

ಸಿದ್ದಾಪುರ ತಾಲೂಕಿನ ಕಿಲಾರದ ಯುವಕ ವಿನಾಯಕ ನಾಯ್ಕ ವಿಜಯ ಕರ್ನಾಟಕ ಪತ್ರಿಕೆಯ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ವಿಜಯಕರ್ನಾಟಕ ಪತ್ರಿಕೆ ಪ್ರತಿವರ್ಷ ನೀಡುವ ಈ ಗೌರವ ರಾಜ್ಯದ ಸಾಧಕರನ್ನು ಗುರುತಿಸುತ್ತದೆ. ಕಿಲಾರದ ಕೃಷಿ ಕುಟುಂಬದ ವಿನಾಯಕ ನಾಯ್ಕ ಹುಬ್ಬಳ್ಳಿಯಲ್ಲಿ ವೆಬ್ಟಾಕ್ ಮಿನಿ ಎಟಿಎಂ,ಹಾಗೂ ಸರ್ಜೆನ್ಸಿಯಾ ಇಂಟರ್ ನ್ಯಾಷನಲ್ ಟೂರ್ಸ್ ಮತ್ತು ಟ್ರಾವೆಲ್ಸ್ ಸಂಸ್ಥೆ ನಡೆಸುತ್ತಾರೆ. ಖಾಸಗಿ ಜೀವವಿಮಾ ಕಂಪನಿಯ ಉದ್ಯೋಗಿಯಾಗಿದ್ದ ವಿನಾಯಕ ನಾಯ್ಕ ನಂತರ ತಮ್ಮದೇ ಸಂಸ್ಥೆ ಕಟ್ಟಿಕೊಂಡು ರಾಜ್ಯದ ಕೆಲವು ಜಿಲ್ಲೆ ತಾಲೂಕುಗಳಲ್ಲಿ ತಮ್ಮ ಸಂಸ್ಥೆಯ ವಿಭಾಗಗಳನ್ನು ಹೊಂದಿದ್ದಾರೆ.
