ಭಟ್ಟಂಗಿ ಪತ್ರಕರ್ತರಿಗೆ ದ್ವಾರಕನಾಥ್ ಕ್ಲಾಸ್

ನಿಮ್ಮ ಆತ್ಮಗೌರವಕ್ಕೊಂದು ಪ್ರಶ್ನೆ..

ದೃಶ್ಯ ಮಾದ್ಯಮದ ಮಿತ್ರರೆ,
ಈಗ 9 ಗಂಟೆ, 9 ನಿಮಿಷ ಆಗಿದೆ, ನಿಮ್ಮ ಅವರ್ಣನೀಯ ಸಂಭ್ರಮ ನೋಡುತಿದ್ದೇನೆ!

ಇದೇ ಸಂಧರ್ಭದಲ್ಲಿ ಕರೋನಾದ ಈಗಿನ ಸ್ಥಿತಿ ಯನ್ನೂ ನೋಡುತಿದ್ದೇನೆ. ನೀವು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲೇ ಇಂದು ಕರೋನಾ ಸೋಂಕಿತರ ಸಂಖ್ಯೆ ಹಿಂದೆಂದಿಗಿಂತಲೂ ‌440 ಏರಿಕೆಯಾಗಿದೆ. ಸತ್ತವರ ಸಂಖ್ಯೆ ಹಿಂದೆಲ್ಲಾ ದಿನಗಳಿಗಿಂತಲೂ ಹೆಚ್ಚಾಗಿ 18ಕ್ಕೆ‌ ಏರಿದೆ!! ಈ ವಾಸ್ತವವನ್ನು ಕಂಡ ಮೇಲೆ ಯಾವ ಪುರುಶಾರ್ಥಕ್ಕಾಗಿ ಈ ನಿಮ್ಮ ಸಂಭ್ರಮ?

ನಿಮಗೆ ಕೇಂದ್ರ ಸರ್ಕಾರದಿಂದ ಒಂದಷ್ಟು ಪ್ಯಾಕೇಜ್ ಸಿಕ್ಕಿರಬಹುದು, ಅಂದ ಮಾತ್ರಕ್ಕೆ ನಿಮ್ಮ ನಿಮ್ಮ ಆತ್ಮಗೌರವಗಳನ್ನು ಮಾರಿಕೊಳ್ಳುತಿದ್ದೀರಲ್ಲ!?
“ಈವರೆಗೂ ಕೊರೋನಾ ನಿಯಂತ್ರಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದೀರ..?” ಎಂದು ಒಂದೇ ಒಂದು ಪ್ರಶ್ನೆಯನ್ನು ಸರ್ಕಾರಕ್ಕೆ ಕೇಳಿದ್ದೀರ..?

ಮಕ್ಕಳನ್ನು ಭುಜದ ಮೇಲೆ ಕೂರಿಸಿಕೊಂಡು, ಬೆಂಕಿಯಂತ ಸುಡು ಬಿಸಿಲಲ್ಲಿ ಅನ್ನ ನೀರಿಲ್ಲದೆ ನೂರಾರು ಮೈಲಿ ದೂರದಿಂದ ನಡೆಯುತ್ತಿರುವ‌‌ ನಮ್ಮ ಕೂಲಿಕಾರರಿಗೆ ಸರ್ಕಾರ‌ ಏನು ಮಾಡಿದೆ..? ಎಂಬ ಸಣ್ಣ ಪ್ರಶ್ನೆಯನ್ನು ಸರ್ಕಾರಕ್ಕೆ ಕೇಳಿದ್ದೀರ. ಅನ್ನವಿಲ್ಲದೆ ಸಾಯುತ್ತಿರುವ ಆದಿವಾಸಿ, ಅಲೆಮಾರಿ, ದಲಿತರಿಗೆ ಅನ್ನ ಏಕೆ ಕೊಡಲಿಲ್ಲ? ಎಂಬ ಪ್ರಶ್ನೆಯನ್ನು ಇದುವರೆಗೂ ಸರ್ಕಾರವನ್ನು ಕೇಳಿದ್ದೀರ? ಈ ಎಲ್ಲಾ ಸಮಸ್ಯೆಗಳನ್ನಿಟ್ಟುಕೊಂಡು ಪ್ರಧಾನಮಂತ್ರಿ ಯಾಕೆ ಜನರೊಂದಿಗೆ ಮಾತಾಡುತ್ತಿಲ್ಲ? ಎಂಬ ಸಣ್ಣ ಪ್ರಶ್ನೆಯೊಂದನ್ನು ಈ ದೇಶದ ಆಡಳಿತಾರೂಡ ನಾಯಕರನ್ನು ಕೇಳಿದ್ದೀರ?
ಈ ಎಲ್ಲಾ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಸರ್ಕಾರದಲ್ಲಿರುವವರು ಈ ದೇಶದ ಮುಗ್ದಜನರಿಗೆ ಭಾವನಾತ್ಮಕವಾದ‌ ಒಂದು ಕರೆಯನ್ನು ಕೊಟ್ಟರೆ, ಏನನ್ನೂ ಪ್ರಶ್ನಿಸದಂತೆ ಸರ್ಕಾರದ ಪರ ನಿಂತು ನಿಮ್ಮ ಸ್ವಾರ್ಥಕ್ಕಾಗಿ‌ ಸರ್ಕಾರದ ಪರ ಡಂಗುರ ಹೊಡೆಯುವ ಈ ಹೇಯ ಕೆಲಸಕ್ಕಿಳಿದಿದ್ದೀರಲ್ಲ! ಪತ್ರಿಕೋದ್ಯಮದ ಕನಿಷ್ಟ ಎಥಿಕ್ಸ್‌ ಅಥವಾ ನೈತಿಕತೆ ನಿಮಗಿದೆಯೇ?
ನನ್ನ ದೇಶದ ಪತ್ರಿಕೋದ್ಯಮ ಇಷ್ಟು ಕೆಳಮಟ್ಟಕ್ಕಿಳಿಯುತ್ತದೆಂದು ನಾನು ಕನಸುಮನಸಿನಲ್ಲೂ ಭಾವಿಸಿರಲಿಲ್ಲ..
ಖಂಡಿತ ದೀಪ ಹಚ್ಚೋಣ.. ಈ ದೇಶದಲ್ಲಿ ಕರೋನಾದಿಂದಾಗಿ ಒಂದೇ ಒಂದು ಸಾವು ಇಲ್ಲದಾದಾಗ, ಒಬ್ಬೇ ಒಬ್ಬ ಕರೋನ ಸೋಂಕಿತನೂ ಇಲ್ಲವಾದಾಗ,‌ ಈ ದೇಶದ ಕಡುಬಡವರಿಗೆ ಅನ್ನ ಸಿಕ್ಕಾಗ… ಇಡೀ ದೇಶವೇ ಬೆಳಗುವಂತೆ ದೀಪಗಳನ್ನು ಹಚ್ಚೋಣ,‌ ಈ ನಮ್ಮ ಪ್ರೀತಿಯ ದೇಶವನ್ನು ಬೆಳಕಿನ‌ ಭಾರತವಾಗಿ ನೋಡಿ ಕಣ್ಣು ತುಂಬಿಸಿಕೊಳ್ಳೋಣ..

-ಸಿ.ಎಸ್.ದ್ವಾರಕಾನಾಥ್

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *