![](https://i0.wp.com/samajamukhi.net/wp-content/uploads/2020/04/IMG-20200411-WA0057.jpg?resize=720%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ವಿಶ್ವದಲ್ಲಿ ಅಜಮಾಸು 1 ಲಕ್ಷ ಜನರನ್ನು ಬಲಿ ತೆಗೆದುಕೊಂಡ ಕರೋನಾ ಇಂದಿಗೆ ನೂರು ದಿವಸಗಳನ್ನು ಪೂರೈಸಿದೆ. ಈ ಕೋವಿಡ್19 ದುಷ್ಪರಿಣಾಮಗಳಿಂದಾಗಿ ರಾಜ್ಯದಲ್ಲಿ ಲಾಕ್ಡೌನ್ ಅವಧಿ ಏ.30 ರ ವರೆಗೆ ವಿಸ್ತರಣೆಯಾಗಿದೆ. ರಾಜ್ಯದಲ್ಲಿ ಈ ವರೆಗೆ 219 ಜನರು ಕರೋನಾ ಸೋಂಕು ಪೀಡಿತರಾಗಿದ್ದರೆ, 39 ಜನರು ಗುಣಮುಖರಾಗಿದ್ದಾರೆ.
ಕೋವಿಡ್ 19 ಈ ಸಾವು-ನೋವುಗಳಿಗೆ ಕಾರಣವಾಗಿದ್ದರೆ ಈ ವರ್ಷ ಮಂಗನಕಾಯಿಲೆ ರಾಜ್ಯದಲ್ಲಿ ಈವರೆಗೆ ಮೂರು ಜನರನ್ನು ಬಲಿ ಪಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಗ್ರಾಮೀಣ ಕೃಷಿಕರನ್ನು ಸಾಯಿಸುತ್ತಿರುವ ಮಂಗನಕಾಯಿಲೆಗೆ ಸಿದ್ದಾಪುರದ ನಾಲ್ಕುವರ್ಷದ ಬಾಲಕನಲ್ಲಿ ಇಂದು ಧೃಡಪಟ್ಟಿರುವುದು ಆತಂಕವನ್ನುಂಟುಮಾಡಿದೆ.
![](https://i2.wp.com/samajamukhi.net/wp-content/uploads/2020/04/IMG-20200411-WA0057.jpg?fit=576%2C1024&ssl=1)
![](https://i1.wp.com/samajamukhi.net/wp-content/uploads/2020/04/IMG-20200410-WA0059.jpg?fit=760%2C570&ssl=1)
ಈವರೆಗೆ ಸಿದ್ಧಾಪುರದ ಒಟ್ಟೂ 23 ಜನರಿಗೆ ಮಂಗನಕಾಯಿಲೆ ದೃಢಪಟ್ಟಿದ್ದು ಅವರಲ್ಲಿ 16 ಜನರು ಗುಣಮುಖರಾಗಿದ್ದಾರೆ.ವಿಶ್ವದಾದ್ಯಂತ ಕರೋನಾ ಸಾವು-ನೋವುಗಳಿಗೆ ಜನರು ಮಿಡಿಯುತಿದ್ದರೆ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಜನತೆ ಕರೋನಾ ಭಯದೊಂದಿಗೆ ಮಂಗನಕಾಯಿಲೆ ರೋಗಕ್ಕೆ ಬೇಯುವಂತಾಗಿದೆ. ಈ ನಡುವೆ ಮಲೆನಾಡಿನ ಕೆಲವು ಭಾಗದಲ್ಲಿ ಶುಕ್ರವಾರ ಸುರಿದ ಮಳೆ ಆತಂಕ ಹೆಚ್ಚಿಸಿದೆ. ಈ ಮಳೆಯ ಪರಿಣಾಮ ಸಿದ್ದಾಪುರದ ಹಾರ್ಸಿಕಟ್ಟಾದಲ್ಲಿ ಸ್ಥಳಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡದ ಮೇಲ್ಛಾವಣಿ ಕಿತ್ತು ಹಾನಿಯಾಗಿದೆ. ಬಿರು ಬೇಸಿಗೆಯಲ್ಲಿ ಸುರಿದ ಮಳೆ ಏಕಕಾಲದಲ್ಲಿ ಕರೋನಾ ಮತ್ತು ಮಂಗನಕಾಯಿಲೆಗೆ ಗೊಬ್ಬರಹಾಕಿದಂತಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)