ಕಳಪೆ ಕಾಮಗಾರಿ,ಇಸ್ಪೀಟ್,ಮಟಕಾ ದಂಧೆ ಕಾರ್ಬಾರು ರಾಜ್ಯ ವಿಧಾನಸಭಾಅಧ್ಯಕ್ಷರ ಕ್ಷೇತ್ರದಲ್ಲಿಗ್ಯಾಂಬ್ಲಿಂಗ್ ಜೋರು

ಶಿರಸಿ ಉಪವಿಭಾಗ, ಶಿರಸಿಕ್ಷೇತ್ರದಲ್ಲಿ ಮಾಜಿಸಚಿವರುಗಳ ಶಾಮೀಲಾತಿಯಲ್ಲಿ ಲೋಕೋಪಯೋಗಿ ಇಲಾಖೆಯ ಕಳಪೆ ಕಾಮಗಾರಿಗಳ ಕರ್ಮಕಾಂಡದ ಬಗ್ಗೆ ಸ್ಥಳಿಯರು ಲೋಕಾಯುಕ್ತಕ್ಕೆ ದೂರು ನೀಡಿರುವ ಬೆನ್ನಲ್ಲೇ ದೇಶಪ್ರೇಮಿಗಳೆಂದು ಸ್ವಯಂಘೋಶಿಸಿಕೊಂಡಿರುವ ಪಕ್ಷದ ಜನಪ್ರತಿನಿಧಿಗಳು ಅವರ ಆಪ್ತರು, ಆಪ್ತ ಉದ್ಯಮಿಗಳು ಹಗಲು ದೇಶಪ್ರೇಮದ ಮಾತನಾಡಿ ರಾತ್ರಿ ಜಿಲ್ಲಾ ಗಡಿ, ತಾಲೂಕು ಗಡಿಗಳಲ್ಲಿ ರಾಜಾರೋಷ ಗ್ಯಾಂಬ್ಲಿಂಗ್ ವ್ಯಹಾರ ನಡೆಸುತ್ತಿರುವ ಬಗ್ಗೆ ಸ್ಥಳಿಯರೇ ಲೋಕಾಯುಕ್ತ ಮತ್ತು ಅಪರಾಧ ನಿಗ್ರಹ ವಿಭಾಗಕ್ಕೆ ದೂರು ನೀಡಿದ್ದಾರೆ.
ಈ ರೀತಿ ಆಡಳಿತ ಪಕ್ಷದ ವ್ಯವಹಾರಗಳು, ಅನೈತಿಕ,ಅಕ್ರಮ ಕೆಲಸಗಳಿಗೆ ಬೆಂಬಲಿಸುತ್ತಿರುವ ಪ್ರಮುಖ ರಾಜಕಾರಣಿಗಳು ಚುನಾವಣೆ ಮೊದಲು ಮದ್ಯ ಮಾರಾಟದ ನಾಟಕ ಮಾಡಿ ರಾಜಕೀಯ ಲಾಭ ಮಾಡಿಕೊಳ್ಳುತಿದ್ದಾರೆ. ಗ್ಯಾಬ್ಲಿಂಗ್ ನಲ್ಲೂ ಲಾಭ,ಮದ್ಯ ಮಾರಾಟದ ವಿರುದ್ಧದ ಹೋರಾಟದಿಂದಲೂ ಲಾಭ ಇದು ನಕಲಿ ದೇಶಪ್ರೇಮಿಗಳ ಹಾರಾಟದ ಗುಟ್ಟು ಎನ್ನಲಾಗುತ್ತಿದೆ.
ರಾಜ್ಯದ 15 ಕ್ಷೇತ್ರಗಳ ಶಾಸಕರನ್ನು ರಾಜೀನಾಮೆ ಕೊಡಿಸಿ,ಅವರು ಅನರ್ಹರಾದ ನಂತರ ಅವರನ್ನು ಗೆಲ್ಲಿಸಲು ಟೊಂಕ ಕಟ್ಟಿರುವ ರಾಜ್ಯ ಸರ್ಕಾರ ಕಳಪೆಕಾಮಗಾರಿ, ಮಟಕಾ ಇಸ್ಫೀಟ್ ಆಡಿಸುವ ಮೂಲಕ ಹಣಸಂಗ್ರಹ ಮಾಡುತ್ತಿರುವ ಗುಟ್ಟಿನ ವಿಷಯ ಬಹಿರಂಗವಾಗಿದೆ.
ಉತ್ತರಕನ್ನಡ ಜಿಲ್ಲೆಯ ಗಡಿಭಾಗಗಳಲ್ಲಿಮಟಕಾ, ಗ್ಯಾಂಬ್ಲಿಂಗ್ ನಡೆಯುತ್ತಿರುವುದನ್ನು ಹಿಂದಿನ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ನಿಯಂತ್ರಿಸಿದ್ದರು. ಈಗ ಜಿಲ್ಲಾ ವರಿಷ್ಠರೂ ಬದಲು, ಸರ್ಕಾರವೂ ಬದಲು ಆದ ಪರಿಣಾಮ ಓಸಿ, ಇಸ್ಪೀಟ್,ಮಟಕಾ ಸೇರಿದ ಗ್ಯಾಂಬ್ಲಿಂಗ್ ವ್ಯವಹಾರ ಮಿಮೀರಿರುವ ಬಗ್ಗೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ.
ಜಿಲ್ಲೆಯ ಪ್ರತಿಷ್ಟಿತ ಟಿ.ಎಸ್.ಎಸ್. ಸಂಸ್ಥೆಯ ತಾಲೂಕು ಶಾಖೆಯ ವ್ಯವಸ್ಥಾಪಕರ ಇಸ್ಫೀಟ್ ಹುಚ್ಚಿನ ಲಾಭ ಪಡೆದ ಜಿಲ್ಲೆಯ ಕೆಲವರು ಓಸಿ, ಮಟಕಾ, ಗ್ಯಾಂಬ್ಲಿಂಗ್ ಆಡಿಸಿ ಅವರನ್ನು ದಿವಾಳಿ ತೆಗೆದ ಅವಧಿಯಿಂದ ಪ್ರಾರಂಭವಾದ ಉತ್ತರಕನ್ನಡ ಜಿಲ್ಲೆಯ ಗ್ಯಾಬ್ಲಿಂಗ್ ವ್ಯವಹಾರ ವಿಸ್ತರಿಸಿ, ಈ ವ್ಯವಹಾರದ ಪ್ರಮುಖರೆಲ್ಲಾ ಈಗ ಶ್ರೀಮಂತರು, ಪೊಲೀಸರ ಆಪ್ತಮಿತ್ರರಾದ ಕತೆ ಹಳೆಯದು.
ಈಗಿನ ಹೊಸ ವಿಚಾರವೆಂದರೆ….
ಸಿದ್ದಾಪುರದಿಂದ ಪ್ರಾರಂಭವಾಗಿ ಉತ್ತರಕನ್ನಡ ಜಿಲ್ಲೆಯಾದ್ಯಂತ ಓ.ಸಿ. ಮಟಕಾ, ಇಸ್ಪೀಟ್ ವ್ಯವಹಾರ ಎಗ್ಗಿಲ್ಲದೆ ನಡೆಯುತ್ತಿದೆ. ಓಸಿ, ಇಸ್ಪೀಟ್, ಗ್ಯಾಂಬ್ಲರ್ ಗಳ ಸ್ನೇಹದ ಜಿಲ್ಲೆಯ ಕೆಲವು ಶಾಸಕರು ಈಗಿನ ಹೊಸ ಸರ್ಕಾರದಲ್ಲಿ ಗ್ರಾಮ, ಊರು, ಗಲ್ಲಿ, ಗಲ್ಲಿಗಳಲ್ಲಿ ಈ ವವ್ಯಹಾರಕ್ಕೆ ಅನುಮತಿ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಸಿದ್ದಾಪುರದಲ್ಲಿ ಶಾಸಕರು, ಸಂಸದರ ಆಪ್ತರು ಸೇರಿದಂತೆ ಕೆಲವರ ಗ್ಯಾಂಬ್ಲಿಂಗ್ ನಿರಾಯಾಸವಾಗಿ ನಡೆದಿದೆ. ಆದರೆ ತಮ್ಮ ವ್ಯವಹಾರ, ರಕ್ಷಣೆ,ತಮ್ಮ ಗ್ಯಾಂಬ್ಲರ್ ದೋಸ್ತಿಗಳ ರಕ್ಷಣೆ ಮಾಡುತ್ತಿರುವ ಆಡಳಿತ ಪಕ್ಷದ ಪ್ರಮುಖರು ಇತ್ತೀಚೆಗೆ ಅನ್ಯ ಪಕ್ಷಗಳ ಹೊಸ ಪಂಟರನ್ನು ಬಂಧಿಸಿ, ತಮ್ಮ ರಾಜಕೀಯ ಸೇಡು ತೀರಿಸಿಕೊಂಡಿದ್ದಾರೆ.
ಆಡಳಿತ ಪಕ್ಷದ ಕೆಲವು ಪ್ರಮುಖರ ಈ ಸೇಡಿನ ರಾಜಕಾರಣದ ಬಲಿಪಶುಗಳಾದ ಕೆಲವರು ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಡಳಿತ ಪಕ್ಷದ ಪ್ರಮುಖರು, ಅವರ ಬೆಂಬಲಿಗರು, ಕೆಲವು ಜನಪ್ರತಿನಿಧಿಗಳು ನಡೆಸುತ್ತಿರುವ ಗ್ಯಾಂಬ್ಲಿಂಗ್ ಬಗ್ಗೆ ಲೋಕಾಯುಕ್ತ ಮತ್ತು ಎ.ಸಿ.ಬಿ. ಗೆ ದೂರು ನೀಡಿರುವ ಅಂಶ ಈಗ ಬಹಿರಂಗವಾಗಿದೆ.
ಹಿಂದಿನ ಚುನಾವಣೆ ಮೊದಲು ಮದ್ಯಮಾರಾಟದ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ ಮಾಡಿಸಿ ರಾಜಕೀಯ ಲಾಭ ಪಡೆದ ಈಗಿನ ಆಡಳಿತ ಪಕ್ಷದ ಮುಖಂಡರು ಮತ್ತು ಮಾಜಿ ಸಚಿವರುಗಳು ಈಗ ತಮ್ಮ ಆಪ್ತ ಉದ್ಯಮಿಗಳು ಮತ್ತು ಜನಪ್ರತಿನಿಧಿಗಳಿಗೇ ಓ.ಸಿ., ಮಟಕಾ, ಇಸ್ಫೀಟ್ ಸೇರಿದ ಗ್ಯಾಂಬ್ಲಿಂಗ್ ವ್ಯವಹಾರಕ್ಕೆ ಬೆಂಬಲಿಸುತ್ತಿರುವ ಬಗ್ಗೆ ಲೋಕಾಯುಕ್ತರು ಮತ್ತು ಎ.ಸಿ.ಬಿ. ಗೆ ಮನವಿ ಮಾಡಿರುವ ಕೆಲವು ಅತೃಪ್ತರು. ರಾಜ್ಯ ವಿಧಾನಸಭಾ ಅಧ್ಯಕ್ಷರು, ಅವರ ಬೆಂಬಲಿಗ ಮುಖಂಡರು ಮತ್ತು ಅವರ ಆಪ್ತ ಉದ್ಯಮಿಗಳೇ ಉತ್ತರ ಕನ್ನಡ ಜಿಲ್ಲೆ, ಹೊರ ಜಿಲ್ಲೆಗಳ ಗಡಿಗಳಲ್ಲಿ ಇಂಥ ವ್ಯವಹಾರ ನಡೆಸುತಿದ್ದಾರೆ.
ಈ ವ್ಯವಹಾರಕ್ಕೆ ಆಡಳಿತ ಪಕ್ಷ ಮತ್ತು ಅಧಿಕಾರಿಗಳು ಹಾಗೂ ಜನಪ್ರತಿನಿಧಗಳ ಬೆಂಬಲವಿದೆ ಎಂದು ಆರೋಪಿಸಿ, ಕೆಲವು ಹೆಸರುಗಳು, ದಾಖಲೆಗಳೊಂದಿಗೆ ಲೋಕಾಯುಕ್ತರು ಮತ್ತು ರಾಜ್ಯ ಬ್ರಷ್ಟಾಚಾರ ಮತ್ತು ಅಪರಾಧ ನಿಯಂತ್ರಣ ಘಟಕಗಳಿಗೆ ದೂರು ಸಲ್ಲಿಸಿರುವ ಮಾಹಿತಿ ಸಮಾಜಮುಖಿಗೆ ದೊರೆತಿದೆ.
ದೇಶಭಕ್ತಿ,ರಾಷ್ಟ್ರೀಯತೆ, ಹಿಂದುತ್ವದ ಜಪ ಮಾಡುತ್ತಾ ಶಾಸಕರನ್ನು ಖರೀದಿಸುತ್ತಾ ಚುನಾವಣೆ ಮೇಲೆ ಚುನಾವಣೆ ಬರುವಂತೆ ಮಾಡುತ್ತಿರುವ ಆಡಳಿತ ಪಕ್ಷ ತಮ್ಮ ವ್ಯವಹಾರ, ಖರ್ಚು, ವೆಚ್ಚಕ್ಕಾಗಿ ಸಾಮಾಜವಿರೋಧಿ ಗ್ಯಾಬ್ಲಿಂಗ್ ವ್ಯವಹಾರಕ್ಕೆ ಸಹಕರಿಸುತ್ತಿರುವ ಬಗ್ಗೆ ಜಿಲ್ಲೆಯಿಂದ ದೂರು ರವಾನೆಯಾಗಿದೆ.
ಆಡಳಿತ ಪಕ್ಷದ ಜನಪ್ರತಿನಿಧಿಗಳು, ಜನಪ್ರತಿನಿಧಿಗಳ ಆಪ್ತರಿಗೆ ಗ್ಯಾಂಬ್ಲಿಂಗ್ ಮಾಡಲು ಸಹಕರಿಸಿ, ಅನ್ಯ ಪಕ್ಷಳು, ಅನ್ಯಪಕ್ಷಗಳ ಮುಖಂಡರೊಂದಿಗಿರುವ ದೋನಂಬರ್ ವ್ಯವಹಾರಸ್ಥರಿಗೆ ಬ್ರೇಕ್ ಹಾಕುತ್ತಿರುವ ರಾಜಕಾರಣಿಗಳ ನಿರ್ಧೇಶನದ ಜಿಲ್ಲಾಡಳಿತದ ಆಡಳಿತ ಪಕ್ಷದವರಿಗೊಂದು ನ್ಯಾಯ ಇತರರಿಗೊಂದು ನ್ಯಾಯದ ನೀತಿ ತೀವೃ ವಿರೋಧಕ್ಕೆ ಕಾರಣವಾಗಿದ್ದು ಈ ಬಗ್ಗೆ ಅರಿವಿರುವ ಕೆಲವರು ಕೆಲವು ದಾಖಲೆ, ಸಾಕ್ಷಿಗಳ ಜೊತೆಗೆ ಲೋಕಾಯುಕ್ತರು, ರಾಜ್ಯ ಅಪರಾಧ ನಿಯಂತ್ರಣ ವಿಭಾಗಗಳಿಗೆ ದೂರು ನೀಡಿದ್ದು ಈ ಬೆಳವಣಿಗೆ ಅಧಿಕಾರಿಗಳ ಕುತ್ತಿಗೆಯ ಹಗ್ಗವಾಗಲಿದೆ ಎನ್ನಲಾಗಿದೆ.
ಅಧಿಕಾರಿಗಳ ಕಣ್ ತಪ್ಪಿಸಿ ವ್ಯವಹರಿಸುವ ಕಿರಿಯರು-
ಸಿದ್ಧಾಪುರ ಸೇರಿದಂತೆ ಶಿರಸಿಕ್ಷೇತ್ರ-ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವು ಠಾಣೆಗಳಲ್ಲಿ ಹಿರಿಯ ಅಧಿಕಾರಿಗಳ ಕಣ್ ತಪ್ಪಿಸಿ, ಗ್ಯಾಂಬ್ಲಿಂಗ್ ಪೋಶಿಸುವ, ನಿಯಂತ್ರಿಸುವ ಕಿರಿಯ ಪೇದೆ, ಹವಾಲ್ದಾರಗಳ ನಡವಳಿಕೆ ಪೊಲೀಸ್ ಇಲಾಖೆ ಮತ್ತು ಆಡಳಿತಕ್ಕೆ ತಲೆನೋವಾಗಿರುವ ವಿದ್ಯಮಾನಗಳೂ ಬೆಳಕಿಗೆ ಬಂದಿವೆ.
ಸಿದ್ಧಾಪುರ, ಶಿರಸಿ ಸೇರಿದಂತೆ ಜಿಲ್ಲೆಯ ಕೆಲವು ಠಾಣೆಗಳಲ್ಲಿ ಹಿರಿಯ ಅಧಿಕಾರಿಗಳ ಕಣ್ ತಪ್ಪಿಸಿ ಗ್ಯಾಂಬ್ಲಿಂಗ್, ಮಟಕಾ ದಂಥ ಅವ್ಯವಹಾರಗಳಿಗೆ ಬೆಂಬಲಿಸುತ್ತಿರುವ ಕೆಲವರು ಆಡಳಿತಪಕ್ಷದ ಕೆಲವರ ಬೆಂಬಲದಿಂದ ತಾವೇ ಗ್ಯಾಂಬ್ಲಿಂಗ್ ನಡೆಸಲು ಸಹಕರಿಸುವ ತಮಗೆ ತಮ್ಮ ಆಪ್ತ ಆಡಳಿತ ಪಕ್ಷದ ರಾಜಕಾರಣಿಗಳಿಗೆ ಆಗದ ಜನರ ವ್ಯವಹಾರಗಳನ್ನು ನಿಯಂತ್ರಿಸಿ ತೊಂದರೆ ಕೊಡುವ ಕೆಲವು ಇಲಾಖೆ ಒಳಗಿನ ಮೀರ್‍ಸಾದಿಕ್ ಗಳು ಹೊಸದಾಗಿ ಬರುವ ಅಧಿಕಾರಿಗಳಿಗೆ ಶಾಪವಾಗಿ ಕಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ.
ತಾಲೂಕು ಜಿಲ್ಲೆಗಳ ಗಡಿಗಳಲ್ಲಿ ಥರಾವರಿ ಗ್ಯಾಂಬ್ಲಿಂಗ್ ನಡೆಸುವ ಜನರ ಆಪ್ತರಾದ ಈ ಇಲಾಖಾ ಕುಳಗಳು ನಗರದಲ್ಲಿ ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೊಂದು ನ್ಯಾಯ ಮಾಡಿ ಉತ್ತರ ಕನ್ನಡ ಜಿಲ್ಲೆಯನ್ನು ಜಂಗಲ್ ರಾಜ್ ಮಾಡಹೊಟಿವೆ. ಇಂಥ ಮೀರ್‍ಸಾದಿಕ್ ಗಳು ಸಮಾಜಕ್ಕೆ, ಇಲಾಖೆ, ವ್ಯವಸ್ಥೆಗೇ ಕಂಟಕರಾಗಿ ಬೆಳೆದಿದ್ದು ಇವರು ಹಗಲು ಕರ್ತವ್ಯ, ರಾತ್ರಿ ಗ್ಯಾಂಬ್ಲರ್ ಗಳ ದೋಸ್ತಿ, ರಕ್ಷಣೆ ಮಾಡುತ್ತಾ ಆರ್ಥಿಕವಾಗಿ, ಅನುಕೂಲದ ದೃಷ್ಠಿಯಿಂದ ಕೊಬ್ಬುತಿದ್ದಾರೆ ಎನ್ನುವ ದೂರು ಕೂಡಾ ಈಗಿನ ಸರ್ಕಾರದ ಬೇಲಿ ಎದ್ದು ಹೊಲಮೇಯುತ್ತಿರುವ ದೇಶಭಕ್ತರ ಆಡಳಿತವ್ಯವಸ್ಥೆಯಾಗಿದೆ ಎನ್ನುವ ದೂರುಗಳೂ ಕೇಳಿ ಬಂದಿವೆ.

ನಾಡದೇವಿಯ ಅಭಿಮಾನೋತ್ಸವ ಚಂದ್ರಾವಳಿ ವಿಲಾಸ ಯಕ್ಷಗಾನ
ನಾಡದೇವಿ ಶ್ರೀ ಭುವನೇಶ್ವರಿ ಅಭಿಮಾನೋತ್ಸವ ಬಳಗವು ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.29ರಂದು ಭುವನಗಿರಿಯ ಶ್ರೀ ಭುವನೇಶ್ವರಿ ದೇವಸ್ಥಾನದಲ್ಲಿ ನಾಡದೇವಿಯ ಅಭಿಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದೆ.
ನ.29ರ ಬೆಳಿಗ್ಗೆ 6ಕ್ಕೆ ಮಂಗಳವಾದ್ಯ ನಾದಸ್ವರದೊಂದಿಗೆ ಆರಂಭಗೊಂಡು ಮೂಲನಿವಾಸಿನಿ ಶ್ರೀ ಭುವನೇಶ್ವರಿ ಅಮ್ಮನವರಿಗೆ ಅಭಿಷೇಕ, ಪೂಜಾ ಕೈಂಕರ್ಯಗಳು ದೇವಸ್ಥಾನದ ಪ್ರಧಾನ ಅರ್ಚಕ ವೇ| ಶ್ರೀಧರ ಭಟ್ಟ ಮುತ್ತಿಗೆಯವರ ನೇತೃತ್ವದಲ್ಲಿ, ವೇ|ಶೇಷಗಿರಿ ಭಟ್ಟ ಗುಂಜಗೋಡ ಸಂಯೋಜಕತ್ವದಲ್ಲಿ ನಡೆಯುವದು.
9ರಿಂದ ಉದಯ ಟಿವಿ ಸಮಸ್ತೆ ಶಂಕರ ಕಾರ್ಯಕ್ರಮದ ಗುರು ವಿದ್ವಾನ್ ಡಾ| ಗೋಪಾಲಕೃಷ್ಣ ಜೋಶಿಯವರ ಮಾರ್ಗದರ್ಶನದಲ್ಲಿ ಚಂಡಿಕಾಯಾಗ ಜರುಗುವದು.10ರಿಂದ ಕುಂಕುಮಾರ್ಚನೆ, ನಂತರ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾಪೂಜೆ, 12.30ಕ್ಕೆ ಮಹಾಮಂಗಳಾರತಿ, ನಂತರ ಮಹಾಪ್ರಸಾದ ವಿನಿಯೋಗ ನಡೆಯುವದು.
ಸಂಜೆ 4ರಿಂದ ಸಾಂಸ್ಕøತಿಕ ಕಾರ್ಯಕ್ರಮ, ಕೇಶವ ಹೆಗಡೆ ಕೊಳಗಿ, ಗೋಪಾಲ ಆಚಾರ್ಯ, ಅಶೋಕ ಭಟ್ ಸಿದ್ದಾಪುರ ಮುಂತಾದ ಕಲಾವಿದರ ಪಾಲ್ಗೊಳ್ಳುವಿಕೆಯಲ್ಲಿ ಚಂದ್ರಾವಳಿ ವಿಲಾಸ ಯಕ್ಷಗಾನ, ನಂತರ ರಸಮಂಜರಿ ಕಾರ್ಯಕ್ರಮಗಳು ನಡೆಯುವದು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಮಸ್ತರೂ ಪಾಲ್ಗೊಳ್ಳಬೇಕೆಂದು ಶ್ರೀ ಭುವನೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇ| ಶ್ರೀಧರ ಭಟ್ಟ ಹಾಗೂ ಶ್ರೀ ಭುವನೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯವರು ಕೋರಿಕೊಂಡಿದ್ದಾರೆ.
ಕರ್ನಾಟಕದ ನಾಡದೇವಿ ಶ್ರೀ ಭುವನೇಶ್ವರಿಯ ದೇವಿಯ ಕುರಿತಾಗಿ ಕನ್ನಡಿಗರು ಮಾತ್ರವಲ್ಲದೇ ಅನ್ಯಭಾಷಿಕರೂ ಅಭಿಮಾನ, ಪೂಜ್ಯ ಭಾವನೆಯನ್ನು ಹೊಂದಿದ್ದಾರೆ.ಕರ್ನಾಟಕ ಸಾಹಿತ್ಯ, ಕಲೆ, ಸಂಸ್ಕøತಿಗೆ ಹೆಸರಾದಂತೆ ಸ್ವಾಭಿಮಾನ, ಕರ್ಮಯೋಗಕ್ಕೆ ಹೆಸರಾದದ್ದು. ನಮ್ಮ ರಾಜ್ಯವು ಪ್ರಕೃತಿವಿಕೋಪ ಮುಂತಾದ ಸಮಸ್ಯೆಗಳಿಂದ ನಲುಗಿಹೋಗಿದ್ದು ಕನ್ನಡಿಗರಾದ ನಾವು ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕಿದೆ.
ನಾಡದೇವಿ ಮುನಿದರೆ ವಿಕೋಪಗಳು ಮತ್ತೆ, ಮತ್ತೆ ಕಾಣಿಸಿಕೊಳ್ಳುತ್ತವೆ. ನಾವು ಮೊಟ್ಟಮೊದಲು ಮಾಡಬೇಕಾದ ಶುಭಕಾರ್ಯವೆಂದರೆ ನಾಡದೇವಿಯನ್ನು ಸಂತೃಪ್ತಗೊಳಿಸಬೇಕು. ಹಾಗಾದಾಗ ಮಾತ್ರ ನಾಡು ಮತ್ತಷ್ಟು ಸಮೃದ್ಧಿ ಕಾಣುತ್ತದೆ. ಈ ಕಾರಣದಿಂದ ಸಮಸ್ತ ಕನ್ನಡಿಗರ ಪರವಾಗಿ ಪ್ರಥಮ ಹೆಜ್ಜೆಯಾಗಿ ನ.29ರಂದು ಸಂಸ್ಕಾರಯುತ ಶುಭಕಾರ್ಯಕ್ಕೆ ಶ್ರೀ ಭುವನೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ, ಪ್ರಧಾನ ಅರ್ಚಕರು, ಇನ್ನಿತರ ವಿದ್ವಾಂಸರ, ಅಸಂಖ್ಯಾತ ಭಕ್ತರ ಸಹಕಾರದೊಂದಿಗೆ ಮುಂದಾಗಿದ್ದೇವೆ.
ಎಲ್ಲ ಕನ್ನಡದ ಕಟ್ಟಾಳುಗಳು, ಶ್ರೀ ದೇವಿಯ ಭಕ್ತರು ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಅಭಿಮಾನೋತ್ಸವ ಬಳಗದ ಪರವಾಗಿ ಲೋಕೇಶ್ ಹೆಗಡೆ ಪ್ರಕಟಣೆಯಲ್ಲಿ ಕೋರಿದ್ದಾರೆ.

ಅನರ್ಹರು ಸೋತರೂ
ಮಂತ್ರಿ,ಗೆದ್ದರೆ ಸಚಿವರು
ಡಿ.5 ರಂದು ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅರ್ಧಕ್ಕಿಂತ ಹೆಚ್ಚು ಅನರ್ಹ ಶಾಸಕರು ಸೋಲುವ ಆತಂಕದ ಹಿನ್ನೆಲೆಯಲ್ಲಿ ಅನರ್ಹರು ಸೋತರೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸಿ ಸಚಿವರನ್ನಾಗಿ ಮಾಡಲು ಬಿ.ಜೆ.ಪಿ. ತೀರ್ಮಾನಿಸಿದೆಯಂತೆ. ಚುನಾವಣಾ ಪೂರ್ವ ಸಮೀಕ್ಷೆಗಳ ಹಿನ್ನೆಯಲ್ಲಿ ಬಿ.ಜೆ.ಪಿ.ಯಿಂದ ಸ್ಫರ್ಧಿಸಿರುವ ಅನರ್ಹ ಶಾಸಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಸೋಲುವ ಹಿನ್ನೆಲೆಯಲ್ಲಿ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿ ಸಚಿವರನ್ನಾಗಿಸಲು ಅಮಿತ್ ಶಾ ಸಲಹೆ ನೀಡಿದ್ದಾರಂತೆ.
ಈ ಬಗ್ಗೆ ಚರ್ಚೆ ಸಂವಾದಗಳು ನಡೆಯುತ್ತಿದ್ದು ಕಾಂಗ್ರೆಸ್, ಜೆ.ಡಿ.ಎಸ್.ಪಕ್ಷಗಳು ಅನರ್ಹರ ಸೋಲಿಗೆ ಶತಾಯ ಗತಾಯ ಪ್ರಯತ್ನಿಸುತ್ತಿರುವಂತೆ ಅನರ್ಹರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಸೋಲುವುದು ಖಚಿತ ಎನ್ನಲಾಗಿದೆ.
ಬಿ.ಜೆ.ಪಿ.ಯಿಂದ ಸ್ಫರ್ಧಿಸಿರುವ ಅನರ್ಹರ ಸೋಲು ಮನಗಂಡಿರುವ ಬಿ.ಜೆ.ಪಿ. ಸೋತ ಅನರ್ಹರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಲು 7 ಜನ ವಿ.ಪ.ಸದಸ್ಯರಿಗೆ ರಾಜೀನಾಮೆ ಕೊಡಿಸಿ ಅವರ ಜಾಗಕ್ಕೆ ಅನರ್ಹ ಶಾಸಕರನ್ನು ಕೂರಿಸಿ, ಅವರನ್ನು ಸಚಿವರನ್ನಾಗಿಸಲು ಬಿ.ಜೆ.ಪಿ. ಯೋಜಿಸಿದೆಯಂತೆ. ಇದಕ್ಕೆ ಪ್ರತಿತಂತ್ರ ಹೂಡಿರುವ ಜೆ.ಡಿ.ಎಸ್., ಕಾಂಗ್ರೆಸ್ ಗಳು ಬಿ.ಜೆ.ಪಿ. ಸರ್ಕಾರವನ್ನೇ ಕೆಡವಿ ತಾವು ಅಧಿಕಾರಕ್ಕೆ ಬರುವ ಸಾಧ್ಯತೆಗಳ ಬಗ್ಗೆ ಪ್ರಯತ್ನಿಸುತ್ತಿವೆಯಂತೆ!
ಈ ನಡುವೆ ಅನರ್ಹರಂತೂ ಸೋಲಲಿ,ಗೆಲ್ಲಲಿ ಅವರಿಗೆ ಅಧಿಕಾರ ನೀಡುತ್ತೇವೆ ಎಂದು ಬಿ.ಜೆ.ಪಿ. ಪ್ರಕಟಿಸಿದ ಸುದ್ದಿ ತಿಳಿದ ರಾಜ್ಯದ ಪ್ರಗತಿಪರರು ಅನರ್ಹರಂತೂ ಹ್ಯಾಗಿದ್ದರೂ ಅಧಿಕಾರ ಪಡೆಯುತ್ತಾರೆ ಹಾಗಾಗಿ ಅವರ ವಿರುದ್ಧ ಸ್ಫರ್ಧಿಸಿದವರಿಗೆ ಆಯ್ಕೆ ಮಾಡಿ ಹೀಗೆ ಅರ್ಹರನ್ನು ಗೆಲ್ಲಿಸುವ ಮೂಲಕ ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಮತ್ತೊಬ್ಬರನ್ನು ಆಯ್ಕೆಮಾಡಿದಂತಾಗುತ್ತದೆ ಎಂದಿದ್ದಾರಂತೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *