ಸ್ತಬ್ಧವಾದ ವಾತಾವರಣ- ಕಾಡುಪ್ರಾಣಿಗಳ ಕಲರವ!

ಲಾಕ್ ಡೌನ್ ಸಡಿಲಗೊಂಡ ನಂತರ ಬೆಳಿಗ್ಗೆ ಸಮಯದಲ್ಲಿ ವಾಹನಗಳ ಓಡಾಟ ಪ್ರಾರಂಭವಾಗಿದ್ದರೂ ಮಧ್ಯಾಹ್ನದ ನಂತರ ಉತ್ತರ ಕನ್ನಡ ಸ್ತಬ್ಧವಾಗುತ್ತಿದೆ. ಜನಜಂಗುಳಿ, ವಾಹನಗಳ ಓಡಾಟವಿಲ್ಲದ ಉತ್ತರಕನ್ನಡದಲ್ಲಿ ಕಾಡುಪ್ರಾಣಿಗಳು ಅಂಜಿಕೆ ಇಲ್ಲದೆ ಸಂಚರಿಸುತ್ತಿರುವ ವಿದ್ಯಮಾನ ವರದಿಯಾಗಿದೆ.
ಸಿದ್ಧಾಪುರದ ಕಾನಸೂರು,ಹೇರೂರು ಭಾಗದಲ್ಲಿ ಹುಲಿಯೊಂದು ಸಂಚರಿಸಿದ ಹೆಜ್ಜೆಗುರುತು ಕಂಡಿರುವ ಬಗ್ಗೆ ಸ್ಥಳಿಯರು ಸಮಾಜಮುಖಿಗೆ ಮಾಹಿತಿ ನೀಡಿದ್ದಾರೆ. ಇದು ಹುಲಿಹೆಜ್ಜೆ ಕತೆಯಾದರೆ, ಜೋಗರಸ್ತೆಯ ಮಿಣಸಿ ಬಳಿ ಸಾಯಂಕಾಲದ ಸಮಯದಲ್ಲಿ ಕಾಡುಹಂದಿಗಳ ಹಿಂಡೊಂದು ಪ್ರತ್ಯಕ್ಷವಾಗಿ ದ್ವಿಚಕ್ರವಾಹನದಲ್ಲಿ ಬರುತಿದ್ದ ಪೊಲೀಸ್ ಹವಾಲ್ಧಾರರೊಬ್ಬರನ್ನು ವಾಹನದಿಂದ ಕೆಡವಿ ಗಾಯಾಳುಮಾಡಿದ ಘಟನೆ ನಡೆದಿದೆ. ಪಡವನಬೈಲ್ ಬಳಿ ನಡೆದ ಈ ಘಟನೆಯಲ್ಲಿ ಹವಾಲ್ಧಾರ ಯಲ್ಲಪ್ಪ ಕಾಗವಾಡ ಗಾಯಗೊಂಡಿದ್ದಾರೆ.

ಕರೋನಾ ವರದಿ-
ಕರೋನಾ ಕಾರಣದಿಂದ ಜನಸಾಮಾನ್ಯರು ಧರಿಸಬೇಕಾದ ಮಾಸ್ಕ್ ಗಳನ್ನು ತಯಾರಿಸಿ, ಉಚಿತವಾಗಿ ಹಂಚುವ ಮೂಲಕ ರಾಜ್ಯ ರಣಧೀರ ಪಡೆ ತಾಲೂಕಾಧ್ಯಕ್ಷ ಹೇಮಂತ್ ನಾಯ್ಕ ಸಹಕರಿಸಿದ್ದಾರೆ. ತಾ.ಪಂ. ಸದಸ್ಯ ನಾಶಿರ್ ಖಾನ್ ತಾಲೂಕಿನ ಕೆಲವೆಡೆ ಜನರಿಗೆ ತರಕಾರಿಗಳ ಕಿಟ್ ವಿತರಿಸುವ ಮೂಲಕ ದುರ್ಬಲರ ನೆರವಿಗೆ ಬಂದಿದ್ದಾರೆ.

ಸಿದ್ಧಾಪುರ ಬಾನ್ಕುಳಿ ಗ್ರಾಮದಲ್ಲಿ ಮಠದ ವಿಪರೀತ ಅರಣ್ಯ ಅತಿಕ್ರಮಣ ನೋಡಿ ಸುಮ್ಮನಿರುವ ಅರಣ್ಯ ಇಲಾಖೆ ಬಡ ರೈತರ ಮನೆ ಧ್ವಂಸ ಮಾಡಿದ ಬಗ್ಗೆ ಸಾರ್ವಜನಿಕರ ತಕರಾರೆದ್ದಿದೆ. ಈ ಘಟನೆ ನಡೆದ ಭಾನ್ಕುಳಿ ಗ್ರಾಮಕ್ಕೆ ಜಿಲ್ಲಾ ಕಾಂಗ್ರೆಸ್ ಸಮೀತಿ ಭೇಟಿ ನೀಡಿ ಸಾಂತ್ವನ ಹೇಳುವಲ್ಲಿ ಯಶಸ್ವಿಯಾಗಿದೆ.

ಜಿಲ್ಲೆಯ ಕರೋನಾ ರಗಳೆಗಳ ನಡುವೆ ಸಂಸದ ಅನಂತಕುಮಾರ ತೆರೆಮರೆಯಲ್ಲಿ ಕುಳಿತಿದ್ದು ಈಗ ಮತ್ತೊಂದು ವಿವಾದಾತ್ಮಕ ವಿಷಯದ ಮೂಲಕ ತಮ್ಮ ಇರುವನ್ನು ಸಾಬೀತು ಮಾಡಿದ್ದಾರೆ. ಅನಂತಕುಮಾರ ಹೆಗಡೆಯವರ ಈ ವರ್ತನೆ ವಿರುದ್ಧ ಎಸ್.ಡಿ.ಪಿ.ಆಯ್. ಆಕ್ಷೇಪ ವ್ಯಕ್ತಪಡಿಸಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *