ಕರೋನಾ- ಮಹಾರಾಷ್ಟ್ರ- ಗುಜರಾತ್ ಗಳಿಂದ ಬಂದವರಿಂದ ಆತಂಕ, ಪರಿಸ್ಥಿತಿ ಹದಗೆಡುವ ಸಾಧ್ಯತೆ?

ದಿನದಿಂದ ದಿನಕ್ಕೆ ದೇಶದಲ್ಲಿ ಕರೋನಾ ಸಾವು-ನೋವುಗಳ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಕೂಡಾ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ತಾಲೂಕುಗಳಲ್ಲಿ ತಲಾ ನೂರು, ಜಿಲ್ಲೆಗಳಲ್ಲಿ ಸಾವಿರಾರು ಜನರು ಕಾರಂಟೈನ್ ಆಗುತಿದ್ದಾರೆ. ಉತ್ತರಕನ್ನಡ ಜಿಲ್ಲೆಗೆ ಗುಜರಾತ್, ಮಹಾರಾಷ್ಟ್ರಗಳಿಂದ ಬರುತ್ತಿರುವವರು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.
ಬುಧವಾರ ಕುಮಟಾ ತಾಲೂಕಿನ ಹಿರೇಗುತ್ತಿಯಲ್ಲಿ ಕಾರಂಟೈನ್ ಮುದ್ರೆಯುಳ್ಳ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು ಕರೋನಾ ಭಯ ಆತಂಕಗಳ ಹಿನ್ನೆಲೆಯಲ್ಲಿ ಸ್ಥಳಿಯರು ಈ ಮೃತರ ಹೆಣವನ್ನು ಎರಡು ತಾಸುಗಳಿಗೂ ಹೆಚ್ಚು ಸಮಯ ರಸ್ತೆಯಲ್ಲೇ ಇಟ್ಟಿದ್ದರು.ನಂತರ ಸಾಮಾಜಿಕ ಕಾರ್ಯಕರ್ತ ರಾಮು ಕೆಂಚನ್ ಮಂಗಳೂರು ಮೂಲದ ಈ ಮೃತರ ಕುಟುಂಬದ ನೆರವಿಗೆ ಬಂದು ತಮ್ಮ ಸಾಮಾಜಿಕ ಕಾಳಜಿ ಮೆರೆದರು.
ಸಿದ್ಧಾಪುರ ತಾಲೂಕಿನಲ್ಲಿ ಗುಜರಾತ್- ಮಹಾರಾಷ್ಟ್ರಗಳಿಂದ ಬಂದ 34 ಜನರನ್ನು ಸರ್ಕಾರದ ಮುತುವರ್ಜಿಯಲ್ಲಿ ಕಾರಂಟೈನ್ ಮಾಡಲಾಗಿದೆ. ಮನೆಯಲ್ಲಿ ಕಾರಂಟೈನ್ ಆದ ಜನರ ಸಂಖ್ಯೆ ಸಿದ್ಧಾಪುರ ಒಂದರಲ್ಲೇ 500 ಜನರನ್ನು ತಲುಪಿದೆ.
ಭಟ್ಕಳದಲ್ಲಿ ವ್ಯಾಪಕವಾಗಿ ವಿಸ್ತರಿಸಿದ್ದ ಕರೋನಾ ಬುಧವಾರ ಕುಮಟಾಕ್ಕೂ ಪ್ರವೇಶಿಸಿದೆ. ಕುಮಟಾದಲ್ಲಿ ಕರೋನಾ ಸೋಂಕಿತನಾದ ವ್ಯಕ್ತಿ ಹೊರ ರಾಜ್ಯದಿಂದ ಬಂದು ಕಾರಂಟೈನ್ ಆಗಿದ್ದಾತ. ಬುಧವಾರ ಕುಮಟಾ,ಭಟ್ಳಗಳಲ್ಲಿ ಪತ್ತೆಯಾದ 2 ಹೊಸ ಕೋವಿಡ್ ಪ್ರಕರಣಗಳು ಸೇರಿ ಸೋಕಿತರ ಸಂಖ್ಯೆ 41 ಕ್ಕೇರಿದೆ. ಉತ್ತರ ಕನ್ನಡಕ್ಕೆ ಹೊರರಾಜ್ಯಗಳಿಂದ ಬಂದ ಸಾವಿರಾರು ಜನರು ಕಾರಂಟೈನ್ ಆಗಿದ್ದು ಅವರ ರಕ್ತದ ಮಾದರಿಗಳನ್ನು ಕರೋನಾ ಪರೀಕ್ಷೆಗೆ ರವಾನಿಸಲಾಗಿದೆ. ಈ ವ್ಯಕ್ತಿಗಳಲ್ಲಿ ಕರೋನಾ ವೈರಸ್ ದೃಢ ಪಟ್ಟರೆ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ.

ರೈತರಿಗೆ ಹೊರೆಯಾದ ಕರೋನಾ,ರೈತರ ಉತ್ಫನ್ನಗಳನ್ನು ಕೇಳುವವರಿಲ್ಲದೆ ಹಾನಿ
ಕರೋನಾ ಸೋಕಿನ ಭಯ, ಲಾಕ್‍ಔಟ್ ಹಿನ್ನೆಲೆಗಳಲ್ಲಿ ಕೃಷಿ,ಕೃಷಿ ಉತ್ಫನ್ನಗಳು, ಕೃಷಿ ಸಂಬಂಧಿ ಉದ್ಯಮಗಳು ಹಾನಿಗೊಳಗಾಗಿವೆ. ಮಲೆನಾಡು ಪ್ರದೇಶದಲ್ಲಿ ಬೆಳೆದ ಅನಾನಸ್, ಬಾಳೆ ಬೆಳೆಗಳನ್ನು ಕೇಳುವವರಿಲ್ಲದೆ ಇವುಗಳನ್ನು ಬೆಳೆದ ರೈತ ತಾವು ಬೆಳೆದ ಬೆಳೆ ತಮ್ಮ ಕಣ್ಮುಂದೇ ಹಾಳಾಗುತ್ತಿರುವುದನ್ನು ನೋಡುವಂತಾಗಿದೆ.
ಮಲೆನಾಡಿನ ಶಿರಸಿ, ಸಾಗರ,ಸಿದ್ಧಾಪುರ ಸೇರಿದಂತೆ ಹಲವೆಡೆ ರೈತರು ಬಾಳೆ, ಅನಾನಸ್ ಬೆಳೆದು ಜೀವನೋಪಾಯ ಕಂಡುಕೊಂಡಿದ್ದಾರೆ. ಆದರೆ ಈ ವರ್ಷ ಕರೋನಾ ಭಯ, ಲಾಕ್‍ಔಟ್ ಹಿನ್ನೆಲೆಗಳಲ್ಲಿ ರೈತರು ಬೆಳೆದ ಅನಾನಸ್, ಪಪ್ಪಾಯಿ, ಬಾಳೆ ಬೆಳೆಗಳನ್ನು ಯಾರೂ ಕೇಳುವವರಿಲ್ಲ ಎನ್ನುವಂತಾಗಿದೆ. ಅನಾನಸ್, ಬಾಳೆ, ಪಪ್ಪಾಯಿ ಬೆಳೆದ ರೈತರಿಗೆ ಕರೋನಾದಿಂದ ಮಾರುಕಟ್ಟೆ ಸಮಸ್ಯೆ ತಲೆದೋರಿದೆ. ಈ ಉತ್ಫನ್ನಗಳ ಸಂಸ್ಕರಣೆ ಮಾಡುವ ಸಣ್ಣ ಉದ್ಯಮಗಳೂ ಮುಚ್ಚಿರುವುದರಿಂದ ರೈತರಿಗೆ ತಮ್ಮ ಉತ್ಫನ್ನ ಖರೀದಿಯಾಗದೆ ಹಾನಿಯಾದರೆ, ಈ ಉತ್ಫನ್ನಗಳ ಸಂಸ್ಕರಣ ಘಟಕ ಮುಚ್ಚಿರುವುದರಿಂದ ಉದ್ಯಮಗಳಿಗೂ ಹಾನಿಯಾಗಿದೆ.
ಸಿದ್ಧಾಪುರದಲ್ಲಿ, ಬನವಾಸಿಯಲ್ಲಿ ನಡೆಯುತಿದ್ದ ಹಣ್ಣಿನ ಸಂಸ್ಕರಣ ಘಟಕಗಳು ಹಿಂದಿನ ವರ್ಷದ ವಿಪರೀತ ಮಳೆಗೆ ಹಾನಿ ಅನುಭವಿಸಿದ್ದರೆ, ಈ ವರ್ಷ ಕೋವಿಡ್ ಪರಿಣಾಮ ಬೆಳೆಗಳನ್ನು ಬೆಳೆದ ರೈತ ಮತ್ತು ಕೃಷಿ ಉತ್ಫನ್ನ ಸಂಸ್ಕರಣ ಘಟಕಗಳು ಹಾನಿ ಅನುಭವಿಸುವಂತಾಗಿದೆ.
ಈ ಬಗ್ಗೆ ಪ್ರತಿಕ್ರೀಯಿಸಿದ ಉದ್ಯಮಿ ವಿಜಯ ಪ್ರಭು ಇದೇ ತಿಂಗಳು ಪ್ರಾರಂಭವಾಗಿದ್ದ ನಮ್ಮ ಉದ್ದಿಮೆ ಈ ವಾರ ಮುಚ್ಚಿದೆ. ಕಳೆದ ವರ್ಷ ಮಳೆಯಿಂದ ಉತ್ಪಾದನೆ ನಿಲ್ಲಿಸಿದ ನಾವು ಈ ವರ್ಷ ಸರ್ಕಾರದ ಆದೇಶ, ಕರೋನಾ ಭಯಗಳ ಹಿನ್ನೆಲೆಯಲ್ಲಿ ಹಾನಿ ಅನುಭವಿಸುವಂತಾಗಿದೆ. ರೈತರ ಬೆಳೆ ಖರೀದಿ,ಸಂಸ್ಕರಣೆ ಹಿನ್ನೆಲೆಯಲ್ಲಿ ಸರ್ಕಾರ ಅನುಕೂಲ ಮಾಡಿಕೊಡಬೇಕು. ಮೂರುತಿಂಗಳ ಸಾಲ,ಬಡ್ಡಿ ತುಂಬುವ ಸಮಯಮಿತಿ ವಿಸ್ತರಣೆ ಸಣ್ಣ ಉದ್ದಿಮೆಗಳಿಗೆ ಹಾನಿ. ಎನ್ನುತ್ತಾರೆ.
ರೈತರ ಬೆಳೆ ಖರೀದಿ, ಸುರಕ್ಷತೆಯಲ್ಲಿ ಅವುಗಳ ಸಂಸ್ಕರಣೆಗೆ ಅವಕಾಶ ನೀಡಿದರೆ ರೈತರು, ಕೃಷಿ ಸಂಬಂಧಿ ಉತ್ಪಾದನೆಗಳಿಗೆ ಅನುಕೂಲವಾಗುತ್ತದೆ. ದೊಡ್ಡ ನಗರಗಳಿಗೆ ರಫ್ತಾಗುವ ಕೃಷಿ ಉತ್ಫನ್ನಗಳ ಸಾಗಾಟವನ್ನು ನಿಲ್ಲಿಸಲಾಗಿದೆ. ಸ್ಥಳಿಯ ಕೃಷಿ ಸಂಸ್ಕರಣ ಉದ್ದಿಮೆಗಳೂ ಸ್ಥಗಿತಗೊಂಡಿರುವುದರಿಂದ ರೈತರು, ಸಣ್ಣ ಉದ್ದಿಮೆಗಳಿಗೂ ಹಾನಿಯಾಗಿದೆ. ಇದು ಅನೇಕರ ಆರ್ಥಿಕ ಹಾನಿಗೂ ಕಾರಣವಾಗಿರುವುದು ಮುಂದಿನ ತೊಂದರೆಯ ಮನ್ಸೂಚನೆಯಂತಿದೆ.

ಕರೋನಾ: ಮೂರು ತಿಂಗಳು ನಿಲ್ಲೋಣಾ
ಕರೋನಾ ತೊಂದರೆ, ರಗಳೆಗಳ ಹಿನ್ನೆಲೆಯಲ್ಲಿ ಬ್ಯಾಂಕ್, ಸಹಕಾರಿ ಸಂಘ, ಹಣಕಾಸು ಸಂಸ್ಥೆಗಳಲ್ಲಿ ವ್ಯವಹರಿಸುವ ಜನರ ಸಾಲಮರುಪಾವತಿ,ಬಡ್ಡಿ ಆಕರಣೆಗಳಿಗೆಜೂನ್ 30 ರ ವರೆಗೆ ಕಾಲಾವಕಾಶ ವಿಸ್ತರಿಸಲು ಸರ್ಕಾರ ಆದೇಶಿಸಿದೆ. ಹಿಂದಿನ ನಿಯಮಗಳ ಪ್ರಕಾರ ಶೂನ್ಯ ಬಡ್ಡಿಸರದ ಬೆಳೆಸಾಲ, ರೈತರು,ಕೃಷಿ ಸಂಬಂಧಿ ವ್ಯವಹಾರಗಳ ಸಾಲ,ಬಡ್ಡಿ ಭರಣಕ್ಕೆ ಮಾ.30 ಅಂತಿಮ ಗಡುವಾಗಿತ್ತು. ಇಂದು ರಾಜ್ಯ ವಿಧಾನಸಭೆಯ ನಿರ್ಣಯದಂತೆ ಈ ಎಲ್ಲಾ ವ್ಯಹಾರಗಳಿಗೆ ಜೂನ್ 30 ರ ವರೆಗೆ ಸಮಯಮಿತಿ ವಿಸ್ತರಿಸಲಾಗಿದೆ. ಈ ಮೂರು ತಿಂಗಳ ಅವಧಿಯ ಸರ್ಕಾರದ ಅನುಕೂಲ, ರಿಯಾಯತಿ, ಸಬ್ಸಿಡಿ ಸೌಲಭ್ಯಗಳನ್ನು ಮುಂದಿನ ಮೂರು ತಿಂಗಳವೆರೆಗೆ ವಿಸ್ತರಿಸಲಾಗಿದೆ. ಇದರ ಜೊತೆಗೇ ಬ್ಯಾಂಕ್, ಹಣಕಾಸು ಸಂಸ್ಥೆಗಳ ವೈಯಕ್ತಿಕ ವ್ಯವಹಾರದ ಇಎಂ.ಐ. ಗಳನ್ನು ಜೂನ್ ವರೆಗೆ ಕಾಲಾವಕಾಶ ನೀಡಿ ಭರಣ ಮಾಡಿಕೊಳ್ಳಲು ಸರ್ಕಾರ ನಿರ್ಧೇಶಿಸಿ ಪ್ರಕಟಣೆ ಹೊರಡಿಸಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *