ಕಾರ್ಯಕರ್ತರು ವಿಧಾನಸಭಾ ಅಧ್ಯಕ್ಷರನ್ನು ಮಾತಿಗೆ ಕರೆಯುವುದೇಕೆ?

ಕಾಗೇರಿಯವರ ಹೊಂದಾಣಿಕೆ ರಾಜಕೀಯದಲ್ಲಿ ಬಡವಾದರೆ ಬಿ.ಜೆ.ಪಿ.ಕಾರ್ಯಕರ್ತರು?
ಸಿದ್ಧಾಪುರ ಸಾಯಿನಗರದ ವಿಧಾನಸಭಾಧ್ಯಕ್ಷರ ಮಾಮೂಲಿ ಅಡಿಗಲ್ಲು ಸಮಾರಂಭದ ನಂತರ ಸಾಯಿನಗರದ ಮನೆ ಒಂದರಲ್ಲಿ ಕಾಗೇರಿ ಮಾತನಾಡುತ್ತಾ ಕುಳಿತಿದ್ದಾಗ ಅವರೊಂದಿಗಿದ್ದ ಕಾರ್ಯಕರ್ತರು ಮನೆಯ ಹೊರಗಿದ್ದರು. ಶಾಸಕರು,ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆಯವರೊಂದಿಗಿದ್ದ ಬಿ.ಜೆ.ಪಿ. ಕಾರ್ಯಕರ್ತರಿಗೆ ಪರೋಕ್ಷವಾಗಿ ಒಳಗೆ ಬರಬೇಡಿ ಎನ್ನುವ ರೀತಿಯಲ್ಲಿ ಮನೆ ಮಾಲಿಕರು ಸಾಯಿನಗರದವರಷ್ಟೇ ಒಳಗೆ ಬನ್ನಿ ಎಂದು ಕರೆದರು.


ಸಾರ್ವಜನಿಕ ಕಾರ್ಯಕ್ರಮಕ್ಕೆ ತೆರಳಿದ್ದ ಶಾಸಕರೊಂದಿಗಿನ ಕಾರ್ಯಕರ್ತರಿಗೆ ಹೀಗೆ ಅವಮಾನವಾಗುತಿದ್ದರೆ ಕಾಗೇರಿಯವರು ಅದನ್ನು ಗಮನಿಸಿರಲಿಲ್ಲ. ವಿಶೇಶವೆಂದರೆ ಮೊನ್ನೆ ಸಿದ್ಧಾಪುರದಲ್ಲಿ ನಡೆದ ಇನ್ನೂ 2-3 ಕಾರ್ಯಕ್ರಮಗಳಲ್ಲಿ ಕಾಗೇರಿಯವರೊಂದಿಗೆ ಚುನಾವಣೆಯಲ್ಲಿ ಕೆಲಸಮಾಡಿದ್ದ ಕಾರ್ಯಕರ್ತರಿಗೆ ಅವಮಾನವಾಗಿತ್ತು.
ಹೀಗೆ ಅವಮಾನಮಾಡುವುದು, ಮಾಡಿಸುವುದು ಕಾಗೇರಿಯವರ ಉದ್ಧೇಶವಾಗಿರಲಿಕ್ಕಿಲ್ಲ ಆದರೆ ವಿಧಾನಸಭಾ ಅಧ್ಯಕ್ಷರೆದುರೇ ಅವರನ್ನು ಆ ಹುದ್ದೆಗೇರಿಸಿದ ಕಾರ್ಯಕರ್ತರಿಗೆ ನೋವು, ಅವಮಾನವಾಗುತ್ತಿರುವುದನ್ನು ಗೃಹಿಸದಷ್ಟು ಕಾಗೇರಿ ಅಸೂಕ್ಷ್ಮರಾದರೆ ಎನ್ನುವ ಪ್ರಶ್ನೆಯೊಂದಿಗೆ ಹಲವು ಅನುಮಾನ, ಅಸಮಾಧಾನಗಳ ಹಿನ್ನೆಲೆಯಲ್ಲಿ ಸೋಮವಾರ ವಿಶ್ವೇಶ್ವರ ಹೆಗಡೆ ಯವರ ವಿರುದ್ಧ ಕಾರ್ಯಕರ್ತರ ಅಸಮಾಧಾನ ಕೆಲಸಮಾಡಿದೆ. ಬಿ.ಜೆ.ಪಿ.ಕಾರ್ಯಕರ್ತರೇ ಹೇಳುವಂತೆ ಅನುದಾನ ಹಂಚಿಕೆ, ಅಭಿವೃದ್ಧಿ ಕೆಲಸ, ಪರಿಗಣನೆಗಳಲ್ಲಿ ಶಾಸಕರಿಗೆ ಪಕ್ಷನಿಷ್ಠರು, ಕಾರ್ಯಕರ್ತರಿಗಿಂತ ಹೊರಗಿನವರು ಆಪ್ತರಾಗುತಿದ್ದಾರೆ.

ಇಂಥ ಅನ್ಯಪಕ್ಷಗಳ ನಾಯಕರೊಂದಿಗಿನ ಸಲುಗೆ ಸ್ವಪಕ್ಷದ ಕಾರ್ಯಕರ್ತರ ಅವಗಣನೆ ಕಾರಣ ಬಿ.ಜೆ.ಪಿ.ಕಾರ್ಯಕರ್ತರು ವಿಧಾನಸಭಾಧ್ಯಕ್ಷರಿಗೆ ಈಗಾಗಲೇ ಹಲವುಬಾರಿ ಮಾತುಕತೆಗೆ ಕರೆದಿದ್ದರಂತೆ. ಕಾರ್ಯಕ್ರಮದಲ್ಲಿ ಸ್ವಲಾಭದ ಮಾತನಾಡುವುದು,ನಂತರ ಹೊರಗಿನ ವಲಸೆ ಮುಖಂಡರು,ಅನ್ಯಪಕ್ಷಗಳ, ಹೊರಗಿನ ವ್ಯಕ್ತಿಗಳೊಂದಿಗೆ ಮಾತನಾಡುವ ವಿ.ಹೆಗಡೆ ಸ್ವಪಕ್ಷದ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಾರೆ ಎನ್ನುವ ಆರೋಪಗಳಿವೆ.ಇಂಥ ಅಸಹನೆ,ಅಸಮಾಧಾನ, ಅವಗಣನೆಗಳಿಂದ ಬೇಸತ್ತ ಬಿ.ಜೆ.ಪಿ. ಕಾರ್ಯಕರ್ತರುಬಹಿರಂಗವಾಗಿ ಮಾತುಕತೆಗೆ ಬರುವಂತೆ ಶಾಸಕರನ್ನು ಒತ್ತಾಯಿಸುವ ಹಿಂದೆ ಅನೇಕ ಕಾರಣಗಳು, ಅಸಮಾಧಾನಗಳಿವೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *