ತೆರೆಮರೆಯ ಜಲಪಾತಕ್ಕೆ ಬೇಕು ಸರ್ವಋತು ರಸ್ತೆ

ಸಿದ್ಧಾಪುರ ತಾಲೂಕಿನ ಪ್ರಸಿದ್ಧಿಗೆ ಬಾರದ ಜಲಪಾತವೊಂದು ಸಂಪರ್ಕ ರಸ್ತೆಯ ಕೊರತೆಯಿಂದ ನೇಪಥ್ಯದಲ್ಲಿರುವ ವಿದ್ಯಮಾನ ಬೆಳಕಿಗೆ ಬಂದಿದೆ. ಜೋಗ-ಸಿದ್ಧಾಪುರ ರಸ್ತೆಯಿಂದ ಮೆಣಸಿ,ಸಂಪಕಂಡ ಮಾರ್ಗದ ಮುಂಡ್ಗೆತಗ್ಗು ಬಳಿ ಸೋಮುನಕುಳಿ ಎನ್ನುವ ಗ್ರಾಮವಿದೆ. ಈ ಊರಿಗೆ ತೆರಳುವ ಮಾರ್ಗದಲ್ಲಿ ಜಲಪಾತವೊಂದಿದ್ದು ನೂರು
ಅಡಿಗಿಂತ ಎತ್ತರದಿಂದ ಜಾರುವ ನೀರು ನೋಡುಗರಿಗೆ ಮುದ ನೀಡುತ್ತದೆ.
ಸೋಮನಕುಳಿ ತೋಟ, ಗುಡ್ಡಗಳ ನಡುವೆ ಹರಿದುಬರುವ ನೀರು ಸೋಮುನಕುಳಿಗಿಂತ (ಮಾರ್ಗಮಧ್ಯ) ಮೊದಲೇ ಜಲಪಾತ ಒಂದನ್ನು ಸೃಷ್ಟಿಸಿದೆ. ಈ ಜಲಪಾತ ಜೂನ್ ನಿಂದ ಡಿಸೆಂಬರ್ ವರೆಗೆ ಸುಂದರವಾಗಿ ಕಾಣುತ್ತದೆ. ಹೊಸವರ್ಷದಲ್ಲಿ ಬಿಸಿಲು ಹೆಚ್ಚಾಗುತ್ತಲೇ ಕ್ಷೀಣವಾಗುವ ಈ ಜಲಧಾರೆ ವೀಕ್ಷಣೆಗೆ ಜುಲೈನಿಂದ ಡಿಸೆಂಬರ್ ಉತ್ತಮಸಮಯ. ಈ ಅವಧಿಯಲ್ಲೂ ಈ ಸೋಮುನಕುಳಿ ಜಲಪಾತಕ್ಕೆ ಹೋಗಲು ಸಂಪರ್ಕ ರಸ್ತೆಯ ವ್ಯವಸ್ಥೆ ಇಲ್ಲ. ಸಂಪಖಂಡ,ಚಂದ್ರಘಟಕಿ ರಸ್ತೆಯಿಂದ 2ಕಿ.ಮೀ. ದೂರದ ಈ ಜಲಪಾತಕ್ಕೆ ತೆರಳಲು ಮಣ್ಣಿನ ಕಚ್ಚಾ ರಸ್ತೆ ಇದೆಯಾದರೂ ವಾಹನಗಳು ಚಲಿಸುವುದು ಕಷ್ಟ.
ವರ್ಷದ ಆರು ತಿಂಗಳು ಸುರಿಯುವ ಸೋಮುನಕುಳಿ ಜಲಪಾತಕ್ಕೆ ತೆರಳಲು ಸರ್ವಋತು ರಸ್ತೆಯಾದರೆ ಜಲಪಾತ ನೋಡುವ ಪ್ರವಾಸಿಗರು ಮತ್ತು ಸ್ಥಳಿಯರಿಗೆ ಅನುಕೂಲವಾಗುತ್ತದೆ. ಕಾಡಿನ ನಡುವೆ ಅಡಿಕೆತೋಟದ ತುದಿಗೆ ಸೃಷ್ಟಿಯಾಗಿರುವ ಜಲಪಾತ ರಸ್ತೆ ಸಂಪರ್ಕದ ಕೊರತೆಯಿಂದ ತೆರೆಮರೆಗೆ ಸರಿದಿದೆ. ಹಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಜಲಪಾತ ಉತ್ತಮ ರಸ್ತೆ ನಿರ್ಮಾಣದಿಂದ ಪ್ರವಾಸಿಗರಿಗೆ ಸಮೀಪವಾಗುವ ಅವಕಾಶವಿದೆ.

ಖುಷಿ ಕೊಟ್ಟ
ಹವ್ಯಾಸಿ ನಾಟಕೋತ್ಸವ
ಸಿದ್ಧಾಪುರ ಶಂಕರಮಠದಲ್ಲಿ ಶನಿವಾರದಿಂದ ಮಂಗಳವಾರದ ವರೆಗೆ ನಡೆದ ನಾಟಕ ಅಕಾಡೆಮಿಯ ಹವ್ಯಾಸಿ ನಾಟಕೋತ್ಸವ ರಂಗಾಸಕ್ತರಿಗೆ ಭೂರಿಭೋಜನ ಉಣಿಸಿತು. ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮದ ನಂತರ ಗಣಪತಿ ಹಿತ್ತಲಕೈ ನಿರ್ಧೇಶಿಸಿದ್ದ ಜಯಂತ ಕಾಯ್ಕಿಣಿ ಕಥೆಗಳ ರಂಗಪ್ರಸ್ತುತಿ ಸುಗ್ಗಿ ಮತ್ತು ಕೋಮಲ ಗಾಂಧಾರ ಕತೆ, ನಿರ್ಧೇಶನ ಒಂದೇ ವೇದಿಕೆಯಲ್ಲಿ ಎರಡು ಕತೆಗಳ ಕಾದಂಬರಿಯ ಕಥಾ ಪ್ರಸಂಗದಂಥ ರಂಗಪ್ರಸ್ತುತಿ ಕತೆ, ವಿನ್ಯಾಸ, ವಸ್ತ್ರ ವಿನ್ಯಾಸ, ಭಾಷೆಗಳ ಹಿನ್ನೆಲೆಯಲ್ಲಿ ಗಮನ ಸೆಳೆಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *