
ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿ ಯಾರು ಎಷ್ಟು ಸ್ಥಾನಗಳನ್ನು ಗೆಲ್ಲುತ್ತಾರೆ ಎನ್ನುವ ಸಂವಾದ, ಜಿದ್ಞಾಸೆ ಪ್ರಾರಂಭವಾಗಿದೆ. ರಾಜ್ಯ ಗುಪ್ತಚರ ಇಲಾಖೆ ವರದಿ ನಂಬುವುದಾದರೆ ಅವರು ಆಡಳತಾರೂಢ ಬಿ.ಜೆ.ಪಿ.ಯ 8 ಅನರ್ಹರು ಗೆಲ್ಲುವ ಮೂಲಕ ಬಿ.ಜೆ.ಪಿ. ಸರ್ಕಾರ ಅಪಾಯದಿಂದ ಪಾರಾಗುವ ಮುನ್ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳನ್ನು ಗೆಲ್ಲುವುದಾಗಿ ಹೇಳಿಕೊಂಡರೂ ಭವಿಷ್ಯಕ್ಕೆ ಪ್ರಖ್ಯಾತರಾಗಿರುವ ಕೋಡಿಮಠದ ಸ್ವಾಮಿಗಳು ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಹೇಳಿ ಆಶ್ಚರ್ಯ ಮೂಡಿಸಿದ್ದಾರೆ ಎನ್ನಲಾಗಿದೆ.
ಹೀಗೆ 15 ರಲ್ಲಿ ಕಾಂಗ್ರೆಸ್ 14 ಕ್ಷೇತ್ರ ಗೆದ್ದರೆ ಬಿ.ಜೆ.ಪಿ,ಜೆ.ಡಿ.ಎಸ್. ಗಳು ಒಂದು ಕ್ಷೇತ್ರಕ್ಕಾಗಿ ಹೋರಾಟ ಮಾಡಬೇಕು. ಗುಪ್ತಚರ ಇಲಾಖೆಯ ವರದಿ ನಂಬುವುದಾದರೆ ಬಿ.ಜೆ.ಪಿ. 8 ಕ್ಷೇತ್ರಗಳಲ್ಲಿ ಜಯ ಗಳಿಸಿದರೆ ಕಾಂಗ್ರೆಸ್, ಮತ್ತು ಜಾ. ದಳಗಳು 7 ಕ್ಷೇತ್ರಗಳಲ್ಲಿ ಸ್ಫರ್ಧೆ ನಡೆಸಬೇಕು. ಜನಸಾಮಾನ್ಯರ ಅಭಿಪ್ರಾಯ, ಜೆ.ಡಿ.ಎಸ್. ಆತ್ಮವಿಶ್ವಾಸದ ಪ್ರಕಾರ ಜಾ.ದಳ ಕನಿಷ್ಟ 3 ಕ್ಷೇತ್ರಗಳನ್ನು ಗೆಲ್ಲಲಿದೆ.
ಹೀಗೆ ನಾನಾ ಲೆಕ್ಕಾಚಾರಗಳ ಪ್ರಕಾರ 14+8+3=25 ಆದರೆ ಇರುವ ಕ್ಷೇತ್ರಗಳೇ 15. ರಾಜಕೀಯದಲ್ಲಿ 15, 25 ಆಗಬಹುದೆ?
ಒಟ್ಟಾರೆ ಈ ಚುನಾವಣೆಯ ನಂತರ ರಾಜಕೀಯ ವ್ಯವಸ್ಥೆ ಬದಲಾಗಲಿದೆ ಎನ್ನುವ ಕೋಡಿಮಠದ ಭವಿಷ್ಯವಂತೂ ಸತ್ಯವಾಗಬಹುದು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
