ಇಂದಿನ ಐಕಾನ್ ಜಗಧೀಶ್ ಜಿ.

ನಿಸ್ಸಂಶಯವಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ IAS. ಒಬ್ಬ ಸರಕಾರಿ ಅಧಿಕಾರಿ ಜನಸೇವಕನಾಗಿ, ಮಾದರಿ ಕೃಷಿಕನಾಗಿ, ಯುವಜನತೆಯ ಸ್ಫೂರ್ತಿ ದೇವತೆಯಾಗಿ ನಿಲ್ಲುತ್ತಾರೆ ಅಂದರೆ ಅವರು ನಿಜಕ್ಕೂ ಗ್ರೇಟ್!

ಕೊರೋನಾ ವಿರುದ್ಧ ಉಡುಪಿ ಜಿಲ್ಲೆ ಇಂದು ಒಂದು ಹಂತದ ಸಮರವನ್ನು ಗೆದ್ದಿದೆ. ಅದಕ್ಕೆ ಈ ಅಧಿಕಾರಿ ಮಾಡಿದ ಹೋರಾಟ, ಜಾಗೃತಿಯ ಕಾರ್ಯಕ್ರಮಗಳು, ಕಡಕ್ ಆದೇಶಗಳು ಮತ್ತು ಅನುಷ್ಠಾನಗಳು ಕಾರಣ ಎಂಬ ಜನಾಭಿಪ್ರಾಯ ಮೂಡಿಬರುತ್ತಿದೆ. ಅದಕ್ಕೆ ಅವರಿಗೆ ಅಭಿನಂದನೆಗಳು.

ಜಿ. ಜಗದೀಶ್ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಳಲಗದ್ದೆ ಗ್ರಾಮದವರು. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ ಪದವಿ ಪಡೆದವರು. ಮುಂದೆ ಬಿ. ಎಡ್. ಮಾಡಿ ಕಡೂರು ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.ನಂತರ ಸ್ವಂತ ಆಸಕ್ತಿಯಿಂದ ರಾಜನೀತಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು KAS ತೇರ್ಗಡೆ ಹೊಂದಿದರು. 2006-2007ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಉಡುಪಿಯಲ್ಲಿ ಸೇವೆ ಸಲ್ಲಿಸಿದರು. ಮುಂದೆ IAS ತೇರ್ಗಡೆ ಆಗಿ ಹಾವೇರಿ, ಶಿರಸಿಗಳಲ್ಲಿ ಸೇವೆ ಸಲ್ಲಿಸಿ ಇದೀಗ ಉಡುಪಿಯ ಜಿಲ್ಲಾಧಿಕಾರಿ. ಹೆಜಮಾಡಿ ಗಡಿಯಿಂದ ಶಿರೂರಿನವರೆಗೆ ಹರಡಿರುವ ಉಡುಪಿ ಜಿಲ್ಲೆಯು ವಿದ್ಯಾವಂತ ಹಾಗೂ ಬುದ್ದಿವಂತ ನಾಗರಿಕರ ಜಿಲ್ಲೆ ಎಂದೇ ಕರೆಸಿಕೊಂಡಿದೆ. ಅಂತಹ ಜಿಲ್ಲೆಗೆ ಕೊರೋನ ಮಹಾಮಾರಿ ಅಮರಿದಾಗ ಡಿಸಿ ಮೊದಲು ಎಚ್ಚೆತ್ತುಕೊಂಡು ಕೆಲಸಕ್ಕೆ ಇಳಿದಿದ್ದರು. ಸರಕಾರಿ ಯಂತ್ರವನ್ನು ಚುರುಕು ಮಾಡಿದರು. ವಿದೇಶದಿಂದ ಬಂದ ಸಾವಿರಾರು ಜನರನ್ನು ಹೋಂ ಕ್ವಾರಂಟೈನ್ ನಿಗಾಕ್ಕೇ ಒಳಪಡಿಸಿದ್ದು, ಪ್ರತಿನಿತ್ಯ ನಾಲ್ಕು ಘಂಟೆ ಅಗತ್ಯವಸ್ತುಗಳ ಅಂಗಡಿ ತೆರೆದು ಜೀವನ ನಿರ್ವಹಣೆ ಸುಲಭ ಮಾಡಿದ್ದು, ಪಡಿತರ ವ್ಯವಸ್ಥೆಯನ್ನು ಸರಳ ಮಾಡಿದ್ದು, ಕಾಳದಂಧೆಗೆ ಕಡಿವಾಣ ಹಾಕಿದ್ದು, ಕ್ವಾರಂತೆನ್ ಉಲ್ಲಂಘನೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಿದ್ದು, ಟಿ.ಎಮ್. ಎ. ಪೈ ಆಸ್ಪತ್ರೆಯನ್ನು KOVID 19 ಆಸ್ಪತ್ರೆಯಾಗಿ ರೂಪಿಸಿದ್ದು, ಯಾರಿಗೂ ಆಹಾರಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಿದ್ದು, ಉಡುಪಿ ಜಿಲ್ಲೆಯ ಗಡಿಗಳನ್ನು ಸೂಕ್ತ ಸಮಯದಲ್ಲಿ ಲಾಕ್ ಮಾಡಿದ್ದು, ರೈತರ ಬೆಳೆಗೆ ಬೆಂಬಲಬೆಲೆ ನೀಡಿ ಖರೀದಿಗೆ ವ್ಯವಸ್ಥೆ ಮಾಡಿದ್ದು, ಸ್ವಯಂಸೇವಾಸಂಸ್ಥೆ ಹಾಗೂ ಸ್ವಯಂಸೇವಕರನ್ನು ಯೋಗ್ಯವಾಗಿ ಬಳಸಿಕೊಂಡದ್ದು, ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಸವಲತ್ತು ಮತ್ತು ಕಿಟ್ ಒದಗಿಸಿದ್ದು….

.ಎಲ್ಲವೂ ಸರಿಯಾದ ನಿರ್ಧಾರಗಳು! ಜಿಲ್ಲೆಯ ಶಾಸಕರ ವಿಶ್ವಾಸ ಗೆಲ್ಲುವುದು, ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು, ಜಿಲ್ಲೆಯ ಕೋಮು ಸೌಹಾರ್ದವನ್ನು ಕಾಪಾಡುವುದು, ನಿಯಮ ಉಲ್ಲಂಘಿಸುವ ಉಡಾಫೆ ಗಳನ್ನು ಶಿಕ್ಷಿಸುವುದು,…ಎಲ್ಲವೂ ಅವರಿಗೆ ಸಾಧ್ಯವಾಯಿತು.

ವಜ್ರಕ್ಕಿಂತ ಕಠೋರ, ಕುಸುಮಕ್ಕಿಂತ ಮೃದು ಅವರ ವ್ಯಕ್ತಿತ್ವ. ನೂರಾರು ಅಂತಃಕರಣದ, ಮನಕಲುಕುವ ಘಟನೆಗಳಿಗೆ ಅವರು ಸಾಕ್ಷಿಯಾಗಿದ್ದಾರೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆದೇಶ ನೀಡುವುದು ಸುಲಭ. ಆದರೆ ಬಿಸಿಲಿಗೆ ಇಳಿದು ಕೆಲಸ ಮಾಡುವುದು ತುಂಬಾ ಕಷ್ಟ. ನಮ್ಮ ಡಿಸಿ ಆರಿಸಿದ್ದು ಎರಡನೆಯ ದಾರಿ! ಎಷ್ಟೇ ಒತ್ತಡದಲ್ಲಿದ್ದರು ಕೂಡ ಜನಸಾಮಾನ್ಯರ ಕರೆಗೆ ಓಗೊಟ್ಟು ಸ್ಪಂದಿಸುವುದು ಇನ್ನೂ ಅದ್ಭುತ! ಐರೋಡಿಯ ಮುದುಕರೊಬ್ಬರು ಹಸಿವೆಯಿಂದ ಕರೆ ಮಾಡಿದಾಗ ತಕ್ಷಣ ಪಿಡಿಒ ಮೂಲಕ 20ಕೆಜಿ ಅಕ್ಕಿ ತಲುಪಿಸಿದ್ದು, ಜಾರ್ಖಂಡ್ ರಾಜ್ಯದ ವಲಸೆಕಾರ್ಮಿಕರಿಗೆ ಶಾಸಕರ ಸೂಚನೆಗೆ ಸ್ಪಂದಿಸಿ ತಕ್ಷಣ ಪಡಿತರ ವಿತರಣೆ ಮಾಡಿದ್ದು, ಹಸಿದ ಬೀದಿ ನಾಯಿಗಳಿಗೆ ಆಹಾರದ ವ್ಯವಸ್ಥೆ ಮಾಡಿದ್ದು, ಭಟ್ಕಳದ ಸೋಂಕು ತಗುಲಿದ ಗರ್ಭಿಣಿಯನ್ನು ಉಡುಪಿಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು…ಹೀಗೆ ಅವರ ನೂರಾರು ಮಾನವೀಯ ಮುಖಗಳು ಅನಾವರಣವಾಗುತ್ತವೆ.

“ಇಡೀ ಜಿಲ್ಲೆಯ ಜನ ನನ್ನವರು” ಎಂದು ಭಾವಿಸಿ ತನ್ನ ಮನೆಯನ್ನು ಮರೆತು ದಿನಂಪ್ರತಿ 18 ಘಂಟೆ ಒಬ್ಬ ಜಿಲ್ಲಾಧಿಕಾರಿ ದುಡಿಯುವುದನ್ನು ಕಂಡಾಗ ಮನಸ್ಸು ತುಂಬಿ ಬರುತ್ತದೆ. ಇದಕ್ಕೆ ಹೊರತಾಗಿ ಕೃಷಿಕರಾಗಿ ಅವರು ಮಾಡಿದ ಸಾಧನೆ, ತನ್ನ ಹುಟ್ಟೂರಲ್ಲಿ ಸ್ವಂತ ದುಡ್ಡಲ್ಲಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಯುವಜನತೆಗೆ IAS/KAS ಉಚಿತ ತರಬೇತಿ ನೀಡುತ್ತಿರುವುದು, ತನ್ನ ಮನೆಯ ಸುತ್ತ ತರಕಾರಿ ತೋಟ ಮಾಡಿ ವಿದ್ಯಾರ್ಥಿಗಳಿಗೆ ಪಾಠ ಹೇಳಿದ್ದು, ಹಕ್ಕಿಗಳಿಗೆ ಬೇಸಗೆಯಲ್ಲಿ ನೀರುಣಿಸುವ ಅಭಿಯಾನ ಮಾಡಿದ್ದು, ಉಡುಪಿ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಿದ್ದು….ಇವನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ! ಪ್ರಚಾರದಿಂದ ಅವರು ಎಂದಿಗೂ ವಿಮುಖ. ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯು ವಿವಿಧ 6 ವಿಭಾಗಗಳಲ್ಲಿ 6 ಬಾರಿ ಪ್ರಥಮ ಸ್ಧಾನ ಪಡೆದಿದೆ! ಜನಸಾಮಾನ್ಯರ ಡಿಸಿಗೆ ನಮ್ಮ ಸೆಲ್ಯೂಟ್.

-ರಾಜೇಂದ್ರ ಭಟ್ ಕೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

abc

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

ಪಿ.ಎಂ.ಶ್ರೀ ಎಲ್.ಕೆ.ಜಿ.ಗೆ ಚಾಲನೆ ನೀಡಿದ ಶಾಸಕ ಭೀಮಣ್ಣ

ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಪ್ರಾರಂಭವಾಗಿರುವ ಪಿ.ಎಮ್.ಶ್ರೀ ಪೂರ್ವ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

abc

Recommended For You

About the Author: Kanneshwar Naik

Leave a Reply

Your email address will not be published. Required fields are marked *