ಮಂಡ್ಲಿಕೊಪ್ಪ ಬಳಿ ಬಂದ ಬಂಧೀಸರ ವನೌಷಧದ ಜನಪ್ರೀಯ ನಡೆ

ಸಿದ್ಧಾಪುರ ಬಂಧೀಸರದ ಅರುಣ ಗೌಡರ್ ನಾಟಿವೈದ್ಯರಾಗಿ ಹೆಸರುಮಾಡುತಿದ್ದಾರೆ.
ಅರುಣ್ ಗೌಡರ್ ಕುಟುಂಬದ ನಾಟಿ ಔಷಧಕ್ಕೂ ಬಿಳಗಿ ಅರಸರ ಕಾಲದ ವನೌಷಧಕ್ಕೂ ಬಾದರಾಯಣ ಸಂಬಂಧವಿದೆ.
300 ವರ್ಷಗಳ ಹಿಂದೆ ಈ ಭಾಗದ ಸಾಮಂತ ಅರಸರಾಗಿದ್ದ ಬಿಳಗಿ ಅರಸರ ಕೊನೆಯ ರಾಜರ ಹೆಂಡತಿ(ರಾಣಿ) ಈ ಮನೆತನದವರು ಎಂಬುದು ಚಾರಿತ್ರಿಕ ದಾಖಲೆ.
ಇಂಥ ಹಿನ್ನೆಲೆಯ ಇವರ ಕುಟುಂಬದ ವನೌಷಧಕ್ಕೆ ಸುಮಾರು ನೂರಾರು ವರ್ಷಗಳ ಇತಿಹಾಸವಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು ಅರುಣ್ ಗೌಡ.
ಬಂಧೀಸರ ಔಷಧ,ಗೌಡರ ನಾಟಿಔಷಧ ಎಂದು ಪ್ರಖ್ಯಾತವಾಗಿರುವ ಬಂಧೀಸರ ಗೌಡರ ಕುಟುಂಬದ ಔಷಧಿಗೆ ವಾಸಿಯಾಗದ ಕಾಯಿಲೆಗಳೇ ಇಲ್ಲ.
ಮೂಲವ್ಯಾಧಿ, ಸಂತಾನಹೀನತೆ,ಸರ್ಪಸುತ್ತು, ಗ್ಯಾಸ್ಟ್ರಿಕ್, ಮಧುಮೇಹ ಬಹುತೇಕ ಎಲ್ಲಾ ತೊಂದರೆಗಳಿಗೆ ಔಷಧಿನೀಡುವ ಬಂಧೀಸರ ಅರುಣ್ ಗೌಡರ್ ವಿಶೇಷವೆಂದರೆ…
ಗೌಡರ್ ಯೋಗ,ಭವಿಷ್ಯ,ಜೋತಿಷ್ಯ ಬಲ್ಲವರು. ನಾಟಿ ಔಷಧಿಗೆ ಜ್ಯೋತಿಷ್ಯ,ಯೋಗಗಳ ನೆರವಿದ್ದರೆ ಉತ್ತಮ ಫಲಶೃತಿ ಎನ್ನುವ ಗೌಡರ್ ಕೃಷಿಕನಾಗಿ ನಾಟಿವೈದ್ಯ,ವನೌಷಧಿ ನೀಡಿಕೆಯಿಂದ ಪ್ರಸಿದ್ಧರಾಗಿದ್ದಾರೆ. ಮೂಲತ: ಕುಣಜಿಯವರಾದ ಬಂಧೀಸರ ಗೌಡರ ಕುಟುಂಬ ಕೃಷಿ,ಉದ್ಯಮ, ಶಿಕ್ಷಣದಿಂದ ರಾಜ್ಯವ್ಯಾಪಿ ನೆಲೆಸಿದ್ದಾರೆ. ಇವರೆಲ್ಲರನ್ನೂ ಪರಿಚಯಿಸುವ ಬಂಧೀಸರ ನಾಟಿಔಷಧಿಗೆ ಅರುಣ್ ಗೌಡರ್ ಮುತ್ತಜ್ಜನವರ ವರೆಗೆ ದಾಖಲೆಇದೆ.
ಪ್ರಸಿದ್ಧರು,ಪ್ರಖ್ಯಾತರು ವಿಶೇಶ ವ್ಯಕ್ತಿಗಳಿಂದ ಹಿಡಿದು ಸ್ಥಳಿಯ ಜನಸಾಮಾನ್ಯರವರೆಗೆ ಎಲ್ಲರಿಗೂ ಪರಿಚಿತವಾಗಿರುವ ಬಂಧೀಸರದ ನಾಟಿ ಔಷಧಿ ಕೋಲಶಿರ್ಸಿ ಬಳಿಯ ಬಂಧೀಸರದಲ್ಲಿ ನೀಡಲಾಗುತಿತ್ತು. ಈಗ ಆಸಕ್ತರ ಕೋರಿಕೆ ಮೇರೆಗೆ ತಮ್ಮ ವಾಸಸ್ಥಾನವನ್ನು ಬಂಧೀಸರದಿಂದ ಶಿರಸಿ ರಸ್ತೆಯ ಮಂಡ್ಲಿಕೊಪ್ಪ ಬಳಿ ವರ್ಗಾಯಿಸಿರುವ ಅರುಣ್ ದೂರದ ಊರುಗಳಿಂದ ಬರುವ ಜನರಿಗೆ ಅನುಕೂಲವಾಗಲಿ ಎಂದು ಈಗ ಮುಖ್ಯರಸ್ತೆಯ ಪಕ್ಕಕ್ಕೇ ಬಂದಿದ್ದೇನೆ ಎನ್ನುತ್ತಾರೆ ಮುಗುಳ್ನಗುತ್ತಾರೆ.
ಗೌಡರ್ ವಾರದ ಗುರುವಾರ ಮತ್ತು ರವಿವಾರ ಔಷಧಿಹುಡುಕಿ ಬರುವ ರೋಗಿಗಳ ಕಾರಣಕ್ಕೆ ಅನ್ಯ ಕೆಲಸ ಒಪ್ಪಿಕೊಳ್ಳುವುದಿಲ್ಲ. ಕೃಷಿ,ಪ್ರವಾಸ ಸೇರಿದ ಉತ್ತಮ ಅಭ್ಯಾಸ,ಹವ್ಯಾಸಗಳ ಅರುಣಗೌಡರ್ ಈಗ ಶಿರಸಿ-ಸಿದ್ಧಾಪುರ ರಸ್ತೆಯ ಸಮೀಪ ವಾಸವಿರುವುದರಿಂದ ಹಿಂದಿನಂತೆ ಪರ ಊರುಗಳಿಂದ ಬರುವ ಜನರಿಗೆ ದಾರಿ ತೋರಿಸುವ ಕೆಲಸ ಕಡಿಮೆಯಾಗಿದೆ ಎನ್ನುವ ಸ್ಥಳಿಯರೊಬ್ಬರು ನೂರಾರು ವರ್ಷಗಳಿಂದ ಔಷಧ ನೀಡುತ್ತಿರುವ ಕುಟುಂಬ ಈಗಲೂ ಈ ಅಭ್ಯಾಸ ಮುಂದುವರಿಸಿಕೊಂಡು ಹೋಗುತ್ತಿರುವುದು ಜನರ ಭಾಗ್ಯ. ಇವರಿಂದ ವನೌಷಧ ಪಡೆದವರು ಸಂತಾನ ಭಾಗ್ಯ ಪಡೆದು ಖುಷಿಹಂಚಿಕೊಂಡಿದ್ದು, ಮಧುಮೇಹ, ಬಿ.ಪಿ. ಕಾಮಲೆಯಂಥ ದೊಡ್ಡರೋಗಗಳನ್ನು ನಿಯಂತ್ರಿಸಿದರೆಂದು ಖುಷಿ ಹಂಚಿಕೊಂಡ ಅನೇಕರನ್ನು ನಾನೇ ನನ್ನ ಕಣ್ಣಾರೆ ನೋಡಿದ್ದೇನೆನ್ನುತ್ತಾರೆ.
ರಸ್ತೆ ಸರಿಯಿಲ್ಲದ ಮೂಲೆಯ ಗ್ರಾಮದಲ್ಲಿ ಉಳಿದು ಅನೇಕರ ಆರೋಗ್ಯ ಸುಧಾರಣೆ, ತೊಂದರೆ ಬಗೆಹರಿಸಿದ ಅರುಣ್ ಗೌಡರ್ ಸರಳತೆ, ಸಹಜ ಜನಹಿತಾಸಕ್ತಿ ಅವರ ನಾಟಿ ವೈದ್ಯಕ್ಕೆ ಮೆರಗು ನೀಡಿದೆ. ನಾಟಿಔಷಧಿಯಿಂದ ಪ್ರಸಿದ್ಧರಾಗಿರುವ ಬಂಧೀಸರದ ಕುಟುಂಬ ಈಗ ಜನರ ಅನುಕೂಲಕ್ಕಾಗಿ ಸಿದ್ಧಾಪುರ-ಶಿರಸಿ ಮಾರ್ಗದ ಮಂಡ್ಲಿಕೊಪ್ಪ ಬಳಿ ನೆಲೆಸಿ ಔಷಧೋಪಚಾರಕ್ಕೆ ಮುಂದಾಗಿರುವುದು ಅವರ ಸಮಾಜಮುಖಿ ನಿಲುವಿನ ಪ್ರತಿಬಿಂಬ. ಆಸಕ್ತರು ಇವರನ್ನು ಸಂಪರ್ಕಿಸಬಹುದಾದ ಚರದೂರವಾಣಿ ಸಂಖ್ಯೆ-9481914555

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *