2019 ನೇ ಸಾಲಿನ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ಗೆ ಕವನ ಸಂಕಲನ ಆಹ್ವಾನ

ಕನ್ನಡದ ಕವಿ ಮೋಹನ ಕುರುಡಗಿಯವರ ನೆನಪಿನಲ್ಲಿ ಕೊಡಲಾಗುವ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ-2019’ ಕ್ಕಾಗಿ ಕನ್ನಡದ ಕವಿಗಳಿಂದ 2019 ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವನ ಸಂಕಲನಗಳು ಬೇಡ. ಈ ಪ್ರಶಸ್ತಿಯು ರೂ. 10,000 ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನಗಳನ್ನೊಳಗೊಂಡಿದೆ.
ಆಸಕ್ತರು ತಮ್ಮ ಕವನ ಸಂಕಲನದ ಎರಡು ಪ್ರತಿಗಳನ್ನು ಕಳಿಸಲು ಕೋರಲಾಗಿದೆ.
ವಿ.ಸೂ: ಯಾವುದೇ ಕಾರಣಕ್ಕೂ ಕವನ ಸಂಕಲನದ ಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ ಮತ್ತು ನಿರ್ಣಾಯಕರ ನಿರ್ಣಯವೇ ಅಂತಿಮವಾಗಿರುತ್ತದೆ. ಕವನ ಸಂಕಲನ ಕಳಿಸಲು ಕೊನೆಯ ದಿನಾಂಕ: 10 ಜನವರಿ 2020ಕವನ ಸಂಕಲನ ಕಳಿಸಬೇಕಾದ ವಿಳಾಸ: ಶ್ರೀ ಮಂಜುನಾಥ ಟಿ. ಪಟಗಾರ, ಅಧ್ಯಕ್ಷರು, ನವಚೇತನ ಸಾಂಸ್ಕøತಿಕ ಕಲಾ ಸಾಹಿತ್ಯ ವೇದಿಕೆ, ಬಾಳಗಿಮನೆ, ಯಲ್ಲಾಪುರ-581359, ಉತ್ತರ ಕನ್ನಡ ಜಿಲ್ಲೆ; ಮೊ: 9449148467

ರಾಜ್ಯೋತ್ಸವ ಕವಿಗೋಷ್ಠಿ- ಮನುಷ್ಯತ್ವದ ಅನ್ವೇಷಣೆಯೆ ಕಾವ್ಯದ ಕೆಲಸ
ಸಿದ್ದಾಪುರ.
ಕಾವ್ಯ ಎಂದರೆ ಮನುಷ್ಯತ್ವದ ಅನ್ವೇಷಣೆ.ಸಮಾಜವನ್ನು ಬದಲಾಯಿಸುವುದಕ್ಕಿಂತ ನಮ್ಮೊಳಗಿನ ತಪ್ಪಿನ ಅರಿವು, ವಿಮರ್ಶೆ ಕವಿತೆಯಿಂದ ಸಾಧ್ಯ ಎಂದು ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಹೇಳಿದರು.
ಅವರು ಸಿರಿಗನ್ನಡ ವೇದಿಕೆ, ಪ್ರಯೋಗ ಸ್ವಯಂಸೇವಾ ಸಂಸ್ಥೆ ಆಯೋಜಿಸಿದ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕವಿತೆಗಳ ಅವಲೋಕನ ನಡೆಸಿ ಮಾತನಾಡಿದ ಅವರು ಬದುಕಿನ ಸತ್ಯಶೋಧನೆಯ ಆರಂಭ ಕಾವ್ಯ ರಚನೆಯ ಮೂಲಕ ಆಗುತ್ತದೆ. ಮನುಷ್ಯತ್ವದ ಕಡೆಗೆ ಸಾಗುವ ಕ್ರಿಯೆ ಇದರಿಂದ ಸಾಧ್ಯವಾಗುತ್ತದೆ. ಕವಿತೆ ಎನ್ನುವದು ಸಹಜ ಓಡಾಟದಂತೆ. ಅದು ಸೂಕ್ಷ್ಮವಾಗುತ್ತ ಹೋದಂತೆ ಸ್ಪೋಟಕ ಶಕ್ತಿಯನ್ನೂ ಪಡೆದುಕೊಳ್ಳಬೇಕು. ಕಾವ್ಯದ ಮೂಲಕ ನಡೆಯುವ ಸತ್ಯಶೋಧನೆಯ ಹಾದಿಯಲ್ಲಿ ಅನುಕರಣೆ ಮಾಡದೇ ನಮ್ಮದೇ ಆದ ಲಯ, ಪ್ರತಿಮೆ ರೂಪಿಸಿಕೊಳ್ಳುವದು ಅಗತ್ಯ ಎಂದರು.
ಇನ್ನೋರ್ವ ಅತಿಥಿ ಹಿರಿಯ ಪತ್ರಕರ್ತ ಕಾಶ್ಯಪ ಪರ್ಣಕುಟಿ ಮಾತನಾಡಿ ಕಾವ್ಯ ದೃಶ್ಯಮಾಧ್ಯಮದ ಗುಂಗಿನಿಂದ ತಪ್ಪಿಸಿಕೊಳ್ಳಬೇಕು.ಕಾವ್ಯ ಸಾಂಸ್ಕøತಿಕ ಪ್ರಜ್ಞೆಯನ್ನು, ಸ್ವವಿಮರ್ಶೆಯನ್ನು ನೀಡುವದರ ಜೊತೆಗೆ ಮನುಷ್ಯರಾಗುವ ಪ್ರಯತ್ನಕ್ಕೆ ಇದು ಸಹಕಾರಿಯಾಗುತ್ತದೆ. ಕಾವ್ಯ ನಮ್ಮೊಳಗೆ ಅನುರಣಿಸುವಂತಿರಬೇಕು ಎಂದರು.
ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಮಾತನಾಡಿ ಕಾವ್ಯ ಅನನ್ಯತೆಯ ರೂಪ.ಕಾವ್ಯ ರಚನೆಗೆ ಅಧ್ಯಯನ, ಸೂಕ್ಷ್ಮ ಗ್ರಹಿಕೆ ಅತ್ಯಗತ್ಯ. ಸಮೂಹಕ್ಕೆ ಒಳ್ಳೆಯದನ್ನು ಬಯಸುವ ಕಾವ್ಯ ನಮ್ಮೊಳಗೆ ಬೀಜ ರೂಪವಾಗಿದ್ದು ವಿಕಾಸ ಹೊಂದುತ್ತ ಸಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬರಹಗಾರ ಗಂಗಾಧರ ಕೊಳಗಿ ನಮ್ಮ ಖಾಸಗಿತನವನ್ನು, ಏಕಾಗ್ರತೆಯನ್ನು ಹಲವು ವಿಧದಲ್ಲಿ ಪಲ್ಲಟಗೊಳಿಸುವ ಈ ಕಾಲಘಟ್ಟದಲ್ಲಿ ಬಹುದೊಡ್ಡ ಸವಾಲು ಬರಹಗಾರರ ಇದಿರಿನಲ್ಲಿದೆ. ಅಂಥ ಸವಾಲನ್ನು ಎದುರಿಸುವ ಶಕ್ತಿಯನ್ನು ಸಾಹಿತ್ಯ ಕೊಡುತ್ತದೆ. ಕನ್ನಡದ ಗದ್ಯದಲ್ಲೂ ಕಾವ್ಯ ಅತ್ಯಂತ ಪ್ರಖರವಾಗಿ ಬಂದದ್ದು ಲಂಕೇಶ್, ಅನಂತಮೂರ್ತಿಯವರಂಥ ಅನೇಕ ಬರಹಗಾರರಲ್ಲಿ ಕಾಣಲು ಸಾಧ್ಯ. ಇಂಥ ಕಾರ್ಯಕ್ರಮಗಳು ಪರಸ್ಪರ ಕಾವ್ಯಾನುಸಂಧಾನಕ್ಕೆ, ಸಹೃದಯರ ಒಡನಾಟಕ್ಕೆ ವೇದಿಕೆ ಒದಗಿಸಿಕೊಡುತ್ತದೆ ಎಂದರು.
ಕವಿಗಳಾದ ಗೋಪಾಲ ನಾಯ್ಕ ಬಾಶಿ, ಮನೋಜಕುಮಾರ ಪಿ.ಎಚ್. ಮಾರುತಿ ಆಚಾರಿ, ನೂತನ ನಾಯ್ಕ, ಮಂಜುನಾಥ ಟಿ., ನಾಗರಾಜಪ್ಪ ಎಚ್., ಸುಧಾರಾಣಿ ನಾಯ್ಕ, ನಾಗಶ್ರೀ ಹೆಗಡೆ, ರಾಘವೇಂದ್ರ ಚಪ್ಪರಮನೆ, ಮಂಜುನಾಥ ಹೆಗಡೆ ಹೊಸ್ಕೊಪ್ಪ ಮುಂತಾದವರು ಕವಿತೆ ವಾಚಿಸಿದರು.
ಸಿರಿಗನ್ನಡ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಎಂ.ಎಸ್.ಹೆಗಡೆ ಸ್ವಾಗತಿಸಿ, ವಂದಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *