟ್ಟು ಬಿಡದಂತೆ ಸತಾಯಿಸುವುದು
ನೆನೆದು ನಿನ್ನ ಮರೆವು||
ಏನು ಮಾಡದಿದ್ದರೂ
ನಿನಗಾಗಿ ಬಿಟ್ಟೆ
ನಾನು ಏನೆಲ್ಲಾ|
ಏನು ಮಾಡಿದರೂ
ನನಗಾಗಿಯು ಬಿಡಲಾಗುತ್ತಿಲ್ಲ
ನಿನ್ನ ನೆನಪೊಂದು ಸಲ||
*ಬಸವರಾಜ ಕಾಸೆ*
ಮು| ಪೋ| ದೇವಾಪೂರ
ತಾ| ಜಿ| ವಿಜಯಪುರ
ಪಿನ್ ಕೋಡ್ 586125
pradeepbasu40@gmail.com
7829141150

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
