
ಅಮಾಸೆ ಹುಡುಗನ ಬಾಯೊಳಗೆ ಕವಳಮನದಲಿ

ತಳಮಳ-ಕಳವಳಮನಸ್ಸು ನಿಗಿನಿಗಿ ಕೆಂಡಮುಖಚರ್ಯೆಯಲಿ ಕುದಿಬಿಂದುಹೃದಯದಲಿ ಮಾನವತೆಇದು ವಿಡಂಬಾರಿ ಕವಿತೆ !
ಆಂತರ್ಯದಲಿ ಗುನುಗುನಿಸಿದ, ಹಂಬಲಿಸಿದ, ಬಯಸಿದಮನುಷ್ಯತ್ವ. .
.ಮಾನವತೆ. . .ಬಂಧುತ್ವಜನಮನದಾಳ ದ್ವೇಷದ ಸಿಕ್ಕು ಬಿಡಿಸುತಬೋಧಿಸಿದನೀತ, ಪ್ರೀತಿಯ ಹೂಗಳ ಅರಳಿಸಿದನೀತ
ಅಕ್ಷರದ ಸಾಂಗತ್ಯ ಇವಗೇಕೆ ಬೇಕು?
ಹೀಗಳೆವರೆನ್ನ ಎನ್ನದೇ, ಬಾಯ್ಬಿಡದೇಬರಸೆಳೆದ ಚಾವಟಿಗೆಯಪಟಾರ್ ಎಂದು ಬೀಸಿದ ಬಿರುಸಿನಲಿಪ್ರಶ್ನಿಸಿದವಗೆ ಬಾಯುತ್ತರ ತಪ್ಪಿಚುಟುಕಿನ ಬಾರೇಟು ಕನ್ನೆತ್ತರು ಗಟ್ಟಿತು
ಅವಮಾನ . . ಅಪಮಾನಗಳ ಮೊಗೆಮೊಗೆದುಸೈರಿಸಿದ ಸಂಚಯಿಸಿದ ಜೋಳಿಗೆಯಲಿ, ಕಂಕುಳ ಪುಸ್ತಕದಲಿಲೇಖನಿಯ ತುದಿ ಮಾತ್ರ ಸವೆಯಲಿಲ್ಲಕಣ್ಣತೇವ ಮಸಿಕುಡಿಕೆಅಕ್ಷಯ ಅಕ್ಷರಕೆ ಸದಾಮುನ್ನುಡಿ ಬರೆಯುತ್ತಲೇ ಹೋದನೀತ! -ಯಮುನಾ ಗಾಂವ್ಕರ್
(ವಿಡಂಬಾರಿಯವರು ಮುಂಡಗೋಡದಲ್ಲಿ ನಡೆದ ಉಕ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದಾಗ)

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
