lohit naik on post corona- ಇದು ಕರೋನಾ ಸಮಯ ಸೋ ಸ್ಟಾಪ್ ವರಿಂಗ್ ಸ್ಟಾರ್ಟ್ ಲಿವಿಂಗ್

ಕರೋನಾ ವೈರಸ್ ರೋಗ ಜಗತ್ತಿನಾದ್ಯಂತ ಜನರನ್ನು ಭಯಬೀತ ಗೊಳಿಸಿದೆ, ಅದಕ್ಕಿಂತ ಹೆಚ್ಚಾಗಿ ವಿಶ್ವದಲ್ಲೆಡೆ ಲಾಕ್ಡೌನ್ ಕಾರಣದಿಂದ ಜನರ ಆರ್ಥಿಕತೆ ಮತ್ತು ಹಣದ ಹರಿವು ನಿಂತಿರುವುದರಿಂದ ಜನಸಾಮಾನ್ಯ ಈಗ ಕರೋನಾವೈರಸ್ ಗೆ ಹೆದರದಿದ್ದರೂ ಕರೋನಾ ಲಾಕ್ ಡೌನ್ ಸೃಷ್ಟಿಸಿರುವ ಆರ್ಥಿಕ ಮುಗ್ಗಟ್ಟಿನಿಂದ ಸಾಮಾನ್ಯ ಜರ್ಜರಿತ ನಾಗಿ ದಿಕ್ಕು ತೋಚದಂತಾಗಿದ್ದಾನೆ. ಈ ಸಾಮಾನ್ಯನ ಸಂಕಷ್ಪದ ಪರಿಸ್ಥಿತಿಯಲ್ಲಿ ಬೆನ್ನಿಗೆ ನಿಲ್ಲಬೇಕಾಗಿದ್ದ ಸರ್ಕಾರಗಳು ಸಹ ತಮ್ಮದೇ ಆರ್ಥಿಕ ದುಸ್ಥಿತಿ ಯ ಕಾರಣ ಅಸಹಾಯಕರಾಗಿ 20 ಲಕ್ಷ ಕೋಟಿ ಯಂತಹ ಜುಮ್ಲಾ ಪ್ಯಾಕೇಜ್ ನಂತಹ ಪರಿಹಾರಗಳಿಗೆ ಮೊರೆಹೋಗಿವೆ.
ಆದರೂ ಸಮಾಜದ ಅತಿ ಬಡ ಕೆಳವರ್ಗದ ಹೊಟ್ಟೆ ತುಂಬುವ ಕೆಲವು ಕಾರ್ಯಗಳು ಸರ್ಕಾರ ಗಳಿಂದ ನಡೆದಿವೆ. ಈ ಕಾರ್ಯದಲ್ಲಿ ಎಷ್ಟೋ ಸ್ಥಿತಿವಂತರೂ ಸಹ ಕೈಜೋಡಿಸಿ ತಮ್ಮ ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ. ಅದೇ ರೀತಿ ಕೆಲವು ರಾಜಕೀಯ ಪಕ್ಷಗಳು ಸ್ಟಿಕ್ಕರ್ ರಾಜಕಾರಣದಲ್ಲಿಯೂ ಸಹ ತೊಡಗಿದ್ದಾರೆ.

ಇದು ಸದ್ಯದ ಪರಿಸ್ಥಿತಿ, ಸರ್ಕಾರ ಮತ್ತು ರಾಜಕೀಯದವರ ಕತೆಯಾದರೆ. ಅಲ್ಲೊಂದು ಮಧ್ಯಮವರ್ಗ ಸರ್ಕಾರ ಮಾಡುವ ಸಹಾಯದ ಪರಿದಿಯಲ್ಲಿಯೂ ಬರದೆ ಸಿರಿವಂತರು ಮಾಡುವ ಸಹಾಯಕ್ಕೂ ಕೈಚಾಚಲಾಗದೆ 20 ಲಕ್ಷ ಕೋಟಿಯಲ್ಲಿ ನನಗೇನಾದರೂ ಬರಬಹುದೋ ಎಂಬ ಹುಸಿ ನಿರೀಕ್ಷೆ ಯ ಲ್ಲಿ ದಿಕ್ಕು ತೋಚದೆ ಮನೆಯಲ್ಲಿಯೂ ಹಾಯಾಗಿ ಕೂಡ್ರಲಾ ಗದೆ ಹೊರಹೋಗಿ ದುಡಿದು ತಿನ್ನಲೂ ಸಹ ಆಗದ ಅತಂತ್ರ ಸ್ಥಿತಿಯಲ್ಲಿ ಮಾಧ್ಯಮಗಳು ಕೊಡುವ ಬ್ರೇಕಿಂಗ್ ನ್ಯೂಸ್ ಗಳನ್ನು ನೋಡುತ್ತಾ ತಮ್ಮ ಮತ್ತು ತಮ್ಮ ಕುಟುಂಬದ ಭವಿಷ್ಯದ ಬಗ್ಗೆ ಚಿಂತಿಸುತ್ತ ಬಿಪಿ ಶುಗರ್ ಹೆಚ್ಚಿಸಿಕೊಂಡು ಅಸಹಾಯಕರಾ ಗಿರುವುದು ವಾಸ್ತವ.

ಈ ಎಲ್ಲಾ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯದ ಅನೇಕರು ಮಾನಸಿಕವಾಗಿ ನೊಂದು ವಿಪರೀತ ವಾದ ಹೆಜ್ಜೆಯಿಟ್ಟು ಬದುಕನ್ನು ಕಳೆದುಕೊಳ್ಳುವ
ಮಟ್ಟಕ್ಕೂ ತಲುಪಿದ್ದಾರೆ.

ಹಾಗಾದರೆ ಈ ಎಲ್ಲಾ ಪರಿಸ್ಥಿತಿಯನ್ನು ನಿಭಾಯಿಸುವುದಾದರೂ ಹೇಗೆ ?

How to stop worrying and start living ಲೇಖಕರಾದ ಡೇಲ್ ಕಾರ್ನಿಗಿ ಹೇಳುವಂತೆ

ಜೀವನದ ಯಾವುದೇ ಸಮಸ್ಯೆಗಳ ಬಗ್ಗೆ ಅತಿಯಾಗಿ ಚಿಂತಿಸುವ ದರಿಂದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.ಚಿಂತಿಸುವುದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಇನ್ನೂ ಹೆಚ್ಚು ಭೀಕರವಾದಂತೆ ಕಾಣುತ್ತದೆ.
ವಾಸ್ತವವಾಗಿ ಪರಿಸ್ಥಿತಿ ಮತ್ತು ಸಮಸ್ಯೆಗಳ ಬಗ್ಗೆ ನಾವು ಚಿಂತಿಸಿ ಅದಕ್ಕೆ ಇಲ್ಲದ ಅರ್ಥ ಕೊಡುತ್ತಾ ಹೋಗುತ್ತೇವೆ.
ಇದರಿಂದ ಹೊರಬರಲು ಲೇಖಕರು 3 ಸುಲಭದ ಸ್ಟೆಪ್ ಗಳನ್ನು ಸಲಹೆ ಮಾಡಿದ್ದಾರೆ ಅದು ಇಂದಿನ ನಾವೆಲ್ಲರೂ ಇರುವ ಪರಿಸ್ಥಿತಿಯಿಂದ ಹೊರಬರಲು ಸಹಾಯವಾಗಿದೆ.

Step 1 – ಯಾವುದೇ ಅಂಜಿಕೆಯಿಲ್ಲದೆ ಸದ್ಯದ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸಿ ಆಗಬಹುದಾದ ಅತಿ ಕೆಟ್ಟ ಪರಿಣಾಮವನ್ನು ತಿಳಿದುಕೊಳ್ಳಿ.

Step 2 – ಸಂಭವಿಸಬಹುದಾದ ಅತಿ ಕೆಟ್ಟ ಪರಿಣಾಮವನ್ನು ತಿಳಿದುಕೊಂಡ ನಂತರ ವಾಸ್ತವವನ್ನು ಒಪ್ಪಿಕೊಳ್ಳಿ. ಇದರಿಂದ ವಿನಾಕಾರಣ ಸಮಸ್ಯೆಯ ಬಗ್ಗೆ ಚಿಂತಿಸಿ ಎಂದೂ ನಮ್ಮ ಜೀವನದಲ್ಲಿ ನಡೆಯದೆ ಇರುವ ಪರಿಣಾಮಗಳ ನ್ನೆಲ್ಲ ಅನುಭವಿಸುವುದು ತಪ್ಪಿ ಮನಸ್ಸಿಗೊಂದು ನೆಮ್ಮದಿ ಸಿಗುವುದು.

Step – 3 – ಸಂಭವಿಸಬಹುದಾದ ಅತಿ ಕೆಟ್ಟ ಪರಿಣಾಮವನ್ನು ಒಪ್ಪಿಕೊಂಡ ನಂತರ ಇದಕ್ಕಿಂತ ಹೆಚ್ಚೇನೂ ಆಗುವುದಿಲ್ಲ ಎಂದು ತಿಳಿದ ನಿಮ್ಮ ಮನಸ್ಸು ನಿರಾಳವಾಗುತ್ತದೆ ಅದರ ಜೊತೆಗೆ ಈ ಪರಿಸ್ಥಿತಿಯನ್ನು ಹೇಗೆ ಸುಧಾರಿಸಬಹುದು ಎಂಬುವದರ ಬಗ್ಗೆ ಚಿಂತನೆಮಾಡಿ.
ನಿರಾಳವಾಗಿರುವ ನಿಮ್ಮ ಮನಸ್ಸು ಸಮಗ್ರವಾಗಿ ಪರಿಹಾರದ ಬಗ್ಗೆ ಆಲೋಚನೆ ಮಾಡುವ ಮತ್ತು ಪರಿಹಾರ ಕಂಡುಕೊಳ್ಳಲು ಶಕ್ತವಾಗಿರುತ್ತದೆ.

ಅಗತ್ಯಬಿದ್ದರೆ ಹತ್ತಿರದ ಸ್ನೇಹಿತರಲ್ಲಿ ನಮ್ಮ ಸದ್ಯದ ಪರಿಸ್ಥಿತಿಯ ಬಗ್ಗೆ ಹೃದಯಬಿಚ್ಚಿ ಮಾತನಾಡುವುದರಿಂದಲೂ ಸಹ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯಕಾರಿ.

ಸೋ ಸ್ಟಾಪ್ ವರಿಂಗ್ ಸ್ಟಾರ್ಟ್ ಲಿವಿಂಗ್ –

By – *ಲೋಹಿತ್ ನಾಯ್ಕ್*

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *