ಸಿದ್ಧಾಪುರದಲ್ಲೂ ಪ್ರಾರಂಭವಾದ ಆನೆ ಬೆದರಿಸುವ ಕಾರ್ಯಾಚರಣೆ

ಸಿದ್ಧಾಪುರ ತಾಲೂಕಿನ ಕಾನಸೂರು, ಹಸರಗೋಡು ಪಂಚಾಯತ್ ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು ಸೋಮವಾರ ಸ್ಥಳಿಯರ ಸಹಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆ ಓಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಕಳೆದ ಎರಡು- ಮೂರು ದಿವಸಗಳ ಹಿಂದೆ ಕಾನಸೂರು, ಗವಿನಗುಡ್ಡ ಬಳಿ ಕಾಣಿಸಿಕೊಂಡ ನಾಲ್ಕು ಸಲಗಗಳ ಗುಂಪು 2 ರಾತ್ರಿ- 2 ಹಗಲುಗಳ ಸಮಯದಲ್ಲಿ ಕೃಷಿಕರಿಗೆ ಉಪಟಳ ನೀಡಿವೆ. ತೋಟದ ಅಡಿಕೆ,ಬಾಳೆ,ತೆಂಗು, ಕಬ್ಬು ತಿಂದದ್ದಲ್ಲದೆ ಕೆಲವೆಡೆ ಭತ್ತದ ಗದ್ದೆ ಮತ್ತು ಗೊಣಬೆಗಳನ್ನು ಹಾಳು ಮಾಡಿವೆ.
ಈ ಸುದ್ದಿ ತಿಳಿದ ಸ್ಥಳಿಯರು ಇಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಆನೆ ಬೆದರಿಸುವ ಕಾರ್ಯಾಚರಣೆ ನಡೆಸಿದರು. ಆನೆಗಳು ದಾಸನಕೊಪ್ಪ ಬದನಗೋಡು, ಯಲ್ಲಾಪುರ,ಮುಂಡಗೋಡು ಭಾಗಗಳಲ್ಲಿ ಸಂಚರಿಸುವುದು ಸಾಮಾನ್ಯ ಆದರೆ ಈ ವರ್ಷ ಆನೆಗಳ ಗುಂಪು ಪಥ ಬದಲಿಸಿ ಸಿದ್ಧಾಪುರ ತಾಲೂಕು ಪ್ರವೇಶಿಸಿದ್ದು ರೈತರಲ್ಲಿ ಆತಂಕ ಹೆಚ್ಚಿಸಿದೆ.

ತಮ್ಮಣ್ಣರ ಕವನ-
ಕಾಲದ ಗಾಳಿ ಬೀಸುತ್ತದೆ
ಕಾಲದ ಗಾಳಿ ಬೀಸುತ್ತದೆ
ಏನೇನೋ ಓಡುತ್ತದೆ… ಹಾಡುತ್ತದೆ…
ಬಿತ್ತುತ್ತದೆ… ನಮಗೆ ಓಡಲಾಗುವುದಿಲ್ಲ
ಬಿತ್ತಿದ್ದು ಗೊತ್ತಾಗುವುದಿಲ್ಲ…
ಮೊಳೆತದ್ದು ತಿಳಿಯುವುದಿಲ್ಲ
ಕಾಲದ ಗಾಳಿ ಬೀಸುತ್ತದೆ…
ಅವರು ಮಾಲ್ ಗಳಲ್ಲಿ ಮಾತಾಡುತ್ತಾರೆ…
ಪಬ್ ಗಳಲ್ಲಿ ಹಾಡು ಹೇಳುತ್ತಾರೆ…
ಬಾಟಲಿಯಲ್ಲಿ ನೀರುಕುಡಿದು… ಹಳ್ಳಿಯ ಊಟಕ್ಕೆ
ಸ್ಪೆಶಲ್ ಎನ್ನುತ್ತ ಪೇಟೆಗೂ
ಬಾಳೆಎಲೆ ತರಿಸುತ್ತಾರೆ…
ಕಾಲದ ಗಾಳಿ ಬೀಸುತ್ತದೆ…
ಮೆಟ್ರೋದಲ್ಲಿ ಪರಪ್ಯೂಂ ವಾಸನೆ
ಬೆವರ ವಾಸನೆಗಿಲ್ಲ ಜಾಗ…ಟಿವಿಮುಂದೆ
ದೇಶದ ಕುರಿತು ಹರಟುತ್ತಾರೆ
ಎದ್ದು ಊಟಕ್ಕೆ ಹೋಗುತ್ತಾರೆ
ಬೇರೆ ದೇಶದ ಹುಳುಕು ಹುಡುಕಿ
ನಮ್ಮದೆಲ್ಲವ ಮರೆಯುತ್ತಾರೆ
ಕಾಲದ ಗಾಳಿ ಬೀಸುತ್ತದೆ…
ಕೈ ಅದರುತ್ತದೆ .. ಮರದ ಎಲೆ ಉದುರುತ್ತದೆ
ನದಿಗಳಲ್ಲಿ ಮರಳು ಮರಳಿನಲ್ಲಿ ಕಟ್ಟಡ
ಕಟ್ಟಡದಲ್ಲಿ ನಾವೂ ಇದ್ದೇವೆ
ಕಾಲದ ಗಾಳಿ ಬೀಸುತ್ತದೆ…
ರಪ ರಪ ಮಳೆ ಸುರಿಯುತ್ತದೆ
ಎಲ್ಲಾ ಕೊಚ್ಚಿಹೋಗುತ್ತದೆ
ಆದರೂ ತಂಪಾಗುತ್ತದೆ
ಕಾಲದ ಗಾಳಿ ಬೀಸುತ್ತದೆ…
ಹೊಸದೇನೋ ಹುಟ್ಟುತ್ತದೆ !
-ತಮ್ಮಣ್ಣ ಬೀಗಾರ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

1 Comment

  1. ತಮ್ಮಣ್ಣ ಬೀಗಾರರ ಕವನ ವರ್ತಮಾನಕ್ಕೆ ಹಿಡಿದ ಕೈಗನ್ನಡಿ. ರತ್ನಾಕರ ನರಮುಂಡಿಗೆ.

Leave a Reply

Your email address will not be published. Required fields are marked *