ಕಾಗೇರಿ- ಹೆಬ್ಬಾರ್ ಶೀತಲ ಸಮರ, ಹಾನಿ ಮಾಡುತ್ತಾ ಅನಂತನ ಅವಾಂತರ? -0001

ಯಲ್ಲಾಪುರ ಕ್ಷೇತ್ರದ ಉಪ ಚುನಾವಣೆ ರಾಜಕೀಯ ವ್ಯಭಿಚಾರದ ದಿಗ್ಧರ್ಶನ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ.
01- ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆವರಿಗೆ ರಾಜಕೀಯ ಅವಕಾಶ
02- ವಿ.ಎಸ್.ಪಾಟೀಲ್ ದ್ವಿಪಾತ್ರ
03- ಅನಂತನ ಅವಾಂತರದ ಹಿಂದಿದೆ ಲೆಕ್ಕಾಚಾರ
04-ಆಳ್ವ ಬಣಕ್ಕೆ ಬೇರೆದಾರಿ ಇಲ್ಲ.
ವಿಧಾನಸಭಾ ಅಧ್ಯಕ್ಷರಾಗಿರುವ
ವಿಶ್ವೇಶ್ವರ ಹೆಗಡೆಯವರಿಗೆ ರಾಜಕೀಯ ಅವಕಾಶ-
ಸತತ ಆರು ಬಾರಿ ಆಯ್ಕೆಯಾಗಿ ಈಗ ವಿಧಾನಸಭಾ ಅಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಜ್ಜನತ್ವದ ಸೋಗಿನಲ್ಲಿ ಎಲ್ಲವನ್ನೂ ಮಾಡುವ ಚಾಣಾಕ್ಷ.
ಚುನಾವಣೆ ಗೆಲುವಿರಲಿ,ಇತರ ಕೆಲಸಗಳಿರಲಿ,ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಯವಾಗಿ ತನ್ನ ಕೆಲಸ ಸಾಧಿಸಿಕೊಳ್ಳುವ ಚಾಣಾಕ್ಷ ಕಾಗೇರಿ ಅನಾಯಾಸವಾಗಿ ಸಚಿವನಾಗುವ ಅವಕಾಶವನ್ನು ಕಳೆದುಕೊಂಡಿದ್ದುಶಿವರಾಮ ಹೆಬ್ಬಾರ್ ಕಾರಣಕ್ಕೆ.
ಶಿವರಾಮ್ ಹೆಬ್ಬಾರ್ ಎಲ್ಲೂ ಸಲ್ಲಬಲ್ಲ ನಾಯಕ. ಆದರೆ ಕಾಗೇರಿ ಶಿವರಾಮ ಹೆಬ್ಬಾರರಂತೆ ಯಾವ ಆಳಕ್ಕೂ ಇಳಿಯಬಲ್ಲ ಸಮರ್ಥರಲ್ಲ.
ಈ ವರ್ಷದ ಈ ಉಪಚುನಾವಣೆಯ ವಿಶೇಶವೆಂದರೆ……….
ಕಾಗೇರಿ ತೆರೆಮರೆಯಲ್ಲಿ ಮಾಡುತ್ತಿದ್ದ ಆಟವನ್ನು ಈ ಬಾರಿ ಇನ್ನಷ್ಟು ಬುದ್ಧಿವಂತಿಕೆಯಿಂದ ಮಾಡಲು ಅವಕಾಶ ದೊರೆತಿರುವುದು. ಸಂಘದ ವಲಯದಲ್ಲಿ ಮತ್ತು ಜಾತಿ ವ್ಯವಹಾರಗಳಲ್ಲಿ ಶಾಸಕ ಕಾಗೇರಿ ಚತುರ. ಹಿಂದುಳಿದವರು,ದಲಿತರನ್ನು ಸಮಾಧಾನಮಾಡಿದಂತೆ ನಟಿಸಿ, ಗರ್ಭಗುಡಿಯಲ್ಲಿ ಮತ್ತದೇ ವ್ಯವಹಾರ ಮಾಡುವ ನಿಪುಣ. ಇಂಥ ಕಾಗೇರಿ ಈ ಬಾರಿ ವಿಧಾನಸಭಾ ಅಧ್ಯಕ್ಷರಾಗಿರುವ ಸಂಕಟ ಅವರ ರಾಜಕೀಯ ವ್ಯವಹಾರಗಳಿಗೆ ಪೂರಕವಾಗಿದೆ.
ಪಕ್ಷದ ವಲಯ, ರಾಜಕೀಯ, ಚುನಾವಣೆ ಹೀಗೆ ಎಲ್ಲೆಂದರಲ್ಲಿ ಮೂಗು ತೂರಿಸುವ ಕಾಗೇರಿ ವಿಧಾನಸಭಾ ಅಧ್ಯಕ್ಷರಾಗಿರುವುದು ಅವರ ತೆರೆಹಿಂದಿನ ಚಟುವಟಿಕೆಗಳಿಗೆ ಇನ್ನಷ್ಟು ಪೂರಕವಾಗಿದೆ. ವಾಸ್ತವದಲ್ಲಿ ಶಿವರಾಮ ಹೆಬ್ಬಾರ್ ಹವ್ಯಕರು ಮತ್ತು ಕಠ್ಠರ್ ಬ್ರಾಹ್ಮಣರಿಗೆ ಬೇಡದ ಸರಕು. ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಕಾಗೇರಿ ತಮ್ಮ ಆತ್ಮೀಯರಿಂದ ಶಿವರಾಮ ಹೆಬ್ಬಾರ್ ಗೆಲುವು ಯಾರಿಗೂ ಶೋಭೆ ತರಲ್ಲ, ಹಾಗಾಗಿ ಅವರನ್ನು ಸೋಲಿಸುವ ಮೂಲಕ ತನಗೆ ಮಂತ್ರಿ ಭಾಗ್ಯ ಕರುಣಿಸಿ ಎಂದು ತಮ್ಮ ಆಪ್ತವಲಯದಿಂದ ಹೇಳಿಸತೊಡಗಿದ್ದಾರಂತೆ!
ಹೀಗೆ ಹೆಬ್ಬಾರರ ಗೆಲುವಿಗೆ ಮೊದಲ ಕಂಟಕವಾಗಿರುವ ಕಾಗೇರಿ ವಿ.ಎಸ್. ಪಾಟೀಲರ ಪುತ್ರನನ್ನು ಕಾಂಗ್ರೆಸ್ ಗೆ ಕಳಿಸಿ ತೆರೆಮರೆಯಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವ ಪ್ರಯತ್ನ ಪ್ರಾರಂಭಿಸಿದ್ದಾರಂತೆ! ಇದರ ಅಂಗವಾಗಿ ಪ್ರಾರಂಭವಾಗಿರುವ ಶಿವರಾಮ್ ಹೆಬ್ಬಾರ್ ಹಠಾವೋ ಪ್ರಯತ್ನ ಅವರದೇ ಪಕ್ಷ,ಅವರದೇ ಜಾತಿಯ ಅಂಗಳದಲ್ಲಿ ಪ್ರಾರಂಭವಾಗಿರುವುದು ಶಿವರಾಮ್ ಹೆಬ್ಬಾರ್ ರಿಗೆ ತಲೆಬಿಸಿ ಮಾಡುತ್ತಿರುವ ವಿದ್ಯಮಾನದ ಪ್ರಾರಂಭ ಎನ್ನಲಾಗುತ್ತಿದೆ.
ಒಂದು ವೇಳೆ ಶಿವರಾಮ್ ಹೆಬ್ಬಾರ್ ಸೋತರೆ ಬಿ.ಜೆ.ಪಿ.ಸರ್ಕಾರದಲ್ಲಿ ಕಾಗೇರಿ ಮತ್ತೆ ಸಚಿವರಾಗಿ ಜಿಲ್ಲಾ ಉಸ್ತುವಾರಿ ನಿರ್ವಹಿಸುತ್ತಾರೆ. ಈ ಉದ್ಧೇಶಕ್ಕೆ ಅಡ್ಡಿಯಾಗಿರುವ ಹೆಬ್ಬಾರ್ ರಿಗೆ ಹವ್ಯಕ ವಲಯದಲ್ಲಿ ವಿರೋಧ ಪ್ರಾರಂಭವಾಗಿರುವುದು ಹವ್ಯಕರ ರಕ್ಷಣಾತ್ಮಕ ಆಟದ ಮುನ್ನುಡಿ ಎನ್ನಲಾಗುತ್ತಿದೆ.
ವಿ.ಎಸ್. ಪಾಟೀಲ್ ದ್ವಿಪಾತ್ರ-
ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತ ಮುಂಡಗೋಡಿನ ಮಾಜಿ ಶಾಸಕ ವಿ.ಎಸ್. ಪಾಟೀಲ್ ಕಾಂಗ್ರೆಸ್ ಕಡೆ ಮೊದಲ ಹೆಜ್ಜೆ ಇರಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿ ಯಡಿಯೂರಪ್ಪ ಗೂಟದ ಕಾರಿಗೆ ಪಾಟೀಲ್ ರನ್ನು ಕಟ್ಟಿಹಾಕದಿದ್ದಿದ್ದರೆ ಪಾಟೀಲ್ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿದ್ದರು.
ಒಂದು ಸುತ್ತಿನ ಮಾತುಕತೆ ನಂತರ ಹಿಂದೆ ಸರಿದ ಪಾಟೀಲ್ ಈಗ ಪುತ್ರ ಬಾಬುಗೌಡ ಪಾಟೀಲರನ್ನು ಕಾಂಗ್ರೆಸ್ ಅಂಗಳಕ್ಕೆ ನೂಕುವ ಮೂಲಕ ಬಿ.ಜೆ.ಪಿ. ಮತ್ತು ಹೆಬ್ಬಾರ್ ರಿಗೆ ಕೈಕೊಡಲು ನಿರ್ಧರಿಸಿದ್ದಾರೆ. ಈ ವಿಚಾರ ಬಿ.ಜೆ.ಪಿ.,ಯಡಿಯೂರಪ್ಪನವರಿಗೆ ತಿಳಿದಿದ್ದರೂ ಪಾಟೀಲ್ ಮಾಡುವ ಹಾನಿ ತುಂಬಲು ಅವರ ಬಳಿ ಅಸ್ತ್ರಗಳಿಲ್ಲ, ಹಾಗಾಗಿ ವಿಧಾನಸಭಾಧ್ಯಕ್ಷ ಕಾಗೇರಿ ಮತ್ತು ವಿ.ಎಸ್. ಪಾಟೀಲ್ ಶತ್ರುವಿನ ಶತ್ರು ಮಿತ್ರ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ಪರವಾಗಿ ಕೆಲಸಕ್ಕೆ ಅನುಕೂಲಮಾಡಿಕೊಡುತ್ತಿದ್ದಾರೆ ಎನ್ನಲಾಗುತ್ತಿದೆ….(ಮುಂದುವರಿದಿದೆ) ಗುತ್ತಿಮನೆ ಕುಂಬಾರಿಕೆ &ಕುಶಲ ಕೈಗಾರಿಕಾ ಸಂಘಕ್ಕೆ ಬೇಕು ಹೊಸರೂಪ
ಸಿದ್ಧಾಪುರ ತಾಲೂಕಿನ ಏಕೈಕ ಕರಕುಶಲ ಕೈಗಾರಿಕಾ ಕೆಲಸಗಾರರ ಸಂಘ ಪುನಶ್ಚೇತನಕ್ಕೆ ಕಾಯುತ್ತಾ ಉಸಿರು ಹಿಡಿದುಕೊಂಡಿದೆ. ಸಹಕಾರಿ ಜಿಲ್ಲೆಯೆಂದೇ ಪ್ರಖ್ಯಾತವಾಗಿರುವ ಉತ್ತರಕನ್ನಡದಲ್ಲಿ ತೋಟಗಾರಿಕೆ,ಕೃಷಿ, ಕೈಗಾರಿಕೆಗಳನ್ನೊಳಗೊಂಡ ವಿವಿದೋದ್ಧೇಶ ಸಹಕಾರಿ ಸಂಘಗಳು ಉತ್ತಮ ಕೆಲಸಗಳ ಮೂಲಕ ಸಾಧನೆ ಮಾಡಿವೆ.
ಇಂಥ ಘನ ಉದ್ದೇಶದಿಂದ ಸಿದ್ದಾಪುರದ ಪ್ರಮುಖರಿಂದ ಪ್ರಾರಂಭವಾದ ಕಾನಗೋಡು ಗ್ರಾ.ಪಂ. ಐಗೋಡಿನ ಗುತ್ತಿಮನೆ ಕುಂಬಾರ ಕರಕುಶಲ ಕೈಗಾರಿಕಾ ಕೆಲಸಗಾರರ ಸಹಕಾರಿ ಸಂಘ ತನ್ನ ನಾಲ್ಕು ದಶಕದ ಅವಧಿಯುದ್ದಕ್ಕೂ ಕುಂಟುತ್ತಾ ಸಾಗುತ್ತಿರುವುದು ಅದರ ಉದ್ಧೇಶಕ್ಕೆ ಅಪವಾದವಾದಂತಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಂಜುಗುಣಿ ಜಾತ್ರೆ ಸಂಪನ್ನ, ಕದಂಬೋತ್ಸವ ೨೫ಕ್ಕೆ ಚಾಲನೆ,ಶಿವದರ್ಶನ! samajamukhi.net news round 12-04-25

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿದ್ಧಾಪುರ ಆಯೋಜಿಸಿರುವ ಶಿವದರ್ಶನ ಪ್ರವಚನ ಮಾಲಿಕೆಹಾಗೂ ಭಗವದ್ಗೀತೆಯ ಸಂದೇಶ ʼದ್ವಾದಶ ಜ್ಯೋತಿರ್ಲಿಂಗಗಳ ದಿವ್ಯ ದರ್ಶನ ಕಾರ್ಯಕ್ರಮ ಏ.೧೪ ರ...

ಇಂದಿನ ಸುದ್ದಿ…samajamukhi.net-news-round 11-04-25 ಒಕ್ಕಲಿಗರ ಬೃಹತ್‌ ಸಮಾವೇಶ,ಬೇಸಿಗೆ ಶಿಬಿರ ಪ್ರಾರಂಭ,ಕೃಷಿ ಇಲಾಖೆಯಸೌಲತ್ತು ವಿತರಣೆ,ಬಿ.ಜೆ.ಪಿ.ಗೆ ಜಾಡಿಸಿದ ಭೀಮಣ್ಣ

ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಿದ ಬಿ.ಜೆ.ಪಿ. ಕಾಂಗ್ರೆಸ್‌ ನಾಯಕರು ಮತ್ತು ಪಕ್ಷವನ್ನು ಗುರಿಯಾಗಿಸಿ ದೂಷಿಸಿದ್ದಾರೆ. ಬಿ.ಜೆ.ಪಿ. ಮುಖಂಡರ ಬಾಯಿಂದ ಮುಸ್ಲಿಂ ವಿರೋಧದ ಜೊತೆಗೆ...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *