
(ಮಕ್ಕಳಿಗಾಗಿ ಕವಿತಾ ವಾಚನ)
ಈ ಕೊರೋನ ಲಾಕ್ ಡೌನ್ ಸಮಯದಲ್ಲಿ ಸಮಯ ಕಳೆಯುವುದೇ ಮಕ್ಕಳಾದಿಯಾಗಿ ಎಲ್ಲರಿಗೂ ಒಂದು ದೊಡ್ಡ ಸವಾಲಾಗಿದೆ. ಶಾಲೆಗೆ ರಜೆ ಸಿಕ್ಕರೆ ಸಾಕು, ಕುಣಿಯುತ್ತಿದ್ದ ಮಕ್ಕಳು ಈಗ ಶಾಲೆ ಯಾವಾಗ ಶುರುವಾಗುತ್ತದೆ ಎನ್ನುವ ಕಾತುರದಲ್ಲಿವೆ.


ಧಾರವಾಡ: ಈ ಕೊರೋನ ಲಾಕ್ ಡೌನ್ ಸಮಯದಲ್ಲಿ ಸಮಯ ಕಳೆಯುವುದೇ ಮಕ್ಕಳಾದಿಯಾಗಿ ಎಲ್ಲರಿಗೂ ಒಂದು ದೊಡ್ಡ ಸವಾಲಾಗಿದೆ. ಶಾಲೆಗೆ ರಜೆ ಸಿಕ್ಕರೆ ಸಾಕು, ಕುಣಿಯುತ್ತಿದ್ದ ಮಕ್ಕಳು ಈಗ ಶಾಲೆ ಯಾವಾಗ ಶುರುವಾಗುತ್ತದೆ ಎನ್ನುವ ಕಾತುರದಲ್ಲಿವೆ. ಇಂಥ ಸಮಯದಲ್ಲಿ ನಮ್ಮ ಕವಿಗಳು ತಾವಿರುವ ಸ್ಥಳದಿಂದಲೇ ತಮ್ಮ ರಚನೆಯ ಮಕ್ಕಳ ಕವಿತೆಗಳನ್ನು ವಾಚನ ಮಾಡಿ ಮಕ್ಕಳ ಮನ ರಂಜಿಸಲು ನೋಡಿದ್ದಾರೆ.
ನವೋದಯ, ನಂತರದ ನಮ್ಮ ಶಿಕ್ಷಕ ಸಮುದಾಯದ ಹಂಬಲದಲ್ಲಿ ಹರಿಯುತ್ತ ಬಂದಿರುವ ಮಕ್ಕಳ ಕಾವ್ಯ ಹೊಸಗಾಲದಲ್ಲಿ ಸಾಕಷ್ಟು ಹೊಸ ತುಡಿತಗಳಿಂದ, ವಿಭಿನ್ನ ದೃಷ್ಟಿಕೋನದ ಹಿನ್ನೆಲೆಯಲ್ಲಿ, ವಿರಳವಾಗಿಯಾದರೂ ಮೂಡಿಬರುತ್ತಲೇ
ಇದೆ. ಅದರ ಒಂದು ಝಲಕು ಕಾಣಿಸುವ ಬಯಕೆಯ ಫಲವೇ ಈ “ಕೂಹೂ ಕೂಹೂ”.
ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ತಮ್ಮ ರಚನೆಯ ಮಕ್ಕಳ ಕವನ ವಾಚನದ ಮೂಲಕ “ಕುಹೂ ಕುಹೂ” ವೀಡಿಯೊ ಸಂಪಾದನೆಯನ್ನು ನಾಡೋಜ ಡಾ.ಚೆನ್ನವೀರ ಕಣವಿ ಅವರು ತಮ್ಮ ಮನೆ ಚೆಂಬೆಳೆಕಿನಲ್ಲಿ ಬಿಡುಗಡೆಗೊಳಿಸಿದರು.
ನಾಡಿನ ವಿವಿಧ ಭಾಗಗಳಿಂದ ಸುಮಾರು ಇಪ್ಪತ್ತೊಂದು ಕವಿಗಳು ಭಾಗಿಯಾಗಿದ್ದು, ಇದರ ಸಂಪಾದನೆಯನ್ನು ಬಾಗಲಕೋಟೆಯ ಬಸವೇಶ್ವರ ಎಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಮತ್ತು ಮಕ್ಕಳ ಕವಿ ರಾಜಶೇಖರ ಕುಕ್ಕುಂದಾ ಅವರು
ಮಾಡಿದ್ದಾರೆ.
ಭಾಗಿಯಾದ ಕವಿಗಳು:
ಎಚ್.ಎಸ್.ವೆಂಕಟೇಶಮೂರ್ತಿ,ಬೆಂಗಳೂರು
ಎನ್. ಶ್ರೀನಿವಾಸ ಉಡುಪ, ಬೆಂಗಳೂರು
ಕೆ.ವಿ.ತಿರುಮಲೇಶ್, ಹೈದ್ರಾಬಾದ್
ಎನ್.ಆರ್.ನಾಯಕ, ಹೊನ್ನಾವರ
ಚಿಂತಾಮಣಿ ಕೊಡ್ಲೆಕೆರೆ, ಬೆಂಗಳೂರು
ಟಿ.ಎಸ್.ನಾಗರಾಜ ಶೆಟ್ಟಿ, ತಿಪಟೂರು
ಎಚ್.ಡುಂಡಿರಾಜ್, ಬೆಂಗಳೂರು
ಆನಂದ ಪಾಟೀಲ, ಧಾರವಾಡ
ರಾಜಶೇಖರ ಕುಕ್ಕುಂದಾ, ಬಾಗಲಕೋಟೆ
ಕೃಷ್ಣಮೂರ್ತಿ ಬಿಳಿಗೆರೆ, ತಿಪಟೂರು
ರಾಧೇಶ ತೋಳ್ಪಾಡಿ ಎಸ್., ಬಂಟ್ವಾಳ
ತಮ್ಮಣ್ಣ ಬೀಗಾರ, ಸಿದ್ದಾಪುರ
ಭಾಗೀರಥಿ ಹೆಗಡೆ, ಶಿರಸಿ
ನಾಗರಾಜ ವಸ್ತಾರೆ, ಬೆಂಗಳೂರು
ಚಂದ್ರಗೌಡ ಕುಲಕರ್ಣಿ, ತಾಳೀಕೋಟೆ
ವಿಜಯಶ್ರೀ ಹಾಲಾಡಿ, ಮೂಡಬಿದ್ರೆ
ವಿನಾಯಕ ರಾ. ಕಮತದ, ಗದಗ
ಛಾಯಾ ಭಗವತಿ, ಬೆಂಗಳೂರು
ಹುಣಸೂರು ಮಾದುಪ್ರಸಾದ್, ಮೈಸೂರು
ಸುರೇಶ ಕಂಬಳಿ, ಕೊಪ್ಪಳ
ಲಲಿತಾ ಕೆ. ಹೊಸಪ್ಯಾಟಿ, ಹುನಗುಂದ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
