
ಕರೋನಾ ಭಯ,ಮುನ್ನೆಚ್ಚರಿಕೆಗಳ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಆರೋಗ್ಯ ಇಲಾಖೆ ಇಂದು ಪ್ರಕಟಣೆ ಹೊರಡಿಸಿದೆ. ಈ ಹಿಂದೆ ಮಾಸ್ಕ್ ಕಡ್ಡಾಯವಲ್ಲ ಎಂದು ಸಾರಿದ್ದ ಇಲಾಖೆ ಇಂದು ಹೊಸ ಪ್ರಕಟಣೆಯಲ್ಲಿ ಮಾಸ್ಕ್
ಕಡ್ಡಾಯ ಎಂದು ಸಾರಿದೆ.




ಅಪರಿಚಿತರರು, ಸಾರ್ವಜನಿಕರೊಂದಿಗೆ ವ್ಯವಹರಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು.ಆದರೆ ಮಾಸ್ಕ್ ಹೀಗೇ ಇರಬೇಕೆಂಬ ನಿಬಂಧನೆ ಇಲ್ಲ ಎಂದಿದೆ. ಸುರಕ್ಷತೆ,ಮುನ್ನೆಚ್ಚರಿಕೆ ಹಿನ್ನೆಲೆಗಳಲ್ಲಿ ಅನಿವಾರ್ಯ ಸೇವೆ, ಓಡಾಟದಲ್ಲಿರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ವ್ಯವಹರಿಸುವುದನ್ನು ಕಡ್ಡಾಯ ಮಾಡಿ ಪ್ರಕಟಣೆ ನೀಡಲಾಗಿದೆ.
ಕರೋನಾ ವಿಶೇಶ – ಲಯನ್ಸ್ನಿಂದ ಆರೋಗ್ಯ ಕಿಟ್ ವಿತರಣೆ, ನಾಶಿರ್ಖಾನ್ ರಿಂದ ಕರೋನಾ ಯೋಧರಿಗೆ ಕೃತಜ್ಞತೆ
ಕರೋನಾ ಹಿನ್ನೆಲೆಯಲ್ಲಿ ಅವಿರತ ಸೇವೆ ನೀಡುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿಗಳಿಗೆ ಸಿದ್ಧಾಪುರದ ಲಯನ್ಸ್ಕ್ಲಬ್ ನಿಂದ ಆರೋಗ್ಯಕಿಟ್ ವಿತರಿಸಲಾಯಿತು. ಈ ಕಿಟ್ ವಿತರಿಸಿದ ತಹಸಿಲ್ದಾರ ಮಂಜುಳಾ ಭಜಂತ್ರಿ ಕರೋನಾ ಜಾಗತಿಕ ಸಮಸ್ಯೆಯಾಗಿದ್ದು ಮುಂಜಾಗೃತೆ,ಸಾಮಾಜಿಕ ಅಂತರಗಳಿಂದ ಈ ರೋಗದ ವಿರುದ್ಧ ಗೆಲುವು ಸಾಧಿಸಬಹುದು ಎಂದರು.
ನಾಶಿರ್ ಕೃತಜ್ಷತೆ-
ತಾಲೂಕಿನಲ್ಲಿ ಕರೋನಾ ವಿರುದ್ಧದ ಹೋರಾಟದಲ್ಲಿ ನಿರಂತರ ಸೇವೆ ಮಾಡುತ್ತಿರುವ ಕರೋನಾ ಯೋಧರನ್ನು ತಾ.ಪಂ. ಸದಸ್ಯ ನಾಶಿರ್ಖಾನ್ ಅಭಿನಂದಿಸಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
