ಮನುಪುರರ ಕವನ- ಹಂಬಲ


ನಾ ಸುರಿವ ಮಳೆಯಾಗಿದ್ದರೆಮುಗಿಲಿನಿಂದ ಬೀಳುವಾಗಎದೆಯ ತಟ್ಟಿ, ಹೆಮ್ಮೆಯಿಂದಕೂಗಿ ಹೇಳುತಿದ್ದೆ ,ನನಗೆ ಯಾವುದೇ ಜಾತಿ ಇಲ್ಲವೆಂದು !
ನಾ ಹರಿವ ನೀರಾಗಿದ್ದರೆ,ಉಚ್ಚರ ,ಶ್ವಪಚರ ಮೈಯ್ಯಉಜ್ಜಿ ಉಜ್ಜಿ ತೊಳೆದು,ಇಬ್ಬರ ಕೊಳೆಯ ಜಗಕೆ ತೋರಿ ಸಾಬೀತು ಮಾಡುತಿದ್ದೆಶ್ರೇಷ್ಟತೆಯು  ಹಸಿ ಸುಳ್ಳೆಂದು !
ನಾ ಬೀಸುವ ಗಾಳಿಯಾಗಿದ್ದರೆಉಸಿರಾಡುವಾಗಲಾದರುಒಮ್ಮೆ ಬೆದರಿಕೆಯೊಡ್ಡಿ !ಮನದಟ್ಟು ಮಾಡಿಬಿಡುತಿದ್ದೆ.ಮಾನವತೆಗೂ  ಮಿಗಿಲಾದಯಾವುದೆ “ಧರ್ಮ”ವಿಲ್ಲವೆಂದು!
ನಾ ಸುಡುವ ಬೆಂಕಿಯಾಗಿದ್ದರೆಕಲಿಯುಗದ  ಮುಸುಡಿಗೆಕಪ್ಪುಮಸಿಯಂತಂಟಿರುವಲಿಂಗ ಭೇದದ ಮುಸುಕಹಾಗೆ ಕಿತ್ತರವಿಬಿಡುತಿದ್ದೆ ಸುಟ್ಟು ಬೂದಿ ಮಾಡಲೆಂದು 
ನಾ ಉರಿವ ದೀಪವಾಗಿದ್ದರೆಒಮ್ಮೆಯೂ ಆರದೆಎಲ್ಲರ ಎದೆಯೊಳಗೆ ಪ್ರಕಾಶ ಮಾನವಾಗಿಉರಿದುಬಿಡುತಿದ್ದೆಪ್ರೀತಿಯ ಬೆಳಕ ಶಾಶ್ವತವಾಗಿ ಹಂಚಲೆಂದು 
ನಾ ಅಳುವ ಮಗುವಾಗಿದ್ದರೆಬೆಳವಣಿಗೆಯ ದಿಕ್ಕರಿಸಿಜೋರಾಗಿ ಅಳುತ ಖುಷಿಯ ಪಡುತತಾಯ್ಮಡಿಲಲಿ ಬೆಚ್ಚನೆ ಮಲಗಿಬಿಡುತಿದ್ದೆಮಲಿನವಾಗದೆಮಗುವಾಗಿಯೆ ಉಳಿಯಲೆಂದು ಮೊ ದಲು ಮನುಜನಾಗಲೆಂದು

-ಮನುಪುರ

ಜುಗಾರಿಕ್ರಾಸ್ ಮತ್ತು ಕೋರೋನ.

 ಜುಗಾರಿಕ್ರಾಸ್ ……ಮೈಮನಗಳನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಂಡು ತನ್ನನ್ನು ತಾನೇ ಓದಿಸಿಕೊಂಡು ಹೋಗುವಂತ ಕಾದಂಬರಿ .ಅದರಲ್ಲೂ ಮಧ್ಯರಾತ್ರಿಯ ನೀರವತೆಯಲ್ಲಿ ಜುಗಾರಿಕ್ರಾಸ್ನ್ ಕೌತುಕದೊಳಗೆ ನುಸುಳುವುದು ನಿಜಕ್ಕೂ ಮೈ ಜುಮ್ಮೆನ್ನಿಸುವ ಅನುಭವ.ಯಾವುದೇ ಪಾತ್ರವನ್ನು ,ಘಟನೆಯನ್ನು,ಸನ್ನಿವೇಶವನ್ನು,ಅತ್ಯಾಕರ್ಷಕ ವಾಗಿ ರೋಚಕವಾಗಿ ನಮ್ಮ ಮನ ಮುಟ್ಟುವಂತೆ , ನಮ್ಮದೇ ಅನುಭವವೇ ಎನ್ನುವಂತೆ ಕಟ್ಟಿಕೊಡುವುದು  ಬಹುಶಃ ತೇಜಸ್ವಿಯವರಂತ ಮಹಾನ್ ಚೇತನದಿಂದ ಮಾತ್ರ ಸಾಧ್ಯ ಎನಿಸುತ್ತದೆ.
ಫಾರೆಸ್ಟರ್ ನ  ಲಂಚಗುಳಿತನ ಹೂ ಮಾರುವ ಹುಡುಗಿಯ ಸಹಜ ಮುಗ್ಧತೆ , ಸಮಾಜದ ಕ್ರೌರ್ಯ ,ಸುರೇಶ ಮತ್ತು ಗೌರಿಯ ಹುಚ್ಚು ಮನಸ್ಥಿತಿಗಳು ,ಶಾಸ್ತ್ರಿ, ಕುಟ್ಟಿ ,ದೌಲತ್ ರಾಮ್ ನಂತ ಕಳ್ಳರು , ರಾಜಪ್ಪನಂತ ಸ್ನೇಹಿತ , ಕುಂಟರಾಂ ಮತ್ತು  ಶೇಷಪ್ಪ ನಂತ    ಆಪದ್ಬಾಂದವರು, ಕ್ರಾಂತಿಕಾರಿ ಗಂಗೂಲಿ ಇನ್ನಿತರರ ಜೊತೆ ,ಗುರುರಾಜ ಕವಿಯ ದ್ವಿಮುಖ ಸಂದಾನ ಕಾವ್ಯದೊಳಗೆ  ಕಳೆದುಹೋದ ಆ ರತ್ನಮೂಲ ಪದದಂತೆ    ನಾವೂ ಸಹ ಜುಗಾರಿಕ್ರಾಸ್ ನ  ಮಾಯಾಬಜಾರ್ ನಲ್ಲಿ ಕಳೆದು ಹೋಗಿಬಿಡುತ್ತೇವೆ. 
ಗೌರಿ ಮತ್ತು ಸುರೇಶ ಜುಗಾರಿ ಕ್ರಾಸ್ ನ ಕುತೂಹಲಕ್ಕೆ ಸಿಕ್ಕಂತೆ ನಾವು ನೀವುಗಳು ಸಹ ಇಂದು corona ಎಂಬ ಮಹಾಮಾರಿ ಕುತೂಹಲಕ್ಕೆ ಬಲಿಯಾಗುತಿ ದ್ದೇವೆ . ಕುಟ್ಟಿ ದೌಲಟ್ ರಾಮ್ ನಂತೆ ಹೊರದೇಶದಿಂದ ಬಂದವರು ನಮ್ಮನ್ನು ಆ ಸರಪಳಿಯೊಳಗೆ ನಮಗೇ ಅರಿವಿಲ್ಲದಂತೆ ಸಿಲುಕಿಸಿ ಬಿಟ್ಟಿದ್ದಾರೆ. corona ಎಂಬ ಸುಪಾರಿ ಕಿಲ್ಲರ್ ಯಾಮಾರಿಸಿಇಲ್ಲಿ ನಮಗೆ ನೆರವಾಗಲು ಯಾವ ಕುಂಟರಾಮ ಯಾವ ಶೇಷಪ್ಪ ನು ಬರಲಾರ.
ಗೌರಿ ಮತ್ತು ಸುರೇಶ ಚಲಿಸುತ್ತಿರುವ ರೈಲಿನಿಂದ ಸುರಂಗದೊಳಗೆ ನೆಗೆದು ಜೀವ ಉಳಿಸಿ ಕೊಂಡಂತೆ ಇಂದು ನಾವು ಚಲಿಸುತ್ತಿರುವ ಬದುಕಿನಿಂದ ಮನೆಯೊಳಗೆ ನೆಗೆದು ಜೀವ ಉಳಿಸಿ ಕೊಳ್ಳಬೇಕಿದೆ. ಸುರೇಶ ತನ್ನ ಉಳಿವಿಗಾಗಿ ತನ್ನ ಸ್ನೇಹಿತ ರಾಜಪ್ಪನನ್ನು ಅನುಮಾನಿಸುವಂತೆ  ಈ corona ದೆಸೆಯಿಂದ ನಾವಿಂದು ನೆಂಟರನ್ನು ಸ್ನೇಹಿತರನ್ನು ಅನುಮಾನಿಸಿ ದೂರ ಉಳಿಯ ಬೇಕಿದೆ .ಹಣ ಐಶಾರಾಮ್ಯದ ಅಮಲಿಂದೆ   ಓಡುತಿದ್ದ ನಮಗೆ corona ದಂತ ಕಿಲ್ಲರ್ ಗಳು ಬೆನ್ನತ್ತಿ ಅವುಗಳ ಬಗ್ಗೆ ಇದ್ದ ವ್ಯಾಮೋಹವನ್ನು ಒದ್ದೋಡಿಸಿ ಬಿಟ್ಟಿವೆ . ಗೌರಿ ಮತ್ತು ಸುರೇಶನಂತೆ ಈ ಎಲ್ಲಾ ಗೊಂದಲಗಳಿಂದ ಹೊರಬಂದು ಜೀವ ಉಳಿದರೆ ಸಾಕು ಎನ್ನುವಂತಾಗಿದೆ.
ಸುರೇಶ ಮತ್ತು ಗೌರಿ ತಮಗೆ ತಿಳಿಯದೆ ಮಾದಕ ಪದಾರ್ಥ ಸಾಗಿಸಿದಂತೆ ಇಂದು ಎಷ್ಟೋ ಮಂದಿ ತಮಗೆ ಅರಿವಿಲ್ಲದೆ corona ವೈರಸ್ ಸಾಗಿಸುತ್ತಿದ್ದಾರೆ.ತಿಳಿದೋ ತಿಳಿಯದೆಯೋ  ದೇವಮ್ಮ ನ ಗಂಡನಂತೆ , ಕುಂಟಾರಾಮ ನಂತೆ corona ಎಂಬ ಕೆಂಪು ಹರಳ ಮೋಹಕ್ಕೆ ಸಿಲುಕಿ ಕಣ್ಮರೆ ಯಾಗುತಿದ್ದಾರೆ. ಮೇದರಹಳ್ಳಿಯ ಬಿದಿರು ತೆನೆಗಟ್ಟಿ ನಾಶವಾಗಿದ್ದು ಸ್ವಾಭಾವಿಕವಾದರೆ ಇಂದುನಾವು ನಮ್ಮ ಅರಿವು ಗೇಡಿತನದಿಂದ ನಾಶವಾಗುವ ಹಂತ ತಲುಪಿದ್ದೇವೆ .ಬಿದಿರಿನ ಕೆಳಗೆ ಉದುರಿ ಬಿದ್ದಿದ್ದು ರಾಶಿ ರಾಶಿ ತೆನೆಯಷ್ಟೆ ಆದರೆ ಶೇಶಪ್ಪನ ಕನ್ನಡಿಯಲ್ಲೇಕೊ ರಾಶಿ ರಾಶಿ ಹೆಣಗಳು ಕಾಣುತ್ತಿವೆ .ಯಾವುದೋ ವಂಚನೆಯ ವ್ಯೂಹದೊಳಗೆ ಸಿಲುಕಿ ಬಿಟ್ಟಂತೆ ಮನಸು ಕಸಿವಿಸಿ ಗೊಳ್ಳುತ್ತಿದೆ . ನಮ್ಮ ಎಚ್ಚರ ದಲ್ಲಿ ನಾವಿರೋಣ .ಈ ಬದುಕೆಂಬ ಜುಗಾರಿ ಕ್ರಾಸ್ ನಲ್ಲಿ ನಮ್ಮ ಜೀವವೆಂಬ  ಏಲಕ್ಕಿಗು  ಒಳ್ಳೆಯ ಬೆಲೆ ಸಿಗಲಿ ಹಾಗೂ ಯಾವ ಕುತಂತ್ರವೂ ಇರದೆ ನಮ್ಮ ದುಡಿಮೆ ನಮ್ಮ ಕೈ ಸೇರಲಿ …..ಕ್ಯಾಪ್ಟನ್ ಖುದ್ದುಸನ ಘಾಟಿ  ಎಕ್ಸ್ ಪ್ರೆಸ್ ನಮಗಾಗಿ ಕಾದಿರುತ್ತದೆ.
-ಮನು ಪುರ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *