![](https://i0.wp.com/samajamukhi.net/wp-content/uploads/2019/11/siddharamayya.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಪ್ರಜಾಪ್ರಭುತ್ವದಲ್ಲಿ ನಂಬಿಕೆ, ಪಕ್ಷದ ಹಿತದೃಷ್ಟಿಯಿಂದ ನಿರ್ಧಾರ
ಅನರ್ಹರಿಗೆ ಪಾಠ ಕಲಿಸಲು ವಿಫಲರಾದ ಸಿದ್ಧರಾಮಯ್ಯ ರಾಜೀನಾಮೆ
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಅನರ್ಹ ಶಾಸಕರನ್ನು ಸೋಲಿಸಲು ವಿಫಲರಾದ ರಾಜ್ಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ತಮ್ಮ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
15 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ನ 2, ಸ್ವತಂತ್ರ-1 ಬಿಟ್ಟರೆ ಉಳಿದ 12 ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಜಯಗಳಿಸಿದೆ. ಮತದಾರರ ತೀರ್ಪನ್ನು ಒಪ್ಪಿಕೊಂಡಿದ್ದೇನೆ. ಮತದಾರರು ಅನರ್ಹರಿಗೇ ಜೈ ಎಂದಿರುವುದರಿಂದ ಬೇಸರದಿಂದ ಪ್ರತಿಪಕ್ಷದ ಸ್ಥಾನ ತ್ಯಜಿಸುತಿದ್ದೇನೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಜನರು ಅನರ್ಹರಿಗೆ ಪಾಠ ಕಲಿಸುತ್ತಾರೆ ಎನ್ನುವ ನನ್ನ ವಿಶ್ವಾಸ, ನಂಬಿಕೆ ಹುಸಿಯಾಗಿದೆ. ಪಕ್ಷದ ಹಿತದೃಷ್ಟಿ, ನೈತಿಕ ಹೊಣೆ ಹಿನ್ನೆಲೆಯಲ್ಲಿ ವಿರೋಧಿಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುತಿದ್ದೇನೆ ಎಂದಿದ್ದಾರೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)