

ಸಿದ್ದಾಪುರ
ತಾಲೂಕಿನ ಹಸರಗೋಡ ಗ್ರಾಪಂ ವ್ಯಾಪ್ತಿಯ ತಂಗಾರಮನೆ ಅಡಕೆ ತೋಟದ ಅರಣ್ಯದ ಸಮೀಪ ಕಳೆದ ಹತ್ತು ದಿನದಿಂದ ಅಸ್ವಸ್ಥ ಗೊಂಡು ಓಡಾಡಲಾಗದೇ ನರಳಾಡುತ್ತಿದ್ದ ಕಾಡುಕೋಣ ಶನಿವಾರ ಸಂಜೆ ಸಾವನ್ನಪ್ಪಿದೆ.
ಮೂರು ವರ್ಷದ ಕಾಡುಕೋಣ ಇದಾಗಿದ್ದು ಇದರ ಮುಂದಿನ ಕಾಲು ಹೇಗೋ ಮುರಿದಿದ್ದು ಇದರಿಂದ ಓಡಾಡುವುದಕ್ಕೆ ಆಗದೇ ನರಳಾಡುತ್ತಿತ್ತು. ಸಿದ್ದಾಪುರ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಂದಕುಮಾರ ಪೈ ಭಾನುವಾರ ಮರಣೋತ್ತರ ಪರೀಕ್ಷೆನಡೆಸಿದರು.
ನಂತರ ಎಸಿಎಫ್ ರಘು ಅವರ ಸಮಕ್ಷಮದಲ್ಲಿ ಅರಣ್ಯ ಇಲಾಖೆಯ ಕಾನೂನಿನಂತೆ ಕಾಡುಕೋಣವನ್ನು ಸುಡಲಾಯಿತು.ಈ ಸಂದರ್ಭದಲ್ಲಿ ಜಾನ್ಮನೆ ಆರ್ಎಫ್ಒ ಪವಿತ್ರಾ, ಉಪವಲಯ ಅರಣ್ಯಾಧಿಕಾರಿ ಮಹ್ಮದ್ ಅಸ್ಪಕ್ ಹಾಗೂ ಸಿಬ್ಬಂದಿಗಳು, ಸ್ಥಳೀಯರಿದ್ದರು.



ಸಿದ್ದಾಪುರ ತಾಲೂಕಿನ ಭುವನಗಿರಿ ಭುವನೇಶ್ವರಿ ಸನ್ನಿಧಿ ದಯಲ್ಲಿ ದೇವಾಲಯದ ಆಡಳಿತ ಸಮಿತಿಯವರ ತೀರ್ಮಾನದಂತೆ ದೇವಸ್ಥಾನದ ಪ್ರಧಾನ ಅರ್ಚಕ ವೇ. ಶ್ರೀಧರ ಭಟ್ಟ ಮುತ್ತಿಗೆ ಅವರು ಕರೊನಾ ವೈರಸ್ ಮಹಾಮಾರಿ ಎಲ್ಲ ಕಡೆ ಹರಡುತ್ತಿರುವುದರಿಂದ ಅದರ ನಿವಾರಣೆಗಾಗಿ ಹಾಗೂ ಆಯುರಾರೋಗ್ಯ ಭಾಗ್ಯ ಸಂಕಲ್ಪಿಸಿ ಸಪ್ತಶತಿ ಪಾರಾಯಣ ಹಾಗೂ ವಿಶೇಷ ಪೂಜೆ ಸಲ್ಲಿಸಿದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
