

ಜಗತ್ತು ಕರೋನಾ ಸಂಕಷ್ಟದಲ್ಲಿರುವ ಸಮಯದಲ್ಲಿ ಖಾಸಗಿ ವೈದ್ಯರು ತಮ್ಮ ಆಸ್ಫತ್ರೆ, ಕ್ಲಿನಿಕ್ ಗಳ ಬಾಗಿಲುಮುಚ್ಚಿರುವುದು ವೃತ್ತಿ ಧರ್ಮವಲ್ಲ ಎಂದು ಹೇಳಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉತ್ತರಕನ್ನಡದಲ್ಲಿ ಕರೋನಾ ಸಮಯದಲ್ಲಿ ಬಾಗಿಲು ಹಾಕಿರುವ ಖಾಸಗಿ ಆಸ್ಫತ್ರೆಗಳ ಬಾಗಿಲು ತೆರೆದು ಸಹಕರಿಸಲು ಕೈಮುಗಿದು ವಿನಂತಿಸಿದರು.
ಸಿದ್ದಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಬ್ಬಾರ್ ಆಸ್ಫತ್ರೆ,ವೈದ್ಯರು, ಆರೋಗ್ಯ ವ್ಯವಸ್ಥೆಗಾಗಿ ಸರ್ಕಾರ ಉದಾರವಾಗಿ ನೆರವು ನೀಡಲಿದೆ. ಆದರೆ ಉತ್ತರಕನ್ನಡ ಜಿಲ್ಲೆ ಸೇರಿ ಕೆಲವೆಡೆ ಖಾಸಗಿ ಆಸ್ಫತ್ರೆಗಳು ಬಾಗಿಲು ಮುಚ್ಚಿವೆ. ಜನರ ಮನೆವೈದ್ಯರಾದ ಇವರೆಲ್ಲಾ ಬಾಗಿಲು ಮುಚ್ಚಿ ತಮ್ಮ ರೋಗಿಗಳು,ಆಪ್ತರಿಗೆ ಅನ್ಯಾಯಮಾಡಿದಂತಾಗುವುದಿಲ್ಲವೆ? ಎಂದು ಪ್ರಶ್ನಿಸಿದ ಸಚಿವರು ‘ದಯಮಾಡಿ ವೈದ್ಯರು ತಮ್ಮ ವೃತ್ತಿಧರ್ಮ ಪಾಲಿಸಬೇಕು. ಸಚಿವನಾಗಿ ನಾನು ಜನರ ಪರವಾಗಿ ಅವರಿಗೆ ಕೈ ಮುಗಿದು ವಿನಂತಿಸುತ್ತೇನೆ. ವೈದ್ಯರು ಕೆಲಸಮಾಡಿ,ಆಸ್ಫತ್ರೆಗಳನ್ನು ತೆರೆದಿಡಿ,ನಮ್ಮ ನೆರವು ಬೇಕಾದರೆ ಕೇಳಿ, ಆದರೆ ಈ ಸಂಕಷ್ಟದ ಸಮಯದಲ್ಲಿ ಆಸ್ಫತ್ರೆ ಬಾಗಿಲುಮುಚ್ಚಿ ಜನರಿಗೆ ಅನ್ಯಾಯ ಮಾಡಬೇಡಿ ಎಂದು ವಿನಂತಿಸಿದರು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________

ನಿಜ ಒಳ್ಳೆಯ ಸಂದೇಶ ಸಾರಿದ್ದಾರೆ ಮಾನ್ಯ ಉಸ್ತುವಾರಿ ಸಚಿವರಿಗೆ ಧನ್ಯವಾದಗಳು🙏