

ಇಂದು ಮತ್ತೆ ನಾಲ್ಕು ಹೊಸ ಕರೋನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಉತ್ತರಕನ್ನಡ ಜಿಲ್ಲೆಯ ಕೋವಿಡ್ ಸಂಖ್ಯೆ ಏರಿದೆ. ಜಿಲ್ಲೆಯ ಸಿದ್ಧಾಪುರ ಮತ್ತು ಅಂಕೋಲಾಗಳಲ್ಲಿ ಪತ್ತೆಯಾಗದ ಕರೋನಾ ಪ್ರಕರಣಗಳ ಮಧ್ಯೆ ಇಂದು ಸಿದ್ಧಾಪುರದ ಒಬ್ಬ ವ್ಯಕ್ತಿಯಲ್ಲಿ ಕರೋನಾ ದೃಢ ಪಡುವ ಮೂಲಕ ಸಿದ್ಧಾಪುರ ಕರೋನಾ ಮುಕ್ತ ತಾಲೂಕೆಂಬ ಹೆಗ್ಗಳಿಕೆಯಿಂದ ದೂರಾದಂತಾಗಿದೆ.
ಸಿದ್ಧಾಪುರ ಮೂಲದ ಮಹಾರಾಷ್ಟ್ರ ಠಾಣಾದಲ್ಲಿರುತ್ತಿದ್ದ ಕುಟುಂಬವೊಂದು ಮೇ 17 ರಂದು ಠಾಣಾದಿಂದ ಹೊರಟು 18 ರಂದು ಶಿರಸಿಯ ನೀಲೇಕಣಿ ತಪಾಸಣಾ ಗೇಟ್ ಬಳಿ ಜಿಲ್ಲಾಡಳಿತದ ವಶಕ್ಕೆ ಸಿಕ್ಕಿದ್ದರು.



ಈ ಕುಟುಂಬ ಮೇ 19 ರಂದು ಕಾವಂಚೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಾರಂಟೈನ್ ಆಗಿತ್ತು. ಮೂರು ಮಕ್ಕಳ ಜೊತೆಗಿನ ಈ ಕುಟುಂಬ ಕಿ.ರಾ.ಚೆ. ವಸತಿ ಶಾಲೆಯ ಒಂದೇ ಕೋಣೆಯಲ್ಲಿ ಕಾರಂಟೈನ್ ಆಗಿತ್ತು. ಇವರ ಗಂಟಲು ದೃವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಕೋವಿಡ್ ಸೋಂಕು ದೃಢವಾದ ಈ ವ್ಯಕ್ತಿ ತನ್ನ ಕುಟುಂಬದೊಂದಿಗೆ ಮಹಾರಾಷ್ಟ್ರದಿಂದ ಬಾಡಿಗೆ ಕಾರಿನಲ್ಲಿ ಹುಟ್ಟೂರು ಪ್ರವೇಶಿಸಿತ್ತು.
ಇವರನ್ನು ಸಿದ್ಧಾಪುರಕ್ಕೆ ತಲುಪಿಸಿದ ಕಾರಿನ ಚಾಲಕ ಮರಳಿ ಠಾಣಾ ತಲುಪಿದ್ದಾನೆ. ಈ ಕುಟುಂಬದ 5 ಜನರ ಗಂಟಲುದೃವದ ಮಾದರಿಗಳಲ್ಲಿ ಕುಟುಂಬದ ಮುಖ್ಯಸ್ಥರ ಮಾದರಿಯಲ್ಲಿ ಕರೋನಾ ಸೋಕು ದೃಢಪಟ್ಟಿದ್ದು ಉಳಿದ ನಾಲ್ವರ ವರದಿಗೆ ಕಾಯಲಾಗುತ್ತಿದೆ. ಸಿದ್ಧಾಪುರದ ಗ್ರಾಮೀಣ ಪ್ರದೇಶದ ಈ ಕುಟುಂಬ ಮಹಾರಾಷ್ಟ್ರದಿಂದ ಮರಳಿ ಮನೆ ತಲುಪುವ ಮಾರ್ಗ ಮಧ್ಯದಲ್ಲಿ ಜಿಲ್ಲಾಡಳಿತದ ಕೈ ಗೆ ಸಿಕ್ಕು ಸಂಭಾವ್ಯ ಅಪಾಯವನ್ನು ತಪ್ಪಿಸಿದಂತಾಗಿದೆ.
ಕಾರಂಟೈನ್ ನಲ್ಲಿರುವ ಅನೇಕರಲ್ಲಿ ಕೋವಿಡ್ ಶಂಕೆ, ಉತ್ತರಕನ್ನಡ-ಶಿವಮೊಗ್ಗ ಗಳಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು
ಉತ್ತರಕನ್ನಡ ಜಿಲ್ಲೆಯ 6 ಸಾವಿರ ಜನರು ಸೇರಿ ಕರ್ನಾಟಕದೆಲ್ಲೆಡೆ ಕಾರಂಟೈನ್ ಆಗಿರುವ ಲಕ್ಷಾಂತರ ಜನರಲ್ಲಿ ಸಾವಿರಾರು ಜನರು ಕರೋನಾ ಕ್ಕೆ ತುತ್ತಾಗಿರುವ ಬಗ್ಗೆ ಈಗ ಶಂಕೆ ವ್ಯಕ್ತವಾಗಿದೆ.
ಮೊದಮೊದಲು ಉತ್ತರ ಕನ್ನಡ ಜಿಲ್ಲೆಗೆ ಬಂದ ಹೊರದೇಶಗಳ ಉದ್ಯೋಗಿಗಳು ಕೋವಿಡ್ ಪ್ರಾರಂಭಕ್ಕೆ ಕಾರಣವಾದರು. ನಂತರ ತಬ್ಲಿಘಿಗಳ ಓಡಾಟ,ಒಡನಾಟದಿಂದ ಕರೋನಾ ದೇಶ ಸುತ್ತತೊಡಗಿತ್ತು.
ಈಗ ಮಹಾರಾಷ್ಟ್ರ,ಗುಜರಾತ್, ಚಿನ್ನೈಗಳಿಂದ ಬಂದ ಜನರು ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಕರೋನಾ ಹಬ್ಬಿಸುತಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ದೃಢಪಟ್ಟ ಎರಡು ಕರೋನಾ ಪಾಸಿಟಿವ್ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದ ವ್ಯಕ್ತಿಗಳ ಪ್ರಕರಣಗಳು. ಮಹಾರಾಷ್ಟ್ರದಿಂದ
ಶಿವಮೊಗ್ಗ ಜಿಲ್ಲೆ ಸೊರಬಾ ಕ್ಕೆ ಹೊರಟಿದ್ದ ಈ ಕುಟುಂಬವನ್ನು ಪೊಲೀಸರು ಯಲ್ಲಾಪುರದಲ್ಲಿ ತಡೆದು ಕಾರಂಟೈನ್ ಮಾಡಿದ್ದರು. ಈ ಎರಡೂ ಪ್ರಕರಣಗಳಂತೆ ಉತ್ತರಕನ್ನಡದ 6 ಸಾವಿರ ಕಾರಂಟೈನ್ ಆದ ಜನರು ಹಾಗೂ ರಾಜ್ಯದ ಲಕ್ಷಾಂತರ ಜನರಲ್ಲಿ ಕರೋನಾ ಕಾಣಿಸಿಕೊಳ್ಳುವ ಅಪಾಯದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.
ಬಸ್ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡುವುದು, ಹೊರ ರಾಜ್ಯಗಳಿಂದ ಬಂದ ಜನರ ತಪಾಸಣೆ, ಕಾರಂಟೈನ್ ಕ್ರಮಗಳ ನಡುವೆ ನುಸುಳುಕೋರರು ಸುದ್ದಿಮಾಡದೆ ಗ್ರಾಮ, ನಗರ ಸೇರಿಕೊಂಡಿರುವ ಅನೇಕ ಉದಾಹರಣೆಗಳೂ ಇವೆ.
ಈ ವಿಶೇಶ ಪ್ರಕರಣಗಳ ಹಿನ್ನೆಲೆಯಲ್ಲಿ ಒಬ್ಬೊಬ್ಬ ವ್ಯಕ್ತಿ ನೂರಾರು ಜನರಿಗೆ ಕರೋನಾ ವಿಸ್ತರಿಸುವ ಅಪಾಯವಿರುವುದರಿಂದ ಸಾರ್ವಜನಿಕರು ಓಡಾಟ, ವಹಿವಾಟು ನಿಲ್ಲಿಸಿ ಮನೆಯಲ್ಲೇ ಉಳಿಯುವುದು ಮತ್ತು ಕರೋನಾ ನಿರ್ಬಂಧದ ಉಪಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಸಂಕಷ್ಟದಿಂದ ಪಾರಾಗಬೇಕಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
