ಈ ವಾರ ಉತ್ತರಕನ್ನಡ- ಹಲಸಿನ ಕಾಯಿ ವಿವಾದ ಕಾಂಗ್ರೆಸ್ ಮುಖಂಡನಿಂದ ಕೊಲೆ ಯತ್ನ, ಯೋಜನಾ ಕಾರ್ಯಕರ್ತರ ಹಕ್ಕುಗಳ ರಕ್ಷಣೆಗೆ ಮೇ ಡೆ ಆಚರಣೆ


ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ಭೀತಿ, ಮಂಗನಕಾಯಿಲೆ ಆತಂಕಗಳ ನಡುವೆ ಮೇ ಡೆ ನಡೆದು ಮಳೆಯಿಂದ ಇಳೆ ತಂಪು ಮಾಡಿದೆ.
ಕರೋನಾ ಸಂತೃಸ್ತರಿಗೆ ನೆರವು ನೀಡುವ ವಿಚಾರದಲ್ಲಿ ಪ್ರಮುಖ ಜನಪ್ರತಿನಿಧಿಗಳು,ಹಳೆಯ ರಾಜಕಾರಣಿಗಳು ಸ್ಫಂದಿಸಲಿಲ್ಲ ಎನ್ನುವ ಆರೋಪದ ನಡುವೆ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಮ್ಮ ಕ್ಷೇತ್ರ ಮುಂಡಗೋಡು, ಯಲ್ಲಾಪುರಗಳಲ್ಲಿ ಫುಡ್‍ಕಿಟ್ ವಿತರಿಸಿದ್ದಾರೆ.
ಮೇ ಡೆ ಆಚರಣೆ-
ಜಿಲ್ಲೆಯ ಅಂಕೋಲಾ, ಸಿದ್ಧಾಪುರ ಸೇರಿದಂತೆ ಕೆಲವೆಡೆ ಮೇ1 ರ ಮೇ ಡೆ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಅಂಕೋಲಾ ಅಗಸೂರಿನಲ್ಲಿ ಶಾಂತಾರಾಮ ನಾಯಕರ ನೇತೃತ್ವದಲ್ಲಿ ಕೆಲವೇ ಜನರು ಸೇರಿ ಮೇ ಡೆ ಆಚರಣೆ ಮಾಡಿ ತಮ್ಮ ಬೇಡಿಕೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದರು.
ಸಿದ್ಧಾಪುರದಲ್ಲಿ ಯಮುನಾ ಗಾಂವ್ಕರ್ ಮೇ ಡೆ ಆಚರಣೆ ಅಂಗವಾಗಿ ಕಾರ್ಮಿಕರ ಬೇಡಿಕೆಗಳನ್ನು ತಿಳಿಸಿದರು, ಕಾರ್ಮಿಕರಿಗೆ ದಿನದ 12 ತಾಸುಗಳ ಕೆಲಸಗಳೊಂದಿಗೆ ಅನೇಕ ಯೋಜನಾ ಕಾರ್ಯಕರ್ತರು, ಗುತ್ತಿಗೆ ಕಾರ್ಮಿಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಮಾನವೀಯವಾಗಿ ವರ್ತಿಸುತ್ತಿರುವ ಬಗ್ಗೆ ದಾಖಲೆ, ಅಂಕಿಸಂಖ್ಯೆಗಳೊಂದಿಗೆ ವಿವರಿಸಿದರು.
ಲಾಕ್ ಔಟ್,ನಿಶೇಧಾಜ್ಞೆ ಹಿನ್ನೆಲೆಗಳಲ್ಲಿ ಎಲ್ಲಾ ಕಾರ್ಮಿಕರಿಗೆ ತಮ್ಮ ಮನೆಯಲ್ಲೇ ಕುಳಿತು ಮೇ ಡೆ ಆಚರಣೆ ಮಾಡಿಸಿದ ಕಾರ್ಮಿಕ ಮುಖಂಡರ ಸಾಮಾಜಿಕ ಜಾಲತಾಣದ ಲೈವ್ ಪರಿಣಾಮಕಾರಿಯಾಗಿ ಮೂಡಿಬಂತು.

ಸಿದ್ಧಾಪುರದಲ್ಲಿ ಕ್ಷೇತ್ರದ ಮಳೆಗಾಲದ ಮುಂಜಾಗೃತೆ, ಕುಡಿಯುವ ನೀರಿನ ಬವಣೆ ಹಾಗೂ ಕರೋನಾ ಮತ್ತು ಮಂಗನಕಾಯಿಲೆಗಳ ಕುರಿತ ಅಧಿಕಾರಿಗಳ ಸಭೆ ನಡೆಸಿದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಗತ್ಯ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ಆದೇಶಿಸಿದರು.
ಕೊಲೆ ಯತ್ನ-
ಕಾಂಗ್ರೆಸ್ ಮುಖಂಡ ಅಂಕೋಲಾ ಅಡ್ಲೂರಿನ ಗೋಪಾಲಕೃಷ್ಣ ನಾಯಕ ತನ್ನ ಕೆಲಸಗಾರರೊಂದಿಗೆ ಸ್ಥಳಿಯ ವ್ಯಕ್ತಿಯೊಬ್ಬರ ಮೇಲೆ ಗುಂಡಿನದಾಳಿಗೆ ಯತ್ನಿಸಿದ್ದು ಅವರೊಂದಿಗೆ ಒಟ್ಟೂ ನಾಲ್ಕು ಜನರ ಮೇಲೆ ಕೊಲೆಯತ್ನದ ಪ್ರಕರಣ ದಾಖಲಾಗಿದೆ. ಹಲಸಿನ ಹಣ್ಣು ಕಿತ್ತ ಕಾರಣಕ್ಕೆ ಉಂಟಾದ ವಿವಾದ ಕೊಲೆಯತ್ನದಲ್ಲಿ ಪರ್ಯಾವಸಾನವಾಗಿದ್ದು ಪ್ರಮುಖ 2 ಜನ ಆರೋಪಿಗಳು ಪರಾರಿಯಾಗಿದ್ದರೆ ಇನ್ನಿಬ್ಬರು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಗೋಪಾಲಕೃಷ್ಣ ನಾಯಕ ಸ್ಥಳಿಯರೊಬ್ಬರಿಗೆ ರಿವಾಲ್ವರ್ ನಿಂದ ಹೊಡೆದು ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುವ ಆರೋಪ ಮಾಡಲಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

mirjan port- ಹಳೆ ವೈಭವ ಸಾರುವ ಹೊಸ ಪ್ರವಾಸಿ ತಾಣ ಕುಮಟಾದ ಮಿರ್ಜಾನ ಕೋಟೆ

ಒಂದು ದೇಶದ ವೈಭವವನ್ನು ಆದೇಶದ ಇತಿಹಾಸ ಚರಿತ್ರೆಗಳ ಮೂಲಕ ಅಳೆಯಲಾಗುತ್ತದೆ. ಅವಿಭಜಿತ ಭಾರತ ಬಹುವಿಶಾಲ ರಾಷ್ಟ್ರವಾಗಿತ್ತು. ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕೇರಳದಿಂದ ಗೋದಾವರಿ ನದಿ...

ನ್ಯೂಸ್‌ ರೌಂಡ್… ಶಿಕ್ಷಣ ಇಲಾಖೆಗೆ ಶ್ಲಾಘನೆ, ಲೋಕೋಪಯೋಗಿ ಇಲಾಖೆಗೆ ಎಚ್ಚರಿಕೆ!

ಎತ್ತಿನ ಗಾಡಿ ಏರಿದ ಶಾಸಕ- ರೈತ, ಶಾಸಕ ಭೀಮಣ್ಣ ನಾಯ್ಕ ಸಿದ್ಧಾಪುರ ಪ್ರಥಮ ದರ್ಜೆ ಕಾಲೇಜ್‌ ಜಾನಪದ ಉತ್ಸವಕ್ಕೆ ಎತ್ತಿನ ಗಾಡಿ ಮೂಲಕ ಬಂದು...

ಶಿರೂರು…ಮತ್ತೊಂದು ದುರಂತ! ಶಿರಸಿ-ಅಂಕೋಲಾ ರಸ್ತೆ ಬಂದ್!

ಶಿರೂರು ಭೂಕುಸಿತದಿಂದ ಬದುಕುಳಿದಿದ್ದ ವೃದ್ಧ ಸಿಡಿಲು ಬಡಿದು ಸಾವು ಮೃತನನ್ನು ಗ್ರಾಮದ ತಮ್ಮಣ್ಣಿ ಅನಂತ ಗೌಡ (65) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ...

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

Latest Posts

mirjan port- ಹಳೆ ವೈಭವ ಸಾರುವ ಹೊಸ ಪ್ರವಾಸಿ ತಾಣ ಕುಮಟಾದ ಮಿರ್ಜಾನ ಕೋಟೆ

ಒಂದು ದೇಶದ ವೈಭವವನ್ನು ಆದೇಶದ ಇತಿಹಾಸ ಚರಿತ್ರೆಗಳ ಮೂಲಕ ಅಳೆಯಲಾಗುತ್ತದೆ. ಅವಿಭಜಿತ ಭಾರತ ಬಹುವಿಶಾಲ ರಾಷ್ಟ್ರವಾಗಿತ್ತು. ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕೇರಳದಿಂದ ಗೋದಾವರಿ ನದಿ ತೀರದ ವರೆಗೆ ಕನ್ನಡ ನಾಡೇ ಪಸರಿಸಿತ್ತು ಎಂದು ಹೇಳಲಾಗುತ್ತದೆ. ಆಯಾ ಕಾಲದ ಅರಸರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ನೆರೆ ಹೊರೆಯವರನ್ನು ಮತ್ತಷ್ಟು ಸರಿಸುತ್ತಾ ತಮ್ಮ ವ್ಯಾ ಪ್ತಿಯನ್ನು ವಿಸ್ತರಿಸುತಿದ್ದರು....

Recommended For You

About the Author: Kanneshwar Naik

Leave a Reply

Your email address will not be published. Required fields are marked *