ಬಿಳಗಿ ಸೀಮೆಯ ಮಾರಿಕಾಂಬಾ ಜಾತ್ರೆ & ಬಿಳಗಿಯ ವೈಶಿಷ್ಟ್ಯ

ಬಿಳಗಿಯಲ್ಲಿ ಮಾರಿಕಾಂಬಾ ಜಾತ್ರೆ ಮುಕ್ತಾಯವಾಗಿದೆ. ಈ ಬಿಳಗಿ ಸುಮಾರು 200-300 ವರ್ಷಗಳ ಹಿಂದೆ ರಾಜಧಾನಿಯಾಗಿ ಮೆರೆದಿದ್ದ ಪ್ರದೇಶ.
ಅಘನಾಶಿನಿ ನದಿಯ ತೊಪ್ಪಲಿನ ಈ ಪ್ರದೇಶದ ಪಾಕೃತಿಕ ವೈಶಿಷ್ಟ್ಯ, ಜನಜೀವನ, ವಿಭಿನ್ನವಾಗಿದೆ.ರಾಜರ ಕಾಲದ ಜೈನಬಸದಿ ಇಲ್ಲಿದ್ದು 22,23,24 ನೇ ತೀರ್ಥಂಕರರ ಮೂರ್ತಿಗಳು ಇಲ್ಲಿವೆ. ಇದೇ ಪ್ರದೇಶದಲ್ಲಿ ಗೋಲ್‍ಭಾವಿ, ವಿರೂಪಾಕ್ಷ ದೇವಾಲಯಗಳೆಲ್ಲಾ ಇವೆ.

200 ವರ್ಷಗಳಿಗೂ ಹಿಂದೆ ಬಿಳಗಿಯಲ್ಲಿ ಸಾಮಂತರಾಗಿದ್ದ
ಅರಸರು ಕಟ್ಟಿದ ನಿರ್ಮಾಣಗಳು, ಸ್ವತಂತ್ರ ಭಾರತದಲ್ಲಿ ಇಲ್ಲಿ ಸ್ಥಾಪನೆಯಾದ ವಿದ್ಯಾಸಂಸ್ಥೆಗಳು, ಸಹಕಾರಿ ಸಂಘಗಳು,ಜೇನು ಸೊಸೈಟಿ ಹೀಗೆ ಇತ್ತೀಚಿನ 200-300 ವರ್ಷಗಳಿಂದ ಪ್ರಮುಖ ಕೇಂದ್ರವಾಗಿದ್ದ ಬಿಳಗಿ ಈಗಲೂ ವಿಭಿನ್ನ ಜಾತಿ-ಸಮೂದಾಯ, ಧಾರ್ಮಿಕ ಮತಾವಲಂಬಿಗಳು ಇರುವ ಪ್ರದೇಶ.
ಬಿಳಗಿ ಕೇಂದ್ರವನ್ನಾಗಿಟ್ಟುಕೊಂಡು ನೋಡಬಹುದಾದ ರಾಜಕಾರಣಿಗಳು,ಸಾಧಕರು, ಬೆಳೆಗಳು,ಉದ್ಯಮಿಗಳು ಹೀಗೆ ಎಲ್ಲಾ ಕ್ಷೇತ್ರದಲ್ಲಿ ಕಾಣುವ ಬಿಳಗಿಕೇಂದ್ರದ ಸೀಮೆಗಳು ಈಗಿನ 10 ಗ್ರಾಮ ಪಂಚಾಯತ್ ಗಳಲ್ಲಿ ವಿಸ್ತರಿಸಿವೆ.
ಇಲ್ಲಿಯ ದುರ್ಗಾಂಬಾ ಮತ್ತು ಮಾರಿಕಾಂಬಾ ದೇವಾಲಯಗಳು ಈ ಭಾಗದ ಜನರ ಭಕ್ತಿಯ ಕೇಂದ್ರಗಳು.
ದುರ್ಗಾಂಬಾ ಮತ್ತು ಮಾರಿಕಾಂಬಾ ದೇವಾಲಯಗಳಿಗೆ ಒಂದೇ ಆಡಳಿತ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿರುವ ಪುರಾತನ ದೇವಾಲಯಗಳು ಇಲ್ಲಿಯ ಪ್ರಾಚೀನ ಪಳಯುಳಿಕೆಗಳ ನಿರ್ವಹಣೆಯನ್ನು ಕೇಂದ್ರದ ಪ್ರಾಚ್ಯವಸ್ತು ಇಲಾಖೆ ಮಾಡುತ್ತಿದೆ. ಐತಿಹಾಸಿಕ ಮಹತ್ವದಿಂದ ಬಿಳಗಿ ಪ್ರಸಿದ್ಧವಾಗಿದ್ದರೆ ಈ ಐತಿಹಾಸಿಕ ಪ್ರಾಮುಖ್ಯತೆ ಇಲ್ಲಿಯ ಜನಜೀವನಕ್ಕೂ ತೊಂದರೆಮಾಡಿದೆ. ಇಲ್ಲಿಯ ಕೆಲವು ವಾಸದ ಮನೆಗಳ ದುರಸ್ಥಿ, ಹೊಸನಿರ್ಮಾಣಕ್ಕೆ ಅನುಕೂಲ ಕಲ್ಫಿಸದ ಪ್ರಾಚ್ಯವಸ್ತು ಇಲಾಖೆ ನೀತಿ-ನಿಯಮಗಳು ಜನರಿಗೆ ಅನಾನುಕೂಲ ಮಾಡಿವೆ.
ಸರ್ಕಾರ ಮತ್ತು ಗ್ರಾಮ ಪಂಚಾಯತ್ ನಿರ್ವಹಿಸುತ್ತಿರುವ ಇಲ್ಲಿಯ ಐತಿಹಾಸಿಕ ಪಳಯುಳಿಕೆಗಳನ್ನು ನೋಡುವವರೂ ಕಡಿಮೆ. ಪ್ರಚಾರದ ಕೊರತೆ, ಸ್ಥಳಿಯರ ಅರಿವಿನ ಕೊರತೆ ಹೀಗೆ ಐತಿಹಾಸಿಕ ಹಿನ್ನೆಲೆಯ ಈ ಕೇಂದ್ರ ಅಭಿವೃದ್ಧಿಯ ಹಿನ್ನೆಲೆಯಲ್ಲೂ ಹಿಂದಿದೆ.ದೇವರು, ಧರ್ಮ, ನಂಬಿಕೆ ಆಧಾರದಲ್ಲೇ ಬದುಕುತ್ತಿರುವ ಈ ಪ್ರದೇಶದ ಜನ ವೆಚ್ಚದಾಯಕ ಜಾತ್ರೆ-ಹಬ್ಬಗಳನ್ನೂ ರೂಢಿ-ಸಂಪ್ರದಾಯದಂತೆ ನಡೆಸುತ್ತಾರೆ. ಲಕ್ಷಾಂತರ ಜನರು ಪಾಲ್ಗೊಳ್ಳುವ ಬಿಳಗಿ ಜಾತ್ರೆಯಲ್ಲಿ ಜಾತ್ರಾ ಆಕರ್ಷಣೆಗಳಾಗಿ ಮನೋರಂಜನಾ ಸಾಧನಗಳು, ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಶಿಸ್ತು-ಪರಿಸರ ಪೂರಕ ಉತ್ಸವದ ಹಿನ್ನೆಲೆಯಲ್ಲಿ ಜಾತ್ರಾ ಸಮೀತಿ ಪ್ಲಾಸ್ಟಿಕ್ ನಿರ್ಬಂಧ ಹೇರಿರುವುದು, ವಾಹನ ನಿಲುಗಡೆ, ಸಂಚಾರಿ ವ್ಯವಸ್ಥೆಗಳನ್ನು ಬಿಗಿಮಾಡಿರುವುದು ಈ ಜಾತ್ರೆಯ ವಿಶೇಶವಾಗಿತ್ತು.
ಬಿಳಗಿ ಮಾರಿಕಾಂಬಾ ದೇವಾಲಯಕ್ಕೂ ಇಲ್ಲಿಯ ರಾಜರ ಆಡಳಿತಕ್ಕೂ ಸರಿಸುಮಾರು ಸಮಾನ ಚರಿತ್ರೆಯಿದೆ. ಬಿಳಗಿ ಮಾಂಡಳೀಕರ ಕಾಲದಲ್ಲಿ ಪೂಜಿಸಲ್ಪಡುತಿದ್ದ ಮಾರಿಕಾಂಬೆಗೆ ಆ ನಂತರ ಸೀಮೆಯ ವ್ಯಾಪ್ತಿ ದೊರೆತು ಈ ಜಾತ್ರೆಯೂ ಪ್ರಸಿದ್ಧವಾಯಿತು ಎನ್ನಲಾಗುತ್ತಿದೆ. ದೇವಾಲಯದ ಆಡಳಿತಮಂಡಳಿ. ಜಾತ್ರಾಮಹೋತ್ಸವದ ಅಧ್ಯಕ್ಷತೆಗಳ ವಿಚಾರದಲ್ಲಿ ಇತ್ತೀಚಿನ 40-50 ವರ್ಷಗಳಿಂದಲೂ ವೈದಿಕರು, ವೈದಿಕೇತರ ಹಿಂದುಳಿದ ವರ್ಗಗಳ ನಡುವೆ ಸಂಘರ್ಷದ್ದೂ ಲಾಗಾಯ್ತಿನ ಇತಿಹಾಸವೇ ಇದೆ.

ಇಂದು ವಿದ್ಯುಕ್ತವಾಗಿ ಮುಗಿದ ಬಿಳಗಿ ಮಾರಿಕಾಂಬಾ ಜಾತ್ರೆ
ಕಳೆದ ಒಂದು ವಾರದಿಂದ ನಡೆದ ತಾಲೂಕಿನ ಬಿಳಗಿ ಶ್ರೀಮಾರಿಕಾಂಬಾ ಜಾತ್ರಾ ಮಹೋತ್ಸವ ಇಂದು ವಿದ್ಯುಕ್ತವಾಗಿ ಮುಕ್ತಾಯವಾಯಿತು.
ವಾಹನ ನಿಲುಗಡೆ ವ್ಯವಸ್ಥೆ,ಪ್ಲಾಸ್ಟಿಕ್ ಮುಕ್ತ ಉತ್ಸವಗಳಿಂದಾಗಿ ಸಾರ್ವಜನಿಕರಿಗೆ ತುಸು ಕಿರಿಕಿರಿಯಾದರೂ ಸ್ವಚ್ಛತೆ,ನಿರ್ವಹಣೆಗಳ ಹಿನ್ನೆಲೆಯಲ್ಲಿ ಜಾತ್ರೆಯ ಯಶಸ್ಸು ಅಭೂತಪೂರ್ವ ಎನ್ನುವಂತಿತ್ತು.
ಶನಿವಾರ,ರವಿವಾರಗಳಂದು ಹೆಚ್ಚಿನ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ವ್ಯಾಪಾರ,ವ್ಯವಹಾರ, ಗಳಿಕೆ ಹಿನ್ನೆಲೆಯಲ್ಲಿ ಜಾತ್ರೆ ಯಶಸ್ವಿ ಎನ್ನಲಾಗಿದೆ. ಸ್ಥಳಿಯರು,ಪೊಲೀಸರು ಮತ್ತು ಸಂಘಟಕರ ಪ್ರಯತ್ನಗಳಿಂದಾಗಿ ಜಾತ್ರೆಯಲ್ಲಿ ಅಹಿತಕರ ಘಟನೆಗಳಾಗಿಲ್ಲ ಎನ್ನುವ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ಮಂಗಳವಾರದ ಮಧ್ಯರಾತ್ರಿ ಆಚರಣೆಗಳ ನಂತರ ಹಿಂದಿನ ಬುಧವಾರ ಬೆಳಿಗ್ಗೆ ಜಾತ್ರೆಯ ಗದ್ದುಗೆಗೆ ಬಂದಿದ್ದ ಮಾರಿಕಾಂಬೆ ಈ ಬುಧವಾರದ ಮುಂಜಾನೆವೇಳೆಗೆ ವಿಸರ್ಜನೆಯಾಗಿದ್ದಾಳೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *