

ಕರೋನಾ ಜಗತ್ತನ್ನು ಆತಂಕಕ್ಕೆ ದೂಡಿದೆ. ಕರೋನಾ ದಿಂದಾಗಿ ಅನೇಕ ಸಮಸ್ಯೆ, ರಗಳೆಗಳು ತಲೆದೋರುತ್ತಿವೆ. ಮಂಗಳವಾರ ಮುಂಡಗೋಡಿನಲ್ಲಿ ಮೃತರಾದ ಹಿರಿಯ ಮಹಿಳೆಯೊಬ್ಬರ ಶವಸಂಸ್ಕಾರಕ್ಕೆ ವಿಳಂಬವಾಗಿದ್ದಲ್ಲದೆ. ಆ ತಾಯಿಯ ಮಕ್ಕಳಿಗೇ ಶವವನ್ನು ಮುಟ್ಟಲು ಅವಕಾಶವಾಗದ ದುರಂತ ತಂದಿಡುವ ಮೂಲಕ ಕರೋನಾ ಈ ಕುಟುಂಬದ ಶಾಶ್ವತ ನೋವಿಗೆ ಕಾರಣವಾದ ವಿದ್ಯಮಾನ ನಡೆದಿದೆ.


ಮುಂಡಗೋಡಿನ ಇಂದಿರಾನಗರದ ಕೊಪ್ಪ ಗ್ರಾಮದಲ್ಲಿ ಸುಶೀಲಾ ಎನ್ನುವ 55 ವರ್ಷದ ಮಹಿಳೆ ಮೃತರಾಗಿದ್ದರು. ಅವರ ಮಕ್ಕಳು ಮುಂಬೈನಲ್ಲಿದ್ದ ಕಾರಣ ಇವರ ಶವವನ್ನು ಗುರುವಾರ ಬೆಳಿಗ್ಗೆ ದಹನ ಮಾಡಲಾಯಿತು. ಮಂಗಳವಾರ ನಿಧನರಾದ ಸುಶೀಲಾರ ಶವ ಎರಡು ದಿವಸಗಳ ವರೆಗೆ ಮನೆಯಲ್ಲಿರುವಂತೆ ಮಾಡಿದ್ದು ಕರೋನಾ. ಸುಶೀಲಾರ ಮಕ್ಕಳು ತಾಯಿಯ ನಿಧನದ ಸುದ್ದಿ ತಿಳಿದು ಬರಲು ಪ್ರಯತ್ನಿಸಿದರೂ ಕರೋನಾ ಕಾರಣಕ್ಕೆ ವಿಳಂಬವಾಯಿತು. ಸಕಲ ವ್ಯವಸ್ಥೆಗಳ ಜೊತೆ ವಿಳಂಬವಾಗಿ ಹುಟ್ಟೂರು ಪ್ರವೇಶಿಸಿದ ಮಕ್ಕಳಿಗೆ ಪಿ.ಪಿ.ಕಿಟ್ ತೊಡಸಲಾಗಿತ್ತು. ಮನೆಗೆ ಹೋದವರು ಸಂಬಂಧಿಗಳು, ಮೃತ ತಾಯಿಯ ಶವವನ್ನೂ ಮುಟ್ಟಬಾರದೆಂಬ ಷರತ್ತಿನ ಮೇಲೆ ಅವರಿಗೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಲಾಗಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಹೆತ್ತ ತಾಯಿಯ ಶವ ಮುಟ್ಟಲಾಗದ ಸಂಕಟದಲ್ಲಿ ಮುಂಜಾನೆ 3 ಗಂಟೆಗೆ ಅಂತ್ಯ ಸಂಸ್ಕಾರ ಮಾಡುವ ವೇಳೆ ಈ ನತದೃಷ್ಟ ಮಕ್ಕಳು ಗೋಳಾಡಿದರು. ಕರೋನಾ ಕಾರಣಕ್ಕೆ ಶವಸಂಸ್ಕಾರದ ವಿಳಂಬ, ಶವ ಮುಟ್ಟಲಾರದ ಮಕ್ಕಳ ರೋಧನ ಕರೋನಾದ ಭೀಕರತೆಯನ್ನು ಸಾರುವಂತಿತ್ತು ಎಂದು ಸ್ಥಳಿಯರು ಬೇಸರಿಸಿದ್ದಾರೆ. ಶವಸಂಸ್ಕಾರಕ್ಕೆ ಮುಂಬೈನಿಂದ ಬಂದ ಇಬ್ಬರೊಂದಿಗೆ ಒಟ್ಟೂ 5 ಜನರನ್ನು ಮುಂಡಗೋಡಿನಲ್ಲಿ ಇಂದು ಕಾರಂಟೈನ್ ಮಾಡಲಾಗಿದೆ.
2 ಜಿಲ್ಲೆಗಳ ಜನರ ತಲೆಬಿಸಿ ಹೆಚ್ಚಿಸಿದ ಹಳೆ ಸೊರಬ ಪ್ರಕರಣ! ಮದುವೆಗೆ ಹೋದವರ ಎದೆಯಲ್ಲಿ ಢವ-ಢವ
ಹಳೆ ಸೊರಬದ ಮಹಿಳೆಯೊಬ್ಬರಲ್ಲಿ ದೃಢಪಟ್ಟ ಕೋವಿಡ್ 19 ವೈರಸ್ ನಿಂದಾಗಿ ಎರಡು ಜಿಲ್ಲೆಗಳ ಕನಿಷ್ಟ 5-6 ತಾಲೂಕುಗಳ 500 ಕ್ಕೂಹೆಚ್ಚು ಜನರು ತಲೆಕೆಡಿಸಿಕೊಂಡ ವಿದ್ಯಮಾನ ವಿಳಂಬವಾಗಿ ಸುದ್ದಿಯಾಗಿದೆ.
ಹಳೆಸೊರಬದ ಮದುವೆಯೊಂದು ಸೊರಬ ಚಂದ್ರಗುತ್ತಿ ಬಳಿಯ ಮಣ್ಣತ್ತಿಯಲ್ಲಿ ಮೇ 13 ರಂದು ನಡೆದಿತ್ತು. ಆ ಮದುವೆಗೆ ಬಂದಿದ್ದರು ಎಂದು ಹೇಳಲಾದ ಮಹಿಳೆ ತನ್ನ ಹಿಂದಿನ ಹೃದಯಸಂಬಂಧಿ ಕಾಯಿಲೆ ಮತ್ತು ಉಸಿರಾಟದ ತೊಂದರೆ ಕಾರಣಕ್ಕೆ ಆಸ್ಫತ್ರೆಗೆ ತೆರಳಿದ್ದರು.
ಆಸ್ಫತ್ರೆಯಲ್ಲಿ ಹಿಂದಿನಂತೆ ಚಿಕಿತ್ಸೆ ಪಡೆದು ಮರಳಿ ಬಂದಿದ್ದ ಈ ಮಹಿಳೆಯ ಗಂಟಲುದೃವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದ ಆಸ್ಫತ್ರೆಯ ವೈದ್ಯರು ಸಿಬಂದಿಗಳಿಗೆ ಶಾಕ್ ಆಗಿದ್ದು ಈ ಮಹಿಳೆಯಲ್ಲಿ ಕರೋನಾ ದೃಢ ಪಟ್ಟಾಗ.
ಆಸ್ಫತ್ರೆಯ ವರದಿ, ತಾಲೂಕಾ ಆಡಳಿತದ ಮುತುವರ್ಜಿಯಿಂದ ಈ ಮಹಿಳೆಗೆ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ಆದರೆ ಈ ಪ್ರಕರಣ ಬೆಚ್ಚಿಬೀಳಿಸಿದ್ದು ಈ ಮಹಿಳೆ ಪಾಲ್ಗೊಂಡಿದ್ದ ಮದುವೆಗೆ ಬಂದ ಜನರನ್ನು. ಸರ್ಕಾರದ ಅನುಮತಿಯಿಂದ ಮದುವೆ ನಡೆಸಿದ್ದ ಮಣ್ಣತ್ತಿಯ ಕುಟುಂಬ ಹಿತೈಶಿಗಳು,ಆಪ್ತರನ್ನು ಆಹ್ವಾನಿಸಿತ್ತು. ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಪಾಲ್ಗೊಂಡಿದ್ದ ಮದುವೆಯ ಜನರು ಅಂದೇನೋ ಉಂಡು ಬಂದರು. ಆದರೆ ಫಜೀತಿ ಪ್ರಾರಂಭವಾಗಿದ್ದು ಈ ಕರೋನಾ ದೃಢವಾದ ವಿದ್ಯಮಾನದ ನಂತರ.
ಈ ಪ್ರಕರಣದ ಮದುವೆಯಲ್ಲಿ ಶಿರಸಿ, ಸಿದ್ಧಾಪುರ, ಸೊರಬ, ಸಾಗರ ಸೇರಿದಂತೆ ಎರಡ್ಮೂರು ಜಿಲ್ಲೆಗಳ ಕನಿಷ್ಟ 5-6 ತಾಲೂಕುಗಳ ಜನರು ಭಾಗವಹಿಸಿದ್ದರು. ಹೀಗೆ ಈ ಮದುವೆಯಲ್ಲಿ ಭಾಗವಹಿಸಿ ಅವರವರ ಮನೆಗಳಿಗೆ ತೆರಳಿದ್ದ ಅನೇಕರು ಈಗ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ.
ಈ ಮದುವೆಯ ವಧು-ವರ ಸೇರಿದಂತೆ ಕೆಲವು ಆಪ್ತರು ಸಾಂಸ್ಥಿಕ ಕಾರಂಟೈನ್ ಆಗಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಸಿಕ್ಕ ಅಧೀಕೃತ ಮಾಹಿತಿಯೆಂದರೆ….
ಹಳೆಸೊರಬದ ಮಹಿಳೆಯಲ್ಲಿ ಕೋವಿಡ್ ದೃಢಪಟ್ಟಿದ್ದು ಸತ್ಯ. ಆದರೆ ಈ ಮಹಿಳೆ ಮಣ್ಣತ್ತಿಯ ಮದುವೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಇವರ ಮಗ-ಸೊಸೆ ಮಣ್ಣತ್ತಿಯ ಮದುವೆಯಲ್ಲಿ ಪಾಲ್ಗೊಂಡಿದ್ದು ಅವರ ಗಮಟಲುದೃವಗಳ ಮಾದರಿಯಲ್ಲಿ ಕರೋನಾ ಸೋಂಕು ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ ಪ್ರಾಥಮಿಕ ಮತ್ತು ಎರಡು, ಮೂರನೇ ಹಂತದ ಸಂಪರ್ಕಗಳನ್ನು ಬೇಧಿಸಲಾಗುತ್ತಿದೆ. ಈ ಕ್ಷಣದ ವರೆಗೆ ಹಳೆಸೊರಬದ ಪ್ರಕರಣದಿಂದ ಕರೋನಾ ಪ್ರಸರಣದ ಯಾವುದೇ ತೊಂದರೆ ಕಂಡುಬಂದಿಲ್ಲ. ಈ ಪ್ರಕರಣದ ಸಂಪರ್ಕದ ಮಣ್ಣತ್ತಿಯ ಮದುವೆಯಲ್ಲಿ ಪಾಲ್ಗೊಂಡವರಿಗೆ ಯಾವುದೇ ತೊಂದರೆ ಬಾಧಿಸುವ ಸಾಧ್ಯತೆ ಕಡಿಮೆ ಎನ್ನುವ ಮಾಹಿತಿಯನ್ನು ಶಿವಮೊಗ್ಗ ಜಿಲ್ಲಾಡಳಿತ ನೀಡಿದೆ. ಇಷ್ಟರಲ್ಲೇ ಈ ಪ್ರಕರಣದ ಸಂಬಂಧಿತರ ಸಾಂಸ್ಥಿಕ ಮತು ಹೋಮ್ ಕಾರಂಟೈನ್ ಅವಧಿಗಳೂ ಮುಕ್ತಾಯದ ಹಂತದಲ್ಲಿವೆ. ಈ ಮಾಹಿತಿ ಆಧರಿಸಿ ಮಣ್ಣತ್ತಿ ಮದುವೆಗೆ ತೆರಳಿದ್ದ 2-3 ಜಿಲ್ಲೆಗಳ ಜನರು ನಿಟ್ಟುಸಿರು ಬಿಡುವಂತಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
