

ಕೇರಳದಲ್ಲಿ ಇದುವರೆಗೂ ಒಟ್ಟು 499 ಕೊರೊನಾ ಪ್ರಕರಣಗಳು ದೃಡಪಟ್ಟಿದ್ದರೂ ಅದರಲ್ಲಿ 401 ರೋಗಿಗಳು ಗುಣಮುಖರಾಗಿದ್ದಾರೆ. ನಾಲ್ವರು ಮರಣ ಹೊಂದಿದ್ದು, 95 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ


ಕೇರಳ ಕೊರೊನಾ ಸೋಂಕಿನ ವಿರುದ್ದ ಹೊಸ ಸಾಧನೆ ಮಾಡಿದೆ. ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಹೊಸ ಕೊರೊನಾ ಪತ್ತೆಯಾಗಿಲ್ಲ. ಆ ಮೂಲಕ ಕೇರಳ ಈ ದಾಖಲೆಯನ್ನು ಎರಡನೇ ಬಾರಿಗೆ ಮಾಡಿದೆ. ಈ ಹಿಂದೆ ಮಾರ್ಚ್ 3 ಕ್ಕೆ ಸಹ ಯಾವುದೇ ಪ್ರಕರಣಗಳು ವರದಿಯಾಗಿರಲಿಲ್ಲ.
ಕೇರಳದಲ್ಲಿ ಭಾನುವಾರ ಯಾವುದೇ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ. ಮಾರ್ಚ್ 3 ರ ನಂತರ ಇದು ಎರಡನೇ ಬಾರಿಯಾಗಿದ್ದು, ಪಥನಂತಿಟ್ಟ ಜಿಲ್ಲೆಗೆ ಇಟಲಿಯಿಂದ ಹಿಂದಿರುಗಿದವರೊಬ್ಬರ ಕುಟುಂಬದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾದ ಮೇ 1 ರ ನಂತರ ಕೇರಳದಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ.


ಕೇರಳದಲ್ಲಿ ಇದುವರೆಗೂ ಒಟ್ಟು 499 ಕೊರೊನಾ ಪ್ರಕರಣಗಳು ದೃಡಪಟ್ಟಿದ್ದರೂ ಅದರಲ್ಲಿ 401 ರೋಗಿಗಳು ಗುಣಮುಖರಾಗಿದ್ದಾರೆ. ನಾಲ್ವರು ಮರಣ ಹೊಂದಿದ್ದು, 95 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಿಟ್ಟಿನಲ್ಲಿ ಕೇರಳದ್ದು ದಾಖಲೆ ಎಂದೇ ಹೇಳಬಹುದು. ಅತಿ ಹೆಚ್ಚು ಜನರನ್ನು ಗುಣಮುಖರನ್ನಾಗಿ ಮಾಡಿರುವ ಸಾಧನೆ ಈ ರಾಜ್ಯದ್ದಾಗಿದೆ. ಇದರ ಹಿಂದಿರುವ ಅಲ್ಲಿನ ಮುಖ್ಯಮಂತ್ರಿ ಮತ್ತು ಆರೋಗ್ಯ ಮಂತ್ರಿಯ ಕಾಳಜಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಆದರೂ ಕೇರಳವನ್ನು ಕಾಲೆಳೆಯುವವರ ಸಂಖ್ಯೆಯೇನು ಕಡಿಮೆಯಿಲ್ಲ. ಕರ್ನಾಟಕದ ಮೂಲದ ದೆಹಲಿ ನಿವಾಸಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಬಿ.ಎಲ್ ಸಂತೋಷ್ರವರು ಏಪ್ರಿಲ್ 29 ರಂದು ಟ್ವೀಟ್ ಮಾಡಿ “ಕೇರಳ ರೆಡ್ ಝೋನ್ನತ್ತ ದಾಪುಗಾಲಿಡುತ್ತಿದೆ. ಇಡುಕ್ಕಿ, ಕೊಟ್ಟಾಯಂ ಮತ್ತು ಕೊಲ್ಲಂನಲ್ಲಿ ಹೊಸ ಪ್ರಕರಣಗಳು ದಾಖಲಾಗಿವೆ. 20 ಸಾವಿರ ಕೋಟಿ ಪ್ಯಾಕೇಜ್ ಗಾಳಿಗೆ ತೂರಿಹೋಗಿದೆ. ಹಾಗಾಗಿ ಸರ್ಕಾರಿ ನೌಕರರ ಸಂಬಳಕ್ಕೆ ಕತ್ತರಿ ಹಾಕುತ್ತಿರುವ ಮೊದಲ ರಾಜ್ಯ ಎಂದು ಟೀಕಿಸಿದ್ದರು.
ಅವರ ಮತ್ತೊಂದು ಟ್ವೀಟ್ನಲ್ಲಿ “ನಾವು ಬಿಲ್ವಾಲ ಮಾದರಿ, ಕೇರಳ ಮಾದರಿ, ಪ್ರಪಂಚದ ಬೆಸ್ಟ್ ಸಿಎಂ ಎಂದು ಚರ್ಚಿಸುತ್ತಿರುವಾಗಲೇ ಹಿಮಾಚಲ ಪ್ರದೇಶ ಸಾಧನೆ ಮಾಡಿದೆ. ಕೇವಲ 08 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಹಿಮಾಚಲ ಪ್ರದೇಶವನ್ನು ಹೊಗಳಿದ್ದರು.
ಆದರೆ ಕೇರಳ ಈಗ ಸತತ ಎರಡು ದಿನದಿಂದ ಒಂದೂ ಪ್ರಕರಣಗಳನ್ನು ದಾಖಲಿಸದೆ ಸಾಧನೆ ಮೆರೆದಿದ್ದರೂ ಬಿ.ಎಲ್ ಸಂತೋಷ್ ಯಾವುದೇ ಟ್ವೀಟ್ ಮಾಡಿಲ್ಲ.
ಇನ್ನು ಕೇರಳದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ 80 ಹಾಟ್ಸ್ಪಾಟ್ಗಳ ಪಟ್ಟಿಗೆ ಇನ್ನೂ ನಾಲ್ಕು ಹಾಟ್ಸ್ಪಾಟ್ಗಳನ್ನು ಸೇರಿಸಲಾಗಿದೆ. ಮನಂತವಾಡಿ ಪುರಸಭೆಯನ್ನು ಹಾಟ್ಸ್ಪಾಟ್ ಎಂದು ಹೆಸರಿಸಲಾಗಿದೆ. ಕೇರಳದಲ್ಲಿ ಹಾಟ್ಸ್ಪಾಟ್ ಎಂದು ಮೊದಲು ಗುರುತಿಸಿದ ವಯನಾಡ್ನಲ್ಲಿ ಸುಮಾರು ಒಂದು ತಿಂಗಳ ನಂತರ ಮೇ 2 ರಂದು ಒಂದು ಕೊರೊನಾ ಪ್ರಕರಣ ದಾಖಲಾಗಿದೆ. ಸಕಾರಾತ್ಮಕ ಪ್ರಕರಣವನ್ನು ಕಂಡಿತು.
ಸದ್ಯಕ್ಕೆ ಯಾವುದೇ ಸಕ್ರಿಯ ಪ್ರಕರಣಗಳಿಲ್ಲದ ಎರ್ನಾಕುಲಂ ಜಿಲ್ಲೆಯ ಎಡಕಟ್ಟುವಾಯಲ್ ಮತ್ತು ಮಂಜಲ್ಲೂರು ಪಂಚಾಯತುಗಳನ್ನು ಹೊಸ ಹಾಟ್ಸ್ಪಾಟ್ಗಳೆಂದು ಗುರುತಿಸಲಾಗಿದೆ. ಎಡಕ್ಕಟ್ಟುವಾಯಲ್ ಪಂಚಾಯತಿನಲ್ಲಿ ನಾಲ್ವರು ಕೊರೊನಾ ಶಂಕಿತ ವ್ಯಕ್ತಿಗಳು ಭಾನುವಾರ ನೆಗೆಟಿವ್ ಪರೀಕ್ಷೆ ನಡೆಸಿದ್ದರು. ಇವರೆಡು ಪಂಚಾಯತುಗಳು ಇಡುಕ್ಕಿ ಜಿಲ್ಲೆಯ ಗಡಿಯಾಗಿರುವ ಕಾರಣ ಎರಡೂ ಪಂಚಾಯಿತಿಗಳನ್ನು ಹಾಟ್ಸ್ಪಾಟ್ಗಳಾಗಿ ಗೊತ್ತುಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿ ಈಗಾಗಲೇ ಗೋವಾ ಹಾಗೂ ಈಶಾನ್ಯ ಭಾರತದ ಐದು ರಾಜ್ಯಗಳು ಕೊರೊನಾ ಮುಕ್ತ ರಾಜ್ಯಗಳು ಎಂದು ಘೋಷಸಿವೆ. ದೇಶದಲ್ಲಿ ಮೊದಲ ಭಾರಿಗೆ ಕೇರಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿ ಅವರು ಗುಣಮುಖರಾಗಿದ್ದರು. ನಂತರದಲ್ಲಿ ಕೇರಳವೂ ಭಾರತದಲ್ಲೇ ಹೆಚ್ಚಿನ ಕೊರೊನಾ ಸೋಂಕಿತರನ್ನು ಹೊಂದಿದ್ದ ರಾಜ್ಯವಾಗಿತ್ತಾದರೂ ಈಗ ಆಶ್ಚರ್ಯಕರ ರೀತಿಯಲ್ಲಿ ಕೊರೊನಾವನ್ನು ನಿಯಂತ್ರಣ ಮಾಡುತ್ತಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






