108 ನೂರೆಂಟು ಸಮಸ್ಯೆ ಯಾರಿಗೇಳೋಣಾ ನಮ್ ಪ್ರಾಬ್ಲೆಮ್ಮು,

108 ನೂರೆಂಟು ಸಮಸ್ಯೆ ಯಾರಿಗೇಳೋಣಾ ನಮ್ ಪ್ರಾಬ್ಲೆಮ್ಮು,
ಇದು ಕೇವಲ ಸಿದ್ಧಾಪುರದ ಸಮಸ್ಯೆಯಷ್ಟೇ ಅಲ್ಲ?
ಸಾರ್ವಜನಿಕರ ತುರ್ತು ರಗಳೆಗಳಿಗೆ ಸ್ಫಂದಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ತುರ್ತು ಆರೊಗ್ಯ ಸೇವೆಗೆ ವಾಹನಗಳ ನಿರ್ವಹಣೆಯ ಸಮಸ್ಯೆ ಎದುರಾಗಿರುವ ವಿದ್ಯಮಾನ ಬೆಳಕಿಗೆ ಬಂದಿದೆ.
ಕರ್ನಾಟಕದಲ್ಲಿ ರಾಜ್ಯದ ಮೂಲೆಮೂಲೆಗೆ ತುರ್ತು ಆರೋಗ್ಯ ಸೇವೆ ದೊರಕಿಸಲು 108 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಇಂಥ 108 ವಾಹನಗಳು ತಾಲೂಕಿಗೆ ಕನಿಷ್ಟ 1ರಿಂದ ಪ್ರಾರಂಭವಾಗಿ ಕೆಲವು ತಾಲೂಕುಗಳಲ್ಲಿ 4-5 ವಾಹನಗಳೂ ಕಾರ್ಯನಿರ್ವಹಿಸುತ್ತಿವೆ. ಈ ಸೇವೆ ಸರ್ಕಾರದ ನಿರ್ವಹಣೆ ಮತ್ತು ಜವಾಬ್ಧಾರಿಯಾದರೂ ಕರ್ನಾಟಕದ 108 ನಿರ್ವಹಣೆ ಜವಾಬ್ದಾರಿಯನ್ನು ಆಂಧ್ರ ಮೂಲದ ಜಿ.ವಿ.ಕೆ. ಸರ್ಕಾರೇತರ ಸಂಸ್ಥೆ ನಿರ್ವಹಿಸುತ್ತದೆ.
ಜಿ.ವಿ.ಕೆ. ತಾಲೂಕಿಗೆ ಕನಿಷ್ಟ ಒಂದು 108 ವಾಹನ ಅದರ ಜೊತೆಗೆ ಒಂದೊಂದು ವಾಹನಕ್ಕೆ 2ರಿಂದ 5 ಜನ ಸಿಬ್ಬಂದಿಗಳ ಮೂಲಕ ತುರ್ತು ಆರೋಗ್ಯ ಸೇವೆ ಒದಗಿಸುತ್ತದೆ. ಹೀಗೆ ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುವ ವಾಹನಗಳ ಸಂಖ್ಯೆ 100 ರಷ್ಟಿದ್ದರೆ ಇದರ ನಿರ್ವಹಣೆಯ ಸಿಬ್ಬಂದಿಗಳು ಸರಿಸುಮಾರು 500 ಜನ. ಹೀಗೇ ನೂರಾರು ವಾಹನಗಳು ಸಿಬ್ಬಂದಿಗಳ ಕೆಲಸದ ಪರಿಣಾಮವಾಗಿ ದೊರೆಯುತ್ತಿರುವ ತುರ್ತು ಆರೋಗ್ಯ ಸೇವೆ ಒದಗಿಸುವ ವಾಹನಗಳೇ ಸುಸ್ಥಿತಿಯಲ್ಲಿಲ್ಲ ಎನ್ನುವ ಸಂಗತಿ ಆಘಾತಕಾರಿ ಅಂಶವಾದರೂ ವಾಸ್ತವ ಸತ್ಯ.
ಸರಳ ಉದಾಹರಣೆಯೆಂದರೆ ಸಿದ್ದಾಪುರದ ಏಕೈಕ 108 ವಾಹನಕ್ಕೆ ಪ್ರತಿ 30 ಸಾವಿರ ಕಿ.ಮೀ.ಗಳಿಗೆ ಚಕ್ರದ ರಬ್ಬರ್ ಟೈರ್ ಗಳನ್ನು ಬದಲಿಸಬೇಕು. ಆದರೆ ಇಲ್ಲಿಯ 108 60ಸಾವಿರ ಕಿ.ಮೀ.ಕ್ರಮಿಸಿದ್ದರೂ ಅದರ ಟೈರ್ ಬದಲಾಯಿಸಿಲ್ಲ. ಸಿದ್ಧಾಪುರದಂಥ ಬಹುದೂರದ ಗುಡ್ಡಗಾಡು ಪ್ರದೇಶ ಸಂಚರಿಸುವ 108 ಕತೆಯೇ ಹೀಗಾದರೆ ಮಹಾನಗರ, ದೊಡ್ಡನಗರಗಳಲ್ಲಿ ಸಂಚರಿಸುವ ವಾಹನಗಳ ಸ್ಥಿತಿ ಹೇಗಿರಬೇಡ.
ಕೆಲವು ತಾಲೂಕುಗಳಲ್ಲಿ ತಾಲೂಕಿಗೆ 2-3 108 ವಾಹನಗಳಿವೆ. ಸಿದ್ದಾಪುರ ಸೇರಿದಂತೆ ಏಕೈಕ 108 ವಾಹನ ಹೊಂದಿರುವ ಕೆಲವು ತಾಲೂಕುಗಳಲ್ಲಿ 108 ತುರ್ತು ಸೇವೆ ಸಿಗುವುದೂ ದುಸ್ತರವಾಗಿದೆ. ಈ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದು 108 ಸಂಖ್ಯೆಗೆ ಕರೆಮಾಡಿ ಈ ತೊಂದರೆ ಕೇಳಿದರೆ ಸಂಬಂಧಿಸಿದವರಿಗೆ ಕೇಳಿ ಉತ್ತರ ನೀಡುತ್ತೇವೆ ಎನ್ನುವ ಸಮಜಾಯಿಸಿ ನೀಡುತ್ತಾರೆ.
ಈ ಸೇವೆಯ ನಿರ್ವಹಣೆಯ ಜವಾಬ್ದಾರಿಯ ತಾಲೂಕಾ ಆರೋಗ್ಯಾಧಿಕಾರಿಗಳು 108 ವಾಹನದ ಟೈರ್ ಸಮಸ್ಯೆ ಬಗ್ಗೆ ಸಂಬಂಧಿಸದವರ ಗಮನ ಸೆಳೆಯಲಾಗಿದೆ. ಆ ತೊಂದರೆ ಬಗೆಹರಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ಸಂಬಂಧಿಸಿದವರಿಂದ ದೊರೆತಿದೆ ಎನ್ನುತ್ತಾರೆ.
ಸರ್ಕಾರ,ಸರ್ಕಾರೇತರ ಸಂಸ್ಥೆ, ಅಧಿಕಾರಿಗಳು, ಸಿಬ್ಬಂದಿಗಳು ಹೀಗೆ ಅನೇಕ ಸ್ಥರವಿನ್ಯಾಸದ ಈ ವ್ಯವಸ್ಥೆಯಲ್ಲಿ ಬಾಧಿತರು ಮಾತ್ರ ಅಸಹಾಯಕ ಜನಸಾಮಾನ್ಯರು. ಈ ಬಗ್ಗೆ ಜನಪ್ರತಿನಿಧಿಗಳ ದಿವ್ಯ ಮೌನದ ಹಿಂದೆ ಸಹಸ್ರ ಕಾರಣಗಳಿರಬಹುದು ಆದರೆ ಸಾರ್ವಜನಿಕರ ಸಮಸ್ಯೆ ಕೇಳದ,ಅರಿಯದ ಜನಪ್ರತಿನಿಧಿಗಳ ಜಾಣ ಮೌನದ ಹಿಂದೆ ಮತದಾರರ ತಪ್ಪಿರುವುದೂ ಅಷ್ಟೇ ಸತ್ಯ. ಹಾಗಾಗಿ ಸಿದ್ಧಾಪುರ,ಉತ್ತರಕನ್ನಡ,ರಾಜ್ಯದ ಜನರ 108ರ ನೂರೆಂಟು ಸಮಸ್ಯೆ ಬಗೆಹರಿಯಬೇಕಿರುವುದಷ್ಟೆ ಈಗಿನ ತುರ್ತು ಅವಶ್ಯಕತೆ.

ರೈತರ ಮಕ್ಕಳೇಕೆ ಡಿ.ಸಿ.ಯಾಗಬಾರದು?
ಕೆ.ಎ.ಎಸ್. ಪಾಸಾದ ಕೃಷಿ ಅಧಿಕಾರಿ ‘ದೇವರಾಜ್ ಆರ್’ರ ಯಶೋಗಾಥೆ
ಕಾಗೋಡು ಸತ್ಯಾಗ್ರಹದ ಕಹಳೆ ಇಡೀ ದೇಶದ ದುಡಿಯುವ ಕೈಗಳಿಗೆ ಭೂಮಿಯ ಮಾಲಿಕತ್ವ ನೀಡಿದ ಮನ್ವಂತರದ ನೆಲಗಟ್ಟು. ಶಿವಮೊಗ್ಗ ಜಿಲ್ಲೆ ಇತಿಹಾಸ, ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ರೈತ ಸತ್ಯಾಗ್ರಹಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜವಾದಿ ಚಿಂತಕರು, ಹಲವಾರು ಮೇರು ಸಾಧಕರ ತವರು ನೆಲ. ಸೊರಬ ತಾಲೂಕಿನ ಚಿಮಣೂರು (ಹಾಲಗಳಲೆ) ಪುಟ್ಟ ಗ್ರಾಮ. ಇಲ್ಲಿಯ ಕೃಷಿ ಕಾಯಕಯೋಗಿ ದಂಪತಿಗಳಾದ ಕುಸುಮಾ ಹಾಗೂ ರೇವಣ್ಣಪ್ಪ ಡಿ.ಸಿ. ಇವರ ಪ್ರತಿಭಾನ್ವಿತ ಸುಪುತ್ರ. ದೇವರಾಜ್ ಆರ್ ಇವರೇ ಮೊನ್ನೆ ಬಿಡುಗಡೆಯಾದ ಕರ್ನಾಟಕ ಆಡಳಿತ ಸೇವೆ (ಕೆ.ಎ.ಎಸ್.) ಪರೀಕ್ಷೆಯ ಅಂತಿಮ ಪಟ್ಟಿಯಲ್ಲಿ ಉಪ-ವಿಭಾಗಾಧಿಕಾರಿ (ಕಂದಾಯ) ಹುದ್ದೆಗೆ ಆಯ್ಕೆಯಾದ ರೈತಪುತ್ರ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *