ಕದಂಬವಂಶ ಈಡಿಗರದ್ದು,ಧರ್ಮ-ಧರ್ಮಗಳ ನಡುವೆ ದ್ವೇಶ ಬಿತ್ತುವವನೇ ದೇಶದ್ರೋಹಿ -ಮಹೇಂದ್ರಕುಮಾರ

ಸಂವಿಧಾನ ಮತ್ತು ಪ್ರಜಾಪ್ರಭುತ್ವಗಳ ಕತ್ತು ಹಿಸುಕಿ ಮತಾಂಧತೆ, ಧರ್ಮಾಧಾರಿತ ಸರ್ವಾಧಿಕಾರವನ್ನು ಜಾರಿಮಾಡುವ ಹುನ್ನಾರ ಪಟ್ಟಭದ್ರರ ಗುರಿಯಾಗಿದ್ದು ಇಂಥವರಿಂದ ದೇಶವನ್ನು ರಕ್ಷಿಸುವ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಹಿರಿಯ ಸಾಹಿತಿ ಮುಕುಂದರಾಜ್ ಹೇಳಿದರು. ಶಿರಸಿಯಲ್ಲಿ ಸೌಹಾರ್ದ ವೇದಿಕೆಯಿಂದ ನಡೆದ ನಾವು ಮತ್ತು ನಮ್ಮ ಸಂವಿಧಾನ ಸಂವಾದ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಮಾತನಾಡಿದ ಅವರು ಬೌದ್ಧಧರ್ಮ,ಲಿಂಗಾಯತ ಧರ್ಮ,ವಿಶ್ವಧರ್ಮವನ್ನು ಕೊಟ್ಟ ಕನ್ನಡ ಸಾಹಿತ್ಯ ರಾಷ್ಟ್ರದ ಶ್ರೇಷ್ಠ ಸಾಹಿತ್ಯ, ಇಂಥ ಸಾಹಿತ್ಯ ರಚಿಸಿದಸಾಹಿತಿಗಳು, ಬುದ್ಧಿಜೀವಿಗಳನ್ನು ಬುದ್ಧಿಜೀವಿಗಳು, ಲದ್ದಿಜೀವಿಗಳು,ಗಂಜಿಗಿರಾಕಿಗಳೆಂದು ಲೇವಡಿಮಾಡುವ ಬೌದ್ಧಿಕ ದಾರಿದ್ರ್ಯದ ಮತಾಂಧರನ್ನು ಬೆಂಬಲಿಸಿ, ಚುನಾಯಿಸುವ ಮೂಲಕ ನಾವು ನಮ್ಮ ನಾಡು,ನುಡಿ,ಸಾಹಿತ್ಯಕ್ಕೆ ಅಪಮಾನಮಾಡುತಿದ್ದೇವೆ ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾಮಾಜಿಕ ಕಾರ್ಯಕರ್ತ ಸುಧೀರ್ ಮೊರಳ್ಳಿ ಮಾತನಾಡಿ ಭಾರತ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನ ಎಲ್ಲರಿಗಾಗಿ ಎಲ್ಲರನ್ನೂಒಳಗೊಳ್ಳುವ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪೌರತ್ವ ತಿದ್ದುಪಡಿ ಕಾಯಿದೆ, ಎನ್.ಆರ್.ಸಿ. ಎನ್.ಆರ್.ಪಿ.ಗುಮ್ಮಗಳನ್ನು ತೋರಿಸುತ್ತಿರುವ ಸರ್ಕಾರ ತನ್ನ ವಿಫಲತೆ, ಅರಾಜಕತೆಯ ಆಡಳಿತದ ವೈಫಲ್ಯ ಮುಚ್ಚಿಕೊಳ್ಳಲು ಈ ಕಾಯಿದೆಗಳ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ ಎಂದರು.

ವೈದಿಕತೆಯ ಮೂಲಕ ಭಾರತೀಯ ಬಹುಸಂಖ್ಯಾತರನ್ನು ಮೂರ್ಖರನ್ನಾಗಿಸಲಾಗುತ್ತಿದೆ. ಭಾರತೀಯ ಮೂಲನಿವಾಸಿಗಳು ಕೋಮುವಾದಿಗಳಿಂದ ದೇಶಪ್ರೇಮದ ಪಾಠ ಕಲಿಯುವ ದುಸ್ಥಿತಿ ನಮಗಿಲ್ಲ ಎಂದು ವಿವರಿಸಿದ ನಮ್ಮ ಧ್ವನಿ ಸಂಸ್ಥಾಪಕ ಮಹೇಂದ್ರಕುಮಾರ ಕೊಪ್ಪ ನಮ್ಮದು ದೇಶ,ಸಮಾಜದ ಪರವಾದ ಶಕ್ತಿ-ಹೋರಾಟ ಎಂದರು.
ದಲಿತರು,ಹಿಂದುಳಿದವರ ಅವಿವೇಕದಿಂದಲೇ ಉತ್ತರಕನ್ನಡದಲ್ಲಿ ಕೋಮುವಾದಿಗಳ ಅಟ್ಟಹಾಸ ನಡೆಯುತ್ತಿದೆ. ಇಂಥ ಷಡ್ಯಂತ್ರಗಳ ಮೂಲಕವೇ ದೇಶವನ್ನು ಭಯಾನಕಗೊಳಿಸಿ ಸರ್ವಾಧಿಕಾರದ ಮೂಲಕ ಬಹುತ್ವ ಹಾಳುಮಾಡುವ ಮತೀಯವಾದಿಗಳ ಕುತಂತ್ರ ದೇಶಕ್ಕೆ ಮಾರಕ
-ಮಹೇಂದ್ರಕುಮಾರ
ಉತ್ತರಕನ್ನಡದಲ್ಲಿಜಾತಿ-ಧರ್ಮ,ಹಿಂದುತ್ವದ ಹೆಸರಲ್ಲಿ 25 ವರ್ಷಗಳಿಂದ ಆಡಳಿತದಲ್ಲಿರುವ ಹೆಗಡೆಗಳು ತಮ್ಮ ಜವಾಬ್ಧಾರಿ ನಿರ್ವಹಿಸಿಲ್ಲ. ಅಪದ್ಧಮಾತನಾಡುವ ಅನಂತಕುಮಾರ ಹೆಗಡೆ, ಅಪ್ರಬುದ್ಧ ನಡವಳಿಕೆಗಳ ಮೂಲಕ ವಿಧಾನಸಭಾಧ್ಯಕ್ಷತೆಯ ಘನತೆಗೆ ಕುಂದು ತಂದಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ನೆಲಕ್ಕೆ ಅವಮಾನ ಮಾಡುತಿದ್ದಾರೆ.
-ಸುಧೀರ್ ಕುಮಾರ ಮೊರಳ್ಳಿ
ಮೇಲ್ವರ್ಗದ ಐತಿಹಾಸಿಕ ಪ್ರಮಾದಗಳಿಂದ ನಮಗೆ ವಿಸ್ಮೃತಿ ಆವರಿಸಿದೆ. ಧೀವರ ಯೋಧರು, ಕೃಷಿಕರನ್ನು ಕಟ್ಟಿಕೊಂಡು ಕದಂಬಸಾಂಮ್ರಾಜ್ಯವನ್ನು ಸ್ಥಾಪಿಸಿದ ಮಯೂರವರ್ಮ ದೀವರ ಕುಲದವನು. ಕದಂಬವೃಕ್ಷವೆಂದರೆ ಈಚಲುಮರ, ಆದರೆ ದೀವರು, ಈಡಿಗರ ಸಾಹಸ, ಕನ್ನಡಸಾಂಮ್ರಾಜ್ಯದ ಹಿರಿಮೆಯನ್ನು ಮರೆಮಾಚಿ ಸಾಹಿತ್ಯ, ಇತಿಹಾಸಕ್ಕೆ ವೈದಿಕತೆಯನ್ನು ಲೇಪಿಸಿದ ಮೇರ್ಲಗ್ವದ ಇತಿಹಾಸಕಾರರು ಭಾರತದ ಇತಿಹಾಸವನ್ನೇ ಕಲುಷಿತಗೊಳಿಸಿದ್ದಾರೆ.
-ಮುಕುಂದರಾಜ್, ಸಾಹಿತಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *