ಅರಳು ಹುರಿದಂತೆ ಪಟಪಟನೆ ಇಂಗ್ಲೀಷ್ ಮಾತನಾಡಿದ ಮಕ್ಕಳು, ಸಚಿವರ ಪ್ರಶಂಸೆ

ಎಲ್ಲಾ ವ್ಯವಸ್ಥೆಗಳೂ ಅಚ್ಚುಕಟ್ಟು, ಶಾಲೆಯೆಂದರೆ ದೇವಾಲಯಕ್ಕಿಂತ ಹೆಚ್ಚೆನ್ನುವ ಭಾವ. ಪಟಪಟನೆ ಅರಳು ಹುರಿದಂತೆ ಇಂಗ್ಲೀಷ್ ನಲ್ಲಿ ಮಾತನಾಡುವ ಕನ್ನಡದಮಕ್ಕಳು ಇದು ತಾಲೂಕಿನ ಹೂಡ್ಲಮನೆ ಶಾಲೆಯಲ್ಲಿ ಇಂದು ಕಂಡ ದೃಶ್ಯ.
ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ಮಗಳ ಮದುವೆ ಆರತಕ್ಷತೆಗೆ ಬಂದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದು ಅಣಲೇಬೈಲ್ ಪಂಚಾಯತ್ ಹೂಡ್ಲಮನೆ ಶಾಲೆಯನ್ನು ಭೇಟಿ ಮಾಡಿದರು.
ಸಚಿವರು ಅವರೊಂದಿಗೆ ಬಂದಿದ್ದ ಅಧಿಕಾರಿಗಳಿಗೆ ಈ ಶಾಲೆಯ ಆವರಣ ಪ್ರವೇಶಿಸುತಿದ್ದಂತೆ ಹೊಸ ಅನುಭವ ಆದಂತಾಯಿತು. ಗಣ್ಯರನ್ನು ಸ್ವಾಗತಿಸಿದ ವಿದ್ಯಾರ್ಥಿಗಳು ಸಚಿವರನ್ನು ಕರೆದೊಯ್ದು ಇಡೀ ಶಾಲೆ, ಶಾಲೆಯ ವ್ಯವಸ್ಥೆ, ವಿಶೇಶಗಳನ್ನು ಒಬ್ಬೊಬ್ಬರಾಗಿ ಇಂಗ್ಲೀಷ್ ನಲ್ಲಿ ಪರಿಚಯಿಸುತಿದ್ದರೆ…
ಬೆರಗಾಗುವ ಸರದಿ ಸಚಿವರು, ಅಧಿಕಾರಿಗಳದ್ದು.
ಸುವ್ಯವಸ್ಥಿತ ಶೈಕ್ಷಣಿಕ ವ್ಯವಸ್ಥೆ, ಎಲ್ಲದರಲ್ಲೂ ವಿಶೇಶತೆ, ವಿಭಿನ್ನತೆ ಇದನ್ನು ಕಂಡ ಸಚಿವರು ಅದ್ಭುತ ಎಂದು ಬಣ್ಣಿಸಿದರು.
ಶಿಕ್ಷಕರೊಂದಿಗೆ ಸ್ಥಳಿಯರು, ಪಾಲಕರ ಆಸಕ್ತಿ, ಸಹಕಾರವನ್ನು ಶ್ಲಾಘಿಸಿದ ಸಚಿವರು. ಉತ್ತರ ಕನ್ನಡ, ದಕ್ಷಿಣ ಕನ್ನಡದ ವಿದ್ಯಾರ್ಥಿಗಳ ಕಲಿಕೆ, ಗೃಹಿಕೆ ಅಸಾಧಾರಣವಾದುದು ಇದು ಇತರರಿಗೆ ಮಾದರಿ ಎಂದು ಪ್ರಶಂಸಿಸಿದರು.

ಮೂರು ಬಾರಿ ಗೆದ್ದವರ ಎದುರು ಮೂರನೇ ಬಾರಿ ಸೋತ ಭೀಮಣ್ಣ
ತೀವೃ ಕುತೂಹಲ ಕೆರಳಿಸಿದ್ದ ಯಲ್ಲಾಪುರ ಮತಕ್ಷೇತ್ರದ ಉಪಚುನಾವಣೆಯಲ್ಲಿ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ 31 ಸಾವಿರ ಮತಗಳ ಅಂತರದಿಂದ ಆಯ್ಕೆಯಾಗುವ ಮೂಲಕ ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕರನ್ನು ಸೋಲಿಸಿ ಮತ್ತೆ ವಿಧಾನಸೌಧ ಪ್ರವೇಶಿಸಿದ್ದಾರೆ.
ಡಿ.ಸಿ.ಸಿ. ಅಧ್ಯಕ್ಷ ಭೀಮಣ್ಣ ನಾಯ್ಕ ಒಮ್ಮೆ ಲೋಕಸಭೆ, ಈ ಬಾರಿಯೂ ಸೇರಿ ಮೂರನೇ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಂತಾಗಿದೆ.
ಭೀಮಣ್ಣ ನಾಯ್ಕ ಬಂಗಾರಪ್ಪನವರ ಗರಡಿಯಲ್ಲಿ ಬೆಳೆದು ಅವರದೇ ಪಕ್ಷದಿಂದ ಮೊದಲು ಕೆನರಾ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಸೋತಿದ್ದರು. ಆ ನಂತರ ಬಂಗಾರಪ್ಪ ಸಮಾಜವಾದಿ ಪಕ್ಷ ಸೇರಿದ ನಂತರ ಶಿರಸಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ವಿಧಾನಸಭಾ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿ ವಿಶ್ವೇಶ್ವರ ಹೆಗಡೆಯವರ ಎದುರು 17 ಸಾವಿರ ಮತಗಳಿಂದ ಸೋಲು ಕಂಡಿದ್ದ ಅವರು ಈಗ ಕಾಂಗ್ರೆಸ್ ಅನಿವಾರ್ಯತೆಯಲ್ಲಿ ಯಲ್ಲಾಪುರದ ಅಭ್ಯರ್ಥಿಯಾಗಿದ್ದರು.


ಹಿಂದೆ ಶಿರಸಿ ಕ್ಷೇತ್ರದಲ್ಲಿ ಜೆ.ಡಿ.ಎಸ್. ಅಭ್ಯರ್ಥಿಯ ಹೀನಾಯ ಸೋಲು ಮತ್ತು ಈಬಾರಿ ಜಾದಳದ ಅಭ್ಯರ್ಥಿಯ ನಾಮಕಾವಾಸ್ಥೆ ಸ್ಫರ್ಧೆಗಳಿಂದ ಭೀಮಣ್ಣ ಸೋತರು ಎನ್ನಲಾಗುತಿದ್ದರೂ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರ ಪುರಾತನ ಸಮರತಂತ್ರ ಗಳಿಂದಲೇ ಭೀಮಣ್ಣ ಸೋಲುತ್ತಾರೆ ಎನ್ನುವ ಆರೋಪಗಳಿವೆ.
ಶಿವರಾಮ ಹೆಬ್ಬಾರ್ ಮೂಲತ: ಬಿ.ಜೆ.ಪಿ.ಯವರಾಗಿದ್ದು ಎರಡು ಬಾರಿ ಕಾಂಗ್ರೆಸ್ ನಿಂದ ಈ ಬಾರಿ ಬಿ.ಜೆ.ಪಿ.ಯಿಂದ ವಿಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಶಾಸಕತ್ವಕ್ಕೆ ರಾಜೀನಾಮೆ ನೀಡಿ ಬಿ.ಜೆ.ಪಿ. ಸೇರ್ಫಡೆಯಾದ ಅನೇಕರಲ್ಲಿ ಶಿವರಾಮ ಹೆಬ್ಬಾರ್ ಕೂಡಾ ಒಬ್ಬರಾಗಿದ್ದು ಹಣ, ಅಧಿಕಾರ, ಧಾರ್ಮಿಕ ಭಾವನೆಗಳ ಆಧಾರದಲ್ಲಿ ಹೆಬ್ಬಾರ್ ಗೆದ್ದಿದ್ದಾರೆ ಎನ್ನಲಾಗುತಿದ್ದರೂ ಶಿವರಾಮ ಹೆಬ್ಬಾರ್ ಜನಸಂಪರ್ಕ, ಸಂಬಂಧ, ಸಂಪರ್ಕ ನಿರ್ವಹಣೆಗಳಲ್ಲಿ ಎತ್ತಿದ ಕೈ ಎನ್ನಲಾಗುತ್ತಿದೆ.
ದೇಶಪಾಂಡೆಯವರಿಗೆ ಬಹಿರಂಗ ಪಂಥಾಹ್ವಾನ ನೀಡಿದ್ದ ಹೆಬ್ಬಾರ್ ಕಾಂಗ್ರೆಸ್ ನಲ್ಲಿದ್ದಾಗ ಮತ್ತು ಕಾಂಗ್ರೆಸ್ ನಿಂದ ಹೊರಗಿದ್ದಾಗ ಕೂಡಾ ದೇಶಪಾಂಡೆಯವರೊಂದಿಗೆ ದಾಯಾದಿ ಕಲಹ ಇಟ್ಟುಕೊಂಡವರು.
ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರ ತಂತ್ರ-ಸಂಘಟನೆ, ಬಹಿರಂಗ ಪ್ರಚಾರಗಳೆದುರು ಶಿವರಾಮ ಹೆಬ್ಬಾರರಿಗೆ ನೆರವಾದದ್ದು ಅವರ ಬ್ರಾಹ್ಮಣ ಕುಲ ಮತ್ತು ಯಡಿಯೂರಪ್ಪನವರ ಲಿಂಗಾಯತ ಜಾತಿ ಎನ್ನಲಾಗುತ್ತಿದೆ. ಆದರೆ ಬಹುತೇಕ ಎಲ್ಲಾ ಹೋಬಳಿ, ವಿಭಿನ್ನ ಪ್ರದೇಶಗಳಲ್ಲಿ ಹೆಚ್ಚು ಮತಗಳಿಸಿರುವ ಹೆಬ್ಬಾರ್ ರಿಗೆ ಅನೇಕ ಪೂರಕ ಅಂಶಗಳು ನೆರವಿಗೆ ಬಂದಿವೆ.
ಹಿಂದೆ ಶಿರಸಿ ಕ್ಷೇತ್ರದಲ್ಲಿ 17 ಸಾವಿರ ಮತಗಳ ಅಂತರದಿಂದ ಪರಾಜಿತರಾಗಿದ್ದ ಭೀಮಣ್ಣ ಈ ಬಾರಿ 31 ಸಾವಿರ ಮತಗಳ ಅಂತರದಿಂದ ಯಲ್ಲಾಪುರದಲ್ಲಿ ಸೋತಿದ್ದಾರೆ. ಕಾಂಗ್ರೆಸ್ ಶಕ್ತಿ, ವೈಯಕ್ತಿಕ ಬಲಾಬಲಗಳ ಹಿನ್ನೆಲೆಯಲ್ಲಿ ಇತ್ತೀಚಿನ ಎರಡು ವರ್ಷಗಳ ಪ್ರತ್ಯೇಕ 2 ಚುನಾವಣೆಗಳಲ್ಲಿ ಭೀಮಣ್ಣ ನಾಯ್ಕ ಗಳಿಸಿರುವ ಮತಪ್ರಮಾಣ ನಗಣ್ಯವಲ್ಲ. ಕಾಂಗ್ರೆಸ್ ಗಾಳಿ-ಪ್ರಾಬಲ್ಯ, ಪಾರಮ್ಯಗಳ ಅವಧಿಯಲ್ಲಿ ಟಿಕೇಟ್ ವಂಚಿತರಾಗಿದ್ದರು ಭೀಮಣ್ಣ. ಬಿ.ಜೆ.ಪಿ. ಪ್ರಭಾವ, ಪಾರಮ್ಯಗಳ ಕಾಲದಲ್ಲಿ 50 ಸಾವಿರಗಳ ಮತ ಬಾಚಿರುವ ಭೀಮಣ್ಣ ಕಾಂಗ್ರೆಸ್ ಮರ್ಯಾದೆ ಉಳಿಸಿದ್ದಾರೆ ಎನ್ನುವ ಅಭಿಪ್ರಾಯಗಳೂ ಇವೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *