ಸರ್ಪ ವಾಸಿಸುವ ಪ್ರದೇಶದ ಸಂಮೃದ್ಧಿ-ಸಂಕ್ರಾಂತಿಯ ಬರಗಾಲ ಜಾತ್ರೆ

.


ಜ.14ರಿಂದ ಪ್ರಾರಂಭ
ಸಿದ್ಧಾಪುರ ತಾಲೂಕಿನ ಅತಿ ದೊಡ್ಡಜಾತ್ರೆ ಎನ್ನುವ ಹೆಗ್ಗಳಿಕೆ ಇದ್ದ ಸಿದ್ಧಾಪುರದ ವಾಜಗೋಡು ಪಂಚಾಯತ್ ನ ಲಂಬಾಪುರದ ಬರಗಾಲ ಜಾತ್ರೆ ಜ.14 ರ ಮಂಗಳವಾರದಿಂದ ಪ್ರಾರಂಭವಾಗುತ್ತಿದೆ. ಹಿಂದೆ ಅಂದರೆ ಬಹುಹಿಂದೆ ಬಿಳಗಿ ಅರಸರ ಕಾಲದಿಂದಲೂ ಇಲ್ಲಿ ಜಾತ್ರೆ ನಡೆಯುತಿತ್ತು ಎನ್ನುವ ಪ್ರತೀತಿ ಇರುವ ಈ ಬರಗಾಲ ಬಿಳಗಿ ಅರಸರ ಹಿಂದಿನ ರಾಜಧಾನಿ ಐಸೂರಿಗೆ ತಾಕಿಕೊಂಡಿರುವ ಪ್ರದೇಶ. ಈ ಪ್ರದೇಶದಲ್ಲಿ ತಿಂಗಳುಗಳ ವರೆಗೆ ನಡೆಯುತಿದ್ದ ಜಾತ್ರೆ ಈ ಭಾಗದ ಜನರಿಗೆ ದವಸ,ಧಾನ್ಯ, ಕಾಳು-ಮೆಣಸು ಕೊಳ್ಳುವ ವಿಶೇಶ ಜಾತ್ರೆಯಾಗಿತ್ತು.
ಈಗ ಇಲ್ಲಿರುವ ಕಾಲಭೈರವ ದೇವರು ಹಾಗೂ ತ್ರಿಲಿಂಗೇಶ್ವರ ದೇವರುಗಳಿಗೂ ಸಂಕ್ರಾಂತಿ ಸಮಯದಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿಸೋಮುವಾರ ಪೂಜೆ ನಡೆಯುವ ಇಲ್ಲಿಯ ಕಾಲಭೈರವ ಸನ್ನಿಧಿಯಲ್ಲಿ ಸರ್ಪ ವಾಸಿಸುತ್ತದೆ ಎನ್ನುವ ನಂಬಿಕೆ ಉಂಟು. ಕಳೆದ ವಸ್ತುಗಳು ಮರಳಲು, ಸಂತಾನಪ್ರಾಪ್ತಿಯಾಗಲು ಹರಕೆ ಹೊರುವ ಸಾರ್ವಜನಿಕರು ನಾನಾ ಹರಕೆಗಳನ್ನು ತೀರಿಸಲು ಇಲ್ಲಿಗೆ ಬರುತ್ತಾರೆ.
ಹೀಗೆ ಸಂಪ್ರದಾಯ, ನಂಬಿಕೆ,ರೂಢಿಗಳಿಂದ ಅನೇಕ ವರ್ಷಗಳಿಂದ ನಡೆದು ಬರುತ್ತಿರುವ ಈ ಜಾತ್ರೆ ಸಿದ್ದಾಪುರದ ಅರ್ಧಕ್ಕರ್ಧ ಜನರ ಜಾತ್ರೆಯಾಗುವ ಜೊತೆಗೆ ಈ ದೇವರು, ಜಾತ್ರೆಗೆ ಸುತ್ತಲ ಮೂರ್ನಾಲ್ಕು ಜಿಲ್ಲೆಯ ಅನುಯಾಯಿಗಳೂ ಬರುತ್ತಾರೆ. ಪ್ರತಿ ಸಂಕ್ರಾಂತಿಯ ಜನೇವರಿ 14 ರಂದು ನಡೆಯುವ ಈ ಬರಗಾಲ ಜಾತ್ರೆಯ ವಿಶೇಶವೆಂದರೆ 14 ರ ಸಾಮೂಹಿಕ ಅನ್ನಸಂತರ್ಪಣೆ ನಂತರ ಈ ಭಾಗದ ಹಳ್ಳಿಗಳ ಜನರು ವಾರದ ವರೆಗೂ ಮಾಂಸದ ಅಡುಗೆ ಮಾಡಿ ಅತಿಥಿಗಳನ್ನು ಉಪಚರಿಸುವುದು ವಾಡಿಕೆ. ಹೀಗೆ ಅನೇಕ ವಿಶೇಶಗಳ ಈ ಜಾತ್ರೆ ಸಿದ್ಧಾಪುರದ ಪ್ರಮುಖ ಜಾತ್ರೆಯಾಗಿ ಗಮನ ಸೆಳೆಯುತ್ತಿರುವುದು ವಿಶೇಶ.

ಆಧಾರ್ ಪರದಾಟ ತಪ್ಪಿಸಲು ರಾಷ್ಟ್ರಪತಿಗಳಿಗೆ ಪತ್ರ
ದೇಶದಲ್ಲಿ ನಾನಾ ಕಾನೂನು-ಕಾಯಿದೆ ಜಾರಿ ಮಾಡಲು ಹವಣಿಸುತ್ತಿರುವ ಕೇಂದ್ರ ಸರ್ಕಾರ ಜನರ ಅಗತ್ಯ ಆಧಾರ್‍ಕಾರ್ಡ್ ನೀಡಿಕೆ,ತಿದ್ದುಪಡಿ ಮಾಡುತ್ತಿಲ್ಲ ಎನ್ನುವ ಆರೋಪ ಬಲವಾಗುತ್ತಿದೆ.
ಈ ಬಗ್ಗೆ ರಾಷ್ಟ್ರಪತಿಗಳಿಗೆ ಮನವಿ ಮಾಡಿ, ಪರಿಹಾರ ಕೋರಿರುವ ಜೆ.ಡಿ.ಎಸ್. ಜಿಲ್ಲಾ ಅಲ್ಫಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಸ್ ಶೇಖ್ ರಾಜ್ಯ ವಿಧಾನಸಭಾ ಅಧ್ಯಕ್ಷರು, ಮಾಜಿ ಕೇಂದ್ರ ಸಚಿವರು ಪ್ರತಿನಿಧಿಸುವ ಶಿರಸಿ ಕ್ಷೇತ್ರದಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ರಗಳೆಯಾಗುತಿದ್ದು ಇದಕ್ಕೆ ಸೂಕ್ತ ಏರ್ಪಾಡು ಮಾಡುವ ಮೂಲಕ ಜನರ ನೆರವಿಗೆ ಬರಲು ಕೋರಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *