

ಮಂಗಳವಾರ ಎರಡು ಜನ ಕರೋನಾ ಸೋಂಕಿತರು

ಸಂಪೂರ್ಣ ಗುಣಮುಖರಾಗಿ ಮನೆ ತಲುಪಿದ ನಂತರ ಇಂದು ಭಟ್ಕಳದ ಗರ್ಭಿಣಿಯೊಬ್ಬರಲ್ಲಿ ಕರೋನಾ ಪತ್ತೆಯಾಗಿ ಕೋವಿಡ್ ಆತಂಕ ಮರೆಯಾಗಿ ನಿರಾಳರಾಗುತಿದ್ದಾರೆ ಎನ್ನುವ ಸಮಯಕ್ಕೆ ಮತ್ತೆ ಆತಂಕ ಒಡಮೂಡಿದಂತಾಗಿದೆ.
ಭಟ್ಕಳದ ದುಬೈನಿಂದ ಹಿಂದಿರುಗಿದ ದಂಪತಿಗಳಲ್ಲಿ ಪತಿಯಲ್ಲಿ ಕರೋನಾ ನೆಗಿಟಿವ್ ವರದಿ ಬಂದರೆ, ಗರ್ಭಿಣಿ ಪತ್ನಿಯಲ್ಲಿ ಕರೋನಾ ಸೋಂಕು ಪತ್ತೆಯಾಗಿ ಮತ್ತೆ ಆತಂಕ ಪ್ರಾರಂಭವಾದಂತಾಗಿದೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ಬಿಟ್ಟು ಬೇರೆ ಕಡೆ ಕರೋನಾ ಸೋಂಕು ಪತ್ತೆಯಾದ ಒಂದೂ ಪ್ರಕರಣಗಳಿಲ್ಲ.
ಕೇಂದ್ರ ಸರ್ಕಾರದ ನಿರ್ಲಕ್ಷ, ಮಧ್ಯಪ್ರದೇಶದ ಬಿ.ಜೆ.ಪಿ. ಸರ್ಕಾರ ಸ್ಥಾಪನೆ ಕಾರಣಕ್ಕೆ ವಿಮಾನಯಾನ ಸ್ಥಗಿತಮಾಡದಿರುವುದು, ವಿದೇಶದಿಂದ ಮರಳಿದ ಜನರಿಗೆ ಕ್ವಾರಂಟೈನ್ ಮಾಡದಿರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣ ಎನ್ನಲಾಗುತ್ತಿದೆ. ಕೇಂದ್ರದ ಉಡಾಫೆಯಿಂದ ಉಂಟಾದ ರಗಳೆ ಯನ್ನು ಒಂದು ಸಮೂದಾಯದ ಮೇಲೆ ಹಾಕಿ ಪಲಾಯನ ಮಾಡುವ ಪರಿವಾರದ ಪ್ರಯತ್ನಕ್ಕೂ ಮುಖ್ಯಮಂತ್ರಿ ಬ್ರೇಕ್ ಹಾಕಿರುವುದು ದುರುದ್ಧೇಶದ ರಾಜಕೀಯ ಹಿತಾಸಕ್ತರ ದುಷ್ಟಕೂಟದ ಪ್ರಯುತ್ನಕ್ಕೆ ಒಡ್ಡಿದ ತಡೆಯಂತಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
