ಇಂದಿನ ಐಕಾನ್ ಜಗಧೀಶ್ ಜಿ.

ನಿಸ್ಸಂಶಯವಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ IAS. ಒಬ್ಬ ಸರಕಾರಿ ಅಧಿಕಾರಿ ಜನಸೇವಕನಾಗಿ, ಮಾದರಿ ಕೃಷಿಕನಾಗಿ, ಯುವಜನತೆಯ ಸ್ಫೂರ್ತಿ ದೇವತೆಯಾಗಿ ನಿಲ್ಲುತ್ತಾರೆ ಅಂದರೆ ಅವರು ನಿಜಕ್ಕೂ ಗ್ರೇಟ್!

ಕೊರೋನಾ ವಿರುದ್ಧ ಉಡುಪಿ ಜಿಲ್ಲೆ ಇಂದು ಒಂದು ಹಂತದ ಸಮರವನ್ನು ಗೆದ್ದಿದೆ. ಅದಕ್ಕೆ ಈ ಅಧಿಕಾರಿ ಮಾಡಿದ ಹೋರಾಟ, ಜಾಗೃತಿಯ ಕಾರ್ಯಕ್ರಮಗಳು, ಕಡಕ್ ಆದೇಶಗಳು ಮತ್ತು ಅನುಷ್ಠಾನಗಳು ಕಾರಣ ಎಂಬ ಜನಾಭಿಪ್ರಾಯ ಮೂಡಿಬರುತ್ತಿದೆ. ಅದಕ್ಕೆ ಅವರಿಗೆ ಅಭಿನಂದನೆಗಳು.

ಜಿ. ಜಗದೀಶ್ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಳಲಗದ್ದೆ ಗ್ರಾಮದವರು. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ ಪದವಿ ಪಡೆದವರು. ಮುಂದೆ ಬಿ. ಎಡ್. ಮಾಡಿ ಕಡೂರು ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.ನಂತರ ಸ್ವಂತ ಆಸಕ್ತಿಯಿಂದ ರಾಜನೀತಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು KAS ತೇರ್ಗಡೆ ಹೊಂದಿದರು. 2006-2007ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಉಡುಪಿಯಲ್ಲಿ ಸೇವೆ ಸಲ್ಲಿಸಿದರು. ಮುಂದೆ IAS ತೇರ್ಗಡೆ ಆಗಿ ಹಾವೇರಿ, ಶಿರಸಿಗಳಲ್ಲಿ ಸೇವೆ ಸಲ್ಲಿಸಿ ಇದೀಗ ಉಡುಪಿಯ ಜಿಲ್ಲಾಧಿಕಾರಿ. ಹೆಜಮಾಡಿ ಗಡಿಯಿಂದ ಶಿರೂರಿನವರೆಗೆ ಹರಡಿರುವ ಉಡುಪಿ ಜಿಲ್ಲೆಯು ವಿದ್ಯಾವಂತ ಹಾಗೂ ಬುದ್ದಿವಂತ ನಾಗರಿಕರ ಜಿಲ್ಲೆ ಎಂದೇ ಕರೆಸಿಕೊಂಡಿದೆ. ಅಂತಹ ಜಿಲ್ಲೆಗೆ ಕೊರೋನ ಮಹಾಮಾರಿ ಅಮರಿದಾಗ ಡಿಸಿ ಮೊದಲು ಎಚ್ಚೆತ್ತುಕೊಂಡು ಕೆಲಸಕ್ಕೆ ಇಳಿದಿದ್ದರು. ಸರಕಾರಿ ಯಂತ್ರವನ್ನು ಚುರುಕು ಮಾಡಿದರು. ವಿದೇಶದಿಂದ ಬಂದ ಸಾವಿರಾರು ಜನರನ್ನು ಹೋಂ ಕ್ವಾರಂಟೈನ್ ನಿಗಾಕ್ಕೇ ಒಳಪಡಿಸಿದ್ದು, ಪ್ರತಿನಿತ್ಯ ನಾಲ್ಕು ಘಂಟೆ ಅಗತ್ಯವಸ್ತುಗಳ ಅಂಗಡಿ ತೆರೆದು ಜೀವನ ನಿರ್ವಹಣೆ ಸುಲಭ ಮಾಡಿದ್ದು, ಪಡಿತರ ವ್ಯವಸ್ಥೆಯನ್ನು ಸರಳ ಮಾಡಿದ್ದು, ಕಾಳದಂಧೆಗೆ ಕಡಿವಾಣ ಹಾಕಿದ್ದು, ಕ್ವಾರಂತೆನ್ ಉಲ್ಲಂಘನೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಿದ್ದು, ಟಿ.ಎಮ್. ಎ. ಪೈ ಆಸ್ಪತ್ರೆಯನ್ನು KOVID 19 ಆಸ್ಪತ್ರೆಯಾಗಿ ರೂಪಿಸಿದ್ದು, ಯಾರಿಗೂ ಆಹಾರಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಿದ್ದು, ಉಡುಪಿ ಜಿಲ್ಲೆಯ ಗಡಿಗಳನ್ನು ಸೂಕ್ತ ಸಮಯದಲ್ಲಿ ಲಾಕ್ ಮಾಡಿದ್ದು, ರೈತರ ಬೆಳೆಗೆ ಬೆಂಬಲಬೆಲೆ ನೀಡಿ ಖರೀದಿಗೆ ವ್ಯವಸ್ಥೆ ಮಾಡಿದ್ದು, ಸ್ವಯಂಸೇವಾಸಂಸ್ಥೆ ಹಾಗೂ ಸ್ವಯಂಸೇವಕರನ್ನು ಯೋಗ್ಯವಾಗಿ ಬಳಸಿಕೊಂಡದ್ದು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಸವಲತ್ತು ಮತ್ತು ಕಿಟ್ ಒದಗಿಸಿದ್ದು….

.ಎಲ್ಲವೂ ಸರಿಯಾದ ನಿರ್ಧಾರಗಳು! ಜಿಲ್ಲೆಯ ಶಾಸಕರ ವಿಶ್ವಾಸ ಗೆಲ್ಲುವುದು, ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು, ಜಿಲ್ಲೆಯ ಕೋಮು ಸೌಹಾರ್ದವನ್ನು ಕಾಪಾಡುವುದು, ನಿಯಮ ಉಲ್ಲಂಘಿಸುವ ಉಡಾಫೆ ಗಳನ್ನು ಶಿಕ್ಷಿಸುವುದು,…ಎಲ್ಲವೂ ಅವರಿಗೆ ಸಾಧ್ಯವಾಯಿತು.

ವಜ್ರಕ್ಕಿಂತ ಕಠೋರ, ಕುಸುಮಕ್ಕಿಂತ ಮೃದು ಅವರ ವ್ಯಕ್ತಿತ್ವ. ನೂರಾರು ಅಂತಃಕರಣದ, ಮನಕಲುಕುವ ಘಟನೆಗಳಿಗೆ ಅವರು ಸಾಕ್ಷಿಯಾಗಿದ್ದಾರೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆದೇಶ ನೀಡುವುದು ಸುಲಭ. ಆದರೆ ಬಿಸಿಲಿಗೆ ಇಳಿದು ಕೆಲಸ ಮಾಡುವುದು ತುಂಬಾ ಕಷ್ಟ. ನಮ್ಮ ಡಿಸಿ ಆರಿಸಿದ್ದು ಎರಡನೆಯ ದಾರಿ! ಎಷ್ಟೇ ಒತ್ತಡದಲ್ಲಿದ್ದರು ಕೂಡ ಜನಸಾಮಾನ್ಯರ ಕರೆಗೆ ಓಗೊಟ್ಟು ಸ್ಪಂದಿಸುವುದು ಇನ್ನೂ ಅದ್ಭುತ! ಐರೋಡಿಯ ಮುದುಕರೊಬ್ಬರು ಹಸಿವೆಯಿಂದ ಕರೆ ಮಾಡಿದಾಗ ತಕ್ಷಣ ಪಿಡಿಒ ಮೂಲಕ 20ಕೆಜಿ ಅಕ್ಕಿ ತಲುಪಿಸಿದ್ದು, ಜಾರ್ಖಂಡ್ ರಾಜ್ಯದ ವಲಸೆಕಾರ್ಮಿಕರಿಗೆ ಶಾಸಕರ ಸೂಚನೆಗೆ ಸ್ಪಂದಿಸಿ ತಕ್ಷಣ ಪಡಿತರ ವಿತರಣೆ ಮಾಡಿದ್ದು, ಹಸಿದ ಬೀದಿ ನಾಯಿಗಳಿಗೆ ಆಹಾರದ ವ್ಯವಸ್ಥೆ ಮಾಡಿದ್ದು, ಭಟ್ಕಳದ ಸೋಂಕು ತಗುಲಿದ ಗರ್ಭಿಣಿಯನ್ನು ಉಡುಪಿಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು…ಹೀಗೆ ಅವರ ನೂರಾರು ಮಾನವೀಯ ಮುಖಗಳು ಅನಾವರಣವಾಗುತ್ತವೆ.

“ಇಡೀ ಜಿಲ್ಲೆಯ ಜನ ನನ್ನವರು” ಎಂದು ಭಾವಿಸಿ ತನ್ನ ಮನೆಯನ್ನು ಮರೆತು ದಿನಂಪ್ರತಿ 18 ಘಂಟೆ ಒಬ್ಬ ಜಿಲ್ಲಾಧಿಕಾರಿ ದುಡಿಯುವುದನ್ನು ಕಂಡಾಗ ಮನಸ್ಸು ತುಂಬಿ ಬರುತ್ತದೆ. ಇದಕ್ಕೆ ಹೊರತಾಗಿ ಕೃಷಿಕರಾಗಿ ಅವರು ಮಾಡಿದ ಸಾಧನೆ, ತನ್ನ ಹುಟ್ಟೂರಲ್ಲಿ ಸ್ವಂತ ದುಡ್ಡಲ್ಲಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಯುವಜನತೆಗೆ IAS/KAS ಉಚಿತ ತರಬೇತಿ ನೀಡುತ್ತಿರುವುದು, ತನ್ನ ಮನೆಯ ಸುತ್ತ ತರಕಾರಿ ತೋಟ ಮಾಡಿ ವಿದ್ಯಾರ್ಥಿಗಳಿಗೆ ಪಾಠ ಹೇಳಿದ್ದು, ಹಕ್ಕಿಗಳಿಗೆ ಬೇಸಗೆಯಲ್ಲಿ ನೀರುಣಿಸುವ ಅಭಿಯಾನ ಮಾಡಿದ್ದು, ಉಡುಪಿ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಿದ್ದು….ಇವನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ! ಪ್ರಚಾರದಿಂದ ಅವರು ಎಂದಿಗೂ ವಿಮುಖ. ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯು ವಿವಿಧ 6 ವಿಭಾಗಗಳಲ್ಲಿ 6 ಬಾರಿ ಪ್ರಥಮ ಸ್ಧಾನ ಪಡೆದಿದೆ! ಜನಸಾಮಾನ್ಯರ ಡಿಸಿಗೆ ನಮ್ಮ ಸೆಲ್ಯೂಟ್.

-ರಾಜೇಂದ್ರ ಭಟ್ ಕೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

ಸಿದ್ಧಾಪುರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜಾತ್ರೆ! ನಮ್ಮೂರು ಇಂದು ನಾಳೆ…..

* ಸಿದ್ಧಾಪುರ ಇಟಗಿಯ ರಾಮೇಶ್ವರ ದೇವರ ದಿವ್ಯಾಷ್ಟಬಂಧ ಕಾರ್ಯಕ್ರಮ ಪ್ರಾರಂಭವಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

senaa sevaa-ಸೈನಿಕನಿಗೆ ಹುಟ್ಟೂರಿನ ಗೌರವ

ಸಿದ್ದಾಪುರ: ಭಾರತೀಯ ಸೈನ್ಯದಲ್ಲಿ ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತಾಯ್ನಾಡಿಗೆ ಮರಳಿದ ಸಿದ್ದಾಪುರ ತಾಲೂಕಿನ ಸಂಪೇಕೇರಿಯ(ಮುಗದೂರ) ವಿನಯಕುಮಾರ ನಾಯ್ಕ ರಿಗೆ...

ಕದಂಬಜಿಲ್ಲೆಗಾಗಿ ಸಹಿಸಂಗ್ರಹಣೆ, ಕಾನಳ್ಳಿಯಲ್ಲಿ ಹಸ್ಲರ್‌ ಸಂಘಕ್ಕೆ ಚಾಲನೆ,ಸೋಮುವಾರ ಮಹಿಳಾ ಸಂವೇದನೆ ಕವಿಗೋಷ್ಠಿ‌

ನಿರಂತರ ಹೋರಾಟದಲ್ಲಿರುವ ಶಿರಸಿ ಕೇಂದ್ರಿತ ಪ್ರತ್ಯೇಕ ಕದಂಬ ಜಿಲ್ಲೆ ಹೋರಾಟ ಸಮೀತಿ ಈ ತಿಂಗಳಿಂದ ಸಿದ್ಧಾಪುರದ ಗ್ರಾಮೀಣ ಪ್ರದೇಶಗಳಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ಸಹಿ ಸಂಗ್ರಹಣೆ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *