ವಿಷ್ಣುಸಹಸ್ರನಾಮ ಮಹತ್ವ ಕುರಿತು ವಿಶೇಷ ಅಧ್ಯಾತ್ಮ ಪ್ರವಚನ

ಎಲ್ಲಿ ಭಕ್ತರಿದ್ದಾರೆಯೋ ಅಲ್ಲಿ ಲಭ್ಯವಾಗುವವ ಶ್ರೀವಿಷ್ಣು. ಪರಮಾತ್ಮನನ್ನು ಸಾವಿರ ಸಲ ಭಕ್ತಿಯಿಂದ ಕರೆಯುವುದೇ ವಿಷ್ಣು ಸಹಸ್ರನಾಮ. ದ್ವಾಪರ ಯುಗದಲ್ಲಿ ಕೃಷ್ಣಾ ಎಂದರೆ ಸಾಕಾಗಿತ್ತು, ಕೃಷ್ಣ ಸಿಗುತ್ತಿದ್ದ. ಆದರೆ ಕಲಿಯುಗದಲ್ಲಿ ಹರಿನಾಮವ ನೆನೆದರೆ ಮಾತ್ರ ಕೃಷ್ಣ ಲಭಿಸುತ್ತಾನೆ ಎಂದು ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಹೇಳಿದ್ದಾರೆ. ಅವರು ಪಟ್ಟಣದ ಪ್ರಶಾಂತಿ ವಿದ್ಯಾಲಯ ಆವರಣದ ಸಾಯಿಕಿರಣ ಸಭಾಭವನದಲ್ಲಿ ವಿಷ್ಣುಸಹಸ್ರನಾಮ ಮಹತ್ವ ಕುರಿತು ವಿಶೇಷ ಅಧ್ಯಾತ್ಮ ಪ್ರವಚನ ನೀಡುತ್ತಿದ್ದರು.
ವಿಷ್ಣು ಸಹಸ್ರನಾಮವನ್ನು ವೇದವ್ಯಾಸರು ನೀಡಿದರು. ಅದನ್ನು ಭೀಷ್ಮಾಚಾರ್ಯರು ಪಸರಿಸಿದರು. ವಿಷ್ಣುಸಹಸ್ರನಾಮ ಪಾರಾಯಣದ ಮೂಲಕ ಮಹಾವಿಷ್ಣುವಿನ ಉಪಾಸನೆ ಮಾಡಿದರೆ ಎಲ್ಲಾ ಬಯಕೆ ಸಿದ್ಧಿಯಾಗುವುದಲ್ಲದೇ ದೈವಿಕ ಆನಂದದ ಅನುಭವ ತರುತ್ತದೆ. ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ಜನನ ಮರಣ ಚಕ್ರದಿಂದ ಬಿಡುಗಡೆ ಮಾಡುವ ಸ್ತೋತ್ರ ವಿಷ್ಣು ಸಹಸ್ರನಾಮ ಎಂದು ಅವರು ವಿವರಿಸಿದರು.
ಪ್ರಶಾಂತಿ ವಿದ್ಯಾ ಸಂಸ್ಥೆಗಳ ಪ್ರಧಾನ ಟ್ರಸ್ಟಿ ಆರ್.ಜಿ.ಪೈ ಮಂಜೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಾವು ಉದ್ಯೋಗ, ಹಣ, ಸಂಪತ್ತನ್ನು ಬಯಸುತ್ತೇವೆ. ನಾವು ಲಕ್ಷ್ಮೀನಾರಾಯಣನನ್ನು ಆರಾಧಿಸಿದರೆ ಲಕ್ಷ್ಮಿ ನೆಲೆಸುತ್ತಾಳೆ ಎಂದರು.
ಗೋಸ್ವರ್ಗ ನಿರ್ಮಾಣದ ಮೂಲಕ ಶ್ರೀರಾಘವೇಶ್ವರಭಾರತೀ ಶ್ರೀ ಸಿದ್ದಾಪುರಕ್ಕೆ ಪ್ರಪಂಚ ಭೂಪಟದಲ್ಲಿ ಹೆಸರು ತಂದುಕೊಟ್ಟಿದ್ದಾರೆ. ಇದೀಗ ಅವರ ಶ್ರೀಮಠದಿಂದ “ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್” ಸ್ಥಾಪಕ ಡಾ.ಪಾರ್ಥಸಾರಥಿಯವರಿಂದ ಅಧ್ಯಾತ್ಮ ಪ್ರವಚನ ಏರ್ಪಡಿಸುತ್ತಿರುವುದು ಸ್ವಾಗತಾರ್ಹ ಎಂದರು.
ವೇದಿಕೆಯಲ್ಲಿ ಹವ್ಯಕಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಮಹಾನಂದಿಗೋಲೋಕದ ಗೌರವಾಧ್ಯಕ್ಷ ಜಿ.ವಿ.ಹೆಗಡೆ ಕಾನಮೂಲೆ ಬೆಂಗಳೂರು ಉಪಸ್ಥಿತರಿದ್ದರು. ಸಿದ್ದಾಪುರದ ನಿವೇದಿತಾ ಮಹಿಳಾ ಮಂಡಳದ ಅಧ್ಯಕ್ಷೆ ಗಾಯತ್ರಿ ಭಟ್ಟ ಹಾಗೂ ಸದಸ್ಯರು, ದೈವಜ್ಞಬ್ರಾಹ್ಮಣ ಶ್ರೀರಾಜರಾಜೇಶ್ವರೀ ಮಹಿಳಾಮಂಡಳದ ಅಧ್ಯಕ್ಷೆ ವಿಜಯಾ ರಾಯಕರ್ ಹಾಗೂ ಸದಸ್ಯರು, ಸಿದ್ದಾಪುರ ಹವ್ಯಕ ಮಂಡಲ ಅಧ್ಯಕ್ಷ ಸುಬ್ರಾಯ ಹೆಗಡೆ ಸುಂಗೋಳಿಮನೆ, ಕಾರ್ಯದರ್ಶಿ ಹರ್ಷ ಭಟ್ಟ ಗುಂಜಗೋಡ ಸೇರಿದಂತೆ ತಾಲೂಕು ಹಾಗೂ ಜಿಲ್ಲೆಯ ನಾನಾ ಭಾಗಗಳ ಆಸ್ತಿಕರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಿದ್ದಾಪುರ ಮಂಡಲದ ವತಿಯಿಂದ ಡಾ.ಪಾರ್ಥಸಾರಥಿಯವರನ್ನು ಗೌರವಿಸಲಾಯಿತು. ಗುರುವಂದನೆ, ವೇದಘೋಷ, ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಿದ್ದಾಪುರ ವಲಯ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಸ್ವಾಗತಿಸಿದರು. ಶಿಕ್ಷಕ ಎಂ.ಜಿ.ಭಟ್ಟ ನಿರ್ವಹಿಸಿದರು. ಗೋಪರಿವಾರದ ಪಿ.ಬಿ.ಹೊಸೂರ ವಂದಿಸಿದರು.

ಸಂವಿಧಾನದ ಆಶಯಗಳ ಈಡೇರಿಕೆಗೆ ಶ್ರಮಿಸಲುಕರೆ
ಸ್ವಾತಂತ್ರ್ಯ,ಸಮಾನತೆ,ಬ್ರಾತೃತ್ವ,ಏಕತೆ, ರಾಷ್ಟ್ರಪ್ರೇಮ, ಅಖಂಡತೆ ಭಾರತದ ಸಂವಿಧಾನದ ಆಶಯಗಳು ಈ ಆಶಯಗಳ ಈಡೇರಿಕೆಗಾಗಿ
ಕೆಲಸಮಾಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿರುವ ತಹಸಿಲ್ಧಾರ ಮಂಜುಳಾ ಭಜಂತ್ರಿ ಈ ಆಶಯಗಳ ಈಡೇರಿಕೆಗಾಗಿ ಲಾಗಾಯ್ತಿನಿಂದಲೂ ಮಹನೀಯರು ಶ್ರಮಿಸಿದ್ದಾರೆ ಎಂದಿದ್ದಾರೆ.
ಇಲ್ಲಿಯ ಐತಿಹಾಸಿಕ ನೆಹರೂ ಕ್ರೀಂಡಾಂಗಣದಲ್ಲಿ ಸಾರ್ವಜನಿಕ
ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು,ಪೊಲೀಸರ ಪರೇಡ್ ವೀಕ್ಷಿಸಿದ ಅವರು ಗೌರವವಂದನೆ ಪಡೆದರು.

ಸಂಪಾದಕರ ಅನುಭವ ಕಥನ ಸ್ಮøತಿಯಾಗಿ ಹರಿದಾಗ
ಊರು,ಸಂಬಂಧ,ಜಾತಿ,ಧರ್ಮ ನಿರುಪಯುಕ್ತ ಎನ್ನುವ ಅನುಭವವಾಗಿ, ಅವಮಾನ,ಅಪಮಾನವಾದಾಗಲೆಲ್ಲಾ ಛಲ ಜಾಗೃತವಾಗುತಿತ್ತು. ಸೋಲುವ, ಕಳೆದುಕೊಳ್ಳುವ ಭಯಗಳಿಂದ ಶ್ರಮದಿಂದ ಸಾಧಿಸುವುದು ರೂಢಿಯಾಯಿತು ಎಂದು ತಮ್ಮ ಗೆಲುವಿನ ಗುಟ್ಟನ್ನು ಹೇಳಿದವರು ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *