ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ಕೃಷಿಯಲ್ಲಿ ಖುಷಿ ಕಾಣುತ್ತಿರುವ ಸಿದ್ಧಾಪುರದ ಯುವಕರು

ಕೃಷಿ-ಖುಷಿ-
ಕೃಷಿಯಲ್ಲಿ ಸಾಧನೆ ಮಾಡಬೇಕೆಂದು ಬಯಸುವ ವಿರಳ ಯುವಕರಲ್ಲಿ ತಾಲೂಕಿನ ಹೆಮಟೆಮನೆಯ ಎಚ್.ಎಲ್. ವೇಣು ಮತ್ತು ಬೇಡ್ಕಣಿಯ ಜಯಪ್ರಕಾಶ ನಾಯ್ಕ ಪ್ರಮುಖ ಯುವಕರಾಗಿದ್ದಾರೆ.

ವೇಣು ಬಿದ್ರಕಾನ ಹೆಮಟೆಮನೆಯ ಯುವಕ. ಜನಾನುರಾಗಿಯಾಗಿದ್ದ ಇವರ ತಂದೆ ಎಲ್.ಕೆ.ಹೆಗಡೆ ಅಕಾಲಿಕವಾಗಿ ಮರಣ ಹೊಂದಿದ ನಂತರ ಬಿ.ಕಾಂ. ಪದವಿ ನಂತರ ಕೃಷಿಯಲ್ಲಿ ತೊಡಗಿಕೊಂಡರು. ಆಧುನಿಕ ಕೃಷಿ, ಹೊಸಪ್ರಯೋಗ ಎನ್ನದೆ ತಮ್ಮ ತೋಟದಲ್ಲಿ ಹಿಂದಿನಿಂದ ಇದ್ದ ಕಾಫಿ,ಅಡಿಕೆ, ಕಾಳು ಮೆಣಸು ಬೆಳೆಯುತ್ತಾ,ಪಶುಸಂಗೋಪನೆಯಲ್ಲಿಯೂ ಮುಂದುವರಿದರು.
ಪದವಿನಂತರ ಮಹಾನಗರ ಸೇರದೆ ಕುಟುಂಬದ ಜವಾಬ್ಧಾರಿ ಹೊತ್ತ ವೇಣು ಸ್ಥಳಿಯ ಸೇವಾ ಸಹಕಾರಿ ಸಂಘದ ಯುವ ಸದಸ್ಯರಾಗಿ ಸಾಂಪ್ರದಾಯಿಕ ಕೃಷಿ ಮಾಡುತ್ತಾ ಕೃಷಿಯಲ್ಲೇ ಖುಷಿ ಕಂಡಿದ್ದಾರೆ.
ಇವರ ತಂದೆ ಹಿಂದೆ ಕೃಷಿಯೊಂದಿಗೆ ಸ್ಥಳಿಯ ಸಾಮಾಜಿಕ ಜವಾಬ್ಧಾರಿ ನಿರ್ವಹಿಸುತ್ತಲೇ ಧಾರವಾಡದ ಕೆ.ಎಂ.ಎಫ್. ನಿರ್ಧೇಶಕರಾಗಿದ್ದರು. ತಂದೆಯಂತೆಯೇ ಮಗ ವೇಣು ಕೂಡಾ ಕೃಷಿ, ಕೌಟುಂಬಿಕ ಜವಾಬ್ಧಾರಿ, ಸೇವಾ ಸಹಕಾರಿ ಸಂಘ ದ ಮೂಲಕ ಯುವಕರು ಹಳ್ಳಿಯಲ್ಲಿದ್ದೂ ಪೇಟೆಯಲ್ಲಿರುವವರಂತೆಯೇ ಖುಷಿಯಾಗಿ ಸಂತೃಪ್ತ ಜೀವನ ಮಾಡಬಹುದೆನ್ನುವುದಕ್ಕೆ ದೃಷ್ಟಾಂತವಾಗಿದ್ದಾರೆ.
ಜಯಪ್ರಕಾಶ ನಾಯ್ಕ-
ಬೇಡ್ಕಣಿಯ ಜಯಪ್ರಕಾಶ ನಾಯ್ಕ ತಾಲೂಕಿನ ಯುವ ರೇಷ್ಮೆ ಬೆಳೆಗಾರರಾಗಿ ತಾಲೂಕಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇರುವ ಒಂದೆರಡು ಎಕರೆ ಭೂಮಿಯಲ್ಲಿ ರೇಷ್ಮೆ,ಅಡಿಕೆ,ಭತ್ತ ಬೆಳೆಯುತ್ತಿರುವ ಜಯಪ್ರಕಾಶ ಸಾಂಪ್ರದಾಯಿಕ ರೇಷ್ಮೆ ಜೊತೆಗೆ ಹೊಸ ತಳಿ ಪರಿಚಯಿಸುತ್ತಾ ತಾಲೂಕಿನ ಯುವ ಕೃಷಿಕ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ರೈತ ಕುಟುಂಬದ ಜಯಪ್ರಕಾಶ ಚಿಕ್ಕ ವಯಸ್ಸಿನಲ್ಲಿಯೇ ಕೃಷಿ-ಕೌಟುಂಬಿಕ ಜವಾಬ್ಧಾರಿ ವಹಿಸಿಕೊಂಡವರು. ರೇಷ್ಮೆಯಲ್ಲಿ ಖಾಸಗಿ ಕಂಪನಿಗಳ ಸಹಭಾಗಿತ್ವದ ಯೋಜನೆಯ ಸಿದ್ಧಾಪುರ ತಾಲೂಕಿನ ಪ್ರವರ್ತಕರು. ಕೃಷಿ- ಕುಟುಂಬಗಳ ವೈಯಕ್ತಿಕ ಜವಾಬ್ಧಾರಿಯ ಜೊತೆಗೆ ಬೇಡ್ಕಣಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮೀತಿ ಅಧ್ಯಕ್ಷರಾಗಿ ಕೆಲಸಮಾಡುತ್ತಾ ಶಾಲೆಯನ್ನು ಉತ್ತಮ ಶಾಲೆಯನ್ನಾಗಿಸಲು ಅಳಿಲು ಸೇವೆ ಸಲ್ಲಿಸುತಿದ್ದಾರೆ. ಕೃಷಿ,ವ್ಯಾಪಾರ, ಗ್ರಾಮದ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮೀತಿಯ ಅಧ್ಯಕ್ಷರಾಗಿ ಆಸಕ್ತಿಯಿಂದ ಕೆಲಸಮಾಡುತ್ತಿರುವ ಇವರ ಅಭಿರುಚಿ ಆಸಕ್ತಿಗಳಿಗೆ ಅವರ ಕೃಷಿ ಸಾಧನೆ ಮತ್ತು ಶಾಲೆಯ ವಿಭಿನ್ನ ಪ್ರಯೋಗಗಳೇ ಸಾಕ್ಷಿ.
ಕೃಷಿಯನ್ನು ಆಸಕ್ತಿಯಿಂದ ಮಾಡಿದರೆ ಅದು ಬದುಕುಕೊಡಬಹುದೆಂಬುದಕ್ಕೆ ಬಿದ್ರಕಾನ ವಿ.ಎಸ್.ಎಸ್. ನಿರ್ದೇಶಕ ವೇಣು ಮತ್ತು ಬೇಡ್ಕಣಿ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮೀತಿ ಅಧ್ಯಕ್ಷ ಜಯಪ್ರಕಾಶ ಮಾದರಿ. ಇಂಥ ಯುವಕರು ಇತರರಿಗೂ ಮಾದರಿ ಎಂದರೆ ಅತಿಶಯೋಕ್ತಿಯಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *