ಭವ್ಯಭಾರತ ಸಾಗುತ್ತಿರುವ ದಾರಿ ಭಯಹುಟ್ಟಿಸುತ್ತಿದೆಯೆ?

ಅಮೇರಿಕಾದ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡಿ ಮರಳಿದ್ದಾರೆ.
ಟ್ರಂಪ್ ಭಾರತ ಭೇಟಿ ಹಿನ್ನೆಲೆಯ ಉದ್ದೇಶಗಳಲ್ಲಿ ಅಮೇರಿಕಾದಲ್ಲಿರುವ ಭಾರತೀಯ ಮತದಾರರ ಓಲೈಕೆ ಹಾಗೂ ಯುದ್ಧಾಸ್ತ್ರಗಳು ಸೇರಿದಂತೆ ಅಮೇರಿಕಾಕ್ಕೆ ವ್ಯಾಪಾರಿ ಲಾಭ ಮಾಡುವ ಉದ್ಧೇಶ ಎನ್ನಲಾಗುತ್ತಿದೆ. ಭಾರತದಲ್ಲಿ ಮೋದಿ ನೇತೃತ್ವದಲ್ಲಿ ಎನ್.ಡಿ.ಎ. ಸರ್ಕಾರಗಳ ಆರಂಭ ಕಾಲದಿಂದಲೂ ಈ ಸರ್ಕಾರಗಳಿಗೆ ಬಂಡವಾಳಶಾಹಿ ಅಮೇರಿಕಾ ಮೇಲೆ ಪ್ರೀತಿ ಯಾಕೆಂದರೆ, ಭಾರತದಲ್ಲಿ ಮೋದಿ ಮತ್ತವರ ಪರಿವಾರ ಮಾಡುತ್ತಿರುವ ಉಳ್ಳವರ ಓಲೈಕೆಯ ಬಂಡವಾಳಶಾಹಿ, ಧಾರ್ಮಿಕ ರಾಷ್ಟ್ರೀಯತೆಯ ಕೋಮುವಾದಿ ಕಾರ್ಯಾಚರಣೆಗಳಿಗೂ ಟ್ರಂಪ್ ನೀತಿಗಳಿಗೂ ಸಾಮ್ಯತೆಗಳಿವೆ.
ಅಮೇರಿಕಾ ಬಹಿರಂಗವಾಗಿ ಭಾರತವನ್ನು ಓಲೈಸಿ, ಹಿಂದಿನಿಂದ ಪಾಕಿಸ್ತಾನಕ್ಕೆ ಬೆಂಬಲಿಸುತ್ತಿರುವ ಅಂಶ ಬಹಿರಂಗ ಗುಟ್ಟು ಆದರೆ ಜನಸಾಮಾನ್ಯರ ವಿರೋಧಿ ಕಾರ್ಯಾಚರಣೆಯ ಮೋದಿ ಮತ್ತು ಟ್ರಂಪ್ ಚಲನೆಗಳ ಹಿಂದೆ ಅಭಿವೃದ್ಧಿ-ಸಂಬಂಧಗಳ ಸುಧಾರಣೆಯ ನೆಪದ ಆಂತರಿಕ ಸಮಾನ ಹಿತಾಸಕ್ತಿಗಳ ಕಾರಣಎಂಬುದನ್ನು ಭಾರತೀಯರು ಮರೆಯಬಾರದು.
ಟ್ರಂಪ್ ಭೇಟಿಯ ನಂತರ ದೆಹಲಿಯ ಇಶಾನ್ಯ ಭಾಗದಲ್ಲಿ ಕೋಮುಗಲಭೆಗಳಾಗಿವೆ. ಇದರಲ್ಲಿ ಜೀವತೆತ್ತವರ ಸಂಖ್ಯೆ 50 ರ ಹತ್ತಿರ. ರಾಷ್ಟ್ರದ ರಾಜಧಾನಿಗೆ ನಯವಾಗಿ ವಂಚಿಸುವ ಮತೀಯವಾದಿಗಳು, ಅವರನ್ನು ಎದುರಿಸಲಾಗದ ಮೃಧು ಹಿಂದುತ್ವವಾದಿಗಳು ಅಧಿಕಾರದ ಗದ್ದುಗೆ ಏರಲಿಲ್ಲದ ಖುಷಿಯ ನಂತರ ಪ್ರಾರಂಭವಾಗಿರುವ ಕೋಮುಗಲಭೆ ಕೇಂದ್ರದ ಆಡಳಿತ ಪಕ್ಷದ ಮತ್ತವರ ಪರಿವಾರದ ಸೃಷ್ಟಿ ಎನ್ನುವುದಕ್ಕೆ ಬಿ.ಜೆ.ಪಿ. ಮುಖಂಡರು ನೀಡಿರುವ ಹೇಳಿಕೆಗಳು,ಅವರ ಪರಿವಾರ ನೇರವಾಗಿ ಹಲ್ಲೆಯಲ್ಲಿ ಪಾಲ್ಗೊಂಡಿರುವ ಸಾಕ್ಷಿಗಳೇ ದಾಖಲೆ.
ಮತೀಯವಾದಿಗಳು ಜನರನ್ನು ದಿಕ್ಕುತಪ್ಪಿಸುವುದು, ಖರೀದಿಸುವುದು ನಂತರ ಹಿಂಸೆಯ ಮೂಲಕ ಹೆದರಿಸುವ ತಮ್ಮ ಕುಟಿಲನೀತಿಗಳನ್ನು ದೆಹಲಿಯಲ್ಲಿ ಜಾರಿ ಮಾಡುತ್ತಿರುವ ಬಗ್ಗೆ ಅವರ ಪರಿವಾರದವರೇ ಒಪ್ಪಿಕೊಂಡಿರುವ ಸತ್ಯ ಸಾಕ್ಷಿ.
ದೆಹಲಿಯಿಂದ ಪ್ರಾರಂಭವಾಗಿ ದೇಶದಾದ್ಯಂತ ರಾಷ್ಟ್ರೀಯವಾದ, ದೇಶಭಕ್ತಿ ಹೆಸರಲ್ಲಿ ಯಾರು ಕಾನೂನನ್ನು ಕೈಗೆತ್ತಿಕೊಂಡು ಶಾಂತಿ-ಸುವ್ಯವಸ್ಥೆ ಹಾಳು ಮಾಡುತಿದ್ದಾರೆ ಎನ್ನುವುದಕ್ಕೆ ಸಾಕ್ಷಿಗಳೆಂದರೆ….. ಅಂಗೈ ಹುಣ್ಣಿಗೆ ಕನ್ನಡಿ ಕೇಳಿದಂತೆ.
ಇದರ ಹಿಂದೆ ಲಾಭಕೋರ ಪರಿವಾರದ ನಯವಂಚನೆಯ ಅಧಿಕಾರ ಚಪಲದ ಕಾರ್ಯಸೂಚಿ,ಕಾರ್ಯಾಚರಣೆಗಳು ಕಾರಣ ಎನ್ನುವುದಕ್ಕೆ ಅವರಿಂದ ನಿರ್ಧೇಶಿತವಾದ ಕೇಂದ್ರ ಸರ್ಕಾರ ಮಾಡುತ್ತಿರುವ ಜನವಿರೋಧಿ ಕಾನೂನು, ಜನವಿರೋಧಿ ಕಾರ್ಯಕ್ರಮಗಳೇ ಸಾಕ್ಷಿ.
ಈ ಸರ್ಕಾರ ಜಾರಿಮಾಡುತ್ತಿರುವ ಕಾನೂನಿನ ಹಿಂದೆ ಜನರ ಪ್ರತಿರೋಧ, ಆಡಳಿತ ವಿರೋಧಿ ಅಭಿಮತ ಮರೆಮಾಚುವ ಹುನ್ನಾರಗಳನ್ನು ಅಲ್ಲಗಳೆಯುವಂತಿಲ್ಲ. ಎರಡು ಅವಧಿಗಳ ಎನ್.ಡಿ.ಎ. ಆಡಳಿತದಲ್ಲಿ ಭಾರತದ ಆರ್ಥಿಕತೆ, ಆಂತರಿಕ ಉತ್ಫನ್ನ ಸುಧಾರಿಸಿದ ಕುರುಹುಗಳಿಲ್ಲ. ಅವ್ಯವಸ್ಥೆ, ಗಲಭೆ ಶ್ರೀಮಂತರ ಓಲೈಕೆಯಿಂದ ಸಾರ್ವಜನಿಕ ಜನಜೀವನ ಮತ್ತಷ್ಟು ದುರ್ಬರವಾಗಿ ಮಾಡಿರುವ ಹಿಂದೆ ಪ್ರಧಾನಿ ಮೋದಿ ಮತ್ತವರ ಸರ್ಕಾರಗಳ ವಿಫಲತೆ ಕಣ್ಣಿಗೆ ರಾಚುವಂತಿದೆ.
ಈ ಸಂದಿಗ್ಧ ಸ್ಥಿತಿಯಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾಂಗ್ರೆಸ್ ಆಡಳಿತ ಸರ್ಕಾರದ ವಿರುದ್ಧ ಜನಸಾಮಾನ್ಯರ ಪರವಾಗಿ ಕೆಲಸಮಾಡುವ ಧೈರ್ಯ ತೋರುತ್ತಿಲ್ಲ. ಇಂಥ ಪ್ರತಿರೋಧವಿರಬಾರದೆನ್ನುವ ಕಾರಣಕ್ಕೇ ಮೋದಿ ನಿಯಂತ್ರಿಸುವ ಪರಿವಾರ ಉಪಾಯದಿಂದ ದೇಶದ ಜಾತ್ಯಾತೀತ, ಪ್ರಾದೇಶಿಕ ಶಕ್ತಿಗಳು, ವ್ಯಕ್ತಿಗಳು, ಪಕ್ಷಗಳನ್ನು ನಿರ್ನಾಮ ಮಾಡುತ್ತಿದೆ. ಇದರ ಹಿಂದಿರುವ ಸಂಘದ ಪಿತೂರಿಯ ಭಾಗವಾಗೇ ಶ್ರೀಮಂತ ಟ್ರಂಪ್ ಭಾರತಕ್ಕೆ ಭೇಟಿ ನೀಡಿ ಇಲ್ಲಿಯ ವ್ಯವಸ್ಥೆಗಳನ್ನು ಹೊಗಳುತ್ತಾರೆ.
ಮುಂದಿನ ಸರದಿ ಮೋದಿ ಅಮೇರಿಕಾಕ್ಕೆ ತೆರಳಿ ಅಲ್ಲಿಂದ ತಮ್ಮ ಸಂಘದ ಶ್ರೀಮಂತರು, ಪಟ್ಟಭದ್ರರ ಉಳ್ಳವರ ಓಲೈಕೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಇಮೇಜ್ ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡುವುದು. ಈ ಕುಟಿಲ ತಂತ್ರಗಳಿಗೆ ಹಿನ್ನೆಲೆಯಾಗಿ ಜನತಂತ್ರ ನಿಯಂತ್ರಿಸುವ ಪಟ್ಟಭದ್ರರ ಸಂಘ ಹಿಂದೆ ಇಟಲಿ,ಅಮೇರಿಕಾ ಸೇರಿದಂತೆ ಕೆಲವು ಶ್ರೀಮಂತರಾಷ್ಟ್ರಗಳ ನೆರವು-ಸಹಾಯ ಪಡೆದ ಹಿನ್ನೆಲೆ ಇದೆ.
ಭಾರತದಲ್ಲಿ ಇಡೀ ವ್ಯವಸ್ಥೆಯನ್ನು ಪಟ್ಟಭದ್ರಸಂಘದ ಕಪಿಮುಷ್ಟಿಗೆ ಒಪ್ಪಿಸಿದರೆ ಅವರು ತಮ್ಮ ಕಾರ್ಯಸೂಚಿಯಂತೆ ಅಮೇರಿಕಾ ಪ್ರೇರಿತ ಶ್ರೀಮಂತರ ಪರವಾಗಿನ ವ್ಯವಸ್ಥೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯುತ್ತಾರೆ. ಇಂಥ ಷಡ್ಯಂತ್ರ-ಕುಟಿಲ ಉಪಾಯಗಳ ಹಿನ್ನೆಲೆಯಲ್ಲಿ ಟ್ರಂಪ್ ಓಲೈಕೆ, ಮುಸ್ಲಿಂದ್ವೇಶ, ರಾಜಧಾನಿ ಸೇರಿದಂತೆ ತಮ್ಮ ಮಿತಿಯಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಡಿಸುವ ಪ್ರಯತ್ನಕ್ಕೆ ಸಂಘ ಕೈಜೋಡಿಸಿದೆ.
ಇದರ ಇನ್ನೊಂದು ಮುಖವೆಂದರೆ… ಪಾಕಿಸ್ತಾನಕ್ಕೆ ಜೈ ಎನ್ನುವ ವ್ಯಕ್ತಿಗಳನ್ನು ವಿರೋಧಿಸುತ್ತಾ ದೇಶದ ರಕ್ಷಣಾ ಪಡೆಯಿಂದಲೇ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ ಅಧಿಕಾರಿಗಳು,ದೇಶದ್ರೋಹಿಗಳನ್ನು ರಕ್ಷಿಸುವುದು. ಪಾಕಿಸ್ಥಾನದ ಪರ ಘೋಷಣೆ ಕೂಗುವವರು ಪಾಕಿಸ್ಥಾನಕ್ಕೆ ಮಾಹಿತಿ ನೀಡಿ ದೇಶದ ರಹಸ್ಯ ರವಾನಿಸುವವರಿಗಿಂತ ಕೆಟ್ಟವರು, ದುಷ್ಟರು, ದ್ರೋಹಿಗಳಾಗಿ ಕಾಣುವುದು ಸಂಘದ ಮತಾಂಧತೆಯ ಮನಸ್ಥಿತಿ. ಕೋಮುವಾದಿಗಳು, ಉಳ್ಳವರ ಪರವಾಗಿರುವವರ ಸಂಘ- ಪರಿವಾರಗಳಿಗೆ ದೇಶದ ಗಡಿ ಮಹತ್ವದೆನ್ನಿಸುತ್ತದೆಯೇ ಹೊರತು ದೇಶವಾಸಿ, ಬಹುಸಂಖ್ಯಾತ ಜನಸಾಮಾನ್ಯರು ಪ್ರಮುಖರಾಗಿ ಕಾಣುವುದೇ ಇಲ್ಲ.
ಈ ಮನಸ್ಥಿತಿ ಶ್ರೀಮಂತ ದೇಶದ ಟ್ರಂಪ್ ನನ್ನು ಓಲೈಸುತ್ತಲೇ ದೆಹಲಿಯಲ್ಲಿ ಬೆಂಕಿ ಹೊತ್ತಿಸುತ್ತದೆ. ದೇಶದ ಆದಾಯ, ವರಮಾನವನ್ನು ಕಬಳಿಸುತ್ತದೆ. ಈ ತಪ್ಪುಗಳ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳೆಂದು ಬಿಂಬಿಸುವ ವಾಸ್ತವದ ಹಿಂದೆ ಜನವಿರೋಧಿ ಆಡಳಿತ, ಜನವಿರೋಧಿ ಅಭಿರುಚಿ ರಕ್ಷಿಸಿಕೊಳ್ಳುವ ಉಳ್ಳವರ ಹಿತ ಅಡಗಿರುತ್ತದೆ.
ಈ ವ್ಯವಸ್ಥೆ ಪೋಶಿಸಿ ಹೊಡೆತ ತಿನ್ನುತ್ತಿರುವ ಭಾರತೀಯ ಈ ಕುಟಿಲಪರಿವಾರದ ವಿರುದ್ಧ ಸಂಘಟಿತರಾಗುತ್ತಿರುವುದು ಒಳ್ಳೆಯ ಲಕ್ಷಣ. ದೇಶ ಪ್ರಕಾಶಿಸಲಿಲ್ಲ, ಉತ್ತಮ ದಿನಗಳು ಬರಲಿಲ್ಲ, ಭಾರತೀಯರ ಸ್ಥಿತಿ-ಗತಿ ಸುಧಾರಿಸಿಲ್ಲ. ಈ ಅವ್ಯವಸ್ಥೆಗಳ ಹಿಂದೆ ಕಟ್ಟರ್ ಮತೀಯವಾದಿಗಳು ಹಾಗೂ ಈ ವ್ಯವಸ್ಥೆ ಪೋಶಿಸುವ ಮೃಧು ಮತಾಂಧರ ಕೊಡುಗೆಗಳೂ ಇವೆ. ಇವುಗಳನ್ನು ಅರ್ಥಮಾಡಿಕೊಳ್ಳಲು ಬಹಳ ದಿನ, ದೂರ ಕಾಯುವ ಅಗತ್ಯವಿಲ್ಲ ಎನ್ನುವುದೊಂದೇ ಶುಭಸೂಚನೆ.

ಹೊಸೂರುಶಾಲೆಯ ಗೃಹಣಕ್ಕೆ ಶೆಟ್ಟರ ತಾತ್ಕಾಲಿಕ ಪರಿಹಾರದ ಅಭಯ
ಸಿದ್ಧಾಪುರ ಹೊಸೂರು ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ ಬಂದ ಅನುದಾನವನ್ನು ಹಳೆ ಕೊಠಡಿಗಳ ದುರಸ್ಥಿಗೆ ಬಳಸಿಕೊಳ್ಳಲು ಅನುಮತಿ ನೀಡಲು ಜಿ.ಪಂ. ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡುವುದು ಮತ್ತು 5 ಹೊಸ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಕೋರಿ ಸಂಬಂಧಿಸಿದವರಿಗೆ ಪತ್ರ ಬರೆಯುವ ಮೂಲಕ ಹೊಸೂರು ಹಿರಿಯ ಪ್ರಾಥಮಿಕ ಶಾಲೆಯ ಅನಿವಾರ್ಯತೆಗಳಿಗೆ ಸ್ಫಂದಿಸಲು ನಿರ್ಧರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ಧೇಶಕ ದಿವಾಕರ ಶೆಟ್ಟಿ ತಿಳಿಸಿದರು.
ಪ್ರಾಚ್ಯವಸ್ತು ಇಲಾಖೆಯ ನೀತಿ-ನಿಯಮಗಳಿಂದ ತೊಂದರೆಗೊಳಗಾಗಿರುವ ನಗರದ ಹೊಸೂರು ಹಿರಿಯ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

Latest Posts

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂದರ್ಭಿಕ ಚಿತ್ರ‌ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆಗಳಲ್ಲಿ ನಿರಂತರ ಮಳೆಯಾಗಿದೆ. ಇದರ ಪರಿಣಾಮ ಶಿರಸಿ-ಅಂಕೋಲಾ ಮಾರ್ಗದ ಮಧ್ಯೆ ಗುಡ್ಡ...

Recommended For You

About the Author: Kanneshwar Naik

Leave a Reply

Your email address will not be published. Required fields are marked *