

ಪ್ರತಿಭಾ ಪುರಸ್ಕಾರ, ಸನ್ಮಾನಗಳಿಂದ ಕಳೆಕಟ್ಟಿದ್ದ ಸ್ನೇಹಸಮ್ಮೇಳನ
ದೀವರ ಸಮಾಜಕ್ಕೆ ಸ್ವಾಭಿಮಾನ,ಸಮಾಜವಾದ, ಜೀವನಪ್ರೀತಿಯೇ ತಳಹದಿ
-ಡಾ.ಎಚ್.ಎಸ್ ಮೋಹನ
ವೈಯಕ್ತಿಯ,ಸಾಮೂಹಿಕ ಅಭಿವೃದ್ಧಿಯಿಂದಲೇ ಸಮಾಜದ ಅಭಿವೃದ್ಧಿ ಎಂದು ವ್ಯಾಖ್ಯಾನಿಸಿರುವ ಚಿಕ್ಕಬಳ್ಳಾಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ವಿ. ಸಮಾಜದ ಏಳ್ಗೆ,ದುರ್ಬಲರ ನೆರವಿಗೆ ಸಂಘಟನೆ ಅವಶ್ಯ ಎಂದು ಪ್ರತಿಪಾದಿಸಿದರು.
ಅವರು ಇಲ್ಲಿಯ ರಾಘವೇಂದ್ರಮಠ ಸಭಾಭವನದಲ್ಲಿ ನಡೆದ ನಾಮಧಾರಿ ಕೆ.ಎಸ್.ಆರ್.ಟಿ.ಸಿ. ನೌಕರರ ಸಂಘದ 4 ನೇ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಯಾವುದೇ ವ್ಯಕ್ತಿಯನ್ನು ಅವರ ಕೆಲಸ, ಶ್ರಮ ಗಳಿಂದ ಗುರುತಿಸಬೇಕು. ನಾಮಧಾರಿಗಳಲ್ಲಿ ಒಗ್ಗಟ್ಟಿನ ಕೊರತೆಯಿದೆ. ಪ್ರತಿಭೆ,ಜ್ಞಾನ,ಶ್ರಮಕ್ಕೆ ಗೌರವ ದೊರೆಯದಿದ್ದರೆ ಆ ಸಮಾಜಕ್ಕೆ ಗೌರವಾದರಗಳೂ ದೊರೆಯುವುದು ಕಷ್ಟ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಉಪನ್ಯಾಸಕ ಡಾ.ಎಚ್.ಎಸ್.ಮೋಹನ ಚಂದ್ರಗುತ್ತಿ ದೀವರು ಮತ್ತು ಈಡಿಗ ಉಪಜಾತಿಗಳು ಮಾತೃಪ್ರಧಾನ ಸಂಸ್ಕøತಿ ಮತ್ತು ಸಮಾಜವಾದದ ತಳಹದಿಯ ಮೇಲೆ ನಿಂತಿವೆ. ಹಾಗಾಗಿ ನಾವು ಸುಲಭವಾಗಿ ಮಠ,ಮಠಾಧಿಪತಿಗಳನ್ನು ಒಪ್ಪುತ್ತಿಲ್ಲ. ದೀವರ ಸಮಾಜ ಮಾನವೀಯತೆ,ಸ್ವಾಭಿಮಾನ, ಜೀವನಪ್ರೀತಿಗೆ ಉತ್ತಮ ಮಾದರಿ ಎಂದರು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು,ಸಾಧಕರು, ನಿವೃತ್ತ ನೌಕರರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






