ದೇಶಪಾಂಡೆ,ಹೆಬ್ಬಾರ್ ಯುದ್ಧದಲ್ಲಿ ಗೆಲ್ಲುವರೆ ಭೀಮಣ್ಣ?

ರಾಜ್ಯದ ಉಪಚುನಾವಣೆಗಳಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಏನಕೇನ ಪ್ರಕಾರೇಣ ಗೆಲ್ಲುವುದು, ಅಧಿಕಾರ ಗೃಹಣ ಏಕೈಕ ಗುರಿ ಎಂದುಕೊಂಡಿರುವ ಬಿ.ಜೆ.ಪಿ. ತನ್ನೆಲ್ಲಾ ಕಸರತ್ತುಗಳನ್ನು ಮಾಡುತ್ತಿದೆ.
ಕಾಂಗ್ರೆಸ್ ಕೂಡಾ ಈ ಚುನಾವಣೆಯನ್ನು ಪ್ರತಿಷ್ಠೆಯ ಕಣವನ್ನಾಗಿಸಿಕೊಂಡಿದೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಬಿ.ಜೆ.ಪಿ.ನಾಯಕರು ಹೆಬ್ಬಾರ್ ಗೆಲುವಿಗೆ ಟೊಂಕಕಟ್ಟಿದ್ದರೆ,ಕಾಂಗ್ರೆಸ್ ಗೆಲುವಿಗಾಗಿ ಕಾಂಗ್ರೆಸ್ ನಾಯಕರು ದುಡಿಯುತಿದ್ದಾರೆ.
ಹೆಬ್ಬಾರ್ ಅಕ್ರಮ ಆಸ್ತಿ, ವ್ಯವಹಾರ, ಪಲ್ಲಂಗಪುರಾಣ ಕಾಂಗ್ರೆಸ್ ಬತ್ತಳಿಕೆಯ ಅಸ್ತ್ರಗಳಾದರೆ,ಬಿ.ಜೆ.ಪಿ. ಹಿಂದುತ್ವ, ಅಭಿವೃದ್ಧಿ ಎನ್ನುತ್ತಿದೆ. ಯಲ್ಲಾಪುರ ಕ್ಷೇತ್ರದಲ್ಲಿ ಬಹುಸಂಖ್ಯಾತರು ಅಹಿಂದ್ ವರ್ಗವಾದರೆ, ಬ್ರಾಹ್ಮಣರು ಕ್ಷೇತ್ರದ ಮೊದಲ ಬಹುಸಂಖ್ಯಾತರು.
ಮೇಲ್ನೋಟಕ್ಕೆ ಬ್ರಾಹ್ಮಣರು,ಲಿಂಗಾಯತರು ಬಿ.ಜೆ.ಪಿ. ಪರವಾಗಿದ್ದಾರೆ ಎನಿಸಿದರೂ ದೇಶಪಾಂಡೆ ಬ್ರಾಹ್ಮಣರ ಮತಗಳನ್ನು ಕಾಂಗ್ರೆಸ್ ಗೆ ಸೆಳೆಯುವ ಜೊತೆಗೆ ಲಿಂಗಾಯತರು, ಮರಾಠರ ಮತಗಳನ್ನು ಕೇಂದ್ರೀಕರಿಸಿ ಕೆಲಸಮಾಡುತಿದ್ದಾರೆ.
ಹೆಬ್ಬಾರ್ ಅನರ್ಹ ಎನಿಸಿಕೊಂಡರೂ ಮತಬಾಚುವ ಸಕಲ ತಂತ್ರಗಳನ್ನು ಅರಿತಿರುವ ಅವರಿಗೆ ಮತದಾರರ ನಾಡಿಮಿಡಿತ ತಿಳಿದಿದೆ. ಭೀಮಣ್ಣ ವ್ಯಕ್ತಿಗತ ಶಾಂತ ಸ್ವಾಭಾವದ ಸಜ್ಜನ. ದೇಶಪಾಂಡೆ ಜೊತೆಗಿಲ್ಲದಿದ್ದರೆ ಚುನಾವಣೆಗೆ ಸ್ಫರ್ಧಿಸುವ ಯೋಚನೆಯನ್ನೂ ಮಾಡದ ಭೀಮಣ್ಣ ದೇಶಪಾಂಡೆ ಮಾರ್ಗದರ್ಶನದಲ್ಲಿ ಸಕಲ ತಂತ್ರ-ಮಂತ್ರಗಳನ್ನು ಪ್ರಯೋಗಿಸಿದ್ದಾರೆ.
ಭೀಮಣ್ಣ ನಾಯ್ಕರಿಗೆ ಕಾಂಗ್ರೆಸ್ ಬಣಗಳ ಒಳಹೊಡೆತ ಕಷ್ಟಕರವಾದರೂ ದೇಶಪಾಂಡೆಯವರ ಎದುರು ಈ ಬಣಗಳ ಆಟ ನಡೆಯಲಿಲ್ಲ ಎನ್ನುವುದೇ ವಿಶ್ವಾಸದ ಹಿಂದಿನ ಗುಟ್ಟು.
ಆದರೆ ಹೆಬ್ಬಾರ್ ರಿಗೆ ಬಿ.ಜೆ.ಪಿ.ಯ ಒಳ ಹೊಡೆತಗಳು ಸರಿಯಾಗಿಯೇ ಬಿದ್ದಿವೆ ಎನ್ನುವ ಲೆಕ್ಕಾಚಾರವಿದೆ. ಬಿ.ಜೆ.ಪಿ. ಕಾಗೇರಿ, ವಿ.ಎಸ್. ಪಾಟೀಲ್ ಬಣ ಕಾಂಗ್ರೆಸ್ ಪರವಾಗಿ ಕೆಲಸಮಾಡಿರುವುದರಿಂದ ಭೀಮಣ್ಣನವರಿಗೆ ಇದರ ಅನುಕೂಲ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೆಬ್ಬಾರ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರಾದರೂ ಮರಾಠರು,ಅಲ್ಫಸಂಖ್ಯಾತರು, ಲಿಂಗಾಯತರು, ಜೊತೆಜೊತೆಗೆ ಹವ್ಯಕರೂ ಹೆಬ್ಬಾರ್ ರಿಗೆ ಕೈ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಹೆಬ್ಬಾರ್ ರಿಗೆ ಕೈಕೊಟ್ಟವರ ಪಟ್ಟಿ ಮುಂದೆ ಭೀಮಣ್ಣನವರಿಗೆ ಕೈ ಹಿಡಿದವರ ಪಟ್ಟಿ ವಿಸ್ತರಿಸಿದರೆ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ವಿಧಾನಸೌಧ ಪ್ರವೇಶಿಸುತ್ತಾರೆ. ಆದರೆ ಹೆಬ್ಬಾರ್ ಅಷ್ಟು ಸುಲಭದ ಆಸಾಮಿಯಲ್ಲ ಬಿ.ಜೆ.ಪಿ. ಹೆಸರಲ್ಲಿ ಮೇಲ್ವರ್ಗ, ಅವರ ಮಂತ್ರ-ತಂತ್ರಗಳಿಂದ ಇತರರ ಮತ ಬಾಚುವ ಶಕ್ತಿ ಅವರಿಗಿರುವುದರಿಂದ ಹೆಬ್ಬಾರ್ ಕೂಡಾ ಹೋರಾಟದಲ್ಲಿ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್,ಬಿ.ಜೆ.ಪಿ. ಸೆಣಸಿನ ಮಧ್ಯೆ ಜೆ.ಡಿ.ಎಸ್. ಪಡೆಯುವ ಮತಗಳಷ್ಟು ಅಂತರದಿಂದ ಭೀಮಣ್ಣ ಅಥವಾ ಹೆಬ್ಬಾರ್ ಆಯ್ಕೆಯಾಗುತ್ತಾರೆ ಎನ್ನಲಾಗುತ್ತಿದೆ.
ಹೆಬ್ಬಾರ್ ಗೆದ್ದರೆ ಮಂತ್ರಿಯಾಗುವ ಸಾಧ್ಯತೆ ಹೆಚ್ಚು. ಆದರೆ ದೇಶಪಾಂಡೆ ತಾವೇ ಮಂತ್ರಿ-ಮುಖ್ಯಮಂತ್ರಿಯಾಗುವ ಕನಸಿನೊಂದಿಗೆ ಅಂತಿಮ ಹೋರಾಟಕ್ಕಿಳಿದಿದ್ದಾರೆ ಎನ್ನಲಾಗುತ್ತಿದೆ.

ಅನಂತಕುಮಾರ ಹೆಗಡೆ ಹೇಳಿಕೆ,ವರ್ತನೆಗೆ ಛೀಮಾರಿ
40 ಸಾವಿರ ಕೋಟಿ ರೂಪಾಯಿ ರಕ್ಷಣೆಗಾಗಿ ಮಹಾರಾಷ್ಟ್ರದಲ್ಲಿ ಫಡ್ನವೀಸ್ ಒಂದು ದಿವಸ ಮುಖ್ಯಮಂತ್ರಿಯಾಗಿದ್ದರು ಎಂದು ಯಲ್ಲಾಪುರ ಕ್ಷೇತ್ರದಲ್ಲಿ ಹೇಳಿದ್ದ ಮಾಜಿ ಸಚಿವ ಅನಂತಕುಮಾರ ಹೆಗಡೆಯವರ ಹೇಳಿಕೆ ಮತ್ತು ನಡವಳಿಕೆಗೆ ತೀವೃ ವಿರೋಧ ವ್ಯಕ್ತವಾಗಿದೆ.
ಕಳೆದ ವಾರದ ಕೊನೆಗೆ ಮಾಜಿ ಸಚಿವ, ಸಂಸದ ಅನಂತಕುಮಾರ ಹೆಗಡೆ ಕೇಂದ್ರದ 40 ಸಾವಿರ ಕೋಟಿ ರೂಪಾಯಿ ರಕ್ಷಿಸಲು ಫಡ್ನವೀಸ್ ಏಕ್ ದಿನ್ ಕಾ ಮುಖ್ಯಮಂತ್ರಿ ಆಗಿದ್ದರು ಎಂದು ಅನಂತಕುಮಾರ ಹೆಗಡೆ ಯಲ್ಲಾಪುರ ಚುನಾವಣಾ ಭಾಷಣದಲ್ಲಿ ಹೇಳಿದ್ದರು.
ಈ ಹೇಳಿಕೆ ಸುಳ್ಳು ಹಾಗೇನೂ ಇಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಫಡ್ನವೀಸ್ ಪ್ರತಿಕ್ರೀಯಿಸಿದ್ದರು.
ಈ ಬೆಳವಣಿಗೆಗಳ ನಂತರ ಟ್ವೀಟರ್, ಫೇಸ್‍ಬುಕ್ ಸೇರಿದ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಮತ್ತು ವರ್ತನೆಗಳ ಬಗ್ಗೆ ತೀವೃ ತರಾಟೆ ಎತ್ತಿದ್ದಾರೆ.
ಅನಂತಕುಮಾರ ಹೆಗಡೆ ಸುಳ್ಳು-ಮೋಸ,ದ್ರೋಹದ ಮೂಲಕವೇ ಮುಗ್ಧರ ದಿಕ್ಕು ತಪ್ಪಿಸುತ್ತಾರೆ. ಮತಾಂಧತೆಯ ಮತ್ತು ರಾಜಕೀಯ ಲಾಭದ ಕಾರಣಕ್ಕೆ ಅನಂತಕುಮಾರ ಹೆಗಡೆ ಸುಳ್ಳು ಹೇಳುತಿದ್ದು ಸಾರ್ವಜನಿಕ ಶಿಸ್ತು, ನಡವಳಿಕೆ ಉಲ್ಲಂಘಿಸುವ ಮೂಲಕ ಅನಂತಕುಮಾರ ತನ್ನ ಮೂರನೇ ದರ್ಜೆಯ ನಡತೆ ಪ್ರದರ್ಶಿಸುತ್ತಾರೆ. ಅನಂತಕುಮಾರ ಹೆಗಡೆ ಮತ್ತವರ ಪಕ್ಷ ಹಾಗೂ ಸಂಘ ಎಲ್ಲರನ್ನೂ ಎಲ್ಲಾ ಕಾಲದಲ್ಲೂ ವಂಚಿಸಲು ಸಾಧ್ಯವಿಲ್ಲ ಎಂದು ಅನೇಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿ.ಜೆ.ಪಿ.ಯ ಬಿ.ಟೀಮ್ ಯಡಿಯೂರಪ್ಪನವರನ್ನು ಬಲಿ ಹಾಕಲು ನಡೆಸಿರುವ ಶಡ್ಯಂತ್ರದ ಭಾಗವಾಗಿ ಈ ಕೀಳು ವರ್ತನೆ, ನಡತೆಗಳು ನಡೆಯುತ್ತಿವೆ. ಈ ಸುಳ್ಳು ಹೇಳುವ ನಾಟಕಕಾರರನ್ನು ಮನೆಗೆ ಕಳುಹಿಸುವ ಮೂಲಕ ಜನತೆ ಪ್ರಬುದ್ಧತೆ ಮೆರೆಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರಿಗೆ ಕರೆ ನೀಡಲಾಗಿದೆ. ಈ ಬಗ್ಗೆ ಬಿ.ಜೆ.ಪಿ. ಮುಖಂಡರು ಕೂಡಾ ಅನಂತ ಹೆಗಡೆಯನ್ನು ತೀವೃ ವಿರೋಧಿಸಿದ್ದು, ಅವಿವೇಕದ ಮಾತು, ಮತಾಂಧತೆ,ಅತಿರೇಕಗಳಿಂದ ಚುನಾವಣೆ ಗೆಲ್ಲುವ ಅವರ ಲಾಗಾಯ್ತಿನ ಚಾಳಿ ಈಗ ಪಕ್ಷ, ನಾಯಕರಿಗೆ ಮುಜುಗರ ಉಂಟುಮಾಡುತ್ತಿದೆ. ಅವರಿಂದ ಬಿ.ಜೆ.ಪಿ.,ಮುಖಂಡರನ್ನು ರಕ್ಷಿಸುವ ಹಿನ್ನೆಲೆಯಲ್ಲಿ ಅವರ ಮೇಲೆ ಶಿಸ್ತಿನ ಕ್ರಮಕ್ಕೆ ಒತ್ತಾಯಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *