ಯೋಗ್ಯಚಿಕಿತ್ಸೆ,ಉತ್ತಮ ಸೇವೆ,ಉತೃಷ್ಟ ತಾಂತ್ರಿಕತೆಗಳಿಂದ ಗಮನ ಸೆಳೆಯುತ್ತಿರುವ ಲೇನಸ್‍ಆಸ್ಫತ್ರೆ

ಮಲೆನಾಡಿನ ನುರಿತ ವೈದ್ಯರು,ಉತ್ಕøಷ್ಟ ತಾಂತ್ರಿಕತೆ, ಉತ್ತರದಾಯಿಯಾದ ಚಿಕಿತ್ಸೆ ಸೇರಿದಂತೆ ಹಲವು ವೈಶಿಷ್ಟ್ಯಗಳಿಂದ ಬೆಂಗಳೂರು ಜೇ.ಪಿ.ನಗರದ ಲೆನಸ್ ಆಸ್ಫತ್ರೆ ಗಮನ ಸೆಳೆಯುತ್ತಿದೆ.
ಈ ಆಸ್ಫತ್ರೆಯ ತಜ್ಞ ವೈದ್ಯರು,ಮುಖ್ಯಸ್ಥರು ಆಗಿರುವ ಸಾಗರದ ಡಾ.ಟಿ.ಎಮ್.ಸತೀಶ್ ಶ್ರೇಷ್ಠ ಶಸ್ತ್ರ ಚಿಕಿತ್ಸಕರೆಂದು ಪ್ರಸಿದ್ಧರಾಗಿದ್ದು ಮಲೆನಾಡು ಮತ್ತು ರಾಜ್ಯದ ಜನರ ಪಾಲಿಗೆ ವೈದ್ಯ ನಾರಾಯಣ ರೆನಿಸಿಕೊಂಡಿದ್ದಾರೆ.
ಬೆಂಗಳೂರು ಜೆ.ಪಿ. ನಗರ ರಾಗಿಗುಡ್ಡ ರಸ್ತೆಯ ಈ ಲೆನಸ್ ಆಸ್ಫತ್ರೆ ಸಕಲ ವ್ಯವಸ್ಥೆ,ಉತ್ತಮ ಸೇವೆ ಹೊಂದಿರುವುದರಿಂದ ಮಲೆನಾಡಿನ ಜನತೆ ಈ ಆಸ್ಫತ್ರೆಗೆ ಧಾವಿಸುತಿದ್ದು ಬೆಂಗಳೂರಿನಲ್ಲಿ ನೆಲೆಸಿರುವ ಮಲೆನಾಡಿಗರ ಸೇವೆ-ಕೌಟಿಂಬಿಕ ವಾತಾವರಣ ರೋಗಿಗಳಿಗೆ ಆತ್ಮವಿಶ್ವಾಸ ತುಂಬುತಿದ್ದು ಈ ಭಾಗದ ಜನರು ಸಕಲ ವ್ಯವಸ್ಥೆ, ಪಕ್ಕಾ ಚಿಕಿತ್ಸೆಯ ಈ ಆಸ್ಫತ್ರೆ ಮತ್ತು ತಜ್ಞವೈದ್ಯರ ನೆರವು ಪಡೆಯಬೇಕೆಂದು ಡಾ.ಟಿ.ಎಂ. ಸತೀಶ್ ಅಭಿಮಾನಿಗಳು ಮಲೆನಾಡ ಜನತೆಗೆ ಮನವಿ ಮಾಡಿದ್ದಾರೆ.
ಕಠಿಣ ಶಸ್ತ್ರ ಚಿಕಿತ್ಸೆಗಳು, ಮನೆಯ ಉಪಚಾರ, ಸರಳ & ಸುಲಭ ಚಿಕಿತ್ಸೆಗಳಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಿದ್ದಾರೆ.
ಪೊ-080-26598888,ಮೊ-9353216048
(ಸದ್ಯದಲ್ಲೇ ಡಾ.ಸತೀಶ್ ದೂರವಾಣಿ,ಅಂತರ್ಜಾಲ ಕರೆಗಳ ಮೂಲಕ ಕರಾವಳಿ-ಮಲೆನಾಡಿನ ಜನರ ಆರೋಗ್ಯ,ಚಿಕಿತ್ಸೆ ಬಗ್ಗೆ ಆಪ್ತಸಮಾಲೋಚನೆ ಮೂಲಕ ಸಲಹೆ-ಸಹಕಾರ ನೀಡಲಿದ್ದಾರೆ. ನಿರೀಕ್ಷಿಸಿ…..)

ನಾಳೆ,ನಾಡಿದ್ದು ಟಿ.ಎಂ.ಎಸ್.ಅಮೃತಮಹೋತ್ಸವ ಗಣ್ಯಾತಿಗಣ್ಯರ ಸಮಾಗಮ
ಸಂಸ್ಥೆಯ ಸಂಕಷ್ಟದ ಸಮಯದಲ್ಲಿ ಅಂದಿನ ಸಹಕಾರ ಸಚಿವ ಕೆ.ಎಚ್.ಪಾಟೀಲ್ ಟಿ.ಎಂ.ಎಸ್. ಗೆ ಜೀವದಾನ ನೀಡಿದ್ದಾರೆ. ಅಂಥ ಮಹನೀಯರು, ತಾಲೂಕಿನ ಅಡಿಕೆ ಬೆಳೆಗಾರರ ಸಹಕಾರ, ಶ್ರಮದಿಂದ ಸಂಸ್ಥೆ ಯಶಸ್ವಿಯಾಗಿ 75 ವರ್ಷ ಪೂರೈಸಿದೆ. 1 ಕೋಟಿ ವೆಚ್ಚದ ಸಂಸ್ಥೆಯ ಕಟ್ಟಡ ನವೀಕರಣದೊಂದಿಗೆ ವಿದಾಯಕ ಕಾರ್ಯಕ್ರಮಗಳ ಮೂಲಕ 2 ದಿನ ಅಮೃತಮಹೋತ್ಸವ ಆಚರಿಸುತಿದ್ದೇವೆ.
-ಆರ್.ಎಂ.ಹೆಗಡೆ, ಬಾಳೇಸರ
ಸಿದ್ಧಾಪುರ ತಾಲೂಕಿನ ರೈತರ ಅಭಿಮಾನದ ಸಂಸ್ಥೆ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ 75 ನೇ ವರ್ಷದ ಅಮೃತಮಹೋತ್ಸವದ ಅಂಗವಾಗಿ ಜ.11,12 ರಂದು ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿವೆ.
11 ರ ಶನಿವಾರ ಅಮೃತಮಹೋತ್ಸವದ ಅಂಗವಾಗಿ ವಿಚಾರ ಸಂಕಿರಣ ನಡೆಯಲಿದ್ದು ರವಿ ಹೆಗಡೆ ಹೂವಿನಮನೆ, ಡಾ.ಶಶಿಭೂಷಣ ಹೆಗಡೆ ದೊಡ್ಮನೆ, ಎ.ಆರ್. ಹೆಗಡೆ ಹೂಡ್ಲಮನೆ, ಎಸ್.ಜಿ.ಹೆಗಡೆ,ಜಿ.ಕೆ.ರಾಮಪ್ಪ ಉಪನ್ಯಾಸ ನೀಡಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲ ಜಯಕುಮಾರ ಎಸ್. ಪಾಟೀಲ್ ಕೋಲಶಿರ್ಸಿ ವಹಿಸಲಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *