ಬಿಳಗಿ ಸೀಮೆಯ ಮಾರಿಕಾಂಬಾ ಜಾತ್ರೆ & ಬಿಳಗಿಯ ವೈಶಿಷ್ಟ್ಯ

ಬಿಳಗಿಯಲ್ಲಿ ಮಾರಿಕಾಂಬಾ ಜಾತ್ರೆ ಮುಕ್ತಾಯವಾಗಿದೆ. ಈ ಬಿಳಗಿ ಸುಮಾರು 200-300 ವರ್ಷಗಳ ಹಿಂದೆ ರಾಜಧಾನಿಯಾಗಿ ಮೆರೆದಿದ್ದ ಪ್ರದೇಶ.
ಅಘನಾಶಿನಿ ನದಿಯ ತೊಪ್ಪಲಿನ ಈ ಪ್ರದೇಶದ ಪಾಕೃತಿಕ ವೈಶಿಷ್ಟ್ಯ, ಜನಜೀವನ, ವಿಭಿನ್ನವಾಗಿದೆ.ರಾಜರ ಕಾಲದ ಜೈನಬಸದಿ ಇಲ್ಲಿದ್ದು 22,23,24 ನೇ ತೀರ್ಥಂಕರರ ಮೂರ್ತಿಗಳು ಇಲ್ಲಿವೆ. ಇದೇ ಪ್ರದೇಶದಲ್ಲಿ ಗೋಲ್‍ಭಾವಿ, ವಿರೂಪಾಕ್ಷ ದೇವಾಲಯಗಳೆಲ್ಲಾ ಇವೆ.

200 ವರ್ಷಗಳಿಗೂ ಹಿಂದೆ ಬಿಳಗಿಯಲ್ಲಿ ಸಾಮಂತರಾಗಿದ್ದ
ಅರಸರು ಕಟ್ಟಿದ ನಿರ್ಮಾಣಗಳು, ಸ್ವತಂತ್ರ ಭಾರತದಲ್ಲಿ ಇಲ್ಲಿ ಸ್ಥಾಪನೆಯಾದ ವಿದ್ಯಾಸಂಸ್ಥೆಗಳು, ಸಹಕಾರಿ ಸಂಘಗಳು,ಜೇನು ಸೊಸೈಟಿ ಹೀಗೆ ಇತ್ತೀಚಿನ 200-300 ವರ್ಷಗಳಿಂದ ಪ್ರಮುಖ ಕೇಂದ್ರವಾಗಿದ್ದ ಬಿಳಗಿ ಈಗಲೂ ವಿಭಿನ್ನ ಜಾತಿ-ಸಮೂದಾಯ, ಧಾರ್ಮಿಕ ಮತಾವಲಂಬಿಗಳು ಇರುವ ಪ್ರದೇಶ.
ಬಿಳಗಿ ಕೇಂದ್ರವನ್ನಾಗಿಟ್ಟುಕೊಂಡು ನೋಡಬಹುದಾದ ರಾಜಕಾರಣಿಗಳು,ಸಾಧಕರು, ಬೆಳೆಗಳು,ಉದ್ಯಮಿಗಳು ಹೀಗೆ ಎಲ್ಲಾ ಕ್ಷೇತ್ರದಲ್ಲಿ ಕಾಣುವ ಬಿಳಗಿಕೇಂದ್ರದ ಸೀಮೆಗಳು ಈಗಿನ 10 ಗ್ರಾಮ ಪಂಚಾಯತ್ ಗಳಲ್ಲಿ ವಿಸ್ತರಿಸಿವೆ.
ಇಲ್ಲಿಯ ದುರ್ಗಾಂಬಾ ಮತ್ತು ಮಾರಿಕಾಂಬಾ ದೇವಾಲಯಗಳು ಈ ಭಾಗದ ಜನರ ಭಕ್ತಿಯ ಕೇಂದ್ರಗಳು.
ದುರ್ಗಾಂಬಾ ಮತ್ತು ಮಾರಿಕಾಂಬಾ ದೇವಾಲಯಗಳಿಗೆ ಒಂದೇ ಆಡಳಿತ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿರುವ ಪುರಾತನ ದೇವಾಲಯಗಳು ಇಲ್ಲಿಯ ಪ್ರಾಚೀನ ಪಳಯುಳಿಕೆಗಳ ನಿರ್ವಹಣೆಯನ್ನು ಕೇಂದ್ರದ ಪ್ರಾಚ್ಯವಸ್ತು ಇಲಾಖೆ ಮಾಡುತ್ತಿದೆ. ಐತಿಹಾಸಿಕ ಮಹತ್ವದಿಂದ ಬಿಳಗಿ ಪ್ರಸಿದ್ಧವಾಗಿದ್ದರೆ ಈ ಐತಿಹಾಸಿಕ ಪ್ರಾಮುಖ್ಯತೆ ಇಲ್ಲಿಯ ಜನಜೀವನಕ್ಕೂ ತೊಂದರೆಮಾಡಿದೆ. ಇಲ್ಲಿಯ ಕೆಲವು ವಾಸದ ಮನೆಗಳ ದುರಸ್ಥಿ, ಹೊಸನಿರ್ಮಾಣಕ್ಕೆ ಅನುಕೂಲ ಕಲ್ಫಿಸದ ಪ್ರಾಚ್ಯವಸ್ತು ಇಲಾಖೆ ನೀತಿ-ನಿಯಮಗಳು ಜನರಿಗೆ ಅನಾನುಕೂಲ ಮಾಡಿವೆ.
ಸರ್ಕಾರ ಮತ್ತು ಗ್ರಾಮ ಪಂಚಾಯತ್ ನಿರ್ವಹಿಸುತ್ತಿರುವ ಇಲ್ಲಿಯ ಐತಿಹಾಸಿಕ ಪಳಯುಳಿಕೆಗಳನ್ನು ನೋಡುವವರೂ ಕಡಿಮೆ. ಪ್ರಚಾರದ ಕೊರತೆ, ಸ್ಥಳಿಯರ ಅರಿವಿನ ಕೊರತೆ ಹೀಗೆ ಐತಿಹಾಸಿಕ ಹಿನ್ನೆಲೆಯ ಈ ಕೇಂದ್ರ ಅಭಿವೃದ್ಧಿಯ ಹಿನ್ನೆಲೆಯಲ್ಲೂ ಹಿಂದಿದೆ.ದೇವರು, ಧರ್ಮ, ನಂಬಿಕೆ ಆಧಾರದಲ್ಲೇ ಬದುಕುತ್ತಿರುವ ಈ ಪ್ರದೇಶದ ಜನ ವೆಚ್ಚದಾಯಕ ಜಾತ್ರೆ-ಹಬ್ಬಗಳನ್ನೂ ರೂಢಿ-ಸಂಪ್ರದಾಯದಂತೆ ನಡೆಸುತ್ತಾರೆ. ಲಕ್ಷಾಂತರ ಜನರು ಪಾಲ್ಗೊಳ್ಳುವ ಬಿಳಗಿ ಜಾತ್ರೆಯಲ್ಲಿ ಜಾತ್ರಾ ಆಕರ್ಷಣೆಗಳಾಗಿ ಮನೋರಂಜನಾ ಸಾಧನಗಳು, ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿವೆ. ಶಿಸ್ತು-ಪರಿಸರ ಪೂರಕ ಉತ್ಸವದ ಹಿನ್ನೆಲೆಯಲ್ಲಿ ಜಾತ್ರಾ ಸಮೀತಿ ಪ್ಲಾಸ್ಟಿಕ್ ನಿರ್ಬಂಧ ಹೇರಿರುವುದು, ವಾಹನ ನಿಲುಗಡೆ, ಸಂಚಾರಿ ವ್ಯವಸ್ಥೆಗಳನ್ನು ಬಿಗಿಮಾಡಿರುವುದು ಈ ಜಾತ್ರೆಯ ವಿಶೇಶವಾಗಿತ್ತು.
ಬಿಳಗಿ ಮಾರಿಕಾಂಬಾ ದೇವಾಲಯಕ್ಕೂ ಇಲ್ಲಿಯ ರಾಜರ ಆಡಳಿತಕ್ಕೂ ಸರಿಸುಮಾರು ಸಮಾನ ಚರಿತ್ರೆಯಿದೆ. ಬಿಳಗಿ ಮಾಂಡಳೀಕರ ಕಾಲದಲ್ಲಿ ಪೂಜಿಸಲ್ಪಡುತಿದ್ದ ಮಾರಿಕಾಂಬೆಗೆ ಆ ನಂತರ ಸೀಮೆಯ ವ್ಯಾಪ್ತಿ ದೊರೆತು ಈ ಜಾತ್ರೆಯೂ ಪ್ರಸಿದ್ಧವಾಯಿತು ಎನ್ನಲಾಗುತ್ತಿದೆ. ದೇವಾಲಯದ ಆಡಳಿತಮಂಡಳಿ. ಜಾತ್ರಾಮಹೋತ್ಸವದ ಅಧ್ಯಕ್ಷತೆಗಳ ವಿಚಾರದಲ್ಲಿ ಇತ್ತೀಚಿನ 40-50 ವರ್ಷಗಳಿಂದಲೂ ವೈದಿಕರು, ವೈದಿಕೇತರ ಹಿಂದುಳಿದ ವರ್ಗಗಳ ನಡುವೆ ಸಂಘರ್ಷದ್ದೂ ಲಾಗಾಯ್ತಿನ ಇತಿಹಾಸವೇ ಇದೆ.

ಇಂದು ವಿದ್ಯುಕ್ತವಾಗಿ ಮುಗಿದ ಬಿಳಗಿ ಮಾರಿಕಾಂಬಾ ಜಾತ್ರೆ
ಕಳೆದ ಒಂದು ವಾರದಿಂದ ನಡೆದ ತಾಲೂಕಿನ ಬಿಳಗಿ ಶ್ರೀಮಾರಿಕಾಂಬಾ ಜಾತ್ರಾ ಮಹೋತ್ಸವ ಇಂದು ವಿದ್ಯುಕ್ತವಾಗಿ ಮುಕ್ತಾಯವಾಯಿತು.
ವಾಹನ ನಿಲುಗಡೆ ವ್ಯವಸ್ಥೆ,ಪ್ಲಾಸ್ಟಿಕ್ ಮುಕ್ತ ಉತ್ಸವಗಳಿಂದಾಗಿ ಸಾರ್ವಜನಿಕರಿಗೆ ತುಸು ಕಿರಿಕಿರಿಯಾದರೂ ಸ್ವಚ್ಛತೆ,ನಿರ್ವಹಣೆಗಳ ಹಿನ್ನೆಲೆಯಲ್ಲಿ ಜಾತ್ರೆಯ ಯಶಸ್ಸು ಅಭೂತಪೂರ್ವ ಎನ್ನುವಂತಿತ್ತು.
ಶನಿವಾರ,ರವಿವಾರಗಳಂದು ಹೆಚ್ಚಿನ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ವ್ಯಾಪಾರ,ವ್ಯವಹಾರ, ಗಳಿಕೆ ಹಿನ್ನೆಲೆಯಲ್ಲಿ ಜಾತ್ರೆ ಯಶಸ್ವಿ ಎನ್ನಲಾಗಿದೆ. ಸ್ಥಳಿಯರು,ಪೊಲೀಸರು ಮತ್ತು ಸಂಘಟಕರ ಪ್ರಯತ್ನಗಳಿಂದಾಗಿ ಜಾತ್ರೆಯಲ್ಲಿ ಅಹಿತಕರ ಘಟನೆಗಳಾಗಿಲ್ಲ ಎನ್ನುವ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ಮಂಗಳವಾರದ ಮಧ್ಯರಾತ್ರಿ ಆಚರಣೆಗಳ ನಂತರ ಹಿಂದಿನ ಬುಧವಾರ ಬೆಳಿಗ್ಗೆ ಜಾತ್ರೆಯ ಗದ್ದುಗೆಗೆ ಬಂದಿದ್ದ ಮಾರಿಕಾಂಬೆ ಈ ಬುಧವಾರದ ಮುಂಜಾನೆವೇಳೆಗೆ ವಿಸರ್ಜನೆಯಾಗಿದ್ದಾಳೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *