ಭಟ್ಕಳ ಸೀಲ್ ಡೌನ್ ಸಾಧ್ಯತೆ?

ಒಂದೇ ದಿನ 12 ಕೋವಿಡ್ ಸೋಂಕಿತರ ಹೊಸ ಸೇರ್ಪಡೆ, ಎರಡು ಡಜನ್ ಕರೋನಾ ರೋಗಿಗಳನ್ನು ಮಡಿಲ್ಲಿಟ್ಟುಕೊಂಡಿರುವ ಭಟ್ಕಳ ಸೀಲ್ ಡೌನ್ ಆಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಭಟ್ಕಳದ ಕೋವಿಡ್ ರೋಗಿಗಳು, ಆ ಪ್ರದೇಶದ ಮೇಲೆ ರಾಜಕಾರಣಿಗಳಿಗಿರುವ ಪೂರ್ವಾಗ್ರಹ, ಅಲ್ಲಿಯ ಈಗಿನ ಸ್ಥಿತಿ-ಗತಿಗಳ ಆಧಾರದಲ್ಲಿ ಭಟ್ಕಳ ಸೀಲ್ ಡೌನ್ ಆಗುವ ಸಾಧ್ಯತೆ ಹೆಚ್ಚಿದೆ.
ಭಟ್ಕಳ ಮತ್ತು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕೋವಿಡ್ ಸೋಂಕು ವಿಸ್ತರಣೆ, ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ನಿರೀಕ್ಷೆ ಮೀರಿ ಯಶಸ್ವಿಯಾಗಿದ್ದ ಜಿಲ್ಲಾಡಳಿತಕ್ಕೆ ಇಂದು ಒಂದೇ ದಿನ ದೃಢಪಟ್ಟ ಹೊಸ 12 ಕರೋನಾ ಪ್ರಕರಣಗಳು ಜಿಲ್ಲೆಯ ಪರಿಸ್ಥಿತಿಯನ್ನೇ ಬದಲಿಸಿವೆ. ಭಟ್ಕಳದ ಪರಿಸ್ಥಿತಿ ಅವಲೋಕಿಸಿರುವ ಜಿಲ್ಲಾಡಳಿತ ಈಗಾಗಲೇ ಸಕಲ ವ್ಯವಸ್ಥೆ, ಮುಂಜಾಗ್ರತಾ ಕ್ರಮಗಳನ್ನು ಸಮರೋಪಾದಿಯಲ್ಲಿ ಮಾಡಿದ್ದು ಇದರ ಮುಂದಿನ ಭಾಗವಾಗಿ ಭಟ್ಕಳ ಸೀಲ್ ಡೌನ್ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನಲಾಗುತ್ತಿದೆ.

(related) ಇಂದು ಈ ನಾಡು-
ಜನಸಾಮಾನ್ಯರೇ ದೇಶದ ಸ್ವತ್ತು ಎಂಬುದನ್ನು ಮರೆಯದಿರೋಣ

ಕರೋನಾ ಆರ್ಭಟ ಮುಂದುವರಿದಿದೆ. ರಾಜ್ಯದಲ್ಲಿ ಈ ವರೆಗಿನ ಕರೊನಾ ಸೋಂಕಿತರೊಂದಿಗೆ
ಇಂದಿನ ಹೊಸ 45 ಪ್ರಕರಣಗಳು ಸೇರಿ ಒಟ್ಟೂ ಕೋವಿಡ್ ಸೋಕಿತರ ಸಂಖ್ಯೆ 750 ದಾಟಿದೆ.
ಉತ್ತರಕನ್ನಡದಲ್ಲಿ ಭಟ್ಕಳದ 12 ಜನರಲ್ಲಿ ಇಂದು ದೃಢಪಟ್ಟ ಕೋವಿಡ್ ಸೋಕಿತ 12 ಜನರಿಂದ ಭಟ್ಕಳ ಮತ್ತು ಉತ್ತರ ಕನ್ನಡದ ಸ್ಥಿತಿಯೇ ಬದಲಾಗಿದೆ. ಭಟ್ಕಳದಲ್ಲಿ ಪ್ರಾರಂಭದಲ್ಲಿ ಆಕಸ್ಮಿಕವಾಗಿ ಪತ್ತೆಯಾದ 12 ಕರೋನಾ ಪ್ರಕರಣಗಳಿಗೂ ಇಂದು ಮತ್ತೆ ದೃಢ ಪಟ್ಟ 12 ಪ್ರಕರಣಗಳಿಗೂ ವ್ಯತ್ಯಾಸವಿದೆ.

ಜಿಲ್ಲೆಯಲ್ಲಿ ಕೆಲವು ಪ್ರಮುಖ ರಾಜಕಾರಣಿಗಳ ಬೇಜವಾಬ್ಧಾರಿ, ಉಡಾಫೆಗಳ ನಡುವೆ ಇಲ್ಲಿಯ ಹಿರಿಯ ಕ್ರೀಯಾಶೀಲ ಅಧಿಕಾರಿಗಳ ನೇತೃತ್ವದಲ್ಲಿ ಉತ್ತರಕನ್ನಡ ಜಿಲ್ಲೆ ಕೋವಿಡ್ ನಿಯಂತ್ರಣದಲ್ಲಿ ಯಶಸ್ವಿಯಾಗಿತ್ತು. ಆದರೆ ಜಿಲ್ಲೆಯ ಸ್ಥಿತಿ ಇಡೀ ಬಿಳಿಯನ್ನು ಕಪ್ಪು ಚುಕ್ಕೆ ಮರೆಸಿತು ಎನ್ನುವಂತೆ ಭಟ್ಕಳ ತಾಲೂಕಿನ ಕರೋನಾ ಪ್ರಕರಣಗಳ ಹೆಚ್ಚಳ ಉತ್ತರಕನ್ನಡ ಜಿಲ್ಲೆ, ಜಿಲ್ಲಾಡಳಿತದ ಶ್ರೇಯಸ್ಸಿಗೆ ಮಸಿ ಬಳಿದಂತಾಗಿದೆ. ಉ.ಕ. ದ ಭಟ್ಕಳ ಸೇರಿದಂತೆ ಎಲ್ಲಾ ತಾಲೂಕುಗಳಿಂದ ಹೊರಹೋಗುವವರು, ಜಿಲ್ಲೆ- ತಾಲೂಕುಗಳಿಗೆ ಬರುವವರ ಓಡಾಟ ಕಡಿಮೆಯೇನಲ್ಲ. ಅಧಿಕಾರಿಗಳಿಂದ ಪಾಸ್ ಪಡೆದೆ ಪ್ರವಾಸ ಮಾಡುತ್ತಿರುವ ಜಿಲ್ಲೆಯ ಜನರ ಪ್ರಮಾಣ ಇತರರನ್ನು ಧೈರ್ಯಗೆಡಿಸುವಂತಿದೆ. ಪ್ರತಿದಿನ ಪ್ರತಿ ತಾಲೂಕುಗಳಿಂದ ಬೆಂಗಳೂರಿಗೆ ಪ್ರಯಾಣಿಸುವವರು, ಅಲ್ಲಿಂದ ಸ್ವತಾಲೂಕು,ಜಿಲ್ಲೆಗೆ ಮರಳುವವರ ಸಂಖ್ಯೆ ಜಿಲ್ಲೆಯ ನೆಮ್ಮದಿಗೆ ಭಂಗ ತರುವಂತಿದೆ.

ಉತ್ತರ ಕನ್ನಡ ಸೇರಿದಂತೆ ರಾಜ್ಯದಲ್ಲಿ ಏರುತ್ತಿರುವ ಕರೋನಾ ಸೋಂಕಿತರ ಸಂಖ್ಯೆ ಕೋವಿಡ್ 19 ನ ಭೀಕರತೆಯನ್ನು ಪರಿಚಯಿಸುವಂತಿದೆ. ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ, ಅಧಿಕಾರಿಗಳ ಅವಿರತ ಶ್ರಮದಿಂದಾಗಿ ಶಾಂತಿ-ಸುವ್ಯವಸ್ಥೆ, ವಾತಾವರಣ ಸಮತೋಲನದಲ್ಲಿದೆ. ಆದರೆ ಅನಾಗರಿಕರಂತೆ ಮಾತನಾಡುವ ರಾಜಕಾರಣಿಗಳು, ಪರಿಸ್ಥಿತಿಯ ಅಪಾಯ ಅರಿಯದ ಜನರಿಂದ ಜಿಲ್ಲೆ ಬೆಲೆತೆರಬೇಕಾದ ಅಪಾಯದ ಮುನ್ಸೂಚನೆ ನಿಚ್ಚಳವಾಗಿದೆ. ಬರಲಿರುವ ಮಳೆಗಾಲ ಗಾಯದ ಮೇಲೆ ಬರೆ ಏಳೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಉ.ಕ. ಮಲೆನಾಡು, ಕರಾವಳಿಯ ಈಗಿನ ಸ್ಥಿತಿ ಬಾಣಲೆಯಲ್ಲಿ ಬೇಯುತ್ತಿರುವ ವಸ್ತುವಿನಂತಾಗಿದೆ. ಬಾಣಲೆ ತಣ್ಣಗಾಗಬೇಕೆಂದರೆ ಸಾರ್ವಜನಿಕರ ಸಹಕಾರ ಅಗತ್ಯ. ಬಾಣಲೆಯಿಂದ ಬೆಂಕಿಗೆ ಬೀಳುವ ಸ್ಥಿತಿಯ ಗಂಭೀರತೆ ಅರಿತ ಜಿಲ್ಲಾಡಳಿತ ಕಠಿಣ ಕ್ರಮಗಳಿಗೆ ಸಿದ್ಧರಾಗಬೇಕಾದ ಅನಿವಾರ್ಯತೆಯನ್ನು ಸೂಕ್ಷ್ಮವಾಗಿ ಇಂದೇ ಪ್ರಸ್ಥಾಪಿಸಿದೆ.
ಭಟ್ಕಳ ಮತ್ತು ಭಟ್ಕಳದ ಪ್ರಕರಣಗಳಿಂದ ಜಿಲ್ಲೆ ಕೆಂಪು ವಲಯವಾಗುವುದನ್ನು ತಪ್ಪಿಸುವುದು ಕಷ್ಟ. ಶ್ರೀಮಂತರು, ದಾನಿಗಳು, ಸ್ವಯಂ ಸೇವಕರು, ಅಧಿಕಾರಿಗಳು ತಮ್ಮ ಮಿತಿಯಲ್ಲಿ ಸೇವೆ ಸಲ್ಲಿಸುತ್ತಿರುವುದು ಉತ್ತರ ಕನ್ನಡ ಜಿಲ್ಲೆಯ ಸೊಬಗು. ಕಾನೂನು-ಸುವ್ಯವಸ್ಥೆ ಪಾಲಿಸುವ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಜನರ ಸ್ಫಂದನ ಪ್ರಶಂಸನಾರ್ಹ. ಆದರೆ ಈಗಿನ ಕೆಟ್ಟ ದಿನಗಳು ಬಡವರಿಗೆ ಬಲುಕಷ್ಟದ ಸಂಕಷ್ಟದ ದಿನಗಳು. ಮನುಷ್ಯ ನಿಯಂತ್ರಣ ತಪ್ಪಬಹುದಾದ ಸಹನೆ-ಸ್ಪಂದನ ನಿರೀಕ್ಷಿಸುವುದು ತಪ್ಪು. ಆದರೆ ಭಾರತ ಮೇಲಿಂದ ಕೆಳಗಿನ ವರೆಗೆ ತಪ್ಪು ಮಾಡಿ ಸರಿಪಡಿಸಲು ಹೆಣಗುತ್ತಿರುವ ವಿದ್ಯಮಾನ ಈಗಿನ ವರ್ತಮಾನ.

ಮಾರ್ಚ್‍ನಲ್ಲಿ ಸ್ವದೇಶಕ್ಕೆ ಬರಲು ಆನಿವಾಸಿ ಭಾರತೀಯರಿಗೆ ಬಿಡಲೇಬಾರದಿತ್ತೆನ್ನುವ ಸತ್ಯ ಮಾತನಾಡುತ್ತಿರುವ ಜನರು ಈಗ ಹೆಚ್ಚುತ್ತಿರುವ ದ್ವಿಮುಖ ವಲಸೆ ಬಗ್ಗೆ ಮಾತನಾಡದಿರಲು ಕಾರಣ ವಾಸ್ತವದ ಚಿತ್ರ ದೊರೆಯದ ಕೊರತೆ ಎನ್ನಬಹುದು. ಭಾರತೀಯರು ಈಗ ದೇಶಕ್ಕೆ ಸಹಕರಿಸಲು ಸಕಾಲ. ದೇಶದಲ್ಲಿ ಪ್ರಧಾನಮಂತ್ರಿ ಕ್ಯಾರ್ಸ್ ಅವರ ಈ ಹಿಂದಿನ ಉಳ್ಳವರ ಓಲೈಕೆ, ಶ್ರೀಮಂತರು, ಮೇಲ್ವರ್ಗದ ಪೊಷಣೆಯಂತಾದರೆ ಜನ ಕೇಳಲು ಸಿದ್ಧರಿಲ್ಲ. ರಾಜ್ಯದಲ್ಲಿ ಸೌಲಭ್ಯ, ಸಹಾಯಧನ ಪಡೆಯುವವರ ಬೇಡಿಕೆ ವಿಸ್ತರಿಸುತ್ತಿದೆ. ಈ ಎಲ್ಲಾ ನ್ಯೂನ್ಯತೆಗಳ ನಡುವೆ ಸರ್ಕಾರ, ರಾಜಕೀಐ ನಾಯಕರಿಗಿಂತ ಅಧಿಕಾರಿ ವರ್ಗದ ಕೆಲಸ ಬಿಕ್ಕಟ್ಟಿನ ಸವಾಲಿಗೆ ದೃಷ್ಟಾಂಂತ ಒದಗಿಸಿದಂತಾಗಿದೆ. ಈಗ ಜನರ ಪ್ರಾಣದ ಜೊತೆಗೆ ಭವಿಷ್ಯದ ಬಗ್ಗೆ ಯೋಚಿಸಲೂ ಸಕಾಲ. ಆಡಳಿತಗಾರರು, ಜನಸಾಮಾನ್ಯರ ವಿಚಾರಗಳಲ್ಲೂ ಕೆಲವರಿಂದ ಹಲವರಿಗಾಗುತ್ತಿರುವ ತೊಂದರೆ ತಪ್ಪಿಸಿ, ದೇಶವಾಸಿಗಳನ್ನು ಉಜ್ವಲ ಭವಿಷ್ಯಕ್ಕೆ ಅಣಿಗೊಳಿಸುವ ಮಧ್ಯೆ ಅವರ ಹಸಿವಿನ ಪ್ರಶ್ನೆ ಬೃಹದಾಕಾರ ಪಡೆಯುವುದನ್ನು ಅರ್ಥಮಾಡಿಕೊಳ್ಳದ ನಾಯಕತ್ವ ಸೋಲುತ್ತದೆ. ನಾಯಕತ್ವದ ಸೋಲು ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನಗಳಿಲ್ಲ. ದೇಶ ಕಷ್ಟದಲ್ಲಿರುವಾಗ ಕೆಟ್ಟ ಹಿತಾಸಕ್ತಿಗಳು ಗರಿಗೆದರುತ್ತವೆ. ಕೆಟ್ಟ ನಾಯಕತ್ವವನ್ನು ಸಮರ್ಥಿಸುವ ದುರುದ್ಧೇಶದ ಹಿತಾಸಕ್ತಿಗಳು ಎಂದಿನಂತೆ ಈಗಲೂ ತಮ್ಮ ದುರುದ್ದೇಶ ಬೆಂಬಲಿಸುವ ನಾಯಕನ ಭಟ್ಟಂಗಿತನ ಮಾಡುತ್ತಾ ವಾಸ್ತವಕ್ಕೆ ಬೆನ್ನು ಮಾಡುತಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲೂ ಪ್ರಾಣ-ದೇಶ ಉಳಿಸಿಕೊಳ್ಳುವ ಜವಾಬ್ಧಾರಿ ಜನಸಾಮಾನ್ಯರ ಮೇಲೇ ಇರುವ ಸತ್ಯವನ್ನು ಮರೆಯದಿರೋಣ.

ಲಾಕ್‍ಡೌನ್ ಸಡಿಲಿಕೆ-
ಏನಂತಾರೆ ಜನ ಭಾಗ-01
ಮಿಶ್ರ ಪ್ರತಿಕ್ರೀಯೆ- ಸರಿಸುಮಾರು 2 ತಿಂಗಳುಗಳ ಕಾಲಾವಧಿಯ ಕರೋನಾ ಲಾಕ್ ಡೌನ್ ನಂತರ ಉತ್ತರಕನ್ನಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಿ ಬೆಳಿಗ್ಗೆ 7 ರಿಂದ ಸಾಯಂಕಾಲ 7, ನಗರ ಮಧ್ಯಾಹ್ನ 1, ಮದ್ಯದಂಗಡಿಗಳಿಗೆ ಅಪರಾಹ್ನ 3 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಈ ಲಾಕ್ಡೌನ್ ಸಡಿಲಿಕೆ ಬಗ್ಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರೀಯೆ ವ್ಯಕ್ತವಾಗಿದೆ. ಏನಂತಾರೆ ಜನ ಎನ್ನುವ ಕುತೂಹಲಕ್ಕೆ ಇಲ್ಲಿವೆ ಉತ್ತರ-
ಲಾಕ್ ಡೌನ್ ಮಾತ್ರ ಪರಿಹಾರವಲ್ಲ- ಶಶಿಭೂಷಣ
ಲಾಕ್ ಡೌನ್ ನಿಂದಲೇ ಕರೋನಾದಿಂದ ಬಚಾವಾಗಬೇಕೆಂದರೆ ಕನಿಷ್ಟ 2 ವರ್ಷ ಲಾಕ್ ಡೌನ್ ಮಾಡಬೇಕು. ಅದು ಸಾಧ್ಯವೆ? ಪ್ರಧಾನಮಂತ್ರಿ ಮೋದಿ ಇಟಲಿಯಲ್ಲಿ ಚಪ್ಪಾಳೆ ಹೊಡೆದರೆಂದು ಇಲ್ಲಿ ಚಪ್ಪಾಳೆ ಹೊಡೆಸುವ, ಹೂ ಸುರಿಸುವ ಅರ್ಥವಿಲ್ಲದೆ ಕಾಪಿ ಮಾಡುತಿದ್ದಾರೆ. ರೈತರ ಬೆಳೆಗಳಿಗೆ ಮಾರುಕಟ್ಟೆ ಮೌಲ್ಯವಿಲ್ಲದೆ ರೈತರು ಹತಾಶರಾಗಿದ್ದಾರೆ. ಜನರಿಂದ ದೀಪ ಹಚ್ಚಿಸಿ, ಚಪ್ಪಾಳೆ ಹೊಡೆಸಿ, ನೆರೆಹೊರೆಯವರನ್ನು ನೋಡಿಕೊಳ್ಳಲು ಹೇಳಿ, ದೇಣಿಗೆ-ದಾನ ಕೇಳಿದರೆ ಮುಗಿಯಿತೆ? ಅವರಿಂದ ಘೋಷಣೆಯಾಗಿರುವುದೇನು? ಸಣ್ಣ-ಮಧ್ಯಮ ಉದ್ದಿಮೆಗಳ ಉದ್ಯಮಿಗಳಿಗೆ ಸಾಲದ ಕಂತು ಕಟ್ಟುವ ಸಮಯಾವಕಾಶ, ವಿದ್ಯುತ್ ಬಿಲ್ಲ ಮನ್ನಾ, ಸಮಯಾವಕಾಶ, ಏನು ನೀಡಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಸುಧಾರಣಾ ಕ್ರಮಗಳು ನಮ್ಮಲ್ಲ್ಯಾಕಿಲ್ಲ. ಜಿಲ್ಲಾ ಹಂತಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ, ಕರೋನಾ ಕಾರ್ಯಕರ್ತರು ಉತ್ತಮ ಕೆಲಸ ಮಾಡಿದ್ದಾರೆ. ಸರ್ಕಾರದಿಂದ ಜನರಿಗೆ,ಉದ್ಯಮಿಗಳಿಗೆ ರೈತರಿಗೆ ಯಾವ ಯೋಜನೆಗಳನ್ನು ಪ್ರಕಟಿಸಲಾಗಿದೆ. ತಲಾ 500 ರೂ. ಬಿಟ್ಟರೆ ಸಾರ್ವಜನಿಕರಿಗೆ ನೇರ ನೆರವು, ಅನುದಾನಗಳಿಲ್ಲ. ಲಾಕ್ ಔಟ್ ತೆರವುಗೊಳಿಸಿ ತೀವ್ರ ಶಿಸ್ತಿನ ಆರೋಗ್ಯ, ಆರ್ಥಿಕ ಕ್ರಮಗಳ ಮೂಲಕ ಸಮತೋಲನ ಕಾಪಾಡಬೇಕಿದೆ. ಲಾಕ್ ಔಟ್, ಕರೋನಾ ನಿಷೇಧಾಜ್ಞೆ, ನಿರ್ಬಂಧಗಳನ್ನು ಹೇರಿ ನಂತರ ಚೇತರಿಸಿಕೊಳ್ಳುವುದು ಹ್ಯಾಗೆ? ಕರೋನಾ ದಿಂದ ಬಚಾವಾದ ನಂತರ ದೇಶದ ಸ್ಥಿತಿ-ಗತಿಗಳ ಮುಂದಾಲೋಚನೆ, ಅಭಿವೃದ್ಧಿ ಕ್ರಮಗಳ ಬಗ್ಗೆ ಸರ್ಕಾರ, ಸರ್ಕಾರಗಳ ಮುಖ್ಯಸ್ಥರು ಮಾತನಾಡಿದ್ದಾರೆಯೆ? ಕರೋನಾ ನಂತರದ ಅವಧಿ ಭೀಕರವಾಗುವುದನ್ನು ತಡೆಯುವ ಸುಧಾರಣಾ ಕ್ರಮಗಳನ್ನು ಪ್ರಕಟಿಸದೆ ಅನಾಹುತಕ್ಕೆ ದಾರಿಮಾಡಿಕೊಟ್ಟಂತಾಗುವುದಿಲ್ಲವೆ? ಈ ಬಗ್ಗೆ ಸರ್ಕಾರದ ಒಳ ಹೊರಗೆ ಮಾತನಾಡುವವರಿಲ್ಲ. ಜೀಹುಜೂರ್ ನಡವಳಿಕೆ ಈ ದೇಶಕ್ಕೆ ಅಪಾಯ ತಂದಿಡುವಂತಿದೆ. ಮುಂಜಾಗೃತೆ, ಮುಂದಾಲೋಚನೆಯಿಲ್ಲದ ಸರ್ಕಾರ, ನಾಯಕತ್ವ ಈ ದೇಶಕ್ಕೆ ಒಳ್ಳೆಯದನ್ನು ಮಾಡಬಹುದು ಎಂದು ನಂಬುವುದಾದರೂ ಹೇಗೆ? ರಾಹುಲ್ ಗಾಂಧಿ ಫೆ. 12 ರಂದು ಟ್ವೀಟ್ ಮಾಡಿದ ಮೇಲೆ ಎಚ್ಚೆತ್ತುಕೊಳ್ಳದ ಸರ್ಕಾರ ಮಾರ್ಚ್‍ನಲ್ಲಿ ದೆಹಲಿಯಲ್ಲಿ ಕಾರ್ಯಕ್ರಮ ಮಾಡಲು ವೈದ್ಯಕೀಯ ತುರ್ತುಸ್ಥಿತಿ ಇಲ್ಲ ಎಂದು ಘೋಶಿಸುತ್ತದೆ. ನಂತರ ಏನಾಯ್ತು. ಸರ್ಕಾರ ನಡೆಸುವವರಿಗೆ ಜವಾಬ್ಧಾರಿಗಳಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ. ಈಗಲೂ ಇದೇ ಉಡಾಫೆ, ವಿಳಂಬಿತ ಅಂತಿಮ ನಿರ್ಧಾರಗಳಿಂದ ಕರೋನಾ ನಂತರದ ಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸುವಂತಿವೆ ಸರ್ಕಾರದ ನಿರ್ಧಾರಗಳು. ಯಾರದೋ ತಪ್ಪಿಗೆ ದೇಶ, ಜನ ಬೆಲೆತೆರುವಂತಾದರೆ ರಕ್ಷಿಸುವವರ್ಯಾರು? ಲಾಕ್ಡೌನ್ ಯೋಚನೆ ಬಿಟ್ಟು ವೈಜ್ಞಾನಿಕ, ಪ್ರಾಯೋಗಿಕ ಉಪಕ್ರಮಗಳ ಮೂಲಕ ಕರೋನಾ ಹಿಮ್ಮೆಟ್ಟಿಸುವ ಕೆಲಸವಾಗಬೇಕು.
-ಡಾ. ಶಶಿಭೂಷಣ ಹೆಗಡೆ, ಶಿಕ್ಷಣತಜ್ಞ,
ಒಂದು ತಿಂಗಳು ಮುಂದುವರಿಸಬೇಕಿತ್ತು -ನಾಗರಾಜ್ ಕೆ.ಜಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *