ಕಾಲ

ನಾವು ಸ್ಪೃಶ್ಯರು
ನೀವು ಅಸ್ಪೃಶ್ಯರು ಎಂದು
ಮನುಷ್ಯ ಮನುಷ್ಯರಲ್ಲೆ
ಏನೆಲ್ಲ ವಿಭಜನೆ ಮಾಡಿದ್ದರು
ಕಣ್ಣಿಗೆ ಕಾಣದ ವೈರಸ್ಸೊಂದು
ಎಲ್ಲರನ್ನು ಸಹ ಸರಿ ಸಮಾನವಾಗಿ
ಅಸ್ಪೃಶ್ಯರನ್ನಾಗಿಯೆ ಮಾಡಿತು .
ಕಾಲ ಕೆಲವೊಮ್ಮೆ
ತಾನೇ ನ್ಯಾಯ ತೀರಿಸುತ್ತದೆ.

ನಾವು ಮೇಲು, ನೀವು ಕೀಳು
ನಾವು ಶ್ರೀಮಂತರು ,ನೀವು ಬಡವರು
ನಾವು ಪ್ರಸಿದ್ಧರು, ನೀವು ಪಾಮರರು
ಇನ್ನು ಏನೇನೋ ….
ನೂರೆಂಟು ವಿಂಗಡಣೆಗಳು ಬೇರೆ
ಕಣ್ಣಿಗೆ ಕಾಣದ ವೈರಸ್ಸೊಂದು
ಯಾವ ಭೇದ ಭಾವವನ್ನು ಮಾಡದೆ
ಎಲ್ಲರನ್ನು ಸರಿಸಮಾನವಾಗಿ ಕಾಡಿತು .
ಕಾಲ ಕೆಲವೊಮ್ಮೆ
ಕೆಡುಕಿನಿಂದಲು ಪಾಠ ಕಲಿಸುತ್ತದೆ.

ನಮ್ಮ ಧರ್ಮವೇ ಶ್ರೇಷ್ಟ
ನಿಮ್ಮ ಧರ್ಮ ಕನಿಷ್ಟ ಎಂದು
ಪ್ರತಿನಿತ್ಯವೂ ಬಡಿದಾಡುತಿದ್ದರು
ದ್ವೇಷ ಹೊತ್ತು ನಡೆದಾಡುತ್ತಿದ್ದರು
ಕಣ್ಣಿಗೆ ಕಾಣದ ವೈರಸ್ಸೊಂದು
ಬಟ್ಟೆಯೊಳಗಿನ ಬೆತ್ತಲೆಯ
ಬಟಾಬಯಲು ಮಾಡಿ
ಎಲ್ಲ ಬೊಗಳೆಗಳ ಬಾಯಿ ಮುಚ್ಚಿಸಿತು.
ಕಾಲ ಕೆಲವೊಮ್ಮೆ
ಆತ್ಮಾವಲೋಕನಕ್ಕೂ ಅವಕಾಶ ನೀಡುತ್ತದೆ.

ಬಾಡಿಗೆ ಭಾಷಣಕಾರರು
ಗುತ್ತಿಗೆ ಧರ್ಮರಕ್ಷಕರು
ಪಾದ್ರಿಗಳು ಮೌಲ್ವಿಗಳು
ಜ್ಯೋತಿಷಿಗಳು ಪೂಜಾರಿಗಳು
ಇದೆಲ್ಲ ಮುಗಿದ ಮೇಲೆ
ಮತ್ತೆ ಶುರು ಹಚ್ಚಿಕೊಳ್ಳುತ್ತಾರೆ
ತಮ್ಮ ಬುರುಡೆ ಬಡಾಯಿಗಳನ್ನ .
ದುರದೃಷ್ಟ ಏನೆಂದರೆ
ಜನರು ಮತ್ತೆ ನಂಬುತ್ತಾರೆ
ಕಾಲದೊಡನೆ ಸತ್ಯವು ತಿರುಚಲ್ಪಡುತ್ತದೆ .

-ಮನು ಪುರ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಇನ್ನಿಲ್ಲ ಕಸ್ತೂರಿ ರಂಗನ್‌ ಕಿರಿಕಿರಿ……

ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ವರದಿಯ ಆಧಾರದ...

ಉತ್ತರ ಕನ್ನಡದ 4 ಜನ ಉತ್ತಮ ಕಂದಾಯ ಅಧಿಕಾರಿಗಳು

ಉತ್ತರ ಕನ್ನಡ ಜಿಲ್ಲೆಯ ಎರಡು ಜನ ತಹಸಿಲ್ಧಾರರು ಮತ್ತು ಇಬ್ಬರು ಗ್ರಾಮ ಆಡಳಿತಾಧಿಕಾರಿಗಳು ಸರ್ಕಾರದ ಉತ್ತಮ ಕಂದಾಯ ಅಧಿಕಾರಿಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಶಿರಸಿ ಮತ್ತು ಸಿದ್ದಾಪುರ...

ಕನ್ನಡ ಜ್ಯೋತಿ ರಥಯಾತ್ರೆ…. ‍‍& ವಿವಾದ!

ಡಿಸೆಂಬರ್‌ ನಲ್ಲಿ ಮಂಡ್ಯದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇದೇ ತಿಂಗಳು ಹೊರಟ ಕನ್ನಡ ಜ್ಯೋತಿ ರಥಯಾತ್ರೆ ಸಿದ್ಧಾಪುರದ ಭುವನಗಿರಿಯಿಂದ ಹೊರಟು ಜಿಲ್ಲೆ...

ಬ್ರಷ್ಟಾಚಾರ ಸಾಬೀತು…. ಬಿಜೆಪಿ ಮುಖಂಡೆಗೆ ಶಿಕ್ಷೆ, ದಂಡ

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ...

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಮನವಿ, ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ

ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ಸೋಮುವಾರದಿಂದ ಆಧಾರ್‌ ಸೀಡ್‌,ಲ್ಯಾಂಡ್‌ ಬೀಟ್‌, ಬಗುರ್‌ ಹುಕುಂ, ಹಕ್ಕುಪತ್ರ, ಸೇರಿದಂತೆ ಕೆಲವು ಸೇವೆಗಳನ್ನು ನೀಡದಿರಲು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *