![](https://i0.wp.com/samajamukhi.net/wp-content/uploads/2020/05/IMG-20200520-WA0013.jpg?resize=422%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ವಿಸ್ತರಿಸಲು ಹೊರ ರಾಜ್ಯ, ಹೊರ ಜಿಲ್ಲೆಗಳ ಜನರು ಕಾರಣವಾಗುತ್ತಿರುವ ವಿದ್ಯಮಾನದ ನಡುವೆ ಜಿಲ್ಲೆಯ ಸಿದ್ಧಾಪುರದ 30 ಕ್ಕೂ ಹೆಚ್ಚು ಜನರಿಗೆ ಒಂದು ವಾರದ ಕಡ್ಡಾಯ ಕಾರಂಟೈನ್ ಶಿಕ್ಷೆ ಅನಿವಾರ್ಯವಾಗಿದೆ.
![](https://i0.wp.com/samajamukhi.net/wp-content/uploads/2020/05/IMG-20200513-WA0055.jpg?resize=720%2C628&ssl=1)
![](https://i0.wp.com/samajamukhi.net/wp-content/uploads/2020/05/IMG-20200520-WA0029.jpg?resize=760%2C912&ssl=1)
ಸಿದ್ಧಾಪುರದ ಕಾನಗೋಡು, ಕೋಲಶಿರ್ಸಿ ಸೇರಿದಂತೆ ತಾಲೂಕಿನ 30 ಕ್ಕೂ ಹೆಚ್ಚು ಜನರು ವಾರದ ಹಿಂದೆ ಸೊರಬ ತಾಲೂಕಿನ ಮಣ್ಣತ್ತಿಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಮದುವೆಯ ನಂತರ ಸ್ವ ಗ್ರಾಮಗಳಿಗೆ ಮರಳಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದವರಿಗೆ ಇಂದು ಸಿದ್ಧಾಪುರ ತಾಲೂಕಾ ಆಡಳಿತ ಎಚ್ಚರಿಕೆಯ ಸಂದೇಶ ನೀಡಿದೆ.
ಮಣ್ಣತ್ತಿ ವರ, ಹಳೆ ಸೊರಬದ ವಧುವಿನ ಮದುವೆಗೆ ಬಂದಿದ್ದ ಒಬ್ಬ ಮಹಿಳೆಗೆ ಕರೋನಾ ಸೋಂಕು ದೃಢ ಪಟ್ಟಿದ್ದು ಆ ಮದುವೆಗೆ ತೆರಳಿದ್ದ ತಾಲೂಕಿನ ಕನಿಷ್ಟ 30 ಜನರಿಗೆ ಮನೆಯಲ್ಲೇ ಕ್ವಾರಂಟೈನ್ ನಿಯಮ ಪಾಲಿಸುವಂತೆ ಆದೇಶಿಸಲಾಗಿದೆ. ಮಣ್ಣತ್ತಿಯಲ್ಲಿ ಮೇ 13 ರಂದು ನಡೆದ ಮದುವೆಯಲ್ಲಿ ಪಾಲ್ಗೊಂಡಿದ್ದ ನೂರಕ್ಕೂ ಹೆಚ್ಚು ಜನರು ಕರೋನಾ ಸೋಂಕಿತೆಯ ಎರಡನೆ ಹಂತದ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಈ ಮದುವೆಯಲ್ಲಿ ಪಾಲ್ಗೊಂಡವರಿಗೆ ಕರೋನಾ ಅಪಾಯದ ಸಾಧ್ಯತೆ ಕಡಮೆಯಾದರೂ ಅವರು ಕನಿಷ್ಟ ಒಂದು ವಾರ ಕ್ವಾರಂಟೈನ್ ಆಗುವುದು ಅನಿವಾರ್ಯ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ತಾಲೂಕಾ ಆಡಳಿತ
ತಾಲೂಕಿನ 30 ಕ್ಕೂ ಹೆಚ್ಚು ಜನರಿಗೆ ಕಡ್ಡಾಯ ಕ್ವಾರಂಟೈನ್ ನಿಯಮ ಪಾಲಿಸಲು ಸೂಚಿಸಿದೆ. ಈ ಘಟನೆಯ ನಂತರ ಸಾರ್ವಜನಿಕರು ಈಗಿನ ಮದುವೆಗಳಲ್ಲಿ ಪಾಲ್ಗೊಳ್ಳುವುದನ್ನು ನಿರ್ಬಂಧಿಸುವ ಅವಶ್ಯಕತೆ ಹೆಚ್ಚಿದೆ.
ಲೋಕಲ್ ಕ್ರೈಂ ನ್ಯೂಸ್-
ಸಾವು ಗೆದ್ದ ಗೊಂಟನಾಳದ ಗುಂಡೇಟಿನ ಗಾಯಾಳು!
ಸಿದ್ಧಾಪುರ ತಾಲೂಕಿನ ಕವಲಕೊಪ್ಪಾ ಗ್ರಾಮದ ಗೊಂಟನಾಳದ ಪ್ರದೀಪ ಗೌಡ ಎನ್ನುವ ವ್ಯಕ್ತಿ
ಮೊಬೈಲ್ ಬಳಕೆಗಾಗಿ ಗ್ರಾಮದ ಬೆಟ್ಟ ಏರಿದಾಗ ಬಂದೂಕಿನ ಚರೆಗಳು ನುಗ್ಗಿ ಗಾಯಗೊಂಡ ಘಟನೆ ಗುರುವಾರ ಮುಸ್ಸಂಜೆ ನಡೆದಿದೆ.
ಇದೇ ಗ್ರಾಮದ ರಾಮಾ ಕನ್ನಾ ನಾಯ್ಕ ಲೋಡ್ ಮಾಡಿಟ್ಟ ನಾಡ ಬಂದೂಕು ದಿಢೀರನೆ ಸ್ಫೋಟಿಸಿ ಈ ಅವಗಢ ನಡೆದಿದೆ. ಗಾಯಾಳು ಪ್ರದೀಪ ಗೌಡ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತಿದ್ದು ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಆರೋಪಿ ರಾಮಾ ಕನ್ನಾ ನಾಯ್ಕ ಮೇಲೆ ಪ್ರಕರಣ ದಾಖಲಿಸಿದ ಸ್ಥಳಿಯ ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಈ ಅಚಾತುರ್ಯದ ಅವಗಡದ ಬಗ್ಗೆ ವಿಶಾದ ವ್ಯಕ್ತಪಡಿಸಿರುವ ಸ್ಥಳಿಯರು ಇಬ್ಬರೂ ಅಮಾಯಕರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಅರಣ್ಯ ಅಧಿಕಾರಿಗಳ ವಿರುದ್ಧ ದೂರು
ಸಿದ್ಧಾಪುರ ವಲಯದ ನಿಡಗೋಡು ಅರಣ್ಯ ಸಿಬ್ಬಂದಿಗಳು ಕಿರುಕುಳ, ಮಾನಸಿಕ ಹಿಂಸೆ ನೀಡುತಿದ್ದಾರೆ ಎಂದು ಆರೋಪಿಸಿ ನಿಡಗೋಡಿನ ಮಹಿಳೆಯೊಬ್ಬರು ಎರಡು ಜನ ಕಿರಿಯ ಅರಣ್ಯ ಅಧಿಕಾರಿಗಳ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಖಾಸಗಿ ಪ್ರದೇಶ ಮತ್ತು ಅರಣ್ಯದ ಜಾಗ ಎನ್ನುವ ದ್ವಂದ್ವದ ಹಿನ್ನೆಲೆಯಲ್ಲಿ ಪ್ರಾರಂಭವಾದ ಗ್ರಾ.ಪಂ. ಸದಸ್ಯೆ ಮತ್ತು ಅರಣ್ಯ ಇಲಾಖೆಯ ನಡುವಿನ ಜಗಳ ಪೊಲೀಸ್ ದೂರಿನಲ್ಲಿ ಅಂತ್ಯವಾಗಿದ್ದು ಈ ಬಗ್ಗೆ ಮಾಹಿತಿ ನೀಡಲು ಸ್ಥಳಿಯ ಅರಣ್ಯ ಅಧಿಕಾರಿಗಳು ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸ್ರಿಗೆ ದೂರು ನೀಡಿದ್ದರೂ ಎಫ್.ಆಯ್. ಆರ್. ಆದ ಬಗ್ಗೆ ಪೊಲೀಸ್ ಅಧಿಕಾರಿಗಳು ಸ್ಫಸ್ಟಪಡಿಸಿಲ್ಲ.
ಕರೋನಾ ಜನಾಭಿಪ್ರಾಯ ಭಾಗ-02-
20 ಲಕ್ಷ ಕೋಟಿ ಪ್ಯಾಕೇಜ್ ಏನಂತಾರೆ ಜನ-
ಇಲ್ಲಿವೆ ಜನರ ಅಭಿಪ್ರಾಯ
ಕರೋನಾ ದಿಂದ ಜರ್ಜರಿತವಾಗಿರುವ ದೇಶ ಮತ್ತು ದೇಶದ ಆರ್ಥಿಕತೆ ಉತ್ತೇಜಿಸಲು 20 ಲಕ್ಷ ಕೋಟಿ ಪ್ಯಾಕೇಜ್ ನೀಡಿರುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಬಗ್ಗೆ ನಾಲ್ಕು ಹಂತಗಳಲ್ಲಿ ಹಣಕಾಸು ಸಚಿವರು ವಿಭಾಗ ಮಾಡಿದ ಪ್ಯಾಕೇಜ್ ವಿವರಗಳನ್ನು ನೀಡಿದ್ದಾರೆ. ಮಾಧ್ಯಮಗಳ ಪ್ರಚಾರ, ಸಚಿವರು, ಶಾಸಕರ ವಿವರಣೆಗಳ ಮಧ್ಯೆ ಕೂಡಾ ಬಹುತೇಕ ಜನಸಾಮಾನ್ಯರಿಗೆ ಈ ಪ್ಯಾಕೇಜ್ ಸರಿಯಾಗಿ ಅರ್ಥವಾಗಿಲ್ಲ ಎನ್ನುವ ವಾಸ್ತವ ಅಭಿಪ್ರಾಯ ಸಂಗ್ರಹದ ಸಮಯದಲ್ಲಿ ನಮ್ಮ ಗಮನಕ್ಕೂ ಬಂತು. ಹೆಚ್ಚಿನವರು ಈ ಪ್ಯಾಕೇಜ್ ಗುಟ್ಟುಗಳ ಬಂಡಲ್ ಎಂದು ಲೇವಡಿಮಾಡಿದರೆ ಕೆಲವರು ಇದು ಸ್ಫಷ್ಟತೆ-ಪಾರದರ್ಶಕತೆ ಇಲ್ಲದ ಮೋದಿಯವರ ಸುಳ್ಳಿನ ಮುಂದುವರಿದ ಕಂತೆ ಎಂದರು.
ಕೆಲವರು ಪಕ್ಷದ ಕಾರಣಕ್ಕೆ ನಾವು ಈ ಪ್ಯಾಕೇಜ್ ಸಮರ್ಥಿಸಿಕೊಳ್ಳಬೇಕು ಬಿಟ್ಟರೆ ಈ ಕ್ಷಣದಲ್ಲಿ ಅನುಕೂಲ, ಲಾಭ ಹಾಗಿರಲಿ ನಮಗೂ ಅರ್ಥಮಾಡಿಕೊಳ್ಳದ ಒಗಟು ಈ ಪ್ಯಾಕೇಜ್ ಎಂದು ತಮ್ಮ ಅಸಮಾಧಾನ ಹೇಳಿಕೊಂಡರು. ಕೆಲವರು ಮಾತ್ರ ಇದು ದೀರ್ಘಕಾಲಿಕ ಲಾಭದ ದೂರದ ಆಲೋಚನೆಯ ಬೃಹತ್ ಪ್ಯಾಕೇಜ್ ಎಂದು ಸಮರ್ಥಿಸಿದರು. ಈ ಪ್ಯಾಕೇಜ್, ಕೇಂದ್ರಸರ್ಕಾರದ ಕೋವಿಡ್ ನಿರ್ವಹಣಾ ವಿಧಾನ ಎಲ್ಲವೂ ಟೀಕೆಗೆ ಒಳಗಾಗಿರುವ ಈ ಸಂದರ್ಭದಲ್ಲಿ ನಮಗೆ ಸಿಕ್ಕ ಪ್ರತಿಕ್ರೀಯೆಗಳಲ್ಲಿ ಕೆಲವನ್ನು ಸಂಕ್ಷಿಪ್ತವಾಗಿ ಇಲ್ಲಿ ಪ್ರಕಟಿಸಲಾಗಿದೆ.
20 ಲಕ್ಷ ಕೋಟಿ ಜನಸಾಮಾನ್ಯ ಊಹಿಸಲಾಗದ ಬೃಹತ್ ಪ್ಯಾಕೇಜ್ ಇದು, ಇದರಲ್ಲಿ 136 ಕೋಟಿ ಭಾರತದ ಜನಸಂಖ್ಯೆಗೆ ತಲಾ 1 ಕೋಟಿ ಕೊಟ್ಟದ್ದರೆ ಜನಸಾಮಾನ್ಯ ಕೂಡಾ ಕುಬೇರನಾಗುತಿದ್ದ.- ವೀರಭದ್ರಗೌಡ ವಡಗೇರಿ
ಉಜ್ವಲ ಯೋಜನೆಯ ಗ್ಯಾಸ್ ಫಲಾನುಭವಿಗಳಿಗೆ ಮಾತ್ರ ಉಚಿತ ಅನಿಲ ಸೌಲಭ್ಯ, ಜನ್ ಧನ್ ಖಾತೆಗೆ ಮಾತ್ರ ಹಣ ಇವೆಲ್ಲಾ ಅಸಮರ್ಪಕ. ಉಜ್ವಲ ಗ್ಯಾಸ್ ಫಲಾನುಭವಿಗಳು, ಜನಧನ್ ಖಾತೆದಾರರು ಮಾತ್ರ ಬಡವರೆ. ಜಾಬ್ ಕಾರ್ಡ್ಗಾಗಿ ಜನಧನ್ ಗಿಂತ ಮೊದಲು ಬ್ಯಾಂಕ್ ಪಾಸ್ ಬುಕ್, ಖಾತೆ ಹೊಂದಿದವರಿಗೆ ಹಣ ನೀಡದಿದ್ದರೆ ಕೇಂದ್ರದ ಯೋಜನೆಗಳು ಸರ್ಕಾರದ ಯೋಜನೆಗಳಲ್ಲ, ಪಕ್ಷದ ಜೋಜನೆಗಳು ಎಂದಾಗುತ್ತವೆ. ಕರೋನಾ ಸಂಕಷ್ಟದ ಸಮಯದಲ್ಲಿ ಕೇಂದ್ರದ ಫಲಾನುಭವಿಗಳಿಗೊಂದು, ರಾಜ್ಯದ ಯೋಜನೆಗಳ ಫಲಾನುಭವಿ ಬಡವರಿಗೊಂದು ತಾರತಮ್ಯ ಮಾಡುವ ಸರ್ಕಾರದ ನೀತಿ ಬಡವರ ವಿರೋಧಿ ಧೋರಣೆ ಎನಿಸಿಕೊಳ್ಳುತ್ತದೆ. -ವೀರಭದ್ರ ನಾಯ್ಕ ಮಳಲವಳ್ಳಿ, ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ.
20 ಲಕ್ಷ ಕೋಟಿ ಕಣ್ಣೊರೆಸುವ ತಂತ್ರ. ಕೇಂದ್ರ ಸರ್ಕಾರ ಘೋಷಣೆಯ ಸರ್ಕಾರವಾಗಿದೆಯೇ ಹೊರತು, ಅನುಷ್ಠಾನದ ಸರ್ಕಾರವಾಗಿಲ್ಲ ಬಡ ಚಾಲಕರು, ಸಣ್ಣ-ಪುಟ್ಟ ವೃತ್ತಿ ನಿರತರಿಗೆ ಅಧೀಕೃತ ಸರ್ಕಾರಿ ನೋಂದಣಿಯಿಲ್ಲದಿದ್ದರೂ ಮಾಸಿಕ ಪರಿಹಾರ ನೀಡಬೇಕು. 20 ಕೋಟಿ ಪ್ಯಾಕೇಜ್ ಕರೋನಾ ಕಾಲದ ಸುಳ್ಳು. ಈ ಪ್ಯಾಕೇಜ್ ಗಿಂತ ಹಿಂದಿನ ಘೋಷಣೆಗಳ ಅನುಷ್ಠಾನ, ಸಾಲ ಮನ್ನಾದಂಥ ವಿದಾಯಕ ಯೋಜನೆಗಳನ್ನು ಕೊಡಬೇಕಿತ್ತು. – ಭೀಮಣ್ಣ ನಾಯ್ಕ, ಡಿ.ಸಿ.ಸಿ. ಅಧ್ಯಕ್ಷ
ಇದು ದೀರ್ಘ ಕಾಲಿಕ ಪರಿಣಾಮದ ಪ್ಯಾಕೇಜ್, ಇಂಥ ಬೃಹತ್ ಪ್ಯಾಕೇಜ್ ನಿಂದ ಈ ಕ್ಷಣದ ಲಾಭ ನಿರೀಕ್ಷಿಸಬಾರದು. -ನಾಗರಾಜ್ ನಾಯ್ಕ, ಜಿ.ಪಂ. ಸದಸ್ಯ.
20 ಲಕ್ಷ ಕೋಟಿ ಪ್ಯಾಕೇಜ್ ನಿಂದ ಧೀರ್ಘ ಕಾಲಿಕ ಲಾಭ ಆಗಬಹುದು, ದಾಖಲೆ, ಗ್ಯಾರಂಟಿ ಇಲ್ಲದೆ ಹೆಚ್ಚುವರಿ ಕಡಿಮೆ ಬಡ್ಡಿದರದ ಸಾಲ, ತೆರಿಗೆ ವಿನಾಯಿತಿ, ಜಿ.ಎಸ್.ಟಿ., ತೆರಿಗೆ ಭರಣಕ್ಕೆ ಸಮಯಾವಕಾಶ ಇವುಗಳಿಂದ ಚಿಕ್ಕ ಉದ್ದಿಮೆಗಳಿಗೆ ಅನುಕೂಲವಾಗಿದೆ. -ವಿಜಯ ಪ್ರಭು, ಉದ್ಯಮಿ
20 ಲಕ್ಷ ಕೋಟಿ ಪ್ಯಾಕೇಜ್ ಸರ್ಕಾರದ ವ್ಯವಹಾರ ಚತುರತೆಗೆ ಸಾಕ್ಷಿ. ಇದು ಅಂಕಿ-ಅಂಶಗಳ ಮ್ಯಾಜಿಕ್ ಕಣ್ಣೊರೆಸುವ ತಂತ್ರ. ಇದರಿಂದ ಲಾಭ ಆಗುವ ನಿರೀಕ್ಷೆ ಇಲ್ಲ. ಜನರ ಅನಿವಾರ್ಯತೆಯ ಸಮಯದಲ್ಲಿ ಸಾಲ ಕೊಡುವ ಸ್ಕೀಮ್ ಮಾದರಿಯ ಪ್ಯಾಕೇಜ್ ನಿಂದ ಜನರು ಬಡತನ ರೇಖೆ ದಾಟಿ ಶ್ರೀಮಂತರಾಗುವ ಕೇಂದ್ರದ ಘೋಷಣೆ ಯಶಸ್ವಿಯಾದರೆ ಜನತೆ ಮೋದಿಯವರನ್ನು ದೇವರಂತೆ ಕಾಣುತ್ತಾರೆ. ಸ್ಫಷ್ಟತೆ ಇಲ್ಲದ, ಪಾರದರ್ಶಕವಲ್ಲದ ಈ ಪ್ಯಾಕೇಜ್ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಬಿ.ಜೆ.ಪಿ. ಯೋಜನೆ. -ಕೆ.ಜಿ. ನಾಗರಾಜ್, ಅಧ್ಯಕ್ಷರು ಎ.ಪಿ.ಎಂ.ಸಿ.
![](https://i0.wp.com/samajamukhi.net/wp-content/uploads/2020/05/IMG-20200508-WA0029-1.jpg?resize=760%2C912&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)