

ಕಾರವಾರದ ಸಾಗರಮಾಲಾ ಯೋಜನೆ ಅನುಷ್ಠಾನ ಸಂಘರ್ಷಕ್ಕೆಡೆಮಾಡಿದ್ದು ಮೀನುಗಾರರ ಹಿತರಕ್ಷಿಸಿ,ವಿಶ್ವಾಸದಿಂದ ಕೆಲಸಮಾಡಲು ಮಾಜಿ ಸಚಿವ ಆನಂದ ಅಸ್ನೋಟಿಕರ್ ಸಲಹೆ ನೀಡಿದ್ದಾರೆ.
ಸಮಾಜಮುಖಿಯೊಂದಿಗೆ ಮಾತನಾಡಿದ ಅವರು ಕೇಂದ್ರಸರ್ಕಾರದ ಈ ಯೋಜನೆ ಅನುಷ್ಠಾನದಲ್ಲಿ ಮೀನುಗಾರರ ವಿಶ್ವಾಸ ಪಡೆಯುವ ಪ್ರಯತ್ನ ಮಾಡಿಲ್ಲ. ಬಿ.ಜೆ.ಪಿ. ಕೂಡಾ ಇಂಥ ವಿಷಯದಲ್ಲಿ ಸೂಕ್ಷ್ಮಜ್ಞತೆಯಿಂದ ವರ್ತಿಸಬೇಕಿದ್ದು. ಮೀನುಗಾರರ ವಿಷಯದಲ್ಲಿ ದುಡುಕುವುದು, ಅಸೂಕ್ಷ್ಮತೆಯಿಂದ ವರ್ತಿಸುವುದು ಅಕ್ಷಮ್ಯ.
ಮೀನುಗಾರರಿಗೆ ತೊಂದರೆ ಆಗದಂತೆ ಬಾವಟಿಕಟ್ಟಾ ನದಿ ಹೊರತು ಪಡಿಸಿ, ಮೂರು ಹಡಗು ನಿಲ್ದಾಣಗಳ ಬದಲು ಒಂದನ್ನೇ ನಿರ್ಮಿಸುವ ಮೂಲಕ ತಡೆಗೋಡೆ ಲಾಭ-ನಷ್ಟ, ನೋಡಿ, ಕಾರವಾರದ ಕಡಲತೀರ, ಮೀನುಗಾರರ ಜೀವನೋಪಾಯ ಯಾವುದಕ್ಕೂ ತೊಂದರೆಯಾಗದಂತೆ,ಸಂಘರ್ಷಕ್ಕೆಡೆಯಾಗದಂತೆ ಎಲ್ಲರ ವಿಶ್ವಾಸದಿಂದ ಕೆಲಸಮಾಡಬೇಕು. ಮೀನುಗಾರರನ್ನು ಬಂಧಿಸುವುದು, ಅವರ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ಗೃಹ & ಸಹಕಾರ ಇಲಾಖೆಯ ಅಮೂಲಾಗ್ರ ಬದಲಾವಣೆಗೆ ಬೊಮ್ಮಾಯಿ ಆದ್ಯತೆ
ಸ್ವಾತಂತ್ರ್ಯ ಹೋರಾಟದ ಕೆಚ್ಚು-ರೊಚ್ಚನ್ನು ಸಕಾರಾತ್ಮಕವಾಗಿ ಬಳಸಿಕೊಂಡ ಉತ್ತರ ಕನ್ನಡದ ಸ್ಫೂರ್ತಿ, ಅಭಿಮಾನ, ಪ್ರೀತಿಯನ್ನು ಇಲ್ಲಿಂದ ತೆಗೆದುಕೊಂಡು ಹೋಗುತ್ತೇನೆ.
-ಬಸವರಾಜ್ ಬೊಮ್ಮಾಯಿ
ಸಹಕಾರ ಮತ್ತು ಗೃಹ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಯ ಅಗತ್ಯ ಪ್ರತಿಪಾದಿಸಿರುವ ರಾಜ್ಯ ಗೃಹ ಮತ್ತು ಸಹಕಾರ ಸಚಿವ ಬಸವರಾಜ್ ಬೊಮ್ಮಾಯಿ ಸಮಾನ ಹಂಚಿಕೆಯ ಕಮ್ಯುನಿಸಮ್ ಮತ್ತು ಉತ್ಫಾದಕರ ಹಿತ ಕಾಪಾಡುವ ಬಂಡವಾಳಶಾಹಿನೀತಿಗಳಿಗಿಂತ ಸಹಕಾರ (ಕೋಆಪರೇಟಿಸಮ್) ಹೆಚ್ಚು ಸ್ವೀಕಾರಾರ್ಹವಾಗಿದೆ ಎಂದು ಹೇಳಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
