lohit naik on post corona- ಇದು ಕರೋನಾ ಸಮಯ ಸೋ ಸ್ಟಾಪ್ ವರಿಂಗ್ ಸ್ಟಾರ್ಟ್ ಲಿವಿಂಗ್

ಕರೋನಾ ವೈರಸ್ ರೋಗ ಜಗತ್ತಿನಾದ್ಯಂತ ಜನರನ್ನು ಭಯಬೀತ ಗೊಳಿಸಿದೆ, ಅದಕ್ಕಿಂತ ಹೆಚ್ಚಾಗಿ ವಿಶ್ವದಲ್ಲೆಡೆ ಲಾಕ್ಡೌನ್ ಕಾರಣದಿಂದ ಜನರ ಆರ್ಥಿಕತೆ ಮತ್ತು ಹಣದ ಹರಿವು ನಿಂತಿರುವುದರಿಂದ ಜನಸಾಮಾನ್ಯ ಈಗ ಕರೋನಾವೈರಸ್ ಗೆ ಹೆದರದಿದ್ದರೂ ಕರೋನಾ ಲಾಕ್ ಡೌನ್ ಸೃಷ್ಟಿಸಿರುವ ಆರ್ಥಿಕ ಮುಗ್ಗಟ್ಟಿನಿಂದ ಸಾಮಾನ್ಯ ಜರ್ಜರಿತ ನಾಗಿ ದಿಕ್ಕು ತೋಚದಂತಾಗಿದ್ದಾನೆ. ಈ ಸಾಮಾನ್ಯನ ಸಂಕಷ್ಪದ ಪರಿಸ್ಥಿತಿಯಲ್ಲಿ ಬೆನ್ನಿಗೆ ನಿಲ್ಲಬೇಕಾಗಿದ್ದ ಸರ್ಕಾರಗಳು ಸಹ ತಮ್ಮದೇ ಆರ್ಥಿಕ ದುಸ್ಥಿತಿ ಯ ಕಾರಣ ಅಸಹಾಯಕರಾಗಿ 20 ಲಕ್ಷ ಕೋಟಿ ಯಂತಹ ಜುಮ್ಲಾ ಪ್ಯಾಕೇಜ್ ನಂತಹ ಪರಿಹಾರಗಳಿಗೆ ಮೊರೆಹೋಗಿವೆ.
ಆದರೂ ಸಮಾಜದ ಅತಿ ಬಡ ಕೆಳವರ್ಗದ ಹೊಟ್ಟೆ ತುಂಬುವ ಕೆಲವು ಕಾರ್ಯಗಳು ಸರ್ಕಾರ ಗಳಿಂದ ನಡೆದಿವೆ. ಈ ಕಾರ್ಯದಲ್ಲಿ ಎಷ್ಟೋ ಸ್ಥಿತಿವಂತರೂ ಸಹ ಕೈಜೋಡಿಸಿ ತಮ್ಮ ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ. ಅದೇ ರೀತಿ ಕೆಲವು ರಾಜಕೀಯ ಪಕ್ಷಗಳು ಸ್ಟಿಕ್ಕರ್ ರಾಜಕಾರಣದಲ್ಲಿಯೂ ಸಹ ತೊಡಗಿದ್ದಾರೆ.

ಇದು ಸದ್ಯದ ಪರಿಸ್ಥಿತಿ, ಸರ್ಕಾರ ಮತ್ತು ರಾಜಕೀಯದವರ ಕತೆಯಾದರೆ. ಅಲ್ಲೊಂದು ಮಧ್ಯಮವರ್ಗ ಸರ್ಕಾರ ಮಾಡುವ ಸಹಾಯದ ಪರಿದಿಯಲ್ಲಿಯೂ ಬರದೆ ಸಿರಿವಂತರು ಮಾಡುವ ಸಹಾಯಕ್ಕೂ ಕೈಚಾಚಲಾಗದೆ 20 ಲಕ್ಷ ಕೋಟಿಯಲ್ಲಿ ನನಗೇನಾದರೂ ಬರಬಹುದೋ ಎಂಬ ಹುಸಿ ನಿರೀಕ್ಷೆ ಯ ಲ್ಲಿ ದಿಕ್ಕು ತೋಚದೆ ಮನೆಯಲ್ಲಿಯೂ ಹಾಯಾಗಿ ಕೂಡ್ರಲಾ ಗದೆ ಹೊರಹೋಗಿ ದುಡಿದು ತಿನ್ನಲೂ ಸಹ ಆಗದ ಅತಂತ್ರ ಸ್ಥಿತಿಯಲ್ಲಿ ಮಾಧ್ಯಮಗಳು ಕೊಡುವ ಬ್ರೇಕಿಂಗ್ ನ್ಯೂಸ್ ಗಳನ್ನು ನೋಡುತ್ತಾ ತಮ್ಮ ಮತ್ತು ತಮ್ಮ ಕುಟುಂಬದ ಭವಿಷ್ಯದ ಬಗ್ಗೆ ಚಿಂತಿಸುತ್ತ ಬಿಪಿ ಶುಗರ್ ಹೆಚ್ಚಿಸಿಕೊಂಡು ಅಸಹಾಯಕರಾ ಗಿರುವುದು ವಾಸ್ತವ.

ಈ ಎಲ್ಲಾ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯದ ಅನೇಕರು ಮಾನಸಿಕವಾಗಿ ನೊಂದು ವಿಪರೀತ ವಾದ ಹೆಜ್ಜೆಯಿಟ್ಟು ಬದುಕನ್ನು ಕಳೆದುಕೊಳ್ಳುವ
ಮಟ್ಟಕ್ಕೂ ತಲುಪಿದ್ದಾರೆ.

ಹಾಗಾದರೆ ಈ ಎಲ್ಲಾ ಪರಿಸ್ಥಿತಿಯನ್ನು ನಿಭಾಯಿಸುವುದಾದರೂ ಹೇಗೆ ?

How to stop worrying and start living ಲೇಖಕರಾದ ಡೇಲ್ ಕಾರ್ನಿಗಿ ಹೇಳುವಂತೆ

ಜೀವನದ ಯಾವುದೇ ಸಮಸ್ಯೆಗಳ ಬಗ್ಗೆ ಅತಿಯಾಗಿ ಚಿಂತಿಸುವ ದರಿಂದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.ಚಿಂತಿಸುವುದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಇನ್ನೂ ಹೆಚ್ಚು ಭೀಕರವಾದಂತೆ ಕಾಣುತ್ತದೆ.
ವಾಸ್ತವವಾಗಿ ಪರಿಸ್ಥಿತಿ ಮತ್ತು ಸಮಸ್ಯೆಗಳ ಬಗ್ಗೆ ನಾವು ಚಿಂತಿಸಿ ಅದಕ್ಕೆ ಇಲ್ಲದ ಅರ್ಥ ಕೊಡುತ್ತಾ ಹೋಗುತ್ತೇವೆ.
ಇದರಿಂದ ಹೊರಬರಲು ಲೇಖಕರು 3 ಸುಲಭದ ಸ್ಟೆಪ್ ಗಳನ್ನು ಸಲಹೆ ಮಾಡಿದ್ದಾರೆ ಅದು ಇಂದಿನ ನಾವೆಲ್ಲರೂ ಇರುವ ಪರಿಸ್ಥಿತಿಯಿಂದ ಹೊರಬರಲು ಸಹಾಯವಾಗಿದೆ.

Step 1 – ಯಾವುದೇ ಅಂಜಿಕೆಯಿಲ್ಲದೆ ಸದ್ಯದ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸಿ ಆಗಬಹುದಾದ ಅತಿ ಕೆಟ್ಟ ಪರಿಣಾಮವನ್ನು ತಿಳಿದುಕೊಳ್ಳಿ.

Step 2 – ಸಂಭವಿಸಬಹುದಾದ ಅತಿ ಕೆಟ್ಟ ಪರಿಣಾಮವನ್ನು ತಿಳಿದುಕೊಂಡ ನಂತರ ವಾಸ್ತವವನ್ನು ಒಪ್ಪಿಕೊಳ್ಳಿ. ಇದರಿಂದ ವಿನಾಕಾರಣ ಸಮಸ್ಯೆಯ ಬಗ್ಗೆ ಚಿಂತಿಸಿ ಎಂದೂ ನಮ್ಮ ಜೀವನದಲ್ಲಿ ನಡೆಯದೆ ಇರುವ ಪರಿಣಾಮಗಳ ನ್ನೆಲ್ಲ ಅನುಭವಿಸುವುದು ತಪ್ಪಿ ಮನಸ್ಸಿಗೊಂದು ನೆಮ್ಮದಿ ಸಿಗುವುದು.

Step – 3 – ಸಂಭವಿಸಬಹುದಾದ ಅತಿ ಕೆಟ್ಟ ಪರಿಣಾಮವನ್ನು ಒಪ್ಪಿಕೊಂಡ ನಂತರ ಇದಕ್ಕಿಂತ ಹೆಚ್ಚೇನೂ ಆಗುವುದಿಲ್ಲ ಎಂದು ತಿಳಿದ ನಿಮ್ಮ ಮನಸ್ಸು ನಿರಾಳವಾಗುತ್ತದೆ ಅದರ ಜೊತೆಗೆ ಈ ಪರಿಸ್ಥಿತಿಯನ್ನು ಹೇಗೆ ಸುಧಾರಿಸಬಹುದು ಎಂಬುವದರ ಬಗ್ಗೆ ಚಿಂತನೆಮಾಡಿ.
ನಿರಾಳವಾಗಿರುವ ನಿಮ್ಮ ಮನಸ್ಸು ಸಮಗ್ರವಾಗಿ ಪರಿಹಾರದ ಬಗ್ಗೆ ಆಲೋಚನೆ ಮಾಡುವ ಮತ್ತು ಪರಿಹಾರ ಕಂಡುಕೊಳ್ಳಲು ಶಕ್ತವಾಗಿರುತ್ತದೆ.

ಅಗತ್ಯಬಿದ್ದರೆ ಹತ್ತಿರದ ಸ್ನೇಹಿತರಲ್ಲಿ ನಮ್ಮ ಸದ್ಯದ ಪರಿಸ್ಥಿತಿಯ ಬಗ್ಗೆ ಹೃದಯಬಿಚ್ಚಿ ಮಾತನಾಡುವುದರಿಂದಲೂ ಸಹ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯಕಾರಿ.

ಸೋ ಸ್ಟಾಪ್ ವರಿಂಗ್ ಸ್ಟಾರ್ಟ್ ಲಿವಿಂಗ್ –

By – *ಲೋಹಿತ್ ನಾಯ್ಕ್*

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *