ಡಿ.15ರಂದು ದಾಂಡೇಲಿಯಲ್ಲಿ ‘ಸ್ವರ ಸಹ್ಯಾದ್ರಿ’ ಕಾರ್ಯಕ್ರಮ

ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ವಾರ್ಷಿಕೋತ್ಸವ ಸಮಾರಂಭ ‘ಸ್ವರ ಸಹ್ಯಾದ್ರಿ’ ಕಾರ್ಯಕ್ರಮ ಡಿಸೆಂಬರ 15 ರಂದು ಸಂಜೆ 5 ಗಂಟೆಯಿಂದ ಕರ್ನಾಟಕ ಸಂಘದ ಸಭಾಭವನ ಪಂಚಗಾನ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ದಾಂಡೇಲಿ-ಜೋಯಿಡಾದ ವಿದ್ಯಾರ್ಥಿಗಳಿಂದ ಸ್ವರ-ಸಮಾಗಮ ಹಾಗೂ ತರಗತಿಯ ಗುರುಗಳಾದ ಸುಧಾಮ ದಾನಗೇರಿಯವರಿಂದ ಸುಮಧುರ ಸ್ವರಾಲಾಪ ನಡೆಯಲಿದೆ.
ಜೊತೆಗೆ ಯಲ್ಲಾಪುರದ ಖ್ಯಾತ ಹಿದೂಸ್ಥಾನಿ ಗಾಯಕರಾದ ಗಣಪತಿ ಹೆಗಡೆಯವರಿಂದ ಗಾಯನಕ್ಕೆ ಸತೀಶ ಭಟ್ಟ ಹೆಗ್ಗಾರವರಿಂದ ಹಾರ್ಮೋನಿಯಂ, ಗಣೇಶ ಭಾಗ್ವತ ಗುಂಡಕಲರವರಿಂದ ತಬಾಲಾ ವಾದನವಿದೆ.
ಕಾರ್ಯಕ್ರಮದಲ್ಲಿ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ಸಂಯೋಜಕರಾದ ಜಲಜಾ ಬಿ. ವಾಸರೆ ಹಾಗೂ ವಿದ್ಯಾರ್ಥಿ ಪಾಲಕರು ಮನವಿ ಮಾಡಿದ್ದಾರೆ.

ಸಮಾಜಮುಖಿ ವರದಿ ಫಲಶೃತಿ-
ಗವಿನಗುಡ್ಡ-ಹಕ್ಕಲಮನೆ ರಸ್ತೆ ದುರಸ್ತಿ ಸ್ಥಳಿಯರ ಹರ್ಷ
ಸಿದ್ಧಾಪುರ ತಾಲೂಕಿನ ಕಾನಸೂರು ಪಂಚಾಯತ್ ಗವಿನಗುಡ್ಡ-ಹಕ್ಕಲಮನೆ ಸಂಪರ್ಕ ರಸ್ತೆ ದುರಸ್ಥಿಯಾಗಿದ್ದು ಈ ಸಂಪರ್ಕ ರಸ್ತೆಯ ದುರಸ್ಥಿ ಕಾಮಗಾರಿ ಮಾಡಿರುವ ಸ್ಥಳಿಯ ಆಡಳಿತವನ್ನು ಆ ಭಾಗದ ಜನರು ಅಭಿನಂದಿಸಿದ್ದಾರೆ. ಈ ವರ್ಷ ಆಗಷ್ಟ್ ನಲ್ಲಿ ಬಿದ್ದ ವಿಪರೀತ ಮಳೆ ತಾಲೂಕಿನ ಅನೇಕ ರಸ್ತೆ,ಆಸ್ತಿ, ಪಾಸ್ತಿಗಳನ್ನು ಹಾಳು ಮಾಡಿತ್ತು.
ಕಾನಸೂರು ಪಂಚಾಯತ್ ಗವಿನಗುಡ್ಡ-ಹಕ್ಕಲಮನೆ ಸಂಪರ್ಕ ರಸ್ತೆ ಕೊಚ್ಚಿ ಹೋದ ತೊಂದರೆ ಸೇರಿದಂತೆ ತಾಲೂಕಿನ ಕೆಲವು ಕಡೆ ಆದ ಮಳೆ-ಪ್ರವಾಹ ಹಾನಿಗಳ ಬಗ್ಗೆ ಸಮಾಜಮುಖಿ ವಿಸ್ತøತ ವರದಿ ಮಾಡಿತ್ತು.
ಸಮಾಜಮುಖಿ ಪ್ರತಿನಿಧಿ ಸ್ಥಳಭೇಟಿ ವೇಳೆ ಮಾತನಾಡಿದ್ದ ಕಾನಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಈ ರಸ್ತೆ ದುರಸ್ಥಿ ಬಗ್ಗೆ ಪ್ರಯತ್ನಿಸುವ ಭರವಸೆ ನೀಡಿದ್ದರು. ಇದಕ್ಕೂ ಮೊದಲು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ರವಿನಾಯ್ಕ ಗವಿನಗುಡ್ಡ ಈ ತೊಂದರೆ ಬಗ್ಗೆ ಗಮನ ಸೆಳೆದಿದ್ದರು.
ಹಕ್ಕಲಮನೆ-ಗವಿನಗುಡ್ಡ ರಸ್ತೆ ಶೀಘ್ರ ದುರಸ್ಥಿ ಮತ್ತು ಶೀಘ್ರ ಕ್ರಮಕ್ಕೆ ಆಗ ರಾಜೀವ್ ನಾಯ್ಕ ಮತ್ತು ರವಿ ನಾಯ್ಕ ಗವಿನಗುಡ್ಡ ಆಗ್ರಹಿಸಿದ್ದರು. ಹೀಗೆ ಸ್ಥಳಿಯರ ಒತ್ತಾಸೆ, ಆಗ್ರಹ, ಸಮಾಜಮುಖಿ ಪ್ರಯತ್ನ, ಸುದ್ದಿಗಳ ಹಿನ್ನೆಲೆಯಲ್ಲಿ ಈಗ ರಸ್ತೆ ದುರಸ್ಥಿಯಾಗಿದೆ. ಈ ಸಂಘಟಿತ ಪ್ರಯತ್ನಕ್ಕೆ ಸ್ಥಳಿಯರು ಅಭಿನಂದಿಸಿದ್ದು ಈ ರಸ್ತೆ ದುರಸ್ಥಿ ಕೆಲಸಕ್ಕೆ ಸಹಕರಿಸಿದ ಎಲ್ಲರಿಗೆ ಸ್ಥಳಿಯ ಸಾರ್ವಜನಿಕರು ಧನ್ಯವಾದ ಹೇಳಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *