

ಸಿದ್ಧಾಪುರ ತಾಲೂಕಿನ ಏಕೈಕ ಸ್ನಾತಕೋತ್ತರ ಶಿಕ್ಷಣ ಕೇಂದ್ರ ಧನ್ವಂತರಿ ಆಯುರ್ವೇದ ಕಾಲೇಜಿನ ವಾರ್ಷಿಕೋತ್ಸವ ಮತ್ತು ಪದವಿಪ್ರದಾನ ಸಮಾರಂಭ ಜ.13 ರ ಸೋಮವಾರ ನಡೆಯಲಿದೆ. ಇದೇ ದಿನ ನೂತನಸುಸಜ್ಜಿತ ಸಭಾಭವನ ಸುವಾಚಾ ಲೋಕಾರ್ಪಣಗೊಳ್ಳಲಿದೆ.
ಈ ಬಗ್ಗೆ ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಣ ಪ್ರಸಾರಕ ಸಮೀತಿಯ ಅಧ್ಯಕ್ಷ ವಿನಾಯಕ ಹೆಗಡೆ ತಾಲೂಕಿನಿಂದ ಮೊದಲ ಸ್ನಾತಕೋತ್ತರ ಆಯುರ್ವೇದ ಪದವಿಧರರು ಹೊರನಡೆಯುತಿದ್ದು ಈ ದೀಕ್ಷಾಂತಾ2020 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಆರ್.ರಾಮಕೃಷ್ಣ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಇದೇ ದಿನ ನಡೆಯುವ ಧನ್ವಂತರಿ ಆಯುರ್ವೇದ ಕಾಲೇಜಿನ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಶಿರಸಿ ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದು ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ರೂಪಾ ಭಟ್ ಹೇಳಿದರು.

ಯೋಗ್ಯಚಿಕಿತ್ಸೆ,ಉತ್ತಮ ಸೇವೆ,ಉತೃಷ್ಟ ತಾಂತ್ರಿಕತೆಗಳಿಂದ ಗಮನ ಸೆಳೆಯುತ್ತಿರುವ ಲೇನಸ್ಆಸ್ಫತ್ರೆ
ಮಲೆನಾಡಿನ ನುರಿತ ವೈದ್ಯರು,ಉತ್ಕøಷ್ಟ ತಾಂತ್ರಿಕತೆ, ಉತ್ತರದಾಯಿಯಾದ ಚಿಕಿತ್ಸೆ ಸೇರಿದಂತೆ ಹಲವು ವೈಶಿಷ್ಟ್ಯಗಳಿಂದ ಬೆಂಗಳೂರು ಜೇ.ಪಿ.ನಗರದ ಲೆನಸ್ ಆಸ್ಫತ್ರೆ ಗಮನ ಸೆಳೆಯುತ್ತಿದೆ.
ಈ ಆಸ್ಫತ್ರೆಯ ತಜ್ಞ ವೈದ್ಯರು,ಮುಖ್ಯಸ್ಥರು ಆಗಿರುವ ಸಾಗರದ ಡಾ.ಟಿ.ಎಮ್.ಸತೀಶ್ ಶ್ರೇಷ್ಠ ಶಸ್ತ್ರ ಚಿಕಿತ್ಸಕರೆಂದು ಪ್ರಸಿದ್ಧರಾಗಿದ್ದು ಮಲೆನಾಡು ಮತ್ತು ರಾಜ್ಯದ ಜನರ ಪಾಲಿಗೆ ವೈದ್ಯ ನಾರಾಯಣ ರೆನಿಸಿಕೊಂಡಿದ್ದಾರೆ.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
