ಗೋಆಧಾರಿತ ಕೃಷಿಯಿಂದಲೇ ಕೃಷಿ ಪುನರುತ್ಥಾನ

ಗೋ ಆಧಾರಿತ ಸಾವಯವ ಕೃಷಿಯಿಂದ ಕೃಷಿ ಮತ್ತು ಮಾನವರ ಪುನರುತ್ಥಾನ ಸಾಧ್ಯ ಎಂದಿರುವ ರಾಷ್ಟ್ರೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಎಸ್.ಎ.ಪಾಟೀಲ್ ಕಾಡು, ನಾಡಿನಲ್ಲಿ ಬೆಳೆಯುವ ಗಡ್ಡೆ-ಗೆಣಸು ಆರೋಗ್ಯ ವೃದ್ಧಿಸುತ್ತಿರುವಾಗ ಮಣ್ಣಿನಲ್ಲೇ ಬೆಳೆದ ಧವಸ-ಧಾನ್ಯಗಳು ನಮ್ಮ ಆಯುಷ್ಯಕ್ಕೆ ಮಾರಕವಾಗಿರುವ ಹಿಂದೆ ಸಾಂಪ್ರದಾಯಿಕ ಸಹಜ ಕೃಷಿಯ ಮಹತ್ವ ಅಡಗಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇಂದು ಇಲ್ಲಿಯ ಭಾನ್ಕುಳಿಮಠದಲ್ಲಿ ನಡೆದ ವಿಶ್ವ ಮಣ್ಣಿನ ದಿನಾಚರಣೆ ಅಂಗವಾಗಿ ಶಿರಸಿ ತೋಟಗಾರಿಕಾ ಮಹಾವಿದ್ಯಾಲಯ ಮತ್ತು ಬಾಗಲಕೋಟೆ ತೋಟಗಾರಿಕಾ ವಿಶ್ವ ವಿದ್ಯಾಲಯಗಳ ಸಹಯೋಗದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು,
ಭಾರತೀಯ ಸಾಂಪ್ರದಾಯಿಕ ವಿದ್ಯೆ, ಜ್ಞಾನಗಳ ದಾಖಲೀಕರಣ ಆಗಿಲ್ಲ ಹಾಗಾಗಿ ಭಾರತೀಯರು ಪಾಶ್ಚಾತ್ಯ ಜ್ಞಾನ ದಾಖಲೆಗಳನ್ನು ಓದುವ ಅನಿವಾರ್ಯತೆಯಿದೆ. ಈ ಬಗ್ಗೆ ಸಂಶೋಧನೆ, ಕೆಲಸಗಳಾಗಬೇಕೆಂದು ಆಶಿಸಿದರು.
ಈ ಕಾರ್ಯಕ್ರಮದ ಭಾಗವಾಗಿ ಗೋಚಿಕಿತ್ಸಾ ಶಿಬಿರ ಮತ್ತು ವಸ್ತು ಪ್ರದರ್ಶನಗಳು ನಡೆದವು.
ಸಾಗರ ಜಿಲ್ಲೆ ಏನಿದು ಹೇಳಿಕೆ,ಯಾಕೀ ಬೇಡಿಕೆ?
ಉತ್ತರ ಕನ್ನಡ ಜಿಲ್ಲೆಯನ್ನು ಮಲೆನಾಡು, ಕರಾವಳಿ ಜಿಲ್ಲೆಗಳನ್ನಾಗಿ ವಿಭಾಗಿಸಬೇಕು.
ಕರಾವಳಿ ಜಿಲ್ಲೆಗಳನ್ನು ಸೇರಿಸಿ ಕರಾವಳಿ ರಾಜ್ಯ ಮಾಡಬೇಕು.
ಕನ್ನಡದ ಮೊದಲ ರಾಜಧಾನಿ ಬನವಾಸಿಯನ್ನು ಮಲೆನಾಡು ಜಿಲ್ಲೆ ಮಾಡಬೇಕು.
ಉತ್ತರ ಕನ್ನಡದ ಬನವಾಸಿ, ಸಿದ್ಧಾಪುರಗಳನ್ನು ಸೇರಿಸಿ ಶಿಕಾರಿಪುರ ಜಿಲ್ಲೆ ಮಾಡಬೇಕು.
ಹೀಗೆ ಜಿಲ್ಲೆ, ಜಿಲ್ಲಾ ಕೇಂದ್ರ.ಪ್ರತ್ಯೇಕ ಜಿಲ್ಲೆಗಳ ಅಸ್ಥಿತ್ವದ ವಿಚಾರ ಮೇಲಿಂದ ಮೇಲೆ ಚರ್ಚೆಯಾಗುತ್ತಿವೆ.
ಈಗಿನ ಸರದಿ ಸಾಗರ ಜಿಲ್ಲೆಯದು.
ಸಾಗರ ಉಪವಿಭಾಗವನ್ನು ಸೇರಿಸಿ ಶಿಕಾರಿಪುರ ಜಿಲ್ಲೆ ಮಾಡುವ ಕನಸು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರದು. ಈ ಅಭಿಪ್ರಾಯವನ್ನು ಖುದ್ದು ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೋ? ಅಥವಾ ಅವರ ಆಪ್ತರೊ ತಿಳಿದಿಲ್ಲ. ಆದರೆ ರಾಜ್ಯದ ಪ್ರಮುಖ ಮುಖಂಡರಲ್ಲೊಬ್ಬರಾದ ಯಡಿಯೂರಪ್ಪ ಮನಸ್ಸು ಮಾಡಿದರೆ ಆನವಟ್ಟಿ, ಬನವಾಸಿ, ತಾಳಗುಪ್ಪಾ ಗಳಂಥ ಹೋಬಳಿ ಕೇಂದ್ರಗಳನ್ನು ತಾಲೂಕು ಕೇಂದ್ರ ಮಾಡಬಲ್ಲರು.
ಶಿರಸಿ, ಸಾಗರ ಉಪವಿಭಾಗಗಳನ್ನು ಪ್ರತ್ಯೇಕ ಜಿಲ್ಲೆ ಮಾಡಬಲ್ಲ ಸಾಮಥ್ರ್ಯ ಇರುವವರು.
ಯಡಿಯೂರಪ್ಪ ಶಿಕಾರಿಪುರ ಜಿಲ್ಲೆ ಮಾಡಲು ಯೋಜಿಸಿದ್ದಾರೆ ಎನ್ನುವ ಮಾಹಿತಿ ವರ್ತಮಾನವಾಗಿ ಸುದ್ದಿಯಾಗುತ್ತಲೇ ಸಾಗರದ ಜನರು ಶಿವಮೊಗ್ಗವನ್ನು ಪ್ರತ್ಯೇಕಿಸಿ ಮತ್ತೊಂದು ಜಿಲ್ಲೆ ಮಾಡುವುದಾದರೆ ಸಾಗರ ಜಿಲ್ಲೆಯಾಗಲು ಸೂಕ್ತ ಪ್ರದೇಶ ಎನ್ನುವ ಅಭಿಪ್ರಾಯ ಮುಂದಿಟ್ಟಿದ್ದಾರೆ.
ಸಣ್ಣ ರಾಜ್ಯ, ಜಿಲ್ಲೆ, ರಾಜ್ಯದ ಮಧ್ಯವರ್ತಿ ಪ್ರದೇಶ ರಾಜ್ಯದ ಕೇಂದ್ರ, ಜಿಲ್ಲೆಯ ಮಧ್ಯವರ್ತಿ ಪ್ರದೇಶ ಜಿಲ್ಲಾ ಕೇಂದ್ರ ಆದರೆ ಆಯಾ ರಾಜ್ಯ, ಜಿಲ್ಲೆಗಳಿಗೆ ಉತ್ತಮ ಈ ಯೋಚನೆ, ವಾಸ್ತವದ ಹಿನ್ನೆಲೆಯಲ್ಲಿ ಸಣ್ಣ ರಾಜ್ಯದ ಕಲ್ಫನೆಯಲ್ಲಿ ಕರಾವಳಿ ಪ್ರತ್ಯೇಕ ರಾಜ್ಯವಾಗಲಿ ಎನ್ನುವ ಅಭಿಪ್ರಾಯವಿದೆ.
ಇದಕ್ಕೆ ಸಂವಾದಿಯಾಗಿ ಸಾಗರ, ಶಿರಸಿಯಂಥ ದೊಡ್ಡ ಉಪವಿಭಾಗೀಯ ಕೇಂದ್ರಗಳು ಜಿಲ್ಲಾ ಕೇಂದ್ರ, ಪ್ರತ್ಯೇಕ ಜಿಲ್ಲೆಯ ಕೇಂದ್ರಸ್ಥಳವಾದರೆ ಸ್ಥಳಿಯರಿಗೆ ಅನುಕೂಲ ಈ ಹಿನ್ನೆಲೆಯಲ್ಲಿ ಚರ್ಚೆ, ಸಂವಾದಗಳಾಗಿ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಸಂಘಟನೆಗಳೂ ಸ್ಥಾಪನೆಯಾಗಿವೆ.
ಈ ಚರಿತ್ರೆ, ವರ್ತಮಾನಗಳ ಹಿನ್ನೆಲೆಯಲ್ಲಿ ಸಾಗರವನ್ನು ಜಿಲ್ಲಾ ಕೇಂದ್ರಮಾಡಿ ಭಟ್ಕಳ, ಸಿದ್ದಾಪುರಗಳನ್ನು ಉತ್ತರ ಕನ್ನಡದಿಂದ ಪ್ರತ್ಯೇಕಿಸಿ ಸಾಗರ ಜಿಲ್ಲೆಗೆ ಸೇರಿಸಿದರೆ ಅನೇಕ ಅನುಕೂಲಗಳ ಹಿನ್ನೆಲೆಯಲ್ಲಿ ಜನರು ಒಪ್ಪುತ್ತಾರೆ.
ಹಾಗೆಯೇ ಬನವಾಸಿ ಅಥವಾ ಶಿರಸಿ ಜಿಲ್ಲಾ ಕೇಂದ್ರಮಾಡಿ ಸಿದ್ದಾಪುರ,ಯಲ್ಲಾಪುರ, ಮುಂಡಗೋಡುಗಳ ಜೊತೆಗೆ ಮತ್ತೆರಡು ತಾಲೂಕುಗಳನ್ನು ಸೇರಿಸಿ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡುವುದೂ ಪೂರಕವೇ.
ಆದರೆ ಕಳೆದ ಕಾಲು ಶತಮಾನಗಳಿಂದ ಮುಂಡಗೋಡು, ಸಿದ್ಧಾಪುರ ತಾಲೂಕುಗಳ ಜನರ ಬೇಡಿಕೆ ಶಿರಸಿ ಜಿಲ್ಲೆ ನೆನೆಗುದಿಗೆ ಬಿದ್ದಿದೆ. ದೇವರು, ಜಾತಿ-ಧರ್ಮಗಳ ನೆರವು ಬಹುಸಂಖ್ಯಾತರ ವಿರೋಧಿ ಕಾರ್ಯಾಚರಣೆಗಳಿಂದ ಉತ್ತರ ಕನ್ನಡ ಜಿಲ್ಲೆಯ ಶಾಸಕರು, ಸಂಸದರು ಆಗಿ ಕಾಲಹರಣ ಮಾಡುತ್ತಿರುವವರಿಗೆ ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಿ ಶಿರಸಿ, ಮುಂಡಗೋಡು, ಸಿದ್ದಾಪುರ,ಯಲ್ಲಾಪುರ ಜನತೆಗೆ ನ್ಯಾಯ ಒದಗಿಸಿ, ಅನುಕೂಲ ಮಾಡುವ ಶಕ್ತಿ, ಇಚ್ಚಾಶಕ್ತಿಗಳೂ ಇಲ್ಲ.
ಈ ಹಿನ್ನೆಲೆಯಲ್ಲಿ ಶಿಕಾರಿಪುರವನ್ನೋ, ಸಾಗರವನ್ನೋ ಪ್ರತ್ಯೇಕ ಜಿಲ್ಲೆ, ಜಿಲ್ಲಾಕೇಂದ್ರವನ್ನಾಗಿಸಿ ಸಿದ್ಧಾಪುರವನ್ನು ಈ ಉದ್ದೇಶಿತ ಜಿಲ್ಲೆಯ ವ್ಯಾಪ್ತಿಗೆ ಸೇರಿಸಿದರೆ ಸಿದ್ಧಾಪುರದ ಜನರ ಅರ್ಧ ಶತಮಾನದ ಬೇಡಿಕೆ ಈಡೇರಿದಂತೆ.
ಈ ಹಿನ್ನೆಲೆಯಲ್ಲಿ ಆಸಕ್ತರು ನುಡಿ ತಂತ್ರಾಂಶದಲ್ಲಿ ಚುಟುಕಾದ ತಮ್ಮ ಅಭಿಪ್ರಾಯ ಟೈಪಿಸಿ samajamukhi@rediffmail.com ಗೆ ಕಳುಹಿಸಿದರೆ ಅವರ ಅಭಿಪ್ರಾಯ ಸಮಾಜಮುಖಿ ಪತ್ರಿಕೆ ಮತ್ತು ನ್ಯೂಸ್‍ಪೋರ್ಟಲ್ (samajamukhi.net ) ಗಳಲ್ಲಿ ಪ್ರಕಟವಾಗಲಿವೆ.
ನೆನಪಿರಲಿ 25 ವರ್ಷಗಳಿಂದ ಉತ್ತರಕನ್ನಡ ಜಿಲ್ಲೆ, ಅಸ್ಮಿತೆಗಳ ಒಣ ಭಾಷಣ ಕೇಳುತ್ತಿರುವ ಸಂದರ್ಭದಲ್ಲೆ ನೆರೆಹೊರೆಯ 2-3 ತಾಲೂಕುಗಳಿಗೆಲ್ಲಾ ಪ್ರತ್ಯೇಕ ಜಿಲ್ಲೆಗಳಾಗಿವೆ. ಅಂದಹಾಗೆ 150-170 ಕಿ.ಮೀ.ದೂರದ ಜಿಲ್ಲಾ ಕೇಂದ್ರ ಉತ್ತರಕನ್ನಡ ವಿರಲಿ, ಶಿವಮೊಗ್ಗವಿರಲಿ ಆಯಾ ಜಿಲ್ಲೆಗಳ ದೂರದ ತಾಲೂಕುಗಳಿಗೆ ಶಾಪವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮಾರಿ ಜಾತ್ರೆ ಮುಕ್ತಾಯ…. ಮುಂಜಾನೆವರೆಗೆ ವಿಸರ್ಜನಾ ಮೆರವಣಿಗೆ , ಮತ್ತೆ ಮಳೆ! & ಇತರೆ…samajamukhi.net news round 09-04-25

ಸುದ್ದಿ,ವಿಡಿಯೋಗಳಿಗಾಗಿ ನೋಡಿ, samajamukhi.net news portal, samaajamukhi youtube chAnnel, samaajamukhi.net fb page ನಮ್ಮ ಘಟಕಗಳನ್ನು subscribe ಆಗಿ ಪ್ರೋತ್ಸಾಹಿಸಿ, ಜಾಹೀರಾತಿಗಾಗಿ ಸಂಪರ್ಕಿಸಿರಿ...

ಶುಕ್ರವಾರ ಸಿದ್ಧಾಪುರದಲ್ಲಿ ಒಕ್ಕಲಿಗರ ಬೃಹತ್‌ ಕಾರ್ಯಕ್ರಮ

ಸಿದ್ದಾಪುರ: ಸಿದ್ದಾಪುರ ತಾಲ್ಲೂಕಾ ಕರೆ ಒಕ್ಕಲಿಗರ ಸಂಘದಿಂದ ಏ.11 ರಂದು ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮ ಹಮ್ಮಿಕ್ಕೊಂಡಿದ್ದು, ಶ್ರೀ...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *